Mangaluru ಮೂಲದ ಫಾ| ವಿಲ್ಫ್ರೆಡ್‌ ; ಝಾನ್ಸಿ ಧರ್ಮಪ್ರಾಂತದ ಸಹಾಯಕ ಬಿಷಪ್‌ ಆಗಿ ನೇಮಕ


Team Udayavani, May 13, 2024, 12:40 AM IST

Mangaluru ಮೂಲದ ಫಾ| ವಿಲ್ಫ್ರೆಡ್‌ ; ಝಾನ್ಸಿ ಧರ್ಮಪ್ರಾಂತದ ಸಹಾಯಕ ಬಿಷಪ್‌ ಆಗಿ ನೇಮಕ

ಮಂಗಳೂರು: ಲಕ್ನೋ ಕ್ಯಾಥೊಲಿಕ್‌ ಧರ್ಮ ಪ್ರಾಂತದ ಧರ್ಮಗುರು ಹಾಗೂ ಅಲಹಾಬಾದ್‌ನ ಸೈಂಟ್‌ ಜೋಸೆಫ್‌ ಪ್ರಾದೇಶಿಕ ಸೆಮಿನರಿಯ ರೆಕ್ಟರ್‌ ಆಗಿರುವ ಮಂಗಳೂರು ಮೂಲದ ಫಾ| ವಿಲ್ಫ್ರೆಡ್‌ ಗ್ರೆಗೊರಿ ಮೊರಾಸ್‌ ಅವರನ್ನು ಉತ್ತರ ಪ್ರದೇಶದ ಝಾನ್ಸಿ ಧರ್ಮ ಪ್ರಾಂತದ ಸಹಾಯಕ ಬಿಷಪ್‌ ಆಗಿ ನೇಮಕ ಮಾಡಿ ಜಗದ್ಗುರು ಪೋಪ್‌ ಫ್ರಾನ್ಸಿಸ್‌ ಅವರು ಆದೇಶ ಹೊರಡಿಸಿದ್ದಾರೆ.

ಫಾ| ವಿಲ್ಫ್ರೆಡ್‌ ಗ್ರೆಗೊರಿ ಮೊರಾಸ್‌ ಅವರು ಮಂಗಳೂರು ಧರ್ಮಪ್ರಾಂತ ವ್ಯಾಪ್ತಿಯ ನೀರುಡೆ ನಿವಾಸಿ ಆಗಿದ್ದಾರೆ. ಅಲಹಾಬಾದ್‌ ಧರ್ಮ ಪ್ರಾಂತದ ಸೈಂಟ್‌ ಜೋಸೆಫ್‌ ಪ್ರಾದೇಶಿಕ ಸೆಮಿನರಿಯಲ್ಲಿ ತಣ್ತೀಶಾಸ್ತ್ರ ಮತ್ತು ದೇವತಾಶಾಸ್ತ್ರ ಅಧ್ಯಯನ ಮಾಡಿದ ಅವರು ಧಾರ್ಮಿಕ ಶಿಕ್ಷಣ ತರಬೇತಿಯನ್ನು ಮುಗಿಸಿ 1997ರ ಎ. 27ರಂದು ಲಕ್ನೋ ಧರ್ಮಪ್ರಾಂತದ ಗುರುಗಳಾಗಿ ದೀಕ್ಷೆ ಸ್ವೀಕರಿಸಿದ್ದರು.

ಅವರು 1997- 1999 ಅವಧಿಯಲ್ಲಿ ಲಕ್ನೋದ ಸೈಂಟ್‌ ಪಾವುಲ್‌ ಮೈನರ್‌ ಸೆಮಿನರಿಯಲ್ಲಿ ತರಬೇತುದಾರರಾಗಿ ಹಾಗೂ 1999 ರಿಂದ 2002 ತನಕ ಬಿಷಪ್‌ ಕಾರ್ಯದರ್ಶಿಯಾಗಿ, 2002-2003 ಅವ ಧಿಯಲ್ಲಿ ಪಾಲಿಯಾದಲ್ಲಿನ ಸೈಂಟ್‌ ಆನ್ಸ್‌ ಶಾಲೆಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. 2003-2006 ಅವಧಿಯಲ್ಲಿ ರೋಮ್‌ನಲ್ಲಿರುವ ಪೊಂತಿಫಿಕಲ್‌ ಅರ್ಬನ್‌ ವಿಶ್ವವಿದ್ಯಾಲಯದಲ್ಲಿ ಮಿಸ್ಸಿಯಾಲಜಿಯಲ್ಲಿ ಸ್ನಾತ ಕೋತ್ತರ ಪದವಿ ಅಧ್ಯಯನ ನಡೆಸಿದ್ದರು.

2007-2008ರಲ್ಲಿ ನಿಗೋ ಹಾನ್‌ನಲ್ಲಿರುವ ಸೈಂಟ್‌ ಫ್ರಾನ್ಸಿಸ್‌ ಶಾಲೆ ಮತ್ತು ಹಾಸ್ಟೆಲ್‌ನ ಚೇರ್ಮನ್‌ ಮತ್ತು ನಿರ್ದೇಶಕರಾಗಿ, 2008-2013 ಅವಧಿ ಯಲ್ಲಿ ಬಾರಾಬಂಕಿಯ ಸೈಂಟ್‌ ಆಂಥೋನಿ ಶಾಲೆಯ ಅಧ್ಯಕ್ಷರಾಗಿದ್ದರು. ಆ ಬಳಿಕ ರೋಮ್‌ಗೆ ತೆರಳಿ 2013-2016 ಅವ ಧಿಯಲ್ಲಿ ಪೊಂತಿಫಿಕಲ್‌ ಅರ್ಬನ್‌ ವಿಶ್ವವಿದ್ಯಾಲಯದಲ್ಲಿ ಮಿಸಿಯಾಲಜಿಯಲ್ಲಿ ಡಾಕ್ಟರೆಟ್‌ ಪದವಿ ಪಡೆದರು. ಬಳಿಕ 2017 ರಿಂದ 2021 ರ ತನಕ ವಾರಾಣಸಿಯ ನವ್‌ ಸಾಧನಾ ಪ್ರಾದೇಶಿಕ ಪ್ಯಾಸ್ಟೋರಲ್‌ ಸೆಂಟರ್‌ನ ನಿರ್ದೇಶಕರಾಗಿದ್ದ ಅವರು 2021 ರಿಂದ ಅಲಹಾಬಾದ್‌ನಲ್ಲಿರುವ ಸೈಂಟ್‌ ಜೋಸೆಫ್‌ ಪ್ರಾದೇಶಿಕ ಸೆಮಿನರಿಯ ರೆಕ್ಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದೀಗ ಝಾನ್ಸಿ ಧರ್ಮ ಪ್ರಾಂತದ ಸಹಾಯಕ ಬಿಷಪ್‌ ಆಗಿ ನೇಮಕಗೊಂಡಿದ್ದಾರೆ.

 

ಟಾಪ್ ನ್ಯೂಸ್

Railway

Mangaluru: ಹಳಿ ನಿರ್ವಹಣೆ ಕಾಮಗಾರಿ; ರೈಲು ಸೇವೆಯಲ್ಲಿ ವ್ಯತ್ಯಯ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

Explod

Explode in Lebanon: ಪೇಜರ್‌ ಬಳಿಕ ವಾಕಿಟಾಕಿ ಸ್ಫೋಟ: 14 ಮಂದಿ ಸಾವು

Veena-goegre

Viral Disease: ಕೇರಳದಲ್ಲಿ ಎಂ ಫಾಕ್ಸ್‌ ದೃಢ: ಆರೋಗ್ಯ ಸಚಿವೆ ವೀಣಾ ಜಾರ್ಜ್‌

Kadri-park

Mangaluru: ಕದ್ರಿ ಪಾರ್ಕ್‌ನಲ್ಲಿ ರಾಜ್ಯದ ಎರಡನೇ ಅತಿ ಎತ್ತರದ ರಾಷ್ಟ್ರ ಧ್ವಜಸ್ತಂಭ ಅನಾವರಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Railway

Mangaluru: ಹಳಿ ನಿರ್ವಹಣೆ ಕಾಮಗಾರಿ; ರೈಲು ಸೇವೆಯಲ್ಲಿ ವ್ಯತ್ಯಯ

Kadri-park

Mangaluru: ಕದ್ರಿ ಪಾರ್ಕ್‌ನಲ್ಲಿ ರಾಜ್ಯದ ಎರಡನೇ ಅತಿ ಎತ್ತರದ ರಾಷ್ಟ್ರ ಧ್ವಜಸ್ತಂಭ ಅನಾವರಣ

Puspa-Amar

Guarantee: ಅನುಷ್ಠಾನಕ್ಕೆ ಗ್ರಾಮ ಪಂಚಾಯಿತಿಯಲ್ಲೂ ನೋಡಲ್‌ ಅಧಿಕಾರಿ: ಪುಷ್ಪಾ ಅಮರನಾಥ್‌

MU-Univerasity

Virtual Meeting: ಮಂಗಳೂರು ವಿಶ್ವವಿದ್ಯಾನಿಲಯ ಶೈಕ್ಷಣಿಕ ಮಂಡಳಿ ಸಭೆ

ssa

Mangaluru: ಮಾದಕವಸ್ತು ಸಹಿತ ಮೂವರ ಬಂಧನ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Railway

Mangaluru: ಹಳಿ ನಿರ್ವಹಣೆ ಕಾಮಗಾರಿ; ರೈಲು ಸೇವೆಯಲ್ಲಿ ವ್ಯತ್ಯಯ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

Explod

Explode in Lebanon: ಪೇಜರ್‌ ಬಳಿಕ ವಾಕಿಟಾಕಿ ಸ್ಫೋಟ: 14 ಮಂದಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.