Kannada Actor: ಕನ್ನಡದ ಯುವನಟ ಚೇತನ್‌ ಚಂದ್ರ ಮೇಲೆ 20 ಮಂದಿಯಿಂದ ಹಲ್ಲೆ

ರಕ್ತ ಸೋರುತ್ತಿದ್ದರೂ ಇನ್‌ ಸ್ಟಾಗ್ರಾಮ್‌ ಲೈವ್‌ ಮಾಡಿ ವಿಚಾರ ತಿಳಿಸಿದ ನಟ

Team Udayavani, May 13, 2024, 9:12 AM IST

Kannada Actor: ಕನ್ನಡದ ಯುವನಟ ಚೇತನ್‌ ಚಂದ್ರ ಮೇಲೆ 20 ಮಂದಿಯಿಂದ ಹಲ್ಲೆ

ಬೆಂಗಳೂರು: ಸ್ಯಾಂಡಲ್‌ ವುಡ್ ಯುವನಟ ಚೇತನ್‌ ಚಂದ್ರ ಅವರ ಮೇಲೆ ಅಪರಿಚಿತ ವ್ಯಕ್ತಿಗಳು ಹಲ್ಲೆ ಮಾಡಿರುವ ಘಟನೆ ನಡೆದಿದೆ.

ಭಾನುವಾರ ರಾತ್ರಿ(ಮೇ.12 ರಂದು) ಅವರ ಮೇಲೆ ಅಪರಿಚಿತರು ಹಲ್ಲೆ ನಡೆಸಿ ಗಾಯಗೊಳಿಸಿದ್ದಾರೆ ಎಂದು ಅವರು ಇನ್ಸ್ಟಾಗ್ರಾಮ್‌ ಲೈವ್‌ ನಲ್ಲಿ ಬಂದು ಮಾಹಿತಿ ನೀಡಿದ್ದಾರೆ. ‌

ಹಲ್ಲೆಗೊಳಗಾದ ಬಳಿಕ ನೇರವಾಗಿ ಪೊಲೀಸ್‌ ಠಾಣೆಗೆ ಹೋದ ನಟ ಚೇತನ್‌ ಅವರಿಗೆ ಪೊಲೀಸರು ಮೊದಲು ಚಿಕಿತ್ಸೆ ಪಡೆದು ಬನ್ನಿ ಎಂದಿದ್ದಾರೆ. ಆಸ್ಪತ್ರೆಯಲ್ಲಿ ನಟ ಇನ್ಸ್ಟಾಗ್ರಾಮ್‌ ಲೈವ್‌ ಮಾಡಿ ಘಟನೆ ಬಗ್ಗೆ ವಿವರಣೆ ನೀಡಿದ್ದಾರೆ.

ದೇವಸ್ಥಾನಕ್ಕೆ ಹೋಗಿ ಬರುವ ಕನಕಪುರ ರಸ್ತೆಯಲ್ಲಿ ಅಪರಿಚಿತ ವ್ಯಕ್ತಿಗಳು ಚೇತನ್‌ ಅವರ ಕಾರನ್ನು ಅಡ್ಡಗಟ್ಟಿ ಗಲಾಟೆ ಮಾಡಿದ್ದಾರೆ ಎಂದು ಸ್ವತಃ ಚೇತನ್‌ ಅವರೇ ಮಾಹಿತಿ ನೀಡಿದ್ದಾರೆ.

ನನ್ನ ಗಾಡಿಯನ್ನು ಅಡ್ಡಹಾಕಿ ನನ್ನನ್ನು ಹೊಡೆದರು. ಯಾಕೆ ಗಾಡಿ ಅಡ್ಡ ಹಾಕಿದ್ರು ಅಂಥ ಗೊತ್ತಿಲ್ಲ. ನಾವು ಇಳಿದು ಅವರ ಮೇಲೆ ಕೈ ಮಾಡಿದಾಗ.  ಏನಿಲ್ಲಾ ಅಂದ್ರು ಒಂದು 20 ಜನ ಸೇರಿ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ನನ್ನ ಅಪ್ಪ – ಅಮ್ಮ ನೋಡ್ತಾ ಇರುತ್ತಾರೆ. ಇವತ್ತು ಮದರ್ಸ್ ಡೇ ಬೇರೆ. ನನ್ನ ಅಮ್ಮನನ್ನು ಹೊರಗಡೆ ಕರ್ಕೊಂಡು ಹೋಗಿದ್ದೆ. ದೇವಸ್ಥಾನಕ್ಕೆ ಬಂದು ವಾಪಾಸ್ ಆದಾಗ ಈ ಘಟನೆ ನಡದಿದೆ. ನನ್ನ ಹೆಂಡತಿ, ಪಾಪು ನನ್ನ ನೋಡ್ತಾ ಇರುತ್ತಾರೆ. ಹೆದರಬೇಡಿ ಐಯಾಮ್ ಫೈನ್ ಎಂದಿದ್ದಾರೆ.

ಚೆನ್ನಾಗಿ ಕುಡಿದು ಬೇಕಂತ ನಮ್ಮ ಗಾಡಿಗೆ ಢಿಕ್ಕಿ ಹೊಡೆದು, ನಾನು ಸ್ಲೋ ಮಾಡಿದ್ರು ಗಾಡಿ ನಿಲ್ಲಿಸಿಲ್ಲ. ಅವರ ಜಾಗದಲ್ಲಿ ಗಾಡಿ ನಿಲ್ಲಿಸಿದಾಗ, ನಾವು ದರೋಡೆ ಮಾಡೋಕೆ ಬಂದವರು ಅನ್ಕೊಂಡು, ಅವರ ಮೇಲೆ ಹಲ್ಲೆಗೆ ಮಾಡಲು ಹೋದಾಗ, ಅವರ ಕಡೆಯವರು ಬಂದರು. ಅದರಲ್ಲಿ ಹುಡುಗಿಯೊಬ್ಬಳು ಬಂದು ನನ್ನ ಮೇಲೆ ಕೈ ಮಾಡಿದ್ಳು ಅಂಥ ಹೇಳಿದ್ದಾಳೆ. ಅಫೀಷಿಯಲ್ ಆಗಿ ಇರ್ತೀರಾ, ಹಾಗೆ ಇರಿ, ಯಾಕೆ ಅಡ್ಡ ಹಾಕಬೇಕು, ಹೊಡೆಯಲು ಬರಬೇಕು ಎಂದು ಹೇಳಿದ್ದಾಳೆ. ನಮ್ಮಗೇನು ಗೊತ್ತು ನಾವು ಅವರು ದರೋಡೆ ಮಾಡೋಕೆ ಬಂದವರು ಅನ್ಕೊಂಡೀವಿ ಎಂದು ಚೇತನ್‌ ಹೇಳಿದ್ದಾರೆ.

ಅವರ ಕಡೆಯವರು ಎಲ್ಲರೂ ಪೊಲೀಸ್‌ ಸ್ಟೇಷನ್‌ ಬಳಿ ಬಂದಿದ್ದಾರೆ. ಕಾರಿಗೆ ಹಾನಿ ಮಾಡಿದ್ದಾರೆ. ಆದರೆ ಅವನು ಮಾತ್ರ ಬಂದಿಲ್ಲ ಎಂದಿದ್ದಾರೆ.

ಸದ್ಯ ನಟ ಪೊಲೀಸ್‌ ಕೇಸ್ ದಾಖಲಿಸಿದ್ದಾರೆ.

‘ಪ್ರೇಮಿಸಂ’, ‘ರಾಜಧಾನಿ’, ‘ಪ್ಲಸ್’, ‘ಜಾತ್ರೆ’ ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ಚೇತನ್ ಚಂದ್ರ ನಟಿಸಿದ್ದಾರೆ.

ಟಾಪ್ ನ್ಯೂಸ್

19

Ganesh Chaturthi: ನೆನಪಿನ ಬುತ್ತಿಯಾದ ಗಣೇಶ ಹಬ್ಬ

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Sandalwood: ಮೀ ಟೂ ಪ್ರಕರಣ; ಸೆ.16ಕ್ಕೆ ಚಿತ್ರರಂಗ ಸಭೆ

Sandalwood: ಮೀ ಟೂ ಪ್ರಕರಣ; ಸೆ.16ಕ್ಕೆ ಚಿತ್ರರಂಗ ಸಭೆ

Ramesh aravind: ಇಡೀ ಸಿನಿಮಾರಂಗದ ದೂಷಣೆ ಬೇಡ

Ramesh aravind: ಇಡೀ ಸಿನಿಮಾರಂಗದ ದೂಷಣೆ ಬೇಡ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

19

Ganesh Chaturthi: ನೆನಪಿನ ಬುತ್ತಿಯಾದ ಗಣೇಶ ಹಬ್ಬ

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.