ಶಂಕರರ ಭಾಷ್ಯದಲ್ಲಿದೆ ಉಪನಿಷತ್ತಿನ ವಾಣಿ: ಶ್ರೀ ವೀರೇಶಾನಂದ ಸ್ವಾಮೀಜಿ


Team Udayavani, May 13, 2024, 5:37 PM IST

ಶಂಕರರ ಭಾಷ್ಯದಲ್ಲಿದೆ ಉಪನಿಷತ್ತಿನ ವಾಣಿ: ಶ್ರೀ ವೀರೇಶಾನಂದ ಸ್ವಾಮೀಜಿ

■ ಉದಯವಾಣಿ ಸಮಾಚಾರ
ಶಿರಸಿ: ಉಪನಿಷತ್ತಿನ ವಾಣಿ ಶಂಕರರ ಭಾಷ್ಯಗಳಲ್ಲಿ ಇದೆ ಎಂದು ಬೆಂಗಳೂರು ಶ್ರೀರಾಮಕೃಷ್ಣ ಮಠದ ಶ್ರೀ ವೀರೇಶಾನಂದ ಸ್ವಾಮೀಜಿ ನುಡಿದರು. ಭಾನುವಾರ ನಗರದ ಯೋಗ ಮಂದಿರದಲ್ಲಿ ಸೋಂದಾ ಸ್ವರ್ಣವಲ್ಲೀ ಶ್ರೀ ಸರ್ವಜ್ಞೆàಂದ್ರ
ಪ್ರತಿಷ್ಠಾನದಿಂದ ನಡೆದ ಶಂಕರ ಜಯಂತಿ ದಾರ್ಶನಿಕರ ದಿನ ಕಾರ್ಯಕ್ರಮದ ಸಾನ್ನಿಧ್ಯ ನೀಡಿ ಆಶೀರ್ವಚನ ನುಡಿದರು.

ಉಪನಿಷತ್ತುಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗದಿದ್ದರೂ ಶಂಕರರ ವಾಣಿಗಳಲ್ಲಿ ಉಪನಿಷತ್ತಿನ ಮಾರ್ದನಿ ಇದೆ. ಉಪನಿಷತ್ತುಗಳ ಮರ್ಮ ತಿಳಿದು ಭಾಷ್ಯಗಳಲ್ಲಿ ಶಂಕರರು ಹೇಳಿದ್ದಾರೆ ಎಂದ ಅವರು, ಇಡೀ ಪ್ರಪಂಚವೇ
ಚೈತನ್ಯಮಯವಾಗಿರುವಂತದ್ದು ಎನ್ನುವ ಬ್ರಹ್ಮವಿದ್ಯೆಯನ್ನು ಶಂಕರ ಭಗವತ್ಪಾದರು ಉಪದೇಶ ಮಾಡಿದ್ದಾರೆ ಎಂದರು.

ಉಪನಿಷತ್ತಿನ ಋಷಿಗಳೇ ಶಂಕರರ ಅವತಾರದಲ್ಲಿ ಬಂದು ನಮಗೆ ಉನ್ನತ ತತ್ವವನ್ನು ಕೊಟ್ಟಿದ್ದಾರೆ. ಈ ಬ್ರಹ್ಮವಿದ್ಯೆ ಎಲ್ಲ ಮತಗಳ ಆಚೆಯಿರುವ, ಎಲ್ಲ ಸಿದ್ಧಾಂತ ಮೀರಿರುವಂತದ್ದು ಎಂದ ಅವರು, ಶಂಕರ ಭಗತ್ಪಾದರು ಇಡೀ ವಿಶ್ವದಲ್ಲೇ ಶ್ರೇಷ್ಠ ದಾರ್ಶನಿಕರು. ಅವರು ಶಿವಾಂಶ ಸಂಭೂತರಷ್ಟೇ ಅಲ್ಲ ಪರಬ್ರಹ್ಮ ಸಂಭೂತರು, ಬ್ರಹ್ಮಚೈತನ್ಯ ಆವಿರ್ಭಾವವಾದವರೂ ಆಗಿದ್ದವರು. ಸಾನ್ನಿಧ್ಯ ನೀಡಿದ್ದ ಸೋಂದಾ ಸ್ವರ್ಣವಲ್ಲೀ ಮಠಾಧೀಶ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿ ಆಶೀರ್ವಚನ ನುಡಿದು, ಶಂಕರರ ಕಾಲಘಟ್ಟದಲ್ಲಿ ಬ್ರಹ್ಮಚರ್ಯಾಶ್ರಮದಿಂದ ಸನ್ಯಾಶ್ರಮಕ್ಕೆ ಹೋಗುವ ರೂಢಿಯನ್ನು ಮಹತ್ವ ಕೊಟ್ಟು ಬೆಳೆಸಿದ್ದಾರೆ. ಅವರ ಶಿಷ್ಯರಲ್ಲಿ ಹೆಚ್ಚಿನವರು ಹೀಗೆ ಸನ್ಯಾಶ್ರಮಕ್ಕೆ ಬಂದಿದ್ದಾರೆ.

ಬ್ರಹ್ಮಚಾರಿಗೆ ಜೀವನ ಪೂರ್ವ ವಯಸ್ಸಿನಲ್ಲಿಯೇ ಜೀವನದ ಲಕ್ಷ್ಯ ದ ಬಗ್ಗೆ ಅರಿವು ಬಂದಿರಬೇಕು. ಐಹಿಕ ಭೋಗ ನನ್ನ ವಿಷಯವಲ್ಲ ನನ್ನ ಗುರಿ ಬೇರೆಯದೇ ಇದೆ ಎಂದು ಸಣ್ಣ ವಯಸ್ಸಿನಲ್ಲೇ ಜಾಗೃತಿ ಬಂದಿರಬೇಕು ಎಂದು ಈ ರೂಢಿ ಬೆಳೆಸಿದರು ಎಂದರು. ಈ ವೇಳೆ ಶಕಟಪುರಂ ಸಂಸ್ಥಾನದ ಆಸ್ಥಾನ ವಿದ್ವಾನ್‌ ವಿದ್ಯಾಭೂಷಣ ಮಧುಸೂದನ ಶಾಸ್ತ್ರಿ ಹಂಪಿಹೊಳಿ ಅವರಿಗೆ ಸಾಧನಾ ಶಂಕರ ಪ್ರಶಸ್ತಿಯನ್ನು ಸ್ವರ್ಣವಲ್ಲೀ ಶ್ರೀಗಳು ಪ್ರದಾನ ಮಾಡಿದರು.

ಪ್ರಶಸ್ತಿ ಸ್ವೀಕರಿಸಿದ ಮಧುಸೂದನ ಶಾಸ್ತ್ರಿ ಮಾತನಾಡಿ, ವೇದಾಂತದ ಸಿದ್ಧಾಂತ ತತ್ವವನ್ನು ಜನರಿಗೆ ತಿಳಿಸಲೆಂದೆ ಶಂಕರ ಭಗವತ್ಪಾದರ ಅವತಾರದ ಉದ್ದೇಶವಾಗಿತ್ತು. ಈ ಮೂಲಕ ಅಜ್ಞಾನ, ಅಂಧಕಾರದಲ್ಲಿ ಮುಳುಗಿದ ಜನರ ರಕ್ಷಣೆ ಮಾಡುವುದಾಗಿತ್ತು. ಭರತ ಖಂಡದಲ್ಲಿ ಏಕತೆಗೆ ಧಕ್ಕೆ ಬರುವ ಸ್ಥಿತಿಯಿತ್ತು. ಸಮಗ್ರತೆ ಅಗತ್ಯತೆ ಇತ್ತು. ಶಂಕರರು ಭರತ ಖಂಡದಲ್ಲಿ ಓಡಾಡಿ ಸಮನ್ವಯತೆ ಸಾಧಿಸಿದರಲ್ಲದೇ ವಿವಿಧತೆಯಲ್ಲಿ ಏಕತೆ ತರುವ ಕೆಲಸ ಮಾಡಿದರು. ದೀರ್ಘಾಯುಷ್ಯದಲ್ಲಿ ಮಾಡುವ ಕೆಲಸವನ್ನು ಕೇವಲ 32 ವರ್ಷದಲ್ಲಿ ಮಾಡಿದರು. ಅವರು ವಿದ್ವಾಂಸ, ತತ್ವಜ್ಞಾನಿ, ಕವಿ ಅಷ್ಟೆ ಅಲ್ಲ
ಮೇಧಾವಿ ತತ್ವಜ್ಞಾನಿ, ಸಂತರೂ ಆಗಿದ್ದರು ಎಂದರು.

ಸ್ವರ್ಣವಲ್ಲೀ ಮಹಾ ಸಂಸ್ಥಾನದ ಕಿರಿಯ ಸ್ವಾಮೀಜಿ ಶ್ರೀಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿ ಸಾನ್ನಿಧ್ಯ ನೀಡಿದ್ದರು.
ಎಸ್‌.ಎನ್‌. ಭಟ್ಟ ಉಪಾಧ್ಯ ಸ್ವಾಗತಿಸಿದರು. ಶಂಕರ ಭಟ್ಟ ಉಂಚಳ್ಳಿ ನಿರೂಪಿಸಿದರು. ನಂತರ ಮಾತೆಯರು ಪಾಂಡುರಂಗಾಷ್ಟಕ ಪಠಿಸಿದರು.

ಅದ್ವೈತ ಹಾಗೂ ಶಂಕರರದ್ದು ಅವಿನಾಭಾವ ಸಂಬಂಧ. ಶಂಕರಾಚಾರ್ಯರು ಎಂದು ಅದ್ವೈತ ಭಾವವಾಗಿತ್ತು. ಅವರದ್ದು ಸಮನ್ವಯತೆ ತತ್ವ, ವ್ಯಕ್ತಿತ್ವವಾಗಿತ್ತು. ದೊಡ್ಡ ತತ್ವಶಾಸ್ತ್ರಜ್ಞರಾಗಿದ್ದರು. ಉತ್ತಮ ಭೋದಕರಾಗಿದ್ದರು. ಮಹಾನ್‌ ಭಕ್ತರಾಗಿದ್ದರು, ಸಾಹಿತಿಯಾಗಿದ್ದರು. ಸುಲಲೀತವಾಗಿ ಪ್ರಸನ್ನ ಗಂಭೀರವಾದ ಭಾಷೆಯಲ್ಲಿ ಅದ್ವೈತವನ್ನು ನೀಡಿದ್ದಾರೆ.
*ಶ್ರೀವೀರೇಶಾನಂದ ಸ್ವಾಮೀಜಿ,
ಶ್ರೀ ರಾಮಕೃಷ್ಣ ಮಠ, ಬೆಂಗಳೂರು

ಜಗತ್ತಿನ ಮೂಲ ವಸ್ತು ಯಾವುದೋ ಅದೇ ಜೀವದ ಮೂಲವೂ ಹೌದು. ಅದುವೇ ಅದ್ವೈತ. ಇದನ್ನು ಶಂಕರರು ಸಾಕಷ್ಟು
ಕಡೆಗಳಲ್ಲಿ ಹೇಳಿದ್ದಾರೆ.
ಶ್ರೀ ಗಂಗಾಧರೇಂದ್ರ ಸರಸ್ವತೀ
ಮಹಾ ಸ್ವಾಮೀಜಿ, ಸ್ವರ್ಣವಲ್ಲೀ

ಟಾಪ್ ನ್ಯೂಸ್

Aryna Sabalenka won US Open 2024

US Open 2024: ಅರಿನಾ ಸಬಲೆಂಕಾಗೆ ಯು.ಎಸ್.ಓಪನ್ ಕಿರೀಟ‌

21

Ganesh Chaturthi: ಸರಳ, ಪರಿಸರ ಸ್ನೇಹಿಯಾಗಿರಲಿ ಗಣೇಶ

Fresh Manipur Violence

Manipur: ಮುಂದುವರಿದ ಹಿಂಸಾಚಾರ; ಗುಂಡಿನ ಕಾಳಗದಲ್ಲಿ ಆರು ಮಂದಿ ಸಾವು

Paris Paralympics: ಮುಂದುವರಿದ ಪದಕ ಬೇಟೆ; ಬಂಗಾರ ಗೆದ್ದ ನವದೀಪ್‌, ಸಿಮ್ರನ್‌ ಗೆ ಕಂಚು

Paris Paralympics: ಮುಂದುವರಿದ ಪದಕ ಬೇಟೆ; ಬಂಗಾರ ಗೆದ್ದ ನವದೀಪ್‌, ಸಿಮ್ರನ್‌ ಗೆ ಕಂಚು

20

UV Fusion: ವಿಘ್ನ ವಿನಾಯಕನಿಗೆ ನಮನ

19

Ganesh Chaturthi: ನೆನಪಿನ ಬುತ್ತಿಯಾದ ಗಣೇಶ ಹಬ್ಬ

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗೋಕರ್ಣ: 12ರಂದು ಎನ್‌ಎಚ್‌ಎಐ ಕಚೇರಿಗೆ ಮುತ್ತಿಗೆ-ಸ್ವಾಮೀಜಿ

ಗೋಕರ್ಣ: 12ರಂದು ಎನ್‌ಎಚ್‌ಎಐ ಕಚೇರಿಗೆ ಮುತ್ತಿಗೆ-ಸ್ವಾಮೀಜಿ

Karnataka ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ : ಆರ್.ವಿ.ದೇಶಪಾಂಡೆ

Karnataka ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ : ಆರ್.ವಿ.ದೇಶಪಾಂಡೆ

Swimming; 19 ಕಿಮೀ ಗಂಗಾ ನದಿಯಲ್ಲಿ ಈಜಿ 4ನೇ ಸ್ಥಾನ ಗೆದ್ದ ಗೋಕರ್ಣದ ನೇಹಾ

Swimming; 19 ಕಿಮೀ ಗಂಗಾ ನದಿಯಲ್ಲಿ ಈಜಿ 4ನೇ ಸ್ಥಾನ ಗೆದ್ದ ಗೋಕರ್ಣದ ನೇಹಾ

4-sirsi

Sirsi: ಗುಂಡಿಗದ್ದೆ ಬಳಿ ರಸ್ತೆ ದಾಟಿದ ಚಿರತೆ! : ಸ್ಥಳೀಯರಲ್ಲಿ ಆತಂಕ

Sirsi: ದೇಶಪಾಂಡೆ ಸಿಎಂ ಆಗುವ ತೀರ್ಮಾನ ಪಕ್ಷದ ವರಿಷ್ಠರು ಕೈಗೊಳ್ಳುತ್ತಾರೆ: ಭೀಮಣ್ಣ ನಾಯ್ಕ

Sirsi: ದೇಶಪಾಂಡೆ ಸಿಎಂ ಆಗುವ ತೀರ್ಮಾನ ಪಕ್ಷದ ವರಿಷ್ಠರು ನಿರ್ಧರಿಸುತ್ತಾರೆ: ಭೀಮಣ್ಣ ನಾಯ್ಕ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Aryna Sabalenka won US Open 2024

US Open 2024: ಅರಿನಾ ಸಬಲೆಂಕಾಗೆ ಯು.ಎಸ್.ಓಪನ್ ಕಿರೀಟ‌

2-desiswara-1

Teacher: ಗುರಿಯೊಂದಿಗೆ ಗುರುಕೃಪೆಯಿದ್ದರೆ ಯಶ

21

Ganesh Chaturthi: ಸರಳ, ಪರಿಸರ ಸ್ನೇಹಿಯಾಗಿರಲಿ ಗಣೇಶ

Fresh Manipur Violence

Manipur: ಮುಂದುವರಿದ ಹಿಂಸಾಚಾರ; ಗುಂಡಿನ ಕಾಳಗದಲ್ಲಿ ಆರು ಮಂದಿ ಸಾವು

1-teachers-day

Teacher’s Day ವಿಶೇಷ: ವಿಚಾರ ವಿನಿಮಯ ಶಿಕ್ಷಣದ ಸುತ್ತ: ಆಲೋಚನೆಯಲ್ಲಿ ವೈವಿಧ್ಯತೆ ಇರಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.