ರಾಜ್ಯ ಕಾಂಗ್ರೆಸ್ ಸರಕಾರ ಸಂಪೂರ್ಣ ನಿಷ್ಕ್ರಿಯ: ಬಿ.ವೈ.ವಿಜಯೇಂದ್ರ
Team Udayavani, May 6, 2024, 11:49 PM IST
ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರಕಾರ ಅಭಿವೃದ್ಧಿ ರಹಿತ, ರೈತವಿರೋಧಿ ಆಡಳಿತ ನಡೆಸುತ್ತಿದ್ದು, ನಾರಿಕುಲದ ಮೇಲಿನ ಕ್ರೌರ್ಯವನ್ನು ತಡೆಯಲಾರದ ನಿಷ್ಕ್ರಿಯ ಸರಕಾರವಾಗಿದೆ. ಹೀಗಾಗಿ ಈ ಚುನಾವಣೆಯಲ್ಲಿ ಐಎನ್ಡಿಐಎ ಒಕ್ಕೂಟವನ್ನು ತಿರಸ್ಕರಿಸಿ ಮತ್ತೂಮ್ಮೆ ಮೋದಿ ಪ್ರಧಾನಿಯಾಗಿಸೋಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕರೆ ನೀಡಿದ್ದಾರೆ.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾರ್ಯಕರ್ತರಿಗೆ ಪತ್ರ ಬರೆದಿರುವ ಅವರು, ಈ ಲೋಕಸಭಾ ಚುನಾವಣೆಯನ್ನು ಚುನಾವಣೆ ಎಂದಷ್ಟೇ ಪರಿಗಣಿಸದೆ ದೇಶ ಕಟ್ಟುವ ಕಾಯಕವೆಂದು ತಿಳಿದು ಹಗಲಿರುಳೆನ್ನದೇ ಸಮರ ವೀರರಂತೆ ಸಮರ್ಪಿಸಿಕೊಂಡು ಪರಿಶ್ರಮಿಸಿದ್ದೀರಿ. ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗುವುದು ಬಿಜೆಪಿಯ ಪಾಲಿಗೆ ಹೆಗ್ಗಳಿಕೆ ಎನ್ನುವುದಕ್ಕಿಂತ ಭಾರತದ ಅಭಿವೃದ್ಧಿ ಹಾಗೂ ಸುಭದ್ರತೆಯ ದೃಷ್ಟಿಯಿಂದ ಅತ್ಯಂತ ಅನಿವಾರ್ಯ ಎಂಬು ದನ್ನು ಇಡೀ ರಾಷ್ಟ್ರದ ಜನತೆಯೇ ಒಪ್ಪುವ ವಿಚಾರವಾಗಿದೆ ಎಂದರು.
3 ತಿಂಗಳುಗಳಿಂದ ಸಂಬಳ ಬಿಡುಗಡೆ ಮಾಡದ ಹಿನ್ನೆಲೆಯಲ್ಲಿ ಸರಕಾರದ ವಿರುದ್ಧ 108 ಆ್ಯಂಬುಲೆನ್ಸ್ ಸಿಬಂದಿ ಮುಷ್ಕರ ಕೈಗೊಂಡಿ ರುವ ವಿಚಾರವನ್ನು ಸಾಮಾಜಿಕ ಜಾಲತಾಣ “ಎಕ್ಸ್’ ಖಾತೆಯಲ್ಲಿ ಪ್ರಸ್ತಾವಿಸಿರುವ ಅವರು, ತುರ್ತು ಕಾಲದಲ್ಲಿ ಅತ್ಯಮೂಲ್ಯ ಜೀವಗಳನ್ನು ಉಳಿಸಲು ಪರಿಶ್ರಮಿಸುತ್ತಿರುವ ಆರೋಗ್ಯ ಸಿಬಂದಿಗೂ ಸಂಬಳ ಕೊಡದ ದುಃಸ್ಥಿತಿಗೆ ತಲುಪಿರುವ ನಿಷ್ಕ್ರಿಯ ಕಾಂಗ್ರೆಸ್ ಸರಕಾರದಿಂದಾಗಿ ಆಪತ್ಕಾಲದ ಚಿಕಿತ್ಸೆ ಆಶ್ರಯಿಸುವ ರೋಗಿಗಳಿಗೆ ಸಂಕಷ್ಟ ಎದುರಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.