World Mother’s Day 2024: ಅಮ್ಮ ನಿನ್ನ ತೋಳಿನಲ್ಲಿ…..ಕಂದಾ ನಾನು

ಅವಳೊಂದಿಗೆ ಕೂತು ಅವಳ ಅಂತರಾಳದ ಮಾತಿಗೆ ಕಿವಿಯಾಗೋಣ....

Team Udayavani, May 12, 2024, 10:15 AM IST

Desi Swara: ಅಮ್ಮ ನಿನ್ನ ತೋಳಿನಲ್ಲಿ…..ಕಂದಾ ನಾನು

ನಾನು ಅಮ್ಮ.. ಅಮ್ಮ.. ಎಂದು ಕೂಗಿದಾಗ ಓಗೊಡುವುದಷ್ಟೇ ಅಲ್ಲದೇ ತನ್ನ ಸರ್ವಸ್ವದ ಜತೆಗೆ ಓಡಿ ಬರುವ, ನನ್ನ ಕಷ್ಟಕ್ಕೆ ತನ್ನ ಕರುಳನ್ನು ಕರಗಿಸಿಕೊಳ್ಳುವ, ನಾನು ಏನೂ ಹೇಳದಿದ್ದರೂ ಅರ್ಥೈಸಿಕೊಳ್ಳುವ, ನನಗಾಗಿ ಸದಾ ಇರುವ ಒಂದು ಜೀವ ನನ್ನ ಅವ್ವ. ನಾನು ಈ ಜಗತ್ತಿಗೆ ಬರುವ ಮುಂಚೆಯೇ ನಾನು ಹೇಗಿರಬೇಕೆಂದು ಕನಸು ಕಂಡು, ನಾನಿನ್ನೇನು ಈ ಜಗತ್ತಿಗೆ ಕಾಲಿಡುವೆ ಅಂತ ತಿಳಿದಾಗ ಸಂಭ್ರಮಿಸಿ ನನ್ನ ಆರೈಕೆಯ ಪರಿಯ ಯೋಜನೆಯನ್ನು ಹಾಕಿ, ನಾನು ಬಂದ ತತ್‌ಕ್ಷಣ ತನ್ನನ್ನೇ ಮರೆತು ನನ್ನನ್ನೇ ಜೀವನವನ್ನಾಗಿಸಿಕೊಳ್ಳುವ ಕರುಣಾಮಯಿ.

ಅಮ್ಮ ಎಂದರೆ ಏನೂ ಹರುಷವೋ ಎಂಬಂತೆ ನನ್ನ ಬಾಲ್ಯದಲ್ಲಿ ಅವಳನ್ನು ಬಿಟ್ಟು ನಾನು ಯಾವುದೇ ವಿಷಯದ ಬಗ್ಗೆ ಯೋಚನೆ ಮಾಡಿದ್ದೇ ಇಲ್ಲ. ಪ್ರತೀ ಗಳಿಗೆಗೂ ಅಮ್ಮ ಪ್ರತಿಯೊಂದು ವಿಷಯದ ಬಗ್ಗೆ ಗಮನಹರಿಸಿ ನನ್ನ ಕಾಳಜಿ ವಹಿಸುವಾಗ ನಾನೇಕೆ ತಲೆ ಕೆಡಿಸಿಕೊಳ್ಳಬೇಕು, ಎಲ್ಲವನ್ನೂ ಅಮ್ಮನ ಉಡಿಯಲ್ಲಿ ಹಾಕಿ ನಾನು ಮಾತ್ರ ತೋಳಿನಲ್ಲಿ ಹಾಯಾಗಿ ಕುಳಿತುಕೊಳ್ಳುವೆ.

ಅಮ್ಮನ ತೋಳು ಯಾವುದೇ ಬಿಸಿನೆಸ್‌ ಕ್ಲಾಸ್‌ ಸೀಟಿಗೂ ಹೋಲಿಕೆಯಿಲ್ಲ, ಸುಖವೆಂದರೆ ಅಮ್ಮನ ತೋಳಿನಲ್ಲಿ ಮಲಗುವುದು. ಅಪ್ಪ ಒಳ್ಳೆಯ ಬ್ರ್ಯಾಂಡ್‌ನ‌ ಗಾಡಿಯನ್ನು ತಂದರೂ ನನಗೆ ಅಮ್ಮನ ತೋಳೇ ಬೇಕು. ಮಲಗಿದಾಗ ಅಮ್ಮ ಇನ್ನೇನು ನಾನು ಎದ್ದುಬಿಡುತ್ತೇನೆ, ನಿದ್ದೆ ಹಾಳಾಗುತ್ತದೆ ಎಂದು ತೋಳು ಎಷ್ಟು ನೋವಾದರೂ ನನಗೆ ಮಾತ್ರ ಯಾವುದೇ ಅಡಚಣೆ ಇಲ್ಲದಂತೆ ನೋಡಿಕೊಳ್ಳುತ್ತಾಳೆ. ಇನ್ನು ಊಟದ ವಿಷಯದಲ್ಲಿ ತನಗೆ ಎಷ್ಟೇ ಕಷ್ಟವಿದ್ದರೂ ನನಗೆ ಊಟ ಮಾಡಿಸುವುದನ್ನು ಮಾತ್ರ ತಪ್ಪಿಸುವುದಿಲ್ಲ.

ಮನೆಯೇ ಮೊದಲ ಪಾಠ ಶಾಲೆ, ತಾಯಿಯೇ ಮೊದಲ ಗುರು ಎಂಬಂತೆ ನನ್ನ ಮಗು ಜೀವನದಲ್ಲಿ ಮುಂದೆ ಹೋಗಬೇಕು, ಒಂದು ದೊಡ್ಡ ಹು¨ªೆಯಲ್ಲಿರಬೇಕು, ಅದಕ್ಕಾಗಿ ಈಗಿನಿಂದಲೇ ಮಗುವಿನ ಆವಶ್ಯಕತೆಯನ್ನು ತಿಳಿದುಕೊಂಡು ಒಂದೊಂದೇ ವಿಷಯವನ್ನು ಕಲಿಸುತ್ತ ಜೀವನದ ಪಾಠಗಳನ್ನೂ ಹೇಳಿಕೊಡುತ್ತ ಪ್ರೋತ್ಸಾಹಿಸುತ್ತಾಳೆ. ಯಾವುದೇ ಒಂದು ಚಟುವಟಿಕೆ ಇರಲಿ ತನ್ನ ಮಗು ಮುಂದೆ ಬರಬೇಕೆಂದು ಆಶಿಸುತ್ತಾಳೆ. ಭಾಷಣವನ್ನು ಬರೆದು ಕೊಟ್ಟು ಓದಿಸಿ ವೇದಿಕೆಯ ಮೇಲೆ ಧೈರ್ಯದಿಂದ ನಿಂತು ಹೇಳುವ ಸಾಮರ್ಥ್ಯವನ್ನು ತುಂಬುತ್ತಾಳೆ. ಯಾವುದೇ ವಿಷಯದ ಬಗ್ಗೆ ಪ್ರಬಂಧ ಸ್ಪರ್ಧೆ ಇದ್ದರೆ ಅದನ್ನು ಬರೆಸಿ, ಅಭ್ಯಸಿಸಿ ಬಹುಮಾನ ಪಡೆಯುವಂತೆ ಮಾಡುತ್ತಾಳೆ. ಅದೇ ರೀತಿ ನೃತ್ಯ ಹಾಡುಗಳಿದ್ದರಂತೂ ನನಗೆ ಬಣ್ಣ ಬಣ್ಣದ ಬಟ್ಟೆ ಹಾಕಿ ಮುಖಕ್ಕೆಲ್ಲ ಬಣ್ಣ ಹಚ್ಚಿ ಝಗಮಗಿಸುವ ಹಾಗೆ ಮಾಡಿ ನಾನು ಕಂಗೊಳಿಸುವಂತೆ ಮಾಡುತ್ತಾಳೆ. ಇಷ್ಟೆಲ್ಲ ನನ್ನ ಬಗ್ಗೆ ಯೋಚಿಸುವ ಅಮ್ಮ ತನ್ನ ದಿನಚರಿಯ 90 ಪ್ರತಿಶತ ಸಮಯವನ್ನು ನನಗಾಗಿ ಮುಡಿಪಾಗಿಡುವ ತ್ಯಾಗಮಯಿ.

ಇನ್ನು ಕಾಲೇಜಿಗೆ ಹೊರಟ ಮೇಲಂತೂ ಅವಳಿಗೆ ನನ್ನ ಮೇಲೆ ಎಲ್ಲಿಲ್ಲದ ಕಾಳಜಿ. ತನ್ನ ಎಲ್ಲ ಬಟ್ಟೆಗಳನ್ನ ಏನಾದರೂ ಉಪಾಯ ಮಾಡಿ ನನಗೆ ಬರುವಂತೆ ಹೋಲಿಸಿ ನಾನೂ ಎಲ್ಲರಂತೆ ಅಚ್ಚುಕಟ್ಟಾಗಿ ಸುಂದರವಾಗಿ ಕಾಣುವಂತೆ ಮಾಡುತ್ತಾಳೆ. ತನ್ನ ಸೀರೆಗಳನ್ನೆಲ್ಲ ನನಗೆ ಧಾರೆ ಎರೆಯುತ್ತಾಳೆ.

ಇನ್ನೇನು ಮಾಡುವೆ ಮಾಡಬೇಕೆಂದಾಗ ತನಗೆ ಬಂದ ಸ್ಥಿತಿಯು ನನ್ನ ಮಗುವಿಗೆ ಬರಬಾರದೆಂದು ಬಹಳ ಯೋಚಿಸಿ ಒಳ್ಳೆಯ ಹುಡುಗ ಹಾಗೂ ಮನೆತನವನ್ನು ನೋಡುತ್ತಾಳೆ. ಮದುವೆಯಾದ ಅನಂತರ ಮಗುವಿಗೆ ಯಾವುದೇ ರೀತಿಯ ಕಷ್ಟವಾಗಬಾರದೆಂದು ತಾನೂ ತಗ್ಗಿ ಬಗ್ಗಿ ನಡೆದು, ಮಗಳಿಗೂ ಅದನ್ನೇ ಮಾಡು ಎನ್ನುತ್ತಾಳೆ. ಮೊಮ್ಮಕ್ಕಳು ಬಂದ ಅನಂತರ ಮತ್ತೆ ಅ ಆ ಇ ಈ ಎಂಬಂತೆ ಮೊಮ್ಮಕ್ಕಳಿಗೂ ಅದೇ ರೀತಿ ಕಾಳಜಿ ಮಾಡುತ್ತಾಳೆ. ಒಟ್ಟಾರೆಯಾಗಿ ನಾನು 50 ವರ್ಷದ ಮುದುಕನೋ, ಮುದುಕಿಯೋ ಆದರೂ ಕೂಡ ನಾನಿನ್ನು ಅವಳಿಗೆ ಪುಟ್ಟ ಮಗು ಎಂದೇ ಭಾವಿಸಿ ಮೊದಲು ಹೇಗಿದ್ದಳ್ಳೋ ಹಾಗೆಯೇ ಕಾಳಜಿ ಮಾಡುತ್ತಾಳೆ.

ಆದರೆ ನಾನು ಎಂದಾದರೂ ಅವಳ ಬಗ್ಗೆ ಯೋಚಿಸಿದ್ದೇನೆಯೇ? ಅವಳು ಇರುವ ವಯಸ್ಸಿಗೆ ಅವಳಿಗೆ ದೈಹಿಕವಾಗಿಯಾಗಲಿ, ಮಾನಸಿಕವಾಗಿಯಾಗಲಿ ಸುಸ್ತಾಗುವುದಿಲ್ಲವೇ? ಅವಳಿಗೂ ಜೀವನದಲ್ಲಿ ಚೆನ್ನಾಗಿರಬೇಕು, ದೇಶ-ವಿದೇಶಗಳನ್ನು ಸುತ್ತಬೇಕು, ಸುಖವಾಗಿ ತಿಂದು ಉಂಡು ಆರಾಮಾಗಿರಬೇಕು ಎನ್ನಿಸುವುದಿಲ್ಲವೇ? ಎಲ್ಲವೂ ಅನ್ನಿಸುತ್ತದೆ ಆದರೆ ಕೇಳುವರ್ಯಾರೂ ಇಲ್ಲ. ಹಾಗಾಗಿ ಬನ್ನಿ ಆದರೆ ನಾನು ಎಂದಾದರೂ ಅವಳ ಬಗ್ಗೆ ಯೋಚಿಸಿದ್ದೇನೆಯೇ? ಅವಳು ಇರುವ ವಯಸ್ಸಿಗೆ ಅವಳಿಗೆ ದೈಹಿಕವಾಗಿಯಾಗಲಿ, ಮಾನಸಿಕವಾಗಿಯಾಗಲಿ ಸುಸ್ತಾಗುವುದಿಲ್ಲವೇ? ಅವಳಿಗೂ ಜೀವನದಲ್ಲಿ ಚೆನ್ನಾಗಿರಬೇಕು, ದೇಶ-ವಿದೇಶಗಳನ್ನು ಸುತ್ತಬೇಕು, ಸುಖವಾಗಿ ತಿಂದು ಉಂಡು ಆರಾಮಾಗಿರಬೇಕು ಎನ್ನಿಸುವುದಿಲ್ಲವೇ? ಎಲ್ಲವೂ ಅನ್ನಿಸುತ್ತದೆ ಆದರೆ ಕೇಳುವರ್ಯಾರೂ ಇಲ್ಲ. ಹಾಗಾಗಿ ಬನ್ನಿ ಈ ಅಮ್ಮನ ದಿನಾಚರಣೆ ಬರುವ ವರೆಗೆ ಕಾಯುವುದು ಬೇಡ ಇಂದೇ ಅವಳ ಜತೆಗೆ ಕುಳಿತು ಮಾತನಾಡೋಣ.

ಅವಳ ಆಸೆ-ಆಕಾಂಕ್ಷೆಗಳನ್ನು, ಕಷ್ಟ-ಸುಖವನ್ನೂ ತಿಳಿದುಕೊಳ್ಳೋಣ. ಅಮ್ಮ ತನ್ನ ತೋಳಿನಲ್ಲಿ, ಬಗುಲಲ್ಲಿ, ಕಂಕುಳಲ್ಲಿ ಇಟ್ಟುಕೊಂಡು ನನ್ನನ್ನ ಬೆಳೆಸಿದಳು, ಇನ್ನು ಅವಳನ್ನು ನೋಡಿಕೊಂಡು ಉಳಿಸಿಕೊಳ್ಳುವ ಜವಾಬ್ದಾರಿ ನನ್ನದಾಗಿದೆ. ಇಂದು ನಾನು, ನಾನಾಗಿರುವುದು, ಶಕ್ತಿಯನ್ನು ಪಡೆದುಕೊಂಡಿರುವುದು ಎಲ್ಲಿ ಎಂದರೆ ಅಮ್ಮ ನಿನ್ನ ತೋಳಿನಲ್ಲಿ……

*ಜಯಾ ಛಬ್ಬಿ, ಮಸ್ಕತ್‌

ಟಾಪ್ ನ್ಯೂಸ್

Mangaluru: ರಾಹುಲ್‌ ಗಾಂಧಿಯನ್ನು ಪೇಜಾವರ ಶ್ರೀ ಟೀಕಿಸಿದ್ದು ಸರಿಯಲ್ಲ : ಪದ್ಮರಾಜ್‌

Mangaluru: ರಾಹುಲ್‌ ಗಾಂಧಿಯನ್ನು ಪೇಜಾವರ ಶ್ರೀ ಟೀಕಿಸಿದ್ದು ಸರಿಯಲ್ಲ : ಪದ್ಮರಾಜ್‌

Udupi: ಕಾರ್ಮಿಕ ಸುರಕ್ಷೆಗೆ ಜಿಲ್ಲಾಧಿಕಾರಿ ಸೂಚನೆ

Udupi: ಕಾರ್ಮಿಕ ಸುರಕ್ಷೆಗೆ ಜಿಲ್ಲಾಧಿಕಾರಿ ಸೂಚನೆ

Mangaluru: ಮುಖ್ಯಮಂತ್ರಿ ರಾಜೀನಾಮೆ ಅನಿವಾರ್ಯ: ರವಿಕುಮಾರ್‌ ಆಗ್ರಹ

Mangaluru: ಮುಖ್ಯಮಂತ್ರಿ ರಾಜೀನಾಮೆ ಅನಿವಾರ್ಯ: ರವಿಕುಮಾರ್‌ ಆಗ್ರಹ

Heavy Rain: ದಕ್ಷಿಣ ಕನ್ನಡ ಜಿಲ್ಲಾದ್ಯಂತ ಉತ್ತಮ ಮಳೆ… ಕೆಲವೆಡೆ ಹಾನಿ

Heavy Rain: ದಕ್ಷಿಣ ಕನ್ನಡ ಜಿಲ್ಲಾದ್ಯಂತ ಉತ್ತಮ ಮಳೆ… ಕೆಲವೆಡೆ ಹಾನಿ

Udupi: ದಿನಪೂರ್ತಿ ಮಳೆ… ತಗ್ಗು ಪ್ರದೇಶಗಳು ಜಲಾವೃತ

Udupi: ದಿನಪೂರ್ತಿ ಮಳೆ… ತಗ್ಗು ಪ್ರದೇಶಗಳು ಜಲಾವೃತ

NANGI-KADALKORETA

Nangi: ತೀವ್ರಗೊಂಡ ಕಡಲ್ಕೊರೆತ… ಬೀಚ್‌ ವ್ಯೂ ರೆಸಾರ್ಟ್‌ ಸಮುದ್ರ ಪಾಲಾಗುವ ಸಾಧ್ಯತೆ

Maravanthe: ತೀವ್ರಗೊಂಡ ಕಡಲ್ಕೊರೆತ… ಕಡಲು ಸೇರುತ್ತಿರುವ ಕಲ್ಲುಗಳು

Maravanthe: ತೀವ್ರಗೊಂಡ ಕಡಲ್ಕೊರೆತ… ಕಡಲು ಸೇರುತ್ತಿರುವ ಕಲ್ಲುಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara:ತವರು ಮನೆ ಮಿಲನದ ಸಂಭ್ರಮ: ಕುಟುಂಬ, ಸಂಬಂಧದ ಮೌಲ್ಯವನ್ನು ತಿಳಿಸಿದ ಭೇಟಿ

Desi Swara:ತವರು ಮನೆ ಮಿಲನದ ಸಂಭ್ರಮ: ಕುಟುಂಬ, ಸಂಬಂಧದ ಮೌಲ್ಯವನ್ನು ತಿಳಿಸಿದ ಭೇಟಿ

Desi Swara: “ಆದ್ಯ ಪೂಜ್ಯ’ ಗಣೇಶನ ಅಷ್ಟ ಅವತಾರಗಳ ವಿಭಿನ್ನ, ಮನಮೋಹಕ ಪ್ರಸ್ತುತಿ

Desi Swara: “ಆದ್ಯ ಪೂಜ್ಯ’ ಗಣೇಶನ ಅಷ್ಟ ಅವತಾರಗಳ ವಿಭಿನ್ನ, ಮನಮೋಹಕ ಪ್ರಸ್ತುತಿ

Desi Swara: ಕ್ಷಮೆ ಕೇಳುವುದು ಹಿರಿದೋ? ಕ್ಷಮಿಸುವುದು ಹಿರಿದೋ?

Desi Swara: ಕ್ಷಮೆ ಕೇಳುವುದು ಹಿರಿದೋ? ಕ್ಷಮಿಸುವುದು ಹಿರಿದೋ?

Desi Swara: ವೈಯಕ್ತಿಕ ಸಂತೋಷ ಸದಾ ಜೀವಂತವಾಗಿರಲಿ

Desi Swara: ವೈಯಕ್ತಿಕ ಸಂತೋಷ ಸದಾ ಜೀವಂತವಾಗಿರಲಿ

Desi Swara: ಸುಮಧುರ ಸಂಗೀತ ಸಂಜೆ: ಮಲ್ಹಾರ್‌ 2.0 ಕಾರ್ಯಕ್ರಮ

Desi Swara: ಸುಮಧುರ ಸಂಗೀತ ಸಂಜೆ: ಮಲ್ಹಾರ್‌ 2.0 ಕಾರ್ಯಕ್ರಮ

MUST WATCH

udayavani youtube

ಕೂಲ್ ಮೂಡ್ ನಲ್ಲಿ ಸ್ವಿಮ್ಮಿಂಗ್ ಮಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ : ಇಲ್ಲಿದೆ ವಿಡಿಯೋ

udayavani youtube

ಅಂಬಾನಿ ಕುಟುಂಬದಿಂದ ಆಟಗಾರರೊಂದಿಗೆ ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆ

udayavani youtube

Team india

udayavani youtube

ಮರವಂತೆ ಬೀಚ್ ಅಪಾಯ ಲೆಕ್ಕಿಸದೆ ಪ್ರವಾಸಿಗರ ಹುಚ್ಚಾಟ

udayavani youtube

ಕಮಲಶಿಲೆ ದುರ್ಗೆಯ ಪಾದ ಸ್ಪರ್ಶಿಸಿದ ಕುಬ್ಜಾ ನದಿ

ಹೊಸ ಸೇರ್ಪಡೆ

Mangaluru: ರಾಹುಲ್‌ ಗಾಂಧಿಯನ್ನು ಪೇಜಾವರ ಶ್ರೀ ಟೀಕಿಸಿದ್ದು ಸರಿಯಲ್ಲ : ಪದ್ಮರಾಜ್‌

Mangaluru: ರಾಹುಲ್‌ ಗಾಂಧಿಯನ್ನು ಪೇಜಾವರ ಶ್ರೀ ಟೀಕಿಸಿದ್ದು ಸರಿಯಲ್ಲ : ಪದ್ಮರಾಜ್‌

Udupi: ಕಾರ್ಮಿಕ ಸುರಕ್ಷೆಗೆ ಜಿಲ್ಲಾಧಿಕಾರಿ ಸೂಚನೆ

Udupi: ಕಾರ್ಮಿಕ ಸುರಕ್ಷೆಗೆ ಜಿಲ್ಲಾಧಿಕಾರಿ ಸೂಚನೆ

Mangaluru: ಮುಖ್ಯಮಂತ್ರಿ ರಾಜೀನಾಮೆ ಅನಿವಾರ್ಯ: ರವಿಕುಮಾರ್‌ ಆಗ್ರಹ

Mangaluru: ಮುಖ್ಯಮಂತ್ರಿ ರಾಜೀನಾಮೆ ಅನಿವಾರ್ಯ: ರವಿಕುಮಾರ್‌ ಆಗ್ರಹ

Heavy Rain: ದಕ್ಷಿಣ ಕನ್ನಡ ಜಿಲ್ಲಾದ್ಯಂತ ಉತ್ತಮ ಮಳೆ… ಕೆಲವೆಡೆ ಹಾನಿ

Heavy Rain: ದಕ್ಷಿಣ ಕನ್ನಡ ಜಿಲ್ಲಾದ್ಯಂತ ಉತ್ತಮ ಮಳೆ… ಕೆಲವೆಡೆ ಹಾನಿ

Udupi: ದಿನಪೂರ್ತಿ ಮಳೆ… ತಗ್ಗು ಪ್ರದೇಶಗಳು ಜಲಾವೃತ

Udupi: ದಿನಪೂರ್ತಿ ಮಳೆ… ತಗ್ಗು ಪ್ರದೇಶಗಳು ಜಲಾವೃತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.