Cleanliness: ಪ್ರವಾಸಿ ತಾಣ ನಮ್ಮ ಆಸ್ತಿ: ಸ್ವಚ್ಛವಾಗಿರಿಸೋಣ


Team Udayavani, May 20, 2024, 3:12 PM IST

7-uv-fusion

ಪ್ರೇಕ್ಷಣೀಯ ಸ್ಥಳಗಳು ತನ್ನೊಳಗಿನ ವೈವಿಧ್ಯತೆಯಿಂದ ಎಲ್ಲರ ಕಣ್ಮನ ಸೆಳೆಯುತ್ತದೆ. ಪ್ರವಾಸಿ ತಾಣಗಳ  ಸೌಂದರ್ಯವನ್ನು ನೋಡಲು ಎರಡು ಕಣ್ಣುಗಳು ಸಾಲದು. ನಮ್ಮ ನಾಡಿನಲ್ಲಿ ಸಾಕಷ್ಟು  ಪ್ರೇಕ್ಷಣೀಯ ಸ್ಥಳಗಳಿವೆ. ಅದು ಮಾನವ ಸೃಷ್ಟಿಯಾಗಿದ್ದಿರಬಹುದು, ಇರದೆಯೂ ಇರಬಹುದು.

ಇಂತಹ ಸ್ಥಳಗಳು ಸಾವಿರಾರು ಜನರ ಮನಸ್ಸನ್ನು ಸೆಳೆಯುತ್ತದೆ. ಪ್ರಕೃತಿ ಸೃಷ್ಟಿಯಾಗಿರುವ ನದಿ, ಹೊಳೆ, ಜಲಪಾತಗಳು ನಮಗೆ ನೋಡಲು ಸಿಕ್ಕಂತ ವರವಾಗಿದೆ. ಆ ನೀರಿನ ರಭಸ, ಗಂಭೀರವಾದ ಸದ್ದು, ಹಾಲ್ನೊರೆಯಂತಹ ಬಣ್ಣ ಆಹಾ! ಭೂಮಿಯ ಮೇಲಿನ ಸ್ವರ್ಗ ವೀಕ್ಷಣೆಯೆಂದರೆ ತಪ್ಪಾಗಲ್ಲ.

ಆದರೆ ಆ ಪ್ರವಾಸಿ ತಾಣಗಳ ಸೌಂದರ್ಯತೆ ಹಾಳು ಮಾಡಬಾರದೆಂದು ಎಚ್ಚರಿಸುವ ನಾಮಫ‌ಲಕಗಳನ್ನು ಕಾಣುತ್ತೇವೆ. ಹೀಗಿದ್ದರೂ ಮೂಡರಂತೆ ವರ್ತಿಸುವ  ಕೆಲವರು ಇಂತಹ ಸ್ಥಳಗಳನ್ನು ಹಾಳು ಮಾಡುತ್ತಿದ್ದಾರೆ.

ಪ್ಲಾಸ್ಟಿಕ್‌ಗಳನ್ನು ಹಾಕಿ ಮಣ್ಣಿನ ಮಾಲಿನ್ಯವನ್ನು ಉಂಟು ಮಾಡುತ್ತಾರೆ. ಅರೆಬರೆಯಾಗಿ ಆಹಾರವನ್ನು ತಿಂದು ಮೀನುಗಳಿಗೆ ಹಾಕುತ್ತಾರೆ. ಮಾನವರು ತಿನ್ನುವ ಹಲವು ಆಹಾರಗಳನ್ನು ಮೀನುಗಳಿಗೆ ಅರಗಿಸಿಕೊಳ್ಳುವ ಸಾಮರ್ಥ್ಯವಿರುವುದಿಲ್ಲ. ಹಾಗೆಯೇ  ಜಲಪಾತದ ತಂಪಾದ ನೀರಿನ ಹನಿಗಳಿಂದ ಸೋಪು, ಶಾಂಪುವಿನಿಂದ  ಸ್ನಾನ ಮಾಡುತ್ತಾರೆ.

ರಾಸಾಯನಿಕ ಅಂಶಗಳು ಒಳಗೊಂಡಿರುವ ಈ ವಸ್ತುಗಳಿಂದ ನೀರಿನೊಳಗೆ ವಾಸವಾಗಿರುವ ಮೀನುಗಳಿಗೆ ಹಾನಿಯನ್ನು ಉಂಟುಮಾಡುತ್ತದೆ. ಹೀಗೆ ಮುಂದುವರೆದರೆ ಮತ್ಸ್ಯ ವರ್ಗವೇ ಅಳಿವಿನಂಚಿಗೆ ತಲುಪಲು ಮಾನವರೇ ಕಾರಣವಾಗುತ್ತಾನೆ.

ಒಂದು ರೀತಿಯಾಗಿ ನೋಡಿದರೆ ಸಾಮಾಜಿಕ ಜಾಲತಾಣದ ಅತಿಯಾದ ಬಳಕೆಯೇ ಮೇಲ್ನೋಟಕ್ಕೆ  ಕಾರಣವೆನ್ನಬಹುದು. ದೃಶ್ಯಗಳನ್ನು ಸೆರೆ ಹಿಡಿಯುವ ಮೂಲಕ ಇತರ ಜನರಿಗೆ ತಲುಪಿಸುತ್ತಾರೆ. ಸ್ಥಳದ  ಶ್ರೇಷ್ಠತೆಯನ್ನು ಹೆಚ್ಚಿಸುತ್ತಾರೆ. ಅದನ್ನು ನೋಡಿ ಬರುವ ಮಾನವರು ನೋಡುವ ಬದಲಿಗೆ ಮಾಲಿನ್ಯ ಮಾಡುವುದೇ ಹೆಚ್ಚು.  ಒಟ್ಟಾರೆಯಾಗಿ ಈ ಸುಂದರ ಪ್ರಕೃತಿಯ ವರವಾದ ಇಂಥ ಸ್ಥಳಗಳನ್ನು ಸ್ವಾರ್ಥಿಯಾದ ಮಾನವ ನಾಶಮಾಡುತ್ತಿದ್ದಾನೆ.

ಇದೇ ಪರಿಸ್ಥಿತಿ ಮುಂದುವರೆದರೆ ಮುಂದೊಂದು ದಿನ ಪ್ರವಾಸಿ ತಾಣಗಳು ನೋಡಲು ಸಿಗುವುದೇ ಕಷ್ಟಕರವಾಗಬಹುದು.  ಮಾನವರಿಗೆ ಇಂಥ ಕೃತ್ಯಗಳನ್ನು ಮಾಡಬಾರದೆಂಬ ಮನವರಿಕೆ ಮೂಡಬೇಕಾಗಿದೆ. ತಮ್ಮಂತೆ ಇತರ ಜಲಚರಗಳಿಗೆ ಬದುಕುವ ಅರ್ಹತೆ ಇದೆ ಎಂಬ ಸತ್ಯ ಮನವರಿಕೆಗೆಯಾಗಬೇಕು. ನಮ್ಮೀ ಪ್ರಕೃತಿಯ ಸೌಂದರ್ಯ ಕಾಪಾಡಲು ಮಾನವರೇ ಮುಂದಾಗಬೇಕು. ಪ್ರವಾಸಿ ತಾಣಗಳನ್ನು ಸ್ವಚ್ಛವಾಗಿಡುವ ಜವಾಬ್ದಾರಿ ನಮ್ಮದ್ದಾಗಿದೆ. ಹಾಗಾಗಿ ಇನ್ನಾದರೂ ಪ್ರವಾಸಿ ತಾಣಗಳನ್ನು ಶುಚಿಯಿಂದಿರಿಸಿ.

-ತೃಪ್ತಿ ಗುಡಿಗಾರ್‌

ಎಂ. ಪಿ. ಎಂ. ಕಾಲೇಜು

ಕಾರ್ಕಳ

ಟಾಪ್ ನ್ಯೂಸ್

Kambala ಓಟಗಾರನಿಗೆ “ಕೋಣ’ ನಿಗದಿ; ಕಂಬಳ ಸಮಿತಿಯಿಂದ ಹೊಸ ನಿಯಮಾವಳಿ

Kambala ಓಟಗಾರನಿಗೆ “ಕೋಣ’ ನಿಗದಿ; ಕಂಬಳ ಸಮಿತಿಯಿಂದ ಹೊಸ ನಿಯಮಾವಳಿ

NEET EXAM ಇನ್ನು ನೀಟ್‌ ಆನ್‌ಲೈನ್‌?ವಿವಾದದ ಬೆನ್ನಲ್ಲೇ ಕೇಂದ್ರ ಸರಕಾರದ ಚಿಂತನೆ

NEET EXAM ಇನ್ನು ನೀಟ್‌ ಆನ್‌ಲೈನ್‌?ವಿವಾದದ ಬೆನ್ನಲ್ಲೇ ಕೇಂದ್ರ ಸರಕಾರದ ಚಿಂತನೆ

1-kim-un-jang

North Korea; ದಕ್ಷಿಣ ಕೊರಿಯ ಹಾಡು ಕೇಳಿದ ಯುವಕನ ಶಿರಚ್ಛೇದ!

Leopard ಮೊಸಳೆ ಹಿಡಿಯುವ ದೃಶ್ಯ ಎಂಬ ಸುಳ್ಳು ಸುದ್ದಿ ವೈರಲ್‌

Leopard ಮೊಸಳೆ ಹಿಡಿಯುವ ದೃಶ್ಯ ಎಂಬ ಸುಳ್ಳು ಸುದ್ದಿ ವೈರಲ್‌

ಇಂದಿನಿಂದ 3 ದೇಸಿ ಕಾನೂನು ಜಾರಿ

ಇಂದಿನಿಂದ 3 ದೇಸಿ ಕಾನೂನು ಜಾರಿ; ಏನೆಲ್ಲ ಹೊಸತು?

Karnataka ರಾಜ್ಯದಲ್ಲೂ 3 ಹೊಸ ಕಾನೂನು ಜಾರಿ

Karnataka ರಾಜ್ಯದಲ್ಲೂ 3 ಹೊಸ ಕಾನೂನು ಜಾರಿ

D. K. Shivakumar ಕೆಪಿಸಿಸಿ ಪಟ್ಟಕ್ಕೆ ಕುತ್ತು: ಖಂಡ್ರೆಗೆ ಪಟ್ಟ ?

D. K. Shivakumar ಕೆಪಿಸಿಸಿ ಪಟ್ಟಕ್ಕೆ ಕುತ್ತು: ಖಂಡ್ರೆಗೆ ಪಟ್ಟ ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-uv-fusion

Education: ಅಸಮತೋಲನೆ ನಿವಾರಣೆಗೆ ಸಹ ಶಿಕ್ಷಣ ಸರಿಯಾದ ದಾರಿ

13-tn-sitharama

T. N. Seetharam: ಧಾರಾವಾಹಿಗಳಿಗೆ ಹೊಸ ಭಾಷ್ಯ ನೀಡಿದ ನಿರ್ದೇಶಕ ಟಿ.ಎನ್‌. ಸೀತಾರಾಮ

11-uv-fusion

Rajeev Taranath: ಸರೋದ್‌ ಸ್ವರ ಮಾಂತ್ರಿಕನ ಸ್ವರ್ಗಾರೋಹಣ

10-uv-fusion

UV Fusion: ನೈಸರ್ಗಿಕ ಕಾಡು ಪುನರುತ್ಥಾನಕ್ಕೆ ಕೊಡುಗೆ ನೀಡುವ ಉಪ್ಪಳಿಗೆ

11-uv-fusion

UV Fusion: ಸಿನೆಮಾ

MUST WATCH

udayavani youtube

ಸಂಸದೆ ಪ್ರಿಯಾಂಕಾ ಅಭಿನಂದನಾ‌ ಸಮಾವೇಶದಲ್ಲಿ ಸತೀಶ ಜಾರಕಿಹೊಳಿ ಭಾಷಣ

udayavani youtube

Congress ಪಾರ್ಟಿಯ ಯಾರೂ ನಮ್ಮನ್ನು ಸಂಪರ್ಕಿಸಿಲ್ಲ ಬಸವರಾಜ ಬೊಮ್ಮಾಯಿ

udayavani youtube

ರುಚಿ ರುಚಿ ಮನೆ ತಿಂಡಿ ಬೇಕು ಅನ್ನೋರು ವಿವಿ ಪುರಂಗೆ ಹೋಗಲೇಬೇಕು

udayavani youtube

ವಿಧಿಯಾಟಕ್ಕೆ ಬಲಿಯಾದ ಅಂಧರ ಪುಟ್ ಬಾಲ್ ತಂಡದ ಕ್ಯಾಪ್ಟನ್

udayavani youtube

ಮಾತು ಬರದ ಮಗುವಿಗೆ ಮಾತು ಬರಿಸಿದ ಕಾಪು ಮಾರಿಯಮ್ಮ | ಕಾಪುವಿನ ಅಮ್ಮನ ಪವಾಡ

ಹೊಸ ಸೇರ್ಪಡೆ

Kambala ಓಟಗಾರನಿಗೆ “ಕೋಣ’ ನಿಗದಿ; ಕಂಬಳ ಸಮಿತಿಯಿಂದ ಹೊಸ ನಿಯಮಾವಳಿ

Kambala ಓಟಗಾರನಿಗೆ “ಕೋಣ’ ನಿಗದಿ; ಕಂಬಳ ಸಮಿತಿಯಿಂದ ಹೊಸ ನಿಯಮಾವಳಿ

NEET EXAM ಇನ್ನು ನೀಟ್‌ ಆನ್‌ಲೈನ್‌?ವಿವಾದದ ಬೆನ್ನಲ್ಲೇ ಕೇಂದ್ರ ಸರಕಾರದ ಚಿಂತನೆ

NEET EXAM ಇನ್ನು ನೀಟ್‌ ಆನ್‌ಲೈನ್‌?ವಿವಾದದ ಬೆನ್ನಲ್ಲೇ ಕೇಂದ್ರ ಸರಕಾರದ ಚಿಂತನೆ

1-kim-un-jang

North Korea; ದಕ್ಷಿಣ ಕೊರಿಯ ಹಾಡು ಕೇಳಿದ ಯುವಕನ ಶಿರಚ್ಛೇದ!

Leopard ಮೊಸಳೆ ಹಿಡಿಯುವ ದೃಶ್ಯ ಎಂಬ ಸುಳ್ಳು ಸುದ್ದಿ ವೈರಲ್‌

Leopard ಮೊಸಳೆ ಹಿಡಿಯುವ ದೃಶ್ಯ ಎಂಬ ಸುಳ್ಳು ಸುದ್ದಿ ವೈರಲ್‌

ಇಂದಿನಿಂದ 3 ದೇಸಿ ಕಾನೂನು ಜಾರಿ

ಇಂದಿನಿಂದ 3 ದೇಸಿ ಕಾನೂನು ಜಾರಿ; ಏನೆಲ್ಲ ಹೊಸತು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.