Sunil Chhetri ಸರಿಸಾಟಿಯಿಲ್ಲದ ಆಟಗಾರ; ಭಾರತ ಫುಟ್‌ಬಾಲ್‌ನ ತೆಂಡುಲ್ಕರ್‌ ಚೆಟ್ರಿ


Team Udayavani, May 17, 2024, 11:18 AM IST

Sunil Chhetri

ಭಾರತ ಫ‌ುಟ್‌ಬಾಲ್‌ ಕಂಡ ಸರ್ವಶ್ರೇಷ್ಠ ಆಟಗಾರ ಸುನಿಲ್‌ ಚೆಟ್ರಿ ತಮ್ಮ 39ನೇ ವರ್ಷದಲ್ಲಿ ಅಂತಾರಾಷ್ಟ್ರೀಯ ವೃತ್ತಿಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಜೂ.6ಕ್ಕೆ ಕುವೈಟ್‌ ವಿರುದ್ಧ ಆಡಲಿರುವುದೇ ಅವರ ಕೊನೆಯ ಅಂತಾರಾಷ್ಟ್ರೀಯ ಪಂದ್ಯ. ಚೆಟ್ರಿಯನ್ನು ಭಾರತ ಫ‌ುಟ್‌ಬಾಲ್‌ ಕಂಡ ಸಚಿನ್‌ ತೆಂಡುಲ್ಕರ್‌ ಎಂದೇ ಬಣ್ಣಿಸಬಹುದು. 24 ವರ್ಷಗಳ ಕ್ರಿಕೆಟ್‌ ಬದುಕಿನಲ್ಲಿ ತೆಂಡುಲ್ಕರ್‌ ದೇವರ ಪಟ್ಟಕ್ಕೇರಿದ್ದರು!

ಫ‌ುಟ್‌ಬಾಲ್‌ನಲ್ಲಿ ಚೆಟ್ರಿ ಅಂತಹದ್ದೇ ಪ್ರಭಾವ ಬೀರಿದ್ದಾರೆ. ಚೆಟ್ರಿ ನಿವೃತ್ತಿಯಾಗಲಿದ್ದರೂ, ಅವರು ಮಾಡಿರುವ ಸಾಧನೆಗಳು, ಉಳಿಸಿರುವ ನೆನಪುಗಳು ಎಂದಿಗೂ ನಿವೃತ್ತಿಯಾಗುವುದಿಲ್ಲ. ಅವರ ಸಾಧನೆಗಳ ಚಿತ್ರಣ ಇಲ್ಲಿದೆ

ದೇಶದ ಪರ ಗರಿಷ್ಠ ಗೋಲು, ಗರಿಷ್ಠ ಪಂದ್ಯ

ಜೂ.12, 2005ರಂದು ಅಂತಾರಾಷ್ಟ್ರೀಯ ಫ‌ುಟ್‌ಬಾಲ್‌ಗೆ ಸುನಿಲ್‌ ಚೆಟ್ರಿ ಪದಾರ್ಪಣೆ ಮಾಡಿದರು. ಪಾಕಿಸ್ತಾನದ ವಿರುದ್ಧದ ಮೊದಲ ಪಂದ್ಯದಲ್ಲೇ ಗೋಲು ಹೊಡೆದ ಅವರು, ತಮ್ಮ 150ನೇ ಪಂದ್ಯದಲ್ಲಿ ಅಫ್ಘಾನಿಸ್ಥಾನದ ವಿರುದ್ಧವೂ ಗೋಲು ಹೊಡೆಯುವ ಮೂಲಕ ಗೋಲಿನ ಯಾನವನ್ನು ಮುಂದುವರಿಸಿದರು. ಒಟ್ಟು 94 ಗೋಲು ಬಾರಿಸಿರುವ ಅವರು ದೇಶದ ಪರ ಗರಿಷ್ಠ ಗೋಲು ಗಳಿಸಿರುವ ಆಟಗಾರ. ಹಾಗೆಯೇ ಗರಿಷ್ಠ ಪಂದ್ಯಗಳನ್ನಾಡಿದ ಆಟಗಾರನೂ ಹೌದು. ಅವರ ಸಾಧನೆಯ ತೂಕ ಹೇಗಿದೆಯೆಂದರೆ, ಗೋಲಿನ ಲೆಕ್ಕಾಚಾರದಲ್ಲಿ ಚೆಟ್ರಿ ಅನಂತರದ ಸ್ಥಾನದಲ್ಲಿರುವ ಐ.ಎಂ.ವಿಜಯನ್‌ (32), ಭೈಚುಂಗ್‌ ಭುಟಿಯ (29), ಶಬ್ಬೀರ್‌ ಅಲಿ (6), ಗೌರಮಾಂಗಿ ಸಿಂಗ್‌ (6), ಸಂದೇಶ್‌ ಜಿಂಗಾನ್‌ (5) ಅವರ ಗೋಲುಗಳನ್ನು ಒಟ್ಟು ಸೇರಿಸಿದರೂ (78), ಚೆಟ್ರಿಯನ್ನು ಸರಿಗಟ್ಟಲು ಸಾಧ್ಯವಿಲ್ಲ.

ಖೇಲ್‌ರತ್ನ, ಪದ್ಮಶ್ರೀ, ಅರ್ಜುನ ಪುರಸ್ಕೃತ

ಫ‌ುಟ್‌ಬಾಲ್‌ ಕ್ಷೇತ್ರದಲ್ಲಿ ಅಗಾಧ ಸಾಧನೆಗಾಗಿ ಚೆಟ್ರಿಗೆ 2011ರಲ್ಲಿ ಅರ್ಜುನ, 2019ರಲ್ಲಿ ಪದ್ಮಶ್ರೀ, 2021ರಲ್ಲಿ ಮೇಜರ್‌ ಧ್ಯಾನ್‌ ಚಂದ್‌ ಖೇಲ್‌ ರತ್ನ ಪ್ರಶಸ್ತಿಗಳು ಸಂದಿವೆ. 2022ರಲ್ಲಿ ವಿಶ್ವ ಫ‌ುಟ್ಬಾಲ್‌ ಮಂಡಳಿ ಫಿಫಾ, “ಕ್ಯಾಪ್ಟನ್‌ ಫೆನ್ಟಾಸ್ಟಿಕ್‌’ ಹೆಸರಿನಲ್ಲಿ ಸಾಕ್ಷ್ಯಚಿತ್ರ ನಿರ್ಮಿಸಿ, ಫ‌ುಟ್ಬಾಲ್‌ ದಿಗ್ಗಜನಿಗೆ ಗೌರವ ಸಲ್ಲಿಸಿತ್ತು

22001ರಲ್ಲಿ ಕ್ಲಬ್‌ ಆಟ ಆರಂಭ

2001-02ರಲ್ಲಿ ಸಿಟಿ ಕ್ಲಬ್‌ ಡೆಲ್ಲಿ ಮೂಲಕ ಕ್ಲಬ್‌ ವೃತ್ತಿ ಬದುಕು ಆರಂಭಿಸಿರುವ ಚೆಟ್ರಿ ಬಳಿಕ, ಮೋಹನ್‌ ಬಾಗನ್‌, ಈಸ್ಟ್‌ ಬೆಂಗಾಲ್‌, ಬೆಂಗಳೂರು ಎಫ್ಸಿ ಮುಂತಾದ ಕ್ಲಬ್‌ಗಳ ಪರ ಆಡಿದ್ದಾರೆ. ಅಮೆರಿಕದ ಮೇಜರ್‌ ಲೀಗ್‌ ಸಾಕರ್‌, ಪೋರ್ಚುಗಲ್‌ನ ಕ್ಲಬ್‌ವೊಂದರ ಪರವೂ ಆಡಿದ್ದಾರೆ.

3 ನೆಹರೂ ಕಪ್‌, 3 ಸ್ಯಾಫ್ ಗೆಲುವು

2012ರಲ್ಲಿ ಭಾರತ ತಂಡದ ನಾಯಕರಾದ ಚೆಟ್ರಿ, ಅನೇಕ ಟ್ರೋμ ಗೆಲುವುಗಳಿಗೆ ಕಾರಣವಾಗಿದ್ದಾರೆ. 2007, 2009 ಮತ್ತು 2012ರಲ್ಲಿ ಭಾರತ ತಂಡ ನೆಹರೂ ಕಪ್‌ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 2015, 2021 ಮತ್ತು 2023ರಲ್ಲಿ ಭಾರತ, ಸೌತ್‌ ಏಷ್ಯನ್‌ ಫ‌ುಟ್‌ಬಾಲ್‌ ಫೆಡರೇಶನ್‌ (ಸ್ಯಾಫ್) ಚಾಂಪಿಯನ್‌ಶಿಪ್‌ ಗೆದ್ದಿತ್ತು. 2023ರಲ್ಲಿ ಭಾರತ, ಅಂತಾರಾಷ್ಟ್ರೀಯ ಫ‌ುಟ್‌ಬಾಲ್‌ ರ್ಯಾಕಿಂಗ್‌ನಲ್ಲಿ 100ರೊಳಗೆ ಸ್ಥಾನ ಪಡೆದಿತ್ತು.

ಬೆಂಗಳೂರು ಪರ 2 ಐಲೀಗ್‌, ಒಮ್ಮೆ ಐಎಸ್‌ಎಲ್‌ ಪ್ರಶಸ್ತಿ, ವಿಜಯ

2013-14ರಲ್ಲಿ ಬೆಂಗಳೂರು ಎಫ್ಸಿ ಸೇರಿಕೊಂಡ ಅವರು, ಮೋಹನ್‌ ಬಾಗನ್‌ ವಿರುದ್ಧ ಬದಲಿ ಆಟಗಾರನಾಗಿ ಪದಾರ್ಪಣೆ ಪಂದ್ಯ ಆಡಿದ್ದರು. ಅಂದಿನ ಪಂದ್ಯ 1-1ರಿಂದ ಡ್ರಾಗೊಂಡಿತ್ತು. ಅಂದಿನಿಂದ ಇಂದಿನವರೆಗೆ ಬೆಂಗಳೂರು ಪರ ಒಟ್ಟಾರೆ 155 ಪಂದ್ಯಗಳನ್ನಾಡಿರುವ ಚೆಟ್ರಿ, 61 ಗೋಲ್‌ ಗಳನ್ನು ಬಾರಿಸಿದ್ದಾರೆ. ಇಲ್ಲದೆ, 2014, 2016ರಲ್ಲಿ ಐಲೀಗ್‌, 2018ರಲ್ಲಿ ಸೂಪರ್‌ ಕಪ್‌, 2019ರಲ್ಲಿ ಐಎಸ್‌ಎಲ್‌ ಪ್ರಶಸ್ತಿಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ.

ಚೆಟ್ರಿ ಹೆಜ್ಜೆಗಳು

ವಿವಿಧ ಕ್ಲಬ್‌ ಪರ 2001 ರಲ್ಲಿ ಡೆಲ್ಲಿ ಸಿಟಿ ಕ್ಲಬ್‌ ಮೂಲಕ ಕ್ಲಬ್‌ ಜೀವನ ಆರಂಭ.

2002ರಲ್ಲಿ ಮೋಹನ್‌ ಬಗಾನ್‌ ಕ್ಲಬ್‌ ಸೇರಿಕೊಂಡರು.

2013, ಜು.19ರಂದು ಬೆಂಗಳೂರು ಕ್ಲಬ್‌ ಸೇರ್ಪಡೆ.

2015ರಲ್ಲಿ ಮುಂಬೈ ಸಿಟಿಯನ್ನು ಕೂಡಿಕೊಂಡ‌ರು. ಆಗವರಿಗೆ ಗರಿಷ್ಠ 1.2 ಕೋಟಿ ರೂ. ಹಣ ನೀಡಲಾಗಿತ್ತು. ಅದೇ ವರ್ಷ ಮತ್ತೆ ಬೆಂಗಳೂರಿಗೆ ಮರಳಿದರು.

ಭಾರತದ ಪರ

2004 ಮಾ.30ರಂದು ಭಾರತ ಅ-20 ತಂಡದ ಪರ ಆಡಿದರು.

2005 ಜೂ.12ರಂದು ಪಾಕಿಸ್ಥಾನದ ವಿರುದ್ಧ ಅಂ.ರಾ. ವೃತ್ತಿಜೀವನ ಆರಂಭ.

2007, ಆ.17ರಂದು ನೆಹರೂ ಕಪ್‌ ಮೂಲಕ ಮೊದಲ ಅಂ.ರಾ. ಕೂಟದಲ್ಲಿ ಆಟ.

2007ರಲ್ಲಿ ಫಿಫಾ ವಿಶ್ವಕಪ್‌ ಅರ್ಹತಾ ಸುತ್ತಿನಲ್ಲಿ ಆಟ.

2008ರಲ್ಲಿ ಸ್ಯಾಫ್ ಕಪ್‌ನಲ್ಲಿ ಆಟ. ನೇಪಾಲದ ವಿರುದ್ಧ ಗೋಲು ದಾಖಲು.

2012, ಮಾ.11ರಿಂದ ಭಾರತದ ನಾಯಕರಾಗಿ ಆಟ ಆರಂಭ.

2018, ಜೂನ್‌ನಲ್ಲಿ ತೈಪೆ ವಿರುದ್ಧ ಹ್ಯಾಟ್ರಿಕ್‌ ಗೋಲು.

2022 ಮಾ.28ರಂದು ಕಿರ್ಗಿಸ್ಥಾನದ ವಿರುದ್ಧ ತಮ್ಮ 85ನೇ ಗೋಲು ದಾಖಲು.

2023 ಜೂ.18ರಂದು ಹೀರೋ ಇಂಟರ್‌ಕಾಂಟಿ ನೆಂಟಲ್‌ ಕಪ್‌ ಗೆಲುವು.

2024 ಮೇ 16ಕ್ಕೆ ನಿವೃತ್ತಿ ಘೋಷಣೆ.

ದಾಖಲೆಗಳು

ವಿಶ್ವದ ಸಾರ್ವಕಾಲಿಕ ಗರಿಷ್ಠ ಅಂತಾರಾಷ್ಟ್ರೀಯ ಗೋಲು ಸಾಧಕರ ಪೈಕಿ ಚೆಟ್ರಿ 4ನೇ ಸ್ಥಾನದಲ್ಲಿದ್ದಾರೆ. ರೊನಾಲ್ಡೊ (128), ಅಲಿ ಡಾಯೆಯಿ (108), ಮೆಸ್ಸಿ (106) ಮೊದಲ ಮೂರು ಸ್ಥಾನದಲ್ಲಿದ್ದಾರೆ.

ಇಂಡಿಯನ್‌ ಸೂಪರ್‌ ಲೀಗ್‌ನಲ್ಲಿ 155 ಪಂದ್ಯವಾಡಿರುವ ಚೆಟ್ರಿ 61 ಗೋಲು ಗಳಿಸಿ, ಗರಿಷ್ಠ ಗೋಲು ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ.

ರಾಷ್ಟ್ರೀಯ ತಂಡ ಮತ್ತು ಕ್ಲಬ್‌ಗಳು ಸೇರಿ ಒಟ್ಟಾರೆ 515 ಪಂದ್ಯಗಳನ್ನಾಡಿ, 252 ಗೋಲ್‌ಗ‌ಳನ್ನು ಬಾರಿಸಿದ್ದಾರೆ.

ಚೆಟ್ರಿ ಒಟ್ಟು 3 ಖಂಡಗಳಲ್ಲಿ ಫ‌ುಟ್‌ಬಾಲ್‌ ಆಡಿದ್ದಾರೆ. ಭಾರತ (ಏಷ್ಯಾ), ಅಮೆರಿಕದ ಮೇಜರ್‌ ಲೀಗ್‌ ಸಾಕ್ಕರ್‌(ಉ.ಅಮೆರಿಕ), ಪೋರ್ಚುಗಲ್‌ನ ನ್ಪೋರ್ಟಿಂಗ್‌ ಕ್ಲಬ್‌ ಡೀ ಪೋರ್ಚುಗಲ್‌ (ಯೂರೋಪ್‌) ಪರ ಆಡುವ ಮೂಲಕ ಈ ಸಾಧನೆ ಮಾಡಿದ್ದಾರೆ.

ಟಾಪ್ ನ್ಯೂಸ್

Trekking tips: ಟ್ರೆಕ್ಕಿಂಗ್‌ ಹೋಗ್ತಾ ಇದ್ದೀರಾ?: ನಾವ್‌ ಹೇಳ್ಳೋದ್‌ ಸ್ವಲ್ಪ ಕೇಳ್ರಿ…

Trekking tips: ಟ್ರೆಕ್ಕಿಂಗ್‌ ಹೋಗ್ತಾ ಇದ್ದೀರಾ?: ನಾವ್‌ ಹೇಳ್ಳೋದ್‌ ಸ್ವಲ್ಪ ಕೇಳ್ರಿ…

ಬಹುಮುಖ ಪ್ರತಿಭೆ: ಕಾಲಪೆಟ್ಟಿಗೆಯ ಹಾರ್ಮೋನಿಯಂ ಕಲಾವಿದ ಸದಾಶಿವ ತೇಲಿ

ಬಹುಮುಖ ಪ್ರತಿಭೆ: ಕಾಲಪೆಟ್ಟಿಗೆಯ ಹಾರ್ಮೋನಿಯಂ ಕಲಾವಿದ ಸದಾಶಿವ ತೇಲಿ

ಜೈಲಿನಲ್ಲಿ ಮಗನನ್ನು ಕಂಡು ಭಾವುಕರಾದ ಮೀನಾ: ತಾಯಿಯನ್ನು ನೋಡಿ ಕಣ್ಣೀರಿಟ್ಟ ದರ್ಶನ್

ಜೈಲಿನಲ್ಲಿ ಮಗನನ್ನು ಕಂಡು ಭಾವುಕರಾದ ಮೀನಾ: ತಾಯಿಯನ್ನು ನೋಡಿ ಕಣ್ಣೀರಿಟ್ಟ ದರ್ಶನ್

ಮಠಾಧೀಶರಿಗೆ ದೇವರ ಸ್ಥಾನ ಕೊಟ್ಟಿದ್ದೇವೆ, ಆದರೆ ಕಾಂಗ್ರೆಸ್ ನವರು….: ಕೆ.ಎಸ್ ಈಶ್ವರಪ್ಪ

Shimoga; ಮಠಾಧೀಶರಿಗೆ ದೇವರ ಸ್ಥಾನ ಕೊಟ್ಟಿದ್ದೇವೆ, ಆದರೆ ಕಾಂಗ್ರೆಸ್ ನವರು….: ಈಶ್ವರಪ್ಪ

ಹೆಚ್ಚು ಮಂದಿ ವಿಡಿಯೋ ನೋಡಬೇಕೆಂದು ಟವರ್‌ ಏರಿದ ಯೂಟ್ಯೂಬರ್: ಮನವೊಲಿಕೆಗೆ ಖಾಕಿ ಸುಸ್ತು

ಹೆಚ್ಚು ಮಂದಿ ವಿಡಿಯೋ ನೋಡಬೇಕೆಂದು ಟವರ್‌ ಏರಿದ ಯೂಟ್ಯೂಬರ್: ಮನವೊಲಿಕೆಗೆ ಖಾಕಿ ಸುಸ್ತು

ನಾಲ್ಕೂವರೆ ವರ್ಷ ಸ್ಮಶಾನದಲ್ಲಿ ಕಳೆದಿದ್ದ ಕುಮಟಾದ ಈ ಹುಡುಗ ಈಗ ಟೀಂ ಇಂಡಿಯಾದ ಪ್ರಮುಖ ಶಕ್ತಿ!

ನಾಲ್ಕೂವರೆ ವರ್ಷ ಸ್ಮಶಾನದಲ್ಲಿ ಕಳೆದಿದ್ದ ಕುಮಟಾದ ಈ ಹುಡುಗ ಈಗ ಟೀಂ ಇಂಡಿಯಾದ ಪ್ರಮುಖ ಶಕ್ತಿ!

Hassana: ಕೌಟುಂಬಿಕ ಕಲಹ… ದೂರು ನೀಡಲು ಬಂದ ಪತ್ನಿಗೆ SP ಕಚೇರಿಯಲ್ಲೇ ಚಾಕು ಇರಿದು ಹತ್ಯೆ

Hassana: ಕೌಟುಂಬಿಕ ಕಲಹ… ದೂರು ನೀಡಲು ಬಂದ ಪತ್ನಿಗೆ SP ಕಚೇರಿ ಆವರಣದಲ್ಲೇ ಚಾಕು ಇರಿತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಾಂಪ್ರದಾಯಿಕ ಪ್ರಯೋಗಾಲಯ ಮೀರಿ ಬಹು-ಶಿಸ್ತಿನ ವಿದ್ಯಾಸಂಸ್ಥೆಗಳ ಮೂಲಕ ಶೈಕ್ಷಣಿಕ ಕ್ರಾಂತಿ

ಸಾಂಪ್ರದಾಯಿಕ ಪ್ರಯೋಗಾಲಯ ಮೀರಿ ಬಹು-ಶಿಸ್ತಿನ ವಿದ್ಯಾಸಂಸ್ಥೆಗಳ ಮೂಲಕ ಶೈಕ್ಷಣಿಕ ಕ್ರಾಂತಿ

Ajit Doval is India’s James Bond!

Spy Master; ಅಜಿತ್‌ ದೋವಲ್‌ ಭಾರತದ ಜೇಮ್ಸ್‌ಬಾಂಡ್‌!

Basava

Desi Swara: Yoga Day-ಬಸವತತ್ತ್ವ ಮತ್ತು ಯೋಗತತ್ತ್ವ: ಅನುಸಂಧಾನ

KGF

Kolara: ಕೆಜಿಎಫ್ ಗಣಿಗಳಲ್ಲಿ ಮತ್ತೆ ಬಂಗಾರ ಬೇಟೆ!

1-KGF

KGF ಗಣಿ ತ್ಯಾಜ್ಯದಿಂದ ಚಿನ್ನ

MUST WATCH

udayavani youtube

ಸಂಸದೆ ಪ್ರಿಯಾಂಕಾ ಅಭಿನಂದನಾ‌ ಸಮಾವೇಶದಲ್ಲಿ ಸತೀಶ ಜಾರಕಿಹೊಳಿ ಭಾಷಣ

udayavani youtube

Congress ಪಾರ್ಟಿಯ ಯಾರೂ ನಮ್ಮನ್ನು ಸಂಪರ್ಕಿಸಿಲ್ಲ ಬಸವರಾಜ ಬೊಮ್ಮಾಯಿ

udayavani youtube

ರುಚಿ ರುಚಿ ಮನೆ ತಿಂಡಿ ಬೇಕು ಅನ್ನೋರು ವಿವಿ ಪುರಂಗೆ ಹೋಗಲೇಬೇಕು

udayavani youtube

ವಿಧಿಯಾಟಕ್ಕೆ ಬಲಿಯಾದ ಅಂಧರ ಪುಟ್ ಬಾಲ್ ತಂಡದ ಕ್ಯಾಪ್ಟನ್

udayavani youtube

ಮಾತು ಬರದ ಮಗುವಿಗೆ ಮಾತು ಬರಿಸಿದ ಕಾಪು ಮಾರಿಯಮ್ಮ | ಕಾಪುವಿನ ಅಮ್ಮನ ಪವಾಡ

ಹೊಸ ಸೇರ್ಪಡೆ

Trekking tips: ಟ್ರೆಕ್ಕಿಂಗ್‌ ಹೋಗ್ತಾ ಇದ್ದೀರಾ?: ನಾವ್‌ ಹೇಳ್ಳೋದ್‌ ಸ್ವಲ್ಪ ಕೇಳ್ರಿ…

Trekking tips: ಟ್ರೆಕ್ಕಿಂಗ್‌ ಹೋಗ್ತಾ ಇದ್ದೀರಾ?: ನಾವ್‌ ಹೇಳ್ಳೋದ್‌ ಸ್ವಲ್ಪ ಕೇಳ್ರಿ…

ಮುದ್ರಣ ನಮ್ಮ ರಕ್ತದಲ್ಲೇಇದೆ, ಅದೇ ನಮ್ಮ ಉಸಿರು!

ಮುದ್ರಣ ನಮ್ಮ ರಕ್ತದಲ್ಲೇಇದೆ, ಅದೇ ನಮ್ಮ ಉಸಿರು!

Gowri ರಿಲೀಸ್ ದಿನಾಂಕ ಘೋಷಿಸಿದ ಇಂದ್ರಜಿತ್‌ ಲಂಕೇಶ್‌

Gowri ರಿಲೀಸ್ ದಿನಾಂಕ ಘೋಷಿಸಿದ ಇಂದ್ರಜಿತ್‌ ಲಂಕೇಶ್‌

Manipal; ಮಾಹೆ ಮಣಿಪಾಲದ ಸಿಓಓ ಆಗಿ ಡಾ. ರವಿರಾಜ ಎನ್.ಎಸ್

Manipal; ಮಾಹೆ ಮಣಿಪಾಲದ ಸಿಓಓ ಆಗಿ ಡಾ. ರವಿರಾಜ ಎನ್.ಎಸ್

Davanagere; Protest by BJP Zilla Raitamorcha condemning the price hike

Davanagere; ಬೆಲೆ ಏರಿಕೆ ಖಂಡಿಸಿ ಬಿಜೆಪಿ ಜಿಲ್ಲಾ ರೈತಮೋರ್ಚಾದಿಂದ ಪ್ರತಿಭಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.