Tollywood: ಪ್ರಶಾಂತ್ ನೀಲ್ – Jr. NTR ಸಿನಿಮಾಕ್ಕೆ ಈ ಟೈಟಲ್ ಫಿಕ್ಸ್?
Team Udayavani, May 17, 2024, 3:51 PM IST
ಹೈದರಾಬಾದ್: ಜೂ.ಎನ್ಟಿಆರ್ ʼಆರ್ ಆರ್ ಆರ್ʼ ಬಳಿಕ ಯಾವುದೇ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ. ಪ್ಯಾನ್ ಇಂಡಿಯಾದಲ್ಲಿ ಅವರಿಗೆ ಅಭಿಮಾನಿಗಳಿದ್ದಾರೆ. ʼದೇವರʼ ಸಿನಿಮಾಕ್ಕಾಗಿ ಪ್ರೇಕ್ಷಕರು ಕುತೂಹಲದಿಂದ ಕಾಯುತ್ತಿದ್ದಾರೆ.
ʼದೇವರʼ ದ ನಡುವೆ ಅವರು ಹಿಂದಿಯ ʼವಾರ್ -2ʼ ಸಿನಿಮಾದಲ್ಲಿ ಹೃತಿಕ್ ರೋಷನ್ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಇದಾದ ಬಳಿಕ ಮತ್ತೊಂದು ದೊಡ್ಡ ಪ್ರಾಜೆಕ್ಟ್ ನಲ್ಲಿ ಜೂ. ಎನ್ ಟಿಆರ್ ಕಾಣಿಸಿಕೊಳ್ಳಲಿದ್ದಾರೆ.
ʼಕೆಜಿಎಫ್ʼ ನಿರ್ದೇಶಕ ಪ್ರಶಾಂತ್ ನೀಲ್ ಜೂ. ಎನ್ ಟಿಆರ್ ಜೊತೆ ಸಿನಿಮಾ ಮಾಡುತ್ತಿರುವುದು ಗೊತ್ತೇ ಇದೆ. ಈ ಸಿನಿಮಾ ಶೂಟಿಂಗ್ ಆರಂಭಕ್ಕೂ ಮುನ್ನವೇ ಅನೌನ್ಸ್ ಆದ ದಿಂದ ಸುದ್ದಿಯಲ್ಲಿದೆ.
ʼಎನ್ ಟಿಆರ್ 31ʼ ಎನ್ನುವ ಟೈಟಲ್ ತಾತ್ಕಾಲಿಕವಾಗಿ ಇಡಲಾಗಿದೆ. ಇದೀಗ ಬಂದಿರುವ ಲೇಟೆಸ್ಟ್ ಅಪ್ಡೇಟ್ ಪ್ರಕಾರ ಸಿನಿಮಾಕ್ಕೆ ʼಡ್ರ್ಯಾಗನ್ʼ ಎನ್ನುವ ಪವರ್ ಫುಲ್ ಟೈಟಲ್ ಇಡಲಾಗಿದೆ ಎನ್ನಲಾಗಿದೆ.
ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂನಲ್ಲಿʼ ಡ್ರ್ಯಾಗನ್ʼ ಎಂಬ ಶೀರ್ಷಿಕೆಯನ್ನು ಇಡಲಾಗಿದ್ದು, ಈ ಟೈಟಲ್ ಹಿಂದಿಯಲ್ಲಿ ಕರಣ್ ಜೋಹರ್ ಅವರು ನೋಂದಾಯಿಸಿದ್ದಾರೆ. ಚಿತ್ರತಂಡ ಕರಣ್ ಅವರೊಂದಿಗೆ ಮಾತನಾಡಿದ್ದು, ಹಿಂದಿಯಲ್ಲೂ ʼಡ್ರ್ಯಾಗನ್ʼ ಟೈಟಲ್ ನೀಡಲು ಅವರು ಅನುಮತಿ ನೀಡಿದ್ದಾರೆ” ಎಂದು ʼಪಿಂಕ್ ವಿಲ್ಲಾʼ ವರದಿ ಮಾಡಿದೆ.
ಇದನ್ನೂ ಓದಿ: ಕಾರ್ತಿಕ್ – ಸೂರ್ಯ ಕಾಂಬಿನೇಷನ್ ನ ಬಹು ನಿರೀಕ್ಷಿತ ಸಿನಿಮಾಕ್ಕೆ ಪೂಜಾ ಹೆಗ್ಡೆ ನಾಯಕಿ?
ʼಬ್ರಹ್ಮಾಸ್ತ್ರʼದ ಮೂಲ ಶೀರ್ಷಿಕೆಯು ʼಡ್ರ್ಯಾಗನ್ʼ ಎಂದಾಗಿತ್ತು. ಆಗಿತ್ತು. ಆದರೆ ಸಿನಿಮಾದ ಸ್ಕ್ರಿಪ್ಟ್ ಮುಂದುವರೆದಂತೆ ಸಿನಿಮಾದ ಟೈಟಲ್ ಕೂಡ ಬದಲಾಯಿತು ಎಂದು ವರದಿ ತಿಳಿಸಿದೆ.
ಮೈತ್ರಿ ಮೂವಿ ಮೇಕರ್ಸ್ ಈ ಸಿನಿಮಾವನ್ನು ನಿರ್ಮಿಸಲಿದೆ. ಇದೇ ಮೇ.20 ರಂದು ಜೂ.ಎನ್ ಟಿಆರ್ ಅವರ ಹುಟ್ಟುಹಬ್ಬವಿದ್ದು, ಈ ಸಮಯದಲ್ಲಿ ʼಡ್ರ್ಯಾಗನ್ʼ ಟೈಟಲ್ ಪೋಸ್ಟರ್ ರಿಲೀಸ್ ಆಗುವ ಸಾಧ್ಯತೆಯಿದೆ ಎನ್ನಲಾಗಿದೆ.
ಅಂದಹಾಗೆ ಕರಣ್ ಜೋಹರ್ ಜೂ.ಎನ್ ಟಿಆರ್ ಅವರ ʼದೇವರʼ ಸಿನಿಮಾವನ್ನು ಹಿಂದಿಯಲ್ಲಿ ಪ್ರಸೆಂಟ್ ಮಾಡಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ʼದೇವರʼ ಸಿನಿಮಾ ನೋಡುತ್ತಿರುವಾಗ ಥಿಯೇಟರ್ನಲ್ಲೇ ಕುಸಿದು ಬಿದ್ದು ಮೃತಪಟ್ಟ Jr NTR ಅಭಿಮಾನಿ
Devara: ಹೇಗಿದೆ ಜೂ.ಎನ್ಟಿಆರ್ ʼದೇವರʼ?: ನಿರೀಕ್ಷೆ-ನಿರಾಶೆ..ಪ್ರೇಕ್ಷಕರ ಅಭಿಪ್ರಾಯವೇನು?
Spirit Movie: ಪ್ರಭಾಸ್ ʼಸ್ಪಿರಿಟ್ʼನಲ್ಲಿ ಖಡಕ್ ವಿಲನ್ ಆಗಲಿದ್ದಾರೆ ಈ ಬಿಟೌನ್ ದಂಪತಿ
Actor Siddique: ಬಂಧನದ ಭೀತಿಯಿಂದ ತಲೆಮರೆಸಿಕೊಂಡ ನಟ ಸಿದ್ದೀಕ್: ಲುಕೌಟ್ ನೋಟಿಸ್ ಜಾರಿ
ಶಂಕರ್ ನಿರ್ದೇಶನದಲ್ಲಿ ಐತಿಹಾಸಿಕ ಸಿನಿಮಾ; 2 ದಶಕದ ಬಳಿಕ ಜತೆಯಾಗಲಿದ್ದಾರೆ ಸೂರ್ಯ- ವಿಕ್ರಮ್
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.