UV Fusion: ನಿಷ್ಕಲ್ಮಶ ಮನ ನಮ್ಮದಾಗಲಿ


Team Udayavani, May 4, 2024, 2:31 PM IST

3-uv-fusion

ಅದೊಂದು ಮಹಾನಗರ. ಅಲ್ಲಿನ ಒಂದು ಮನೆಯ ಮಾಲಕ ಚಂದದ ಬೆಕ್ಕೊಂದನ್ನು ಅತ್ಯಂತ ಪ್ರೀತಿ, ಕಾಳಜಿಯಿಂದ ಸಾಕಿದ್ದ. ನೋಡಲು ಬಲು ಮುದ್ದಾಗಿದ್ದ ಆ ಬೆಕ್ಕು ಎಲ್ಲರಿಗೂ ಅಚ್ಚುಮೆಚ್ಚು. ಯಾರಿಗೂ ತೊಂದರೆ ಕೊಡದೆ, ಎಲ್ಲರ ಪ್ರೀತಿಯನ್ನು ಗಳಿಸಿತ್ತು. ಎಂದೂ ಮನೆಯ ಗೇಟನ್ನೇ ದಾಟದ ಆ ಬೆಕ್ಕು ಒಂದು ದಿನ ಇದ್ದಕ್ಕಿದ್ದಂತೆಯೇ ದಾರಿ ತಪ್ಪಿ ವಠಾರದ ತುಂಬೆಲ್ಲಾ ತಿರುಗಲಾರಂಭಿಸಿತು.

ಬೀದಿ ನಾಯಿಗಳಿಂದ ತುಂಬಿಹೋಗಿದ್ದ ಆ ವಠಾರದಲ್ಲಿ, ಬೆಕ್ಕು ಬೀದಿನಾಯಿಗಳಿಗೆ ಆಹಾರವಾಗುತ್ತದೆಯೇನೋ ಎಂಬ ಕಾಳಜಿ ಅದನ್ನು ನೋಡಿದ ಜನರ ಮನದಲ್ಲಿ ಭಯ ಮೂಡಿತು. ತತ್‌ಕ್ಷಣವೇ ಬೆಕ್ಕಿನ ಮಾಲಕನನ್ನು ಸಂಪರ್ಕಿಸಿದ ಜನರು, ಬೆಕ್ಕನ್ನು ಸುರಕ್ಷಿತವಾಗಿ ಮತ್ತೆ ಮನೆಸೇರುವಂತೆ ಮಾಡಿದರು. ಇಲ್ಲಿ ಬೆಕ್ಕು ಒಂದು ನಿದರ್ಶನ ಮಾತ್ರ. ಒಳ್ಳೆಯತನ ನಮ್ಮಲ್ಲಿದ್ದರೆ ಸುತ್ತಮುತ್ತಲಿನ ಪ್ರಪಂಚ ಎಷ್ಟೇ ಕೆಟ್ಟದಾಗಿದ್ದರೂ ಸಹಾಯ ಮಾಡುವ ಕೈಗಳು ನಮ್ಮ ಜತೆಗಿರುತ್ತವೆ.

ಬೆಕ್ಕನ್ನು ಹೊರಗಿನವರು ಬೀದಿ ನಾಯಿಯಿಂದ ರಕ್ಷಿಸಿದಂತೆ ನಮ್ಮನ್ನೂ ಕೂಡ ಅಪಾಯದ ಅಂಚಿನಲ್ಲಿ ಕಾಪಾಡಲು ಭಗವಂತ ಒಂದಲ್ಲಾ ಒಂದು ರೂಪದಲ್ಲಿ ಸಹಾಯದ ಹಸ್ತಗಳನ್ನು ಸೃಷ್ಠಿಸಿರುತ್ತಾನೆ. ನಮ್ಮ ದೈನಂದಿನ ಬದುಕಿನಲ್ಲಿ ಪರಿಶುದ್ಧ ಜೀವನ, ನಿರ್ಮಲವಾದ ಮನಸ್ಸು, ಪ್ರೀತಿ – ವಿಶ್ವಾಸದ ಬಾಳ್ವೆ ನಮ್ಮದಾಗಿದ್ದಲ್ಲಿ ಮಾತ್ರ ಕಠಿನ ಪರಿಸ್ಥಿತಿಯಲ್ಲಿ ನಮಗಾಗಿ ಮಿಡಿಯುವ ಮನಗಳು ಜತೆಯಾಗಿ ನಮ್ಮೊಂದಿಗಿರುತ್ತವೆ.

ನಮ್ಮೊಳಗೆ ಸ್ವಾರ್ಥ, ಅಸೂಯೆ, ಅಪನಂಬಿಕೆಗಳಂತಹ ನಕಾರಾತ್ಮಕ ಧೋರಣೆಗಳು ಬೀಡುಬಿಟ್ಟಿದ್ದರೆ, ಸಮಾಜದಲ್ಲಿ ನಮ್ಮ ಸೋಲಿನ ದಿನಗಳಲ್ಲಿ ಯಾರೂ ಸ್ಪಂದಿಸುವುದಿಲ್ಲ. ಹಗಲು – ರಾತ್ರಿಗಳು ಹೇಗೆ ಸಹಜವೋ, ಕಷ್ಟಗಳೂ ಅಂತೆಯೇ ಪ್ರತೀ ಮನುಷ್ಯನಿಗೂ ಬರುತ್ತವೆ ಎಂಬುದನ್ನು ಸದಾ ನಮ್ಮೊಳಗೆ ಎಚ್ಚರಿಕೆಯ ಗಂಟೆಯಂತೆ ಇಟ್ಟುಕೊಂಡು ನಿಷ್ಕಲ್ಮಶ ಮನದಿಂದ ಜೀವಿಸಬೇಕು.

ಕುಂದದೆಂದಿಗುಮೆನ್ನಿಸುವ ಮನದ ಕಾತರತೆ |

ಯೆಂದೊ ತಾನೇ ಬಳಲಿ ತಣ್ಣಗಾಗುವುದು ||

ಮಂದದಾ ಕಾರ್ಮೋಡ ಬಿರಿದು ರವಿ ಬೆಳಗುವನು |

ಅಂದಿನಾ ಸುಖವೆ ಸುಖ ­   ಮಂಕುತಿಮ್ಮ |

ದಪ್ಪ ಮತ್ತು ದಟ್ಟವಾದ ಕಾರ್ಮೋಡ, ಮಳೆ

ಸುರಿದೋ ಅಥವಾ ಗಾಳಿಯ ಆರ್ಭಟಕ್ಕೋ

ಚದುರಿಹೋಗಿ ಸೂರ್ಯನ ಬೆಳಕು ಮತ್ತೆ ಬೆಳಗುವಂತೆ, ಎಂದಿಗೂ ಕಡಿಮೆಯಾಗುವುದೇ ಇಲ್ಲವೇನೋ ಎನ್ನುವ ಮನಸ್ಸಿನ ಕಳವಳ, ಕಾತರತೆ, ತಾನೇ ತಾನಾಗಿ ಕಡಿಮೆಯಾಗಿ ಮನಸ್ಸಿಗೆ ನಿರಾಳವಾದಾಗ ನಮಗಾಗುವ ಸುಖವೇ, ನಿಜವಾದ ಸುಖ. ಅಂತಹ ನಿರಾಳ ಮನಸ್ಸು ಪಡೆಯಲು ನಾವೂ ಕೂಡ ಯಾರಿಗೂ ಕೇಡು ಬಯಸದೆ ಬದುಕುವ ಮನಸ್ಥಿತಿ ನಮ್ಮದಾಗಿಸಿಕೊಳ್ಳೋಣ.

ಅನೀಶ್‌ ಬಿ. ಕೊಪ್ಪ

ಪಿ.ಇ.ಎಸ್‌. ವಿಶ್ವವಿದ್ಯಾಲಯ, ಬೆಂಗಳೂರು

ಟಾಪ್ ನ್ಯೂಸ್

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

16

Uv Fusion: ಪೆನ್ನಿಗೊಂದು ಕಥೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

14

Uv Fusion: ಸ್ನೇಹವೆಂಬ ತಂಗಾಳಿ…

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

de

Vitla: ಕಾಲು ಜಾರಿ ಕೆರೆಗೆ ಬಿದ್ದು ಯುವಕ ಸಾವು

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.