IPL ರೋಚಕ ಪಂದ್ಯ:ರಾಜಸ್ಥಾನ್‌ ವಿರುದ್ಧ ಹೈದರಾಬಾದ್ ಗೆ 1 ರನ್ ಜಯ


Team Udayavani, May 2, 2024, 11:29 PM IST

1——asdsad

Sunrisers Hyderabad, Rajasthan Royals, 50th Match,

ಹೈದರಾಬಾದ್‌: ಗುರುವಾರದ ರೋಚಕ ಮುಖಾಮುಖಿಯಲ್ಲಿ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ 1 ರನ್ ಜಯ ಸಾಧಿಸಿದೆ.

ಸನ್ ರೈಸರ್ಸ್ ಹೈದರಾಬಾದ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ನಿಧಾನ ಗತಿಯ ಆರಂಭದ ಬಳಿಕ ಬಿರುಸಿನ ಆಟಕ್ಕಿಳಿದು 3 ವಿಕೆಟಿಗೆ 201 ರನ್‌ ಪೇರಿಸಿತು. ಗುರಿ ಬೆನ್ನಟ್ಟಿದ ರಾಜಸ್ಥಾನ್ ಕೊನೆಯ ಎಸೆತದ ವರೆಗೂ ಹೋರಾಟ ನಡೆಸಿತು.7 ವಿಕೆಟ್ ನಷ್ಟಕ್ಕೆ 200 ರನ್ ಗಳಿಸಿ ಸೋಲು ಅನುಭವಿಸಿತು. ಕೊನೆಯಲ್ಲಿ ಅಶ್ವಿನ್ ಮತ್ತು ಪೊವೆಲ್ ಹೋರಾಡಿದರೂ ಗೆಲುವು ಸಾಧ್ಯವಾಗಲಿಲ್ಲ.

ಜೈಸ್ವಾಲ್ 67, ರಿಯಾನ್ ಪರಾಗ್ 77 ರನ್ ಗಳಿಸಿ ಉತ್ತಮ ಹೋರಾಟ ನೀಡಿದರು. ಹೆಟ್ಮೇಯರ್ 13, ಪೊವೆಲ್ 27 ರನ್ ಗಳಿಸಿ ಔಟಾದರು. ಬಟ್ಲರ್, ಸಂಜು ಸ್ಯಾಮ್ಸನ್ ಶೂನ್ಯಕ್ಕೆ ನಿರ್ಗಮಿಸಿದರು.

ಕೊನೆಯ 12 ಎಸೆತಗಳಲ್ಲಿ 20 ರನ್ ಅಗತ್ಯವಿತ್ತು. ಕಮಿನ್ಸ್ ಎಸೆದ ಓವರ್ ನಲ್ಲಿ 7 ರನ್ ಬಿಟ್ಟು ಕೊಟ್ಟರು. ಕೊನೆಯ ಓವರ್ ನಲ್ಲಿ 11 ರನ್ ಮಾತ್ರ ಗಳಿಸಲು ಸಾಧ್ಯವಾಯಿತು. ಭುವನೇಶ್ವರ್ ಕುಮಾರ್ ಅವರು ಕೊನೆಯ ಎಸೆತದಲ್ಲಿ ಪೊವೆಲ್ ಅವರನ್ನು ಎಲ್ಬಿಡಬ್ಲ್ಯೂ ಮಾಡುವ ಮೂಲಕ ಗೆಲುವು ತಂದುಕೊಟ್ಟರು. ಭುವನೇಶ್ವರ್ ಕುಮಾರ್ ಪ್ರಮುಖ 3 ವಿಕೆಟ್ ಪಡೆದು ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.

ನಿತೀಶ್‌ ಭರ್ಜರಿ ಆಟ
ನಿತೀಶ್‌ ಕುಮಾರ್‌ ರೆಡ್ಡಿ, ಟ್ರ್ಯಾವಿಸ್‌ ಹೆಡ್‌ ಮತ್ತು ಹೆನ್ರಿಚ್‌ ಕ್ಲಾಸೆನ್‌ ಭರ್ಜರಿ ಬ್ಯಾಟಿಂಗ್‌ ಪ್ರದರ್ಶನವಿತ್ತರು.ಟಾಸ್‌ ಗೆದ್ದ ಹೈದರಾಬಾದ್‌ ಬ್ಯಾಟಿಂಗ್‌ ಆಯ್ದುಕೊಂಡಾಗ ದೊಡ್ಡ ಮೊತ್ತದ ನಿರೀಕ್ಷೆ ಮೂಡಿತ್ತು. ಆದರೆ ರಾಜಸ್ಥಾನ್‌ ತಂಡದ ಕರಾರುವಾಕ್‌ ಬೌಲಿಂಗ್‌ ದಾಳಿಗೆ ಹೈದರಾಬಾದ್‌ ಕುಂಟುತ್ತ ಸಾಗಿತು. ಬಿಗ್‌ ಹಿಟ್ಟರ್‌ ಟ್ರ್ಯಾವಿಸ್‌ ಹೆಡ್‌ ಕ್ರೀಸ್‌ನಲ್ಲಿದ್ದೂ ಈ ಸೀಸನ್‌ನ ಪವರ್‌ ಪ್ಲೇಯಲ್ಲಿ ಎಸ್‌ಆರ್‌ಎಚ್‌ ತನ್ನ ಕನಿಷ್ಠ ರನ್‌ ದಾಖಲಿಸಿತು (2ಕ್ಕೆ 37). ಸಂದೀಪ್‌ ಶರ್ಮ ತಮ್ಮ ಪವರ್‌ ಪ್ಲೇ ವಿಕೆಟ್‌ ಗಳಿಕೆಯನ್ನು 60ಕ್ಕೆ ಏರಿಸಿಕೊಂಡರು. ಈ ಯಾದಿಯಲ್ಲಿ ಅವರಿಗೆ 2ನೇ ಸ್ಥಾನ. 68 ವಿಕೆಟ್‌ ಉರುಳಿಸಿದ ಭುವನೇಶ್ವರ್‌ ಕುಮಾರ್‌ ಅಗ್ರಸ್ಥಾನದಲ್ಲಿದ್ದಾರೆ.

ಅಭಿಷೇಕ್‌ ಶರ್ಮ (12) ಮತ್ತು ಅನ್ಮ್ಮೊ ಲ್‌ಪ್ರೀತ್‌ ಸಿಂಗ್‌ (5) ಹೆಚ್ಚು ಹೊತ್ತು ನಿಲ್ಲಲಿಲ್ಲ. ಇದರಿಂದ ಹೈದರಾಬಾದ್‌ ಒತ್ತಡಕ್ಕೆ ಸಿಲುಕಿತು.
ಒಂದು ಹಂತದಲ್ಲಿ ಎಸೆತಕ್ಕೊಂದರಂತೆ 25 ರನ್‌ ಮಾಡಿದ್ದ ಹೆಡ್‌, 9ನೇ ಓವರ್‌ ಬಳಿಕ ಸಿಡಿಯಲಾರಂಭಿಸಿದರು. ಚಹಲ್‌ ಪಾಲಾದ ಈ ಓವರ್‌ನಲ್ಲಿ ಸತತ 2 ಸಿಕ್ಸರ್‌, ಒಂದು ಬೌಂಡರಿ ಬಾರಿಸಿದರು. 10 ಓವರ್‌ ಅಂತ್ಯಕ್ಕೆ ಸ್ಕೋರ್‌ 75ಕ್ಕೆ ಏರಿತು. ಹೆಡ್‌ ಮತ್ತು ನಿತೀಶ್‌ ರೆಡ್ಡಿ ಸೇರಿಕೊಂಡು ಹೈದರಾಬಾದ್‌ ಇನ್ನಿಂಗ್ಸ್‌ ಬೆಳೆಸತೊಡಗಿದರು. ಬಳಿಕ ಹೆನ್ರಿಸ್‌ ಕ್ಲಾಸೆನ್‌ ಸಿಡಿದು ನಿಂತರು. ಕೊನೆಯ 10 ಓವರ್‌ಗಳಲ್ಲಿ ಹೈದರಾಬಾದ್‌ ಒಂದೇ ವಿಕೆಟಿಗೆ 125 ರನ್‌ ಬಾರಿಸುವ ಮೂಲಕ ತಿರುಗಿ ಬಿತ್ತು. ಹೆಡ್‌-ರೆಡ್ಡಿ 3ನೇ ವಿಕೆಟಿಗೆ 96 ರನ್‌, ರೆಡ್ಡಿ-ಕ್ಲಾಸೆನ್‌ ಮುರಿಯದ 4ನೇ ವಿಕೆಟಿಗೆ 66 ರನ್‌ ಪೇರಿಸಿದರು.

ನಿತೀಶ್‌ ರೆಡ್ಡಿ 42 ಎಸೆತಗಳಿಂದ ಅಜೇಯ 76 ರನ್‌ ಬಾರಿಸಿದರು. ಸಿಡಿಸಿದ್ದು 3 ಬೌಂಡರಿ ಮತ್ತು 8 ಸಿಕ್ಸರ್‌. ಇದರೊಂದಿಗೆ ರೆಡ್ಡಿ ಹೈದರಾಬಾದ್‌ ಇನ್ನಿಂಗ್ಸ್‌ನಲ್ಲಿ ಬರಿಷ್ಠ 8 ಸಿಕ್ಸರ್‌ ಬಾರಿಸಿದ 5ನೇ ಆಟಗಾರನೆನಿಸಿದರು. ವಾರ್ನರ್‌, ಮನೀಷ್‌ ಪಾಂಡೆ, ಹೆಡ್‌ ಮತ್ತು ಕ್ಲಾಸೆನ್‌ ಉಳಿದವರು. ಹೆಡ್‌ 44 ಎಸೆತ ಎದುರಿಸಿ 58 ರನ್‌ ಬಾರಿಸಿದರು (6 ಫೋರ್‌, 3 ಸಿಕ್ಸರ್‌). ಕ್ಲಾಸೆನ್‌ 19 ಎಸೆತಗಳಿಂದ ಅಜೇಯ 42 ರನ್‌ ಮಾಡಿದರು (3 ಬೌಂಡರಿ, 3 ಸಿಕ್ಸರ್‌).

ಟಾಪ್ ನ್ಯೂಸ್

Suside-Boy

Padubidri: ಸ್ನಾನದ ಕೋಣೆಯಲ್ಲಿ ವಿಷ ಕುಡಿದು ಆತ್ಮಹತ್ಯೆ

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ

Suside-Boy

Surathkal: ಚಿಕ್ಕಬಳ್ಳಾಪುರ ಮೂಲದ ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Asian Champions Trophy: ಕೊರಿಯಾ ವಿರುದ್ದ ಗೆದ್ದು ಫೈನಲ್‌ ಪ್ರವೇಶಿಸಿದ ಭಾರತ ಹಾಕಿ ತಂಡ

Asian Champions Trophy: ಕೊರಿಯಾ ವಿರುದ್ದ ಗೆದ್ದು ಫೈನಲ್‌ ಪ್ರವೇಶಿಸಿದ ಭಾರತ ಹಾಕಿ ತಂಡ

1-eee

International ಕರಾಟೆ ಚಾಂಪಿಯನ್ ಶಿಪ್; ಸುಜಲ್ ಜೆ ಶೆಟ್ಟಿಗೆ ಬೆಳ್ಳಿ,ಕಂಚು

ENGvsAUS: ಏಕದಿನ ಸರಣಿಗೂ ಬಟ್ಲರ್‌ ಅಲಭ್ಯ; ಎಸ್‌ಆರ್‌ಎಚ್ ಆಟಗಾರನಿಗೆ ನಾಯಕತ್ವ

ENGvsAUS: ಏಕದಿನ ಸರಣಿಗೂ ಬಟ್ಲರ್‌ ಅಲಭ್ಯ; ಎಸ್‌ಆರ್‌ಎಚ್ ಆಟಗಾರನಿಗೆ ನಾಯಕತ್ವ

ಈತನೇ ಭಾರತದ ಮುಂದಿನ ಸೂಪರ್‌ ಸ್ಟಾರ್‌ ಎಂದ ಸ್ಟೀವ್‌ ಸ್ಮಿತ್‌, ಸ್ಟಾರ್ಕ್‌

B–G Trophy: ಈತನೇ ಭಾರತದ ಮುಂದಿನ ಸೂಪರ್‌ ಸ್ಟಾರ್‌ ಎಂದ ಸ್ಟೀವ್‌ ಸ್ಮಿತ್‌, ಸ್ಟಾರ್ಕ್‌

1-trrr

Asian Champions Trophy ಸೆಮಿಫೈನಲ್‌ : ಕೊರಿಯಾ ವಿರುದ್ಧ ಭಾರತ ಫೇವರಿಟ್‌

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

cOurt

Udupi: ಪಾತಕಿ ಬನ್ನಂಜೆ ರಾಜ ಸಹಚರನಿಗೆ ಜಾಮೀನು

Suside-Boy

Padubidri: ಸ್ನಾನದ ಕೋಣೆಯಲ್ಲಿ ವಿಷ ಕುಡಿದು ಆತ್ಮಹತ್ಯೆ

new-parli

Foreign affairs, ಕೃಷಿ ಶಿಕ್ಷಣ, ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನ ಕಾಂಗ್ರೆಸ್‌ ಪಾಲು

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.