![police crime](https://www.udayavani.com/wp-content/uploads/2024/07/police-crime-2-415x256.jpg)
ಗ್ರಾಹಕ ರಕ್ಷಣ ಕಾಯ್ದೆ ಅಡಿ ವಕೀಲರು ಬರಲ್ಲ: ಸುಪ್ರೀಂ
ಎಲ್ಲ ವೃತ್ತಿಗಳಿಗಿಂತ ವಕೀಲಿ ವೃತ್ತಿ ವಿಶಿಷ್ಟ: ಪೀಠ
Team Udayavani, May 14, 2024, 11:41 PM IST
![ಗ್ರಾಹಕ ರಕ್ಷಣ ಕಾಯ್ದೆ ಅಡಿ ವಕೀಲರು ಬರಲ್ಲ: ಸುಪ್ರೀಂ](https://www.udayavani.com/wp-content/uploads/2024/05/s-c-620x342.jpg)
ಹೊಸದಿಲ್ಲಿ: ವಕೀಲರು ಗ್ರಾಹಕ ರಕ್ಷಣ ಕಾಯ್ದೆ ವ್ಯಾಪ್ತಿಗೆ ಒಳಪಡುವುದಿಲ್ಲ. ಹಾಗಾಗಿ ಅವರ ವಿರುದ್ಧ “ಸೇವಾ ನ್ಯೂನ ತೆ’ಗಾಗಿ ಈ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಲು ಅವಕಾಶವಿಲ್ಲ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಮಹತ್ವದ ತೀರ್ಪು ನೀಡಿದೆ.
ನ್ಯಾಯಮೂರ್ತಿ ಬೇಲಾ ಎಂ. ತ್ರಿವೇದಿ, ಪಂಕಜ್ ಮಿತ್ತಲ್ ಅವರಿದ್ದ ಪೀಠವು, ವಕೀಲಿ ವೃತ್ತಿಯು ವಿಶಿಷ್ಟ ವೃತ್ತಿಯಾಗಿದ್ದು, ಬೇರೆ ವೃತ್ತಿಗಳೊಂದಿಗೆ ಹೋಲಿಕೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿತು. ಗ್ರಾಹಕ ರಕ್ಷಣ ಕಾಯ್ದೆ ವ್ಯಾಪ್ತಿಗೆ ವಕೀಲರು ಮತ್ತು ಅವರ ಸೇವೆ ಒಳಪಡುತ್ತದೆ ಎಂದು ರಾಷ್ಟ್ರೀಯ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗ(ಎನ್ಸಿಡಿಆರ್ಸಿ) ಆದೇಶಿಸಿತ್ತು. ಈ ಆದೇಶವನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿದ್ದರು. ಎಲ್ಲ ವೃತ್ತಿಗಳ ಸೇವೆಯನ್ನು ಈ ಕಾಯ್ದೆಗೆ ವ್ಯಾಪ್ತಿಗೆ ಒಳಪಡಿಸಿದರೆ, ಆಯೋಗ ಮತ್ತು ವೇದಿಕೆಗಳ ಮುಂದೆ ದಾವೆಗಳ ಪ್ರವಾಹವೇ ಹರಿದು ಬರಲಿದೆ ಎಂದು ಪೀಠ ಅಭಿಪ್ರಾಯಪಟ್ಟಿತು. ಗ್ರಾಹಕರ ಹಿತವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ 1986ರಲ್ಲಿ ಜಾರಿಯಾಗಿದ್ದ ಗ್ರಾಹಕ ಹಿತರಕ್ಷಣೆಯನ್ನು 2019ರಲ್ಲಿ ಪರಿಷ್ಕರಿಸಿ ಮತ್ತಷ್ಟು ಗ್ರಾಹಕ ಸ್ನೇಹಿಯನ್ನಾಗಿ ಮಾಡಲಾಗಿದೆ ಎಂದು ಕೋರ್ಟ್ ಹೇಳಿತು.
ಟಾಪ್ ನ್ಯೂಸ್
![police crime](https://www.udayavani.com/wp-content/uploads/2024/07/police-crime-2-415x256.jpg)
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.