Bollywood: 2026ರ ಗಣರಾಜ್ಯೋತ್ಸವಕ್ಕೆ ಸನ್ನಿ ಡಿಯೋಲ್ ʼಬಾರ್ಡರ್ -2ʼ ರಿಲೀಸ್?
Team Udayavani, May 11, 2024, 4:40 PM IST
ಮುಂಬಯಿ: 1997 ರಲ್ಲಿ ಬಂದ ʼಬಾರ್ಡರ್ʼ ಬಾಲಿವುಡ್ ನಲ್ಲಿ ಆ ಕಾಲದಲ್ಲಿ ದೊಡ್ಡ ಹಿಟ್ ಆದ ಸಿನಿಮಾವಾಗಿತ್ತು. 1971 ರ ಇಂಡೋ – ಪಾಕ್ ಕದನದ ಕಥೆಯನ್ನು ಆಧಾರಿಸಿ ಬಂದ ಕಥೆಯನ್ನು ಸ್ಪೂರ್ತಿದಾಯಕವಾಗಿ ತೆರೆಮೇಲರ ತರಲಾಗಿತ್ತು.
ಈ ಸಿನಿಮಾದ ಸೀಕ್ವೆಲ್ ಬರುವುದಾಗಿ ಕೆಲ ಸಮಯದ ಹಿಂದೆ ಬಿಟೌನ್ ನಲಿ ಸುದ್ದಿಗಳು ಹರಿದಾಡಿತ್ತು. ʼಬಾರ್ಡರ್-2ʼ ಬರುವುದು ಅಧಿಕೃತವಾಗಿದ್ದು, ಸಿನಿಮಾಕ್ಕಾಗಿ ಈಗಿನಿಂದಲೇ ಸಾಕಷ್ಟು ತಯಾರಿಗಳು ಆರಂಭವಾಗಿವೆ.
ಅಂದು ʼಬಾರ್ಡರ್ʼ ನಲ್ಲಿ ಯೋಧನಾಗಿ ಕಾಣಿಸಿಕೊಂಡಿದ್ದ ಸನ್ನಿ ಡಿಯೋಲ್ ಈ ಬಾರಿ ಮೇಜರ್ ಕುಲದೀಪ್ ಸಿಂಗ್ ಚಂದೂರಿ ಅವರ ಪಾತ್ರವನ್ನು ಮಾಡಲಿದ್ದಾರೆ. ಈ ಸಿನಿಮಾದಲ್ಲಿ ನಟ ಆಯುಷ್ಮಾನ್ ಖುರಾನಾ ಅವರು ಕೂಡ ಕಾಣಿಸಿಕೊಳ್ಳಲಿದ್ದಾರೆ.
ಅನುರಾಗ್ ಸಿಂಗ್ ʼಬಾರ್ಡರ್ -2ʼ ಸಿನಿಮಾವನ್ನು ನಿರ್ದೇಶನ ಮಾಡಲಿದ್ದು, ಭೂಷಣ್ ಕುಮಾರ್, ಜೆಪಿ ದತ್ತಾ ಮತ್ತು ನಿಧಿ ದತ್ತಾ ಸಿನಿಮಾಕ್ಕೆ ಜಂಟಿಯಾಗಿ ಬಂಡವಾಳ ಹಾಕಲಿದ್ದಾರೆ.
ʼಬಾರ್ಡರ್ -2ʼ ಕಳೆದ ಒಂದು ವರ್ಷದಿಂದ ಬರವಣಿಗೆಯ ಹಂತದಲ್ಲಿದೆ. ʼಬಾರ್ಡರ್ʼ ಬಗೆಗೆ ಜನರಿಗಿದ್ದ ನಿರೀಕ್ಷೆಗೆ ತಕ್ಕಹಾಗೆ ಸೀಕ್ವೆಲ್ ಇರಬೇಕೆನ್ನುವ ಕಾರಣದಿಂದ ಸ್ಕ್ರಿಪ್ಟ್ ಗಾಗಿ ಸಾಕಷ್ಟು ತಯಾರಿ ನಡೆಸಿಕೊಂಡಿದೆ ಎಂದು ಮೂಲಗಳು ಹೇಳಿರುವುದಾಗಿ ʼಪಿಂಕ್ ವಿಲ್ಲಾʼ ವರದಿ ಮಾಡಿದೆ.
2026 ರ ಗಣರಾಜ್ಯೋತ್ಸವ ಸಂದರ್ಭದಲ್ಲಿ ಸಿನಿಮಾ ರಿಲೀಸ್ ಗೆ ಚಿತ್ರತಂಡ ಪ್ಲ್ಯಾನ್ ಹಾಕಿಕೊಂಡಿರುವುದಾಗಿ ʼಪಿಂಕ್ ವಿಲ್ಲಾʼ ವರದಿ ಮಾಡಿದೆ.
ಜನವರಿ 23, 2026 ರಂದು ಸಿನಿಮಾ ರಿಲೀಸ್ ಮಾಡುವ ಯೋಜನೆಯಿದೆ. ʼಬಾರ್ಡರ್ʼ ಕೇವಲ ಒಂದು ಚಿತ್ರವಲ್ಲ ಇದೊಂದು ಭಾವನೆಯಾಗಿದೆ. ಇದು ಭಾರತದ ಅತಿದೊಡ್ಡ ಯುದ್ಧದ ಚಿತ್ರವಾಗಲಿದೆ, ”ಎಂದು ಮೂಲಗಳು ಹೇಳಿರುವುದಾಗಿ ವರದಿ ತಿಳಿಸಿದೆ.
ಈ ವರ್ಷದ ಅಂತ್ಯದ ವೇಳೆಗೆ ಸಿನಿಮಾ ಸೆಟ್ಟೇರುವ ಸಾಧ್ಯತೆಯಿದೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಭಾರತದಲ್ಲಿ ಪಾಕ್ ಸಿನಿಮಾ ದ ಲೆಜೆಂಡ್ ಆಫ್ ಮೌಲಾ ಜಟ್ ಪ್ರದರ್ಶನಕ್ಕೆ ಅವಕಾಶವಿಲ್ಲ: ಕೇಂದ್ರ
Emergency;ಕೆಲವು ದೃಶ್ಯಕ್ಕೆ ಕತ್ತರಿ ಬಿದ್ದರಷ್ಟೇ ಅನುಮತಿ: ಕೋರ್ಟ್ಗೆ ಸಿಬಿಎಫ್ಸಿ
Spirit Movie: ಪ್ರಭಾಸ್ ʼಸ್ಪಿರಿಟ್ʼನಲ್ಲಿ ಖಡಕ್ ವಿಲನ್ ಆಗಲಿದ್ದಾರೆ ಈ ಬಿಟೌನ್ ದಂಪತಿ
‘Stree 2’ OTT release: ಓಟಿಟಿಗೆ ಬಂತು ಸೂಪರ್ ಹಿಟ್ ʼಸ್ತ್ರೀ-2ʼ; ಎಲ್ಲಿ ನೋಡಬಹುದು?
Veer Savarkar ಚಿತ್ರ ಆಸ್ಕರ್ ಗೆ ಸಲ್ಲಿಕೆಯಾಗಿದೆಯೇ? ಫಿಲ್ಮ್ ಫೆಡರೇಶನ್ ಹೇಳಿದ್ದೇನು…
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.