ಮಂಗಳೂರು: ಬಿಸಿಲ ಧಗೆ ಹೆಚ್ಚಿದ್ದರೂ ಅಗ್ನಿ ಆಕಸ್ಮಿಕ ಪ್ರಮಾಣ ಕಡಿಮೆ


Team Udayavani, May 1, 2024, 4:11 PM IST

ಮಂಗಳೂರು: ಬಿಸಿಲ ಧಗೆ ಹೆಚ್ಚಿದ್ದರೂ ಅಗ್ನಿ ಆಕಸ್ಮಿಕ ಪ್ರಮಾಣ ಕಡಿಮೆ

ಮಂಗಳೂರು: ಬಿಸಿಲ ಧಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರೂ ಕಳೆದ ಬಾರಿಗೆ ಹೋಲಿಸಿದರೆ ಈ ವರ್ಷ ಅಗ್ನಿ ಆಕಸ್ಮಿಕ ಪ್ರಮಾಣ ಸ್ವಲ್ಪ ಇಳಿಮುಖವಾಗಿದೆ. ಅಲ್ಲಲ್ಲಿ ಗುಡ್ಡಗಳಿಗೆ, ಕುರುಚಲು ಪೊದೆಗಳಿಗೆ ಸಹಿತ ವಿವಿಧ ಸ್ಥಳಗಳಿಗೆ ಬೆಂಕಿ ಬೀಳುವ ಪ್ರಕರಣಗಳು ವರದಿಯಾಗುತ್ತಿದ್ದರೂ ಈ ಪ್ರಮಾಣ ಕಳೆದ ವರ್ಷದಷ್ಟಿಲ್ಲ.

2023ರಲ್ಲಿ ಈ ಅವಧಿಯಲ್ಲಿ ದ.ಕ. ಜಿಲ್ಲೆಯಲ್ಲಿ ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗಿತ್ತು. ಆದರೆ ಈ ಬಾರಿ 666 ಪ್ರಕರಣಗಳಿಗೆ ಸಂಬಂಧಿಸಿದಂತೆ ಬಂದ ಕರೆಗಳಿಗೆ ಅಗ್ನಿ ಶಾಮಕದಳ ಸ್ಪಂದಿಸಿದೆ. ಪುತ್ತೂರಿನಲ್ಲಿ 137 ಮತ್ತು ಬಂಟ್ವಾಳದಲ್ಲಿ 112 ಪ್ರಕರಣಗಳು ವರದಿಯಾಗಿದ್ದು, ಕಳೆದ ವರ್ಷ ಸುಳ್ಯ ಹೊರತು ಪಡಿಸಿ ಇತರ ಠಾಣೆಗಳಲ್ಲಿ 100- 200ರಷ್ಟು ಪ್ರಕರಣಗಳು ದಾಖಲಾಗಿತ್ತು.

ಪ್ರಸ್ತುತ ದಿನಕ್ಕೆ ಜಿಲ್ಲೆಯಲ್ಲಿ ಸರಾಸರಿ 10-12 ಕರೆಗಳು ಬರುತ್ತಿದ್ದು, ಕೆಲವು ಸಣ್ಣ ಅಗ್ನಿ ಅವಘಡಗಳಲ್ಲಿ ಸ್ಥಳೀಯರೇ ಬೆಂಕಿ ನಂದಿಸುತ್ತಾರೆ. “ಗುಡ್ಡದಲ್ಲಿ ಮುಳಿ ಹುಲ್ಲಿಗೆ ಬೆಂಕಿ ಬಿದ್ದಿದೆ’ ಎನ್ನುವ ಕರೆಗಳೇ ಅಧಿಕ. ಕಳೆದ ವರ್ಷ ಪಚ್ಚನಾಡಿ ತ್ಯಾಜ್ಯ ವಿಲೇವಾರಿ ಘಟಕ ಪ್ರದೇಶದಲ್ಲಿಯೇ ನಾಲ್ಕೈದು ಬಾರಿ ಅಗ್ನಿ ಅವಘಡ ಸಂಭವಿಸಿತ್ತು. ಈ ಬಾರಿ ಒಮ್ಮೆ ಮಾತ್ರ ಬೆಂಕಿ ಆಕಸ್ಮಿಕ ಉಂಟಾಗಿದೆ.

ಕೆಲವು ಕಡೆಗಳಲ್ಲಿ ಸಾರ್ವಜನಿಕರೇ ಕಳೆ ಗಿಡ ನಾಶಮಾಡುವ ಉದ್ದೇಶಕ್ಕೆ ಬೆಂಕಿ ಹಚ್ಚುತ್ತಾರೆ. ಹೆಚ್ಚು ವ್ಯಾಪಿಸಿದಾಗ ಆರಿಸಲು ಸಾಧ್ಯವಾಗದೆ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ ಪ್ರಕರಣಗಳೂ ಇವೆ. ಗಾಳಿಗೆ ವಿದ್ಯುತ್‌ ತಂತಿಗಳು ಒಂದಕ್ಕೊಂದು ತಾಗಿ ಕಿಡಿ ಉಂಟಾಗಿ ಬೆಂಕಿ ಬೀಳುತ್ತವೆ ಎನ್ನುತ್ತಾರೆ ಅಧಿಕಾರಿಗಳು.

ಮಳೆಯಾದರೆ ಸಮಸ್ಯೆ ದೂರ
ಬೇಸಗೆ ಮಳೆ ಆರಂಭವಾದರೆ ಬೆಂಕಿ ಅವಘಡ ಪ್ರಕರಣಗಳಿಗೆ ಮುಕ್ತಿ ದೊರೆಯಲಿದೆ. ಒಂದೆರಡು ಮಳೆ ಯಾದರೆ ಒಣಗಿರುವ ಹುಲ್ಲು, ಪೊದೆಗಳು ಮತ್ತೆ ಚಿಗುರಿ ಬೆಂಕಿ ಅವಘಡಗಳು ಕಡಿಮೆಯಾಗುತ್ತವೆ. ಕಾಡಿಗೆ ಬೆಂಕಿ ಬೀಳುವ ಪ್ರಕರಣಗಳೂ ಇದರಿಂದ ಕಡಿಮೆಯಾಗುತ್ತದೆ ಎನ್ನುತ್ತಾರೆ ಠಾಣಾ ಸಿಬಂದಿ.

ಅಗ್ನಿಶಮನ ವಾಹನಗಳ ಸಂಖ್ಯೆ ಕಡಿಮೆ
ಕೇಂದ್ರ ಸರಕಾರದ ಗುಜರಿ ನೀತಿಯ ಅನ್ವಯ 15 ವರ್ಷಗಳ ಹಳೆಯ ಡೀಸೆಲ್‌ ವಾಹನಗಳನ್ನು ವಿವೇವಾರಿ ಮಾಡ ಬೇಕಾಗಿದ್ದು, ಇದರಿಂದಾಗಿ ವಾಹನಗಳ ಅಗ್ನಿಶಮನ ವಾಹನಗಳ ಸಂಖ್ಯೆ ಕಡಿಮೆಯಾಗಿದೆ. ಮಂಗಳೂರು ನಗರ ಹೊರತುಪಡಿಸಿ ಇತರ ಠಾಣೆಗಳಲ್ಲಿ ಒಂದೊಂದೇ ವಾಹನಗಳು ಇವೆ. ಪಾಂಡೇಶ್ವರದಲ್ಲಿ ಸದ್ಯ 2 ವಾಹನ ಇದೆ. ತುರ್ತು ಸಂದರ್ಭ ಬಂದಾಗ ಪಕ್ಕದ ಠಾಣೆಯಿಂದ ವಾಹನ ಪಡೆಯಲಾಗುತ್ತಿದೆ. ಹೊಸ ವಾಹನಗಳ ಖರೀದಿ ಪ್ರಕ್ರಿಯೆ ರಾಜ್ಯಮಟ್ಟದಲ್ಲಿ ನಡೆಯುತ್ತಿದ್ದು, ಶೀಘ್ರ ವಾಹನಗಳು ಬರುವ ನಿರೀಕ್ಷೆಯಿದೆ. ವಿಮಾನ ನಿಲ್ದಾಣ, ಎನ್‌ಎಂಪಿಎ, ಎಂಆರ್‌ಪಿಎಲ್‌, ಎಂಸಿಎಫ್‌, ಕೆಐಒಸಿಎಲ್‌ ಮೊದಲಾದ
ಸಂಸ್ಥೆಗಳಲ್ಲಿರುವ ಅತ್ಯಾಧುನಿಕ ವಾಹನ ಗಳನ್ನೂ ತುರ್ತು ಸಂದರ್ಭದಲ್ಲಿ ಪಡೆಯ ಲಾಗುತ್ತದೆ ಎಂದು ಅಧಿಕಾರಿಗಳು
ತಿಳಿಸಿದ್ದಾರೆ.

ಕಳೆದ ವರ್ಷ ಬೆಂಕಿ ದುಪ್ಪಟ್ಟು
ಕಳೆದ ವರ್ಷ ಇದೇ ಅವಧಿಯಲ್ಲಿ 1,180 ಪ್ರಕರಣಗಳು ದಾಖಲಾಗಿತ್ತು. ಪಾಂಡೇಶ್ವರ 161, ಕದ್ರಿ 232, ಮೂಡುಬಿದಿರೆ 161, ಬೆಳ್ತಂಗಡಿ 131, ಪುತ್ತೂರು 206, ಸುಳ್ಯ 82 ಪ್ರಕರಣಗಳು ವರದಿಯಾಗಿತ್ತು. 2022ರಲ್ಲಿ ಇಡೀ ವರ್ಷದಲ್ಲಿ 773 ಕರೆಗಳು, 2021ರಲ್ಲಿ 507 ಮತ್ತು 2020ರಲ್ಲಿ 823 ಕರೆಗಳು ದಾಖಲಾಗಿತ್ತು.

ಸ್ವಲ್ಪ ಕಡಿಮೆ
ಬಿಸಿಲ ಬೇಗೆ ಕಳೆದ ವರ್ಷಕ್ಕೆ ಹೋಲಿಸಿದರೆ ಇಲ್ಲಿಯವರೆಗೆ ಅಗ್ನಿ ಅವಘಡ ಪ್ರಕರಣಗಳು ಸ್ವಲ್ಪ ಕಡಿಮೆ ಇದೆ. ಪ್ರತೀ ದಿನ 10-12 ಪ್ರಕರಣಗಳು ಕರೆಗಳು ಬರುತ್ತಿವೆ. ಕಳೆದ ವರ್ಷ 30-40 ಕರೆಗಳು ಬರುತಿತ್ತು. ಗುಡ್ಡಗಳಲ್ಲಿ ಮುಳಿಹುಲ್ಲಿಗೆ ಬೆಂಕಿ ಬೀಳುವ ಪ್ರಕರಣಗಳು ಸ್ವಲ್ಪ ಹೆಚ್ಚಿವೆ.
ಭರತ್‌ ಕುಮಾರ್‌ ದ.ಕ. ಜಿಲ್ಲಾ
ಅಗ್ನಿಶಾಮಕ ಅಧಿಕಾರಿ, ಪಾಂಡೇಶ್ವರ

ಟಾಪ್ ನ್ಯೂಸ್

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Drinking Water198 ಕೋ.ರೂ.ವೆಚ್ಚದ ಶಾಶ್ವತ ಕುಡಿಯುವ ನೀರಿನ ಯೋಜನೆ: ಇಂದು ಪ್ರಾಯೋಗಿಕ ಚಾಲನೆ

Drinking Water198 ಕೋ.ರೂ.ವೆಚ್ಚದ ಶಾಶ್ವತ ಕುಡಿಯುವ ನೀರಿನ ಯೋಜನೆ: ಇಂದು ಪ್ರಾಯೋಗಿಕ ಚಾಲನೆ

ಈಗ ಮಂಗಳೂರಿನ ಗಾಳಿಯೂ ಕಲುಷಿತ! ಬೆಂಗಳೂರು, ಮೈಸೂರಿನಲ್ಲೂ ಮಾಲಿನ್ಯ ಅಪಾಯಕಾರಿ ಮಟ್ಟದಲ್ಲಿ

ಈಗ ಮಂಗಳೂರಿನ ಗಾಳಿಯೂ ಕಲುಷಿತ! ಬೆಂಗಳೂರು, ಮೈಸೂರಿನಲ್ಲೂ ಮಾಲಿನ್ಯ ಅಪಾಯಕಾರಿ ಮಟ್ಟದಲ್ಲಿ

Surathkal ನಾಲ್ಕು ತಿಂಗಳ ಮಗುವಿಗೆ ಥೈರಾಯ್ಡ್ ಎಂದ ವೈದ್ಯರು!

Surathkal ನಾಲ್ಕು ತಿಂಗಳ ಮಗುವಿಗೆ ಥೈರಾಯ್ಡ್ ಎಂದ ವೈದ್ಯರು!

Rain ಕರಾವಳಿಯಲ್ಲಿ ಎಲ್ಲೋ ಅಲರ್ಟ್‌

Rain ಕರಾವಳಿಯಲ್ಲಿ ಎಲ್ಲೋ ಅಲರ್ಟ್‌

Campco ಸದಸ್ಯತ್ವ ಚೀಟಿ ದುರ್ಬಳಕೆ ಮಾಡಿ ಕಳಪೆ ಅಡಿಕೆ ಮಾರಾಟ ಯತ್ನ

Campco ಸದಸ್ಯತ್ವ ಚೀಟಿ ದುರ್ಬಳಕೆ ಮಾಡಿ ಕಳಪೆ ಅಡಿಕೆ ಮಾರಾಟ ಯತ್ನ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.