![1-sdsa-dasd](https://www.udayavani.com/wp-content/uploads/2024/07/1-sdsa-dasd-1-415x239.jpg)
Theft Case: ನಟಿ ಛಾಯಾಸಿಂಗ್ ಮನೆಯಲ್ಲಿ ಕೆಲಸದಾಕೆಯಿಂದಲೇ ಚಿನ್ನ ಕಳವು
Team Udayavani, May 15, 2024, 11:25 AM IST
![Theft Case: ನಟಿ ಛಾಯಾಸಿಂಗ್ ಮನೆಯಲ್ಲಿ ಕೆಲಸದಾಕೆಯಿಂದಲೇ ಚಿನ್ನ ಕಳವು](https://www.udayavani.com/wp-content/uploads/2024/05/4-13-620x372.jpg)
ಬೆಂಗಳೂರು: ಬಹುಭಾಷಾ ನಟಿ ಛಾಯಾಸಿಂಗ್ ತವರು ಮನೆಯಲ್ಲಿ ಚಿನ್ನಾಭರಣ ಕಳವು ಮಾಡಿದ್ದ ಕೆಲಸದಾಕೆಯನ್ನು ಬಸವೇಶ್ವರನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಎನ್ಜಿಓಎಸ್ ಕಾಲೋನಿ ನಿವಾಸಿ ಉಷಾ (43) ಬಂಧಿತ ಮಹಿಳೆ.
ಈಕೆಯಿಂದ 4 ಲಕ್ಷ ರೂ. ಮೌಲ್ಯದ 66 ಗ್ರಾಂ ಚಿನ್ನ ಮತ್ತು 155 ಗ್ರಾಂ ಬೆಳ್ಳಿ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿ ಎನ್ಎಚ್ಸಿಎಸ್ ಲೇಔಟ್ ನಲ್ಲಿ ವಾಸವಾಗಿರುವ ನಟಿ ಛಾಯಾ ಸಿಂಗ್ ಅವರ ತಾಯಿ ಚಮನ್ ಲತಾ ಸಿಂಗ್ ಮನೆಯಲ್ಲಿ 2 ವರ್ಷಗಳಿಂದ ಕೆಲಸ ಮಾಡುತ್ತಿದ್ದಳು. ಈ ವೇಳೆ ಹಂತ-ಹಂತವಾಗಿ ಮನೆಯಲ್ಲಿದ್ದ ಚಿನ್ನಾಭರಣ ಕಳವು ಮಾಡಿದ್ದಳು. ಏ.13ರಂದು ರೂಮಿನ ಬೀರುವಿನ ಲಾಕರ್ನ್ನು ಆರೋಪಿ, ಮುಚ್ಚುತ್ತಿರುವುದನ್ನು ಗಮನಿಸಿದ್ದ ಚಮನ್ ಲತಾ ಸಿಂಗ್, ಅನುಮಾನಗೊಂಡು ಆಕೆಯನ್ನು ಪ್ರಶ್ನಿಸಿದ್ದಾರೆ.
ಆಗ ಆಕೆ ಸರಿಯಾದ ಉತ್ತರ ಕೊಡದೆ ಸಬೂಬು ಹೇಳಿದ್ದಳು. ಕೊನೆಗೆ ಬೀರು ಪರಿಶೀಲನೆ ನಡೆಸಿದಾಗ ವಿವಿಧ ಆಭರಣ ಕಳವಾಗಿದ್ದವು. ಈ ಬಗ್ಗೆ ಚಮನ್ ಲತಾ ಸಿಂಗ್ ಕೊಟ್ಟ ದೂರಿನ ಮೇರೆಗೆ ಬಸವೇಶ್ವರನಗರ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಸಾಲ ತೀರಿಸುವ ಸಲುವಾಗಿ ಮಾಲೀಕರ ಮನೆಯಲ್ಲಿ ಆಭರಣ ಮತ್ತು ಹಣ ಕಳವು ಮಾಡಿದ್ದಾಗಿ ಆರೋಪಿತೆ ತಪ್ಪೊಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯಿಂದ ಜಪ್ತಿ ಮಾಡಿದ್ದ ಆಭರಣವನ್ನು ನಟಿ ಛಾಯಾ ಸಿಂಗ್ ಅವರಿಗೆ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಮರಳಿಸಿದರು.
ಟಾಪ್ ನ್ಯೂಸ್
![1-sdsa-dasd](https://www.udayavani.com/wp-content/uploads/2024/07/1-sdsa-dasd-1-415x239.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![11-bng](https://www.udayavani.com/wp-content/uploads/2024/07/11-bng-150x90.jpg)
Bengaluru: ಅಕ್ರಮ ಆಸ್ತಿ: ಬೆಸ್ಕಾಂ ಎಇಇಗೆ 3 ವರ್ಷ ಸಜೆ,1 ಕೋಟಿ ರೂ. ದಂಡ ವಿಧಿಸಿದ ಕೋರ್ಟ್
![10-bng](https://www.udayavani.com/wp-content/uploads/2024/07/10-bng-150x90.jpg)
Bengaluru: ಶೋಕಿಲಾಲನಿಗೆ ನಕಲಿ ಎ.ಕೆ.47 ಕೊಡಿಸಿದ್ದ ವ್ಯಕ್ತಿಗೆ ನೋಟಿಸ್
![9-crime](https://www.udayavani.com/wp-content/uploads/2024/07/9-crime-150x90.jpg)
Bengaluru: ಬೈಕ್ಗೆ ಲಾರಿ ಡಿಕ್ಕಿ : ರಿಯಲ್ ಎಸ್ಟೇಟ್ ಏಜೆಂಟ್ ಸಾವು
![8-bng](https://www.udayavani.com/wp-content/uploads/2024/07/8-bng-150x90.jpg)
Bengaluru: ಹಳೇ ದ್ವೇಷಕ್ಕೆ ವ್ಯಕ್ತಿ ಕೊಲೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ
![7-bng](https://www.udayavani.com/wp-content/uploads/2024/07/7-bng-150x90.jpg)
Bengaluru: ವಿಚಾರಣಾಧೀನ ಕೈದಿಯ ಗುದದ್ವಾರದಲ್ಲಿ 2 ಮೊಬೈಲ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.