UV Fusion: ಮಾಯಾ ತಾಣ


Team Udayavani, May 11, 2024, 10:15 AM IST

5-uv-fusion

ಮಾಯಾ ತಾಣ ಎಂದ ತಕ್ಷಣವೇ ಬೇರೇನು ಯೋಚಿಸಬೇಡಿ ಇದೇನು ರಂಬೆ ಊರ್ವಶಿ ಮೇನಕೆಯವರು ನರ್ತಿಸುವ ಸ್ವರ್ಗವಲ್ಲ, ಆದರೂ ಇಂದಿನ ಕಾಲೇಜಿಗೆ ಹೋಗುವ ಯುವಕರಿಗೆ ಒಂದು ರೀತಿಯಲ್ಲಿ ಇದು ಸ್ವರ್ಗವೇ ಆಗಿದೆ ಅದೇ ಬಸ್‌ ತಂಗುದಾಣ.

ಬಸ್‌ ತಂಗುದಾಣವೆಂದರೆ ಕೇವಲವಾಗಿ ಯೋಚಿಸಬೇಡಿ. ಶಿವನು ತನ್ನ ಮೂರನೇ ಕಣ್ಣನ್ನು ತೆರೆದು ನೋಡುವ ಹಾಗೆ ನಾವು ಕೂಡಾ ನಮ್ಮ ಮೂರನೇ ಕಣ್ಣನ್ನು ತೆರೆದು ನೋಡಿದರೆ ಇಲ್ಲಿ ನಡೆಯುವ ಸತ್ಯಾನುಸತ್ಯ ಘಟನೆಗಳನ್ನು ವೀಕ್ಷಿಸಬಹುದಾಗಿದೆ. ಪ್ರತಿಯೊಬ್ಬರೂ ಕೂಡ ತಂಗುದಾಣಕ್ಕೆ ಹೋಗಿಯೇ ಹೋಗಿರುತ್ತಾರೆ. ಆದರೆ ಯಾರು ಕೂಡ ತಂಗುದಾಣವನ್ನು ಸೂಕ್ಷ್ಮವಾಗಿ ಗಮನಿಸುವುದಿಲ್ಲ, ಎಲ್ಲರೂ ಕೂಡ ಅವರವರ ಗೋಜಿನಲ್ಲಿ ಇರುತ್ತಾರೆ. ಯಾವಾಗಾದರೂ ಮನೆ ಕಾಣುತ್ತೆ ಎಂಬ ಸಂದಿಗ್ಧ ಸ್ಥಿತಿಯಲ್ಲಿ ಇರುತ್ತಾರೆ.

ಆದರೆ ಇನ್ನೂ ಕೆಲವರಿಗೆ ತಂಗುದಾಣವೆಂದರೆ ಮೋಜು. ಅಂತವರಲ್ಲಿ ನಾನು ಕೂಡ ಒಬ್ಬ. ನಾವು ಕಾಲೇಜಿನಲ್ಲಿ ಕಾಲ ಕಳೆಯುವುದಕ್ಕಿಂತ ಹೆಚ್ಚಿನ ಕಾಲವನ್ನು ತಂಗುದಾಣದಲ್ಲಿ ಕಳೆಯುತ್ತೇವೆ. ಹಾಗೆಂದರೆ ಕಾಲೇಜಿಗೆ ಹೋಗದೆಯೇ ಬಂಕ್‌ ಹಾಕಿ ಬಸ್‌ ಸ್ಟ್ಯಾಂಡ್‌ ನಲ್ಲಿ ಇರುತ್ತೇವೆಂದು ಅರ್ಥವಲ್ಲ. ನಮ್ಮೂರಿಗೆ ತೆರಳುವ ಬಸ್ಸಿನ ಸಮಯದಲ್ಲಿ ಅಷ್ಟೊಂದು ಅಂತರವಿದೆಯೆಂದು. ಅದರಲ್ಲೂ ಪದವಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಒಮ್ಮೆ ನಿಲ್ದಾಣದ ಬಗ್ಗೆ ಕೇಳಿದರೆ ಗುಣಗಾನ ಮಾಡಿ ಹೇಳುವುದನ್ನು ಒಮ್ಮೆ ಕೇಳಬೇಕು.

ಈ ಬಸ್‌ ನಿಲ್ದಾಣದ ಒಂದು ಮೂಲೆಯಲ್ಲಿ ನಿಂತು ಸುತ್ತಲೂ ಗಮನಿಸಬೇಕು ಒಬ್ಬೊಬ್ಬರು ಒಂದೊಂದು ಪಾತ್ರದಲ್ಲಿ ಕಾಣುತ್ತಾರೆ. ಅದನ್ನು ನೋಡುವುದೇ ಒಂದು ತರನಾದ ಮಜ ಸಿಗುತ್ತದೆ. ಒಂದೆಡೆಗೆ ಈಗ ತಾನೇ ಪದವಿ ಪೂರ್ವ ತರಗತಿಗೆ ಬಂದಿರುವಂತಹ ಹುಡುಗರು ಗೇಲಿ ಮಾಡುತ್ತಿರುವಂತಹ ಸನ್ನಿವೇಶ. ಇನ್ನೊಂದೆಡೆಗೆ ಒಂದಿಷ್ಟು ಹದಿಹರೆಯದ ಹುಡುಗರ ಮನಸ್ಸು ಚಂಚಲವಾಗಿ ಅವರು ತಮ್ಮ ಪ್ರೇಯಸಿಯನ್ನು ಹುಡುಕುವ ಅಲೋಚನೆಯಲ್ಲಿಯೇ ಮುಳುಗಿರುತ್ತಾರೆ.  ಇನ್ನೊಂದು ಗುಂಪಿದೆ ಇದು ಗುಂಪಿಗೆ ಸೇರದ ಪದದ ತರನಾದ ಗುಂಪು ಇವರಿಗೆ ಯಾವುದೇ ರೀತಿಯ ಪ್ರಪಂಚದ ಮೇಲೆ ಅರಿವಿರುವುದಿಲ್ಲ ಹಾಗೆ ತಾವು ಇಹಲೋಕ ತ್ಯಜಿಸಿದ ಹಾಗೆ ಮೊಬೈಲ್‌ ಗೇಮಿಂಗ್‌ ನ ಒಳಗಡೆಯೇ ಹೊಕ್ಕಿ ಮುಳುಗಿರುತ್ತಾರೆ.

ಒಂದೆಡೆ ಯುವಕರ ಮೈ ರೋಮಾಂಚನಗೊಳಿಸುವ ಕಿತ್ತಾಟಗಳು  ನಡೆಯುತ್ತಿರುತ್ತದೆ. ಅದರೊಂದಿಗೆ ಸಾರ್ವಜನಿಕರು ಮತ್ತು ಬಸ್‌ ನಿರ್ವಾಹಕರೊಂದಿಗಿನ ಜಗಳವಂತು ಸರ್ವೇ ಸಾಮಾನ್ಯವಾಗಿದೆ.  ಇವೆಲ್ಲವನ್ನು ಒಂದೆಡೆ ನೋಡಲು ಸಿಕ್ಕಿರುವುದೇ ನಮ್ಮ ಭಾಗ್ಯ. ಸಿನಿಮಾದಲ್ಲೂ ಕೂಡ ಎಲ್ಲವನ್ನು ಒಂದೇ ಬಾರಿ ನೋಡಲು ಕಾಣುವುದಿಲ್ಲ ಆದರೆ ಇಂಥ ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲವನ್ನು ಕಾಣಬಹುದಾಗಿದೆ ಕೆಲವರಿಗೆ ತಂಗುದಾಣವೆಂದರೆ ಕಿರಿಕಿರಿ ಅನ್ನಿಸುತ್ತದೆ. ಆದರೆ ನಮಗೆ ಒಂಥರ ಮನಸ್ಸಿಗೆ ಮುಂದ ನೀಡುವಂತಹ ಸ್ಥಳವಾಗಿದೆ. ಎಲ್ಲಿಯಾದರೂ ಒಬ್ಬಂಟಿಯಾಗಿ ದೂರ ಪ್ರಯಾಣಿಸಿದಲ್ಲಿ ಈ ತಂಗುದಾಣವೇ ಒಮ್ಮೊಮ್ಮೆ ನಮ್ಮ ಮನೆಯಾಗಿದ್ದು ಕೂಡ ಉಂಟು. ಇದು ಸಾರ್ವಜನಿಕ ಸ್ಥಳವಾಗಿದ್ದರಿಂದ ನಮ್ಮ ಮನೆಯನ್ನು ಹೀಗೆ ಸ್ವತ್ಛಂದವಾಗಿ ಇಟ್ಟುಕೊಳ್ಳುತ್ತೇವೋ ಹಾಗೆ ಸಾರ್ವಜನಿಕ ಸ್ಥಳ ಹಾಗೂ ಸಾರ್ವಜನಿಕ ವಸ್ತುಗಳನ್ನು ಕೂಡ ಜಾಗರೂಕತೆಯಿಂದ ಕಾಯ್ದುಕೊಳ್ಳಬೇಕಾದದ್ದು ನಮ್ಮ ಕರ್ತವ್ಯವಾಗಿದೆ..

-ಸುದೀಪ ಮಾಳಿ

ಎಂ ಎಂ ಕಾಲೇಜು ಶಿರಸಿ.

ಟಾಪ್ ನ್ಯೂಸ್

Mangaluru: ರಾಹುಲ್‌ ಗಾಂಧಿಯನ್ನು ಪೇಜಾವರ ಶ್ರೀ ಟೀಕಿಸಿದ್ದು ಸರಿಯಲ್ಲ : ಪದ್ಮರಾಜ್‌

Mangaluru: ರಾಹುಲ್‌ ಗಾಂಧಿಯನ್ನು ಪೇಜಾವರ ಶ್ರೀ ಟೀಕಿಸಿದ್ದು ಸರಿಯಲ್ಲ : ಪದ್ಮರಾಜ್‌

Udupi: ಕಾರ್ಮಿಕ ಸುರಕ್ಷೆಗೆ ಜಿಲ್ಲಾಧಿಕಾರಿ ಸೂಚನೆ

Udupi: ಕಾರ್ಮಿಕ ಸುರಕ್ಷೆಗೆ ಜಿಲ್ಲಾಧಿಕಾರಿ ಸೂಚನೆ

Mangaluru: ಮುಖ್ಯಮಂತ್ರಿ ರಾಜೀನಾಮೆ ಅನಿವಾರ್ಯ: ರವಿಕುಮಾರ್‌ ಆಗ್ರಹ

Mangaluru: ಮುಖ್ಯಮಂತ್ರಿ ರಾಜೀನಾಮೆ ಅನಿವಾರ್ಯ: ರವಿಕುಮಾರ್‌ ಆಗ್ರಹ

Heavy Rain: ದಕ್ಷಿಣ ಕನ್ನಡ ಜಿಲ್ಲಾದ್ಯಂತ ಉತ್ತಮ ಮಳೆ… ಕೆಲವೆಡೆ ಹಾನಿ

Heavy Rain: ದಕ್ಷಿಣ ಕನ್ನಡ ಜಿಲ್ಲಾದ್ಯಂತ ಉತ್ತಮ ಮಳೆ… ಕೆಲವೆಡೆ ಹಾನಿ

Udupi: ದಿನಪೂರ್ತಿ ಮಳೆ… ತಗ್ಗು ಪ್ರದೇಶಗಳು ಜಲಾವೃತ

Udupi: ದಿನಪೂರ್ತಿ ಮಳೆ… ತಗ್ಗು ಪ್ರದೇಶಗಳು ಜಲಾವೃತ

NANGI-KADALKORETA

Nangi: ತೀವ್ರಗೊಂಡ ಕಡಲ್ಕೊರೆತ… ಬೀಚ್‌ ವ್ಯೂ ರೆಸಾರ್ಟ್‌ ಸಮುದ್ರ ಪಾಲಾಗುವ ಸಾಧ್ಯತೆ

Maravanthe: ತೀವ್ರಗೊಂಡ ಕಡಲ್ಕೊರೆತ… ಕಡಲು ಸೇರುತ್ತಿರುವ ಕಲ್ಲುಗಳು

Maravanthe: ತೀವ್ರಗೊಂಡ ಕಡಲ್ಕೊರೆತ… ಕಡಲು ಸೇರುತ್ತಿರುವ ಕಲ್ಲುಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

16-father

Father: ಅಪ್ಪನ ನೀತಿ ನಮ್ಮ ಬದುಕಿನ ರೀತಿ

18-uv-fusion

Blood Group: ಚಿನ್ನದ ರಕ್ತದ ಗುಂಪಿನ ಬಗ್ಗೆ ನಿಮಗಿದು ಗೊತ್ತೆ?

17-uv-fusion

Nose Piercing: ಅಂದದ ಗೊಂಬೆಗೆ ಮೂಗುತಿ ಶೃಂಗಾರ

15-

Father: ಅಪ್ಪನೆಂಬ ಆಕಾಶ

13-uv-fusion

Terrace Garden: ಮನೆಗೊಂದು ತಾರಸಿ ತೋಟ

MUST WATCH

udayavani youtube

ಕೂಲ್ ಮೂಡ್ ನಲ್ಲಿ ಸ್ವಿಮ್ಮಿಂಗ್ ಮಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ : ಇಲ್ಲಿದೆ ವಿಡಿಯೋ

udayavani youtube

ಅಂಬಾನಿ ಕುಟುಂಬದಿಂದ ಆಟಗಾರರೊಂದಿಗೆ ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆ

udayavani youtube

Team india

udayavani youtube

ಮರವಂತೆ ಬೀಚ್ ಅಪಾಯ ಲೆಕ್ಕಿಸದೆ ಪ್ರವಾಸಿಗರ ಹುಚ್ಚಾಟ

udayavani youtube

ಕಮಲಶಿಲೆ ದುರ್ಗೆಯ ಪಾದ ಸ್ಪರ್ಶಿಸಿದ ಕುಬ್ಜಾ ನದಿ

ಹೊಸ ಸೇರ್ಪಡೆ

Mangaluru: ರಾಹುಲ್‌ ಗಾಂಧಿಯನ್ನು ಪೇಜಾವರ ಶ್ರೀ ಟೀಕಿಸಿದ್ದು ಸರಿಯಲ್ಲ : ಪದ್ಮರಾಜ್‌

Mangaluru: ರಾಹುಲ್‌ ಗಾಂಧಿಯನ್ನು ಪೇಜಾವರ ಶ್ರೀ ಟೀಕಿಸಿದ್ದು ಸರಿಯಲ್ಲ : ಪದ್ಮರಾಜ್‌

Udupi: ಕಾರ್ಮಿಕ ಸುರಕ್ಷೆಗೆ ಜಿಲ್ಲಾಧಿಕಾರಿ ಸೂಚನೆ

Udupi: ಕಾರ್ಮಿಕ ಸುರಕ್ಷೆಗೆ ಜಿಲ್ಲಾಧಿಕಾರಿ ಸೂಚನೆ

Mangaluru: ಮುಖ್ಯಮಂತ್ರಿ ರಾಜೀನಾಮೆ ಅನಿವಾರ್ಯ: ರವಿಕುಮಾರ್‌ ಆಗ್ರಹ

Mangaluru: ಮುಖ್ಯಮಂತ್ರಿ ರಾಜೀನಾಮೆ ಅನಿವಾರ್ಯ: ರವಿಕುಮಾರ್‌ ಆಗ್ರಹ

Heavy Rain: ದಕ್ಷಿಣ ಕನ್ನಡ ಜಿಲ್ಲಾದ್ಯಂತ ಉತ್ತಮ ಮಳೆ… ಕೆಲವೆಡೆ ಹಾನಿ

Heavy Rain: ದಕ್ಷಿಣ ಕನ್ನಡ ಜಿಲ್ಲಾದ್ಯಂತ ಉತ್ತಮ ಮಳೆ… ಕೆಲವೆಡೆ ಹಾನಿ

Udupi: ದಿನಪೂರ್ತಿ ಮಳೆ… ತಗ್ಗು ಪ್ರದೇಶಗಳು ಜಲಾವೃತ

Udupi: ದಿನಪೂರ್ತಿ ಮಳೆ… ತಗ್ಗು ಪ್ರದೇಶಗಳು ಜಲಾವೃತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.