Fraud Case ಟೂರ್‌ ಪ್ಯಾಕೇಜ್‌ ಹೆಸರಿನಲ್ಲಿ ವಂಚನೆ; ದೂರು


Team Udayavani, May 20, 2024, 11:50 PM IST

Fraud  Case ಟೂರ್‌ ಪ್ಯಾಕೇಜ್‌ ಹೆಸರಿನಲ್ಲಿ ವಂಚನೆ; ದೂರು

ಕೋಟ: ಟೂರ್‌ ಪ್ಯಾಕೇಜ್‌ ಹೆಸರಿನಲ್ಲಿ ಕ್ರೆಡಿಟ್‌ ಕಾರ್ಡ್‌ ಮೂಲಕ ಹಣ ಪಡೆದು ವಂಚನೆ ನಡೆಸಿದ ಘಟನೆ ಮಣಿಪಾಲದಲ್ಲಿ ಸಂಭವಿಸಿದೆ. ಸಾಲಿಗ್ರಾಮ ಸಮೀಪದ ಬಡಾಹೋಳಿ ನಿವಾಸಿ ಗುರುರಾಜ್‌ ವಂಚನೆಗೊಳಗಾದವರು.

ಗುರುರಾಜ್‌ ಅವರಿಗೆ ಮುಂಬಯಿ ಮೂಲದ ಈವೆಂಟ್‌ ಮ್ಯಾನೇಜ್‌ಮೆಂಟ್‌ ಕಂಪೆನಿಯೊಂದರಿಂದ ಟೂರ್‌ ಪ್ಯಾಕೇಜ್‌ ಹೆಸರಲ್ಲಿ ಕರೆ ಬಂದಿದ್ದು, ಮಣಿಪಾಲದ ಖಾಸಗಿ ಹೊಟೇಲ್‌ನಲ್ಲಿ ನಡೆಯುವ ಕಂಪೆನಿಯ ಮೀಟಿಂಗ್‌ನಲ್ಲಿ ಭಾಗವಹಿಸುವಂತೆ ಮೇಲಿಂದ ಮೇಲೆ ಕರೆ ಮಾಡಿ ತಿಳಿಸಲಾಗಿತ್ತು. ಆದರೆ ಇವರು ಆರಂಭದಲ್ಲಿ ಪ್ರಸ್ತಾವವನ್ನು ಒಪ್ಪಿಕೊಂಡಿರಲಿಲ್ಲ. ಅನಂತರ ಬೇರೆ ಕೆಲಸದ ಮೇರೆಗೆ ಮಣಿಪಾಲಕ್ಕೆ ತೆರಳಿದಾಗ ಮೀಟಿಂಗ್‌ನಲ್ಲಿ ಭಾಗವಹಿಸಿದ್ದರು.

ಮೂರು ವರ್ಷಗಳವರೆಗೆ ಇ.ಎಂ.ಐ. ಮೂಲಕ ವಾರ್ಷಿಕ 75 ಸಾವಿರ ರೂ. ಪಾವತಿಸಿದರೆ ವರ್ಷದಲ್ಲಿ ಮೂರು ಬಾರಿ ಅಂತಾರಾಜ್ಯ ಹಾಗೂ ಎರಡು ಬಾರಿ ಏಷ್ಯಾ ಖಂಡದೊಳಗೆ ಪ್ರವಾಸವಿರುತ್ತದೆ ಎಂದು ಕಂಪೆನಿಯ ಪ್ರತಿನಿಧಿ ಎಂದು ಹೇಳಿಕೊಂಡಾತ ತಿಳಿಸಿದ್ದು, ಅನಂತರ ಗುರುರಾಜ್‌ ಅವರ ಇ.ಎಂ.ಐ. ಕಾರ್ಡ್‌ ಪಡೆದು ಅದರಿಂದ 48 ಸಾವಿರ ರೂ. ಕಡಿತಗೊಳಿಸಿಕೊಂಡಿದ್ದಾರೆ. ಕಡಿತಗೊಂಡ ಹಣ ಏಳು ದಿನದೊಳಗೆ ವಾಪಸಾಗುವುದಾಗಿಯೂ ತಿಳಿಸಿದ್ದರು. ಆದರೆ ಮಾಡಿರಲಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.

50-60 ಮಂದಿಗೆ ಮೋಸ?
ಆರಂಭದಲ್ಲಿ ಒಂದೆರಡು ದಿನ ಪ್ರಥ್ವಿರಾಜ್‌ ಎನ್ನುವಾತ ಮೊಬೈಲ್‌ ಕರೆಗೆ ಸಿಕ್ಕಿದ್ದು, ಅನಂತರ ಯಾವುದೇ ಕರೆ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಟೂರ್‌ ಪ್ಯಾಕೇಜ್‌ ಹೆಸರಲ್ಲಿ ವಂಚನೆ ಮಾಡುವ ಜಾಲ ಇದಾಗಿದ್ದು, ನನ್ನಂತೆ 50-60 ಮಂದಿ ಮೋಸ ಹೋಗಿರುವ ಸಾಧ್ಯತೆ ಇದೆ. ಈ ಜಾಲವನ್ನು ಪತ್ತೆ ಹಚ್ಚಿ ನ್ಯಾಯ ಒದಗಿಸಬೇಕು ಎಂದು ಗುರುರಾಜ್‌ ಅವರು ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಟಾಪ್ ನ್ಯೂಸ್

5-sulya

Crime: ಸುಳ್ಯ ಭಾಗದ ಅಪರಾಧ ಸುದ್ದಿಗಳು

Charmadi Ghat ಕಸ ಎಸೆದ ಚಾಲಕನಿಗೆ ಕೇಸ್; ಚಾಲಕನಿಂದಲೇ ಕಸ ತೆರವು

Charmadi Ghat ಕಸ ಎಸೆದ ಚಾಲಕನಿಗೆ ಕೇಸ್; ಚಾಲಕನಿಂದಲೇ ಕಸ ತೆರವು

vijayapura

Vijayapura; ಕೃಷ್ಣಾ ನದಿಯಲ್ಲಿ ತೆಪ್ಪ ಮುಳುಗಿ ಹಲವರು ನಾಪತ್ತೆ, ಓರ್ವನ ಶವ ಪತ್ತೆ

Krishna-Byregowda

DK, Udupi: ಕಾಲು ಸಂಕಗಳ ಅಭಿವೃದ್ಧಿಗೆ ಕ್ರಿಯಾ ಯೋಜನೆ: ಕೃಷ್ಣ ಭೈರೇಗೌಡ

Kishkindha Anjanadri ,ಅಂಜನಾದ್ರಿ ಹುಂಡಿ,Africa, Italy, England currency

Kishkindha ಅಂಜನಾದ್ರಿ ಹುಂಡಿಯಲ್ಲಿ ಆಫ್ರಿಕಾ, ಇಟಲಿ, ಇಂಗ್ಲೆಂಡ್ ಕರೆನ್ಸಿ

ಚಾರಣಪಥಗಳ ಆನ್ ಲೈನ್ ಟಿಕೆಟ್ ಗೆ ಶೀಘ್ರ ಚಾಲನೆ: ಈಶ್ವರ ಖಂಡ್ರೆ

Trekking: ಚಾರಣಪಥಗಳ ಆನ್ ಲೈನ್ ಟಿಕೆಟ್ ಗೆ ಶೀಘ್ರ ಚಾಲನೆ: ಈಶ್ವರ ಖಂಡ್ರೆ

Modi-Lokasabha

Lokasabha: ಕಾಂಗ್ರೆಸ್‌ಗೆ 100ಕ್ಕೆ 99 ಸಿಕ್ಕಿದ್ದಲ್ಲ- ಪ್ರಧಾನಿ ಮೋದಿ ವಾಗ್ದಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi ಪತ್ರಿಕಾ ದಿನಾಚರಣೆ: ಸಮ್ಮಾನ, ಪ್ರತಿಭಾ ಪುರಸ್ಕಾರ

Udupi ಪತ್ರಿಕಾ ದಿನಾಚರಣೆ: ಸಮ್ಮಾನ, ಪ್ರತಿಭಾ ಪುರಸ್ಕಾರ

Udupi ವಾಯ್ಸ ಆಫ್ ಹೀಲಿಂಗ್ಸ್‌: ಸಾಧಕರಿಗೆ ಸಮ್ಮಾನ

Udupi ವಾಯ್ಸ ಆಫ್ ಹೀಲಿಂಗ್ಸ್‌: ಸಾಧಕರಿಗೆ ಸಮ್ಮಾನ

Manipal ಬ್ಯಾಂಕ್‌ ಖಾತೆಯಿಂದ ಲಕ್ಷಾಂತರ ರೂ. ವರ್ಗಾವಣೆ

Manipal ಬ್ಯಾಂಕ್‌ ಖಾತೆಯಿಂದ ಲಕ್ಷಾಂತರ ರೂ. ವರ್ಗಾವಣೆ

Nandikur ಪರಿಸರ ಮಾಲಿನ್ಯ?ಪರಿಸರ ಅಧಿಕಾರಿಗಳಿಂದ ಪರಿಶೀಲನೆ: ನೀರಿನ ಸ್ಯಾಂಪಲ್‌ ಸಂಗ್ರಹ

Nandikur ಪರಿಸರ ಮಾಲಿನ್ಯ?ಪರಿಸರ ಅಧಿಕಾರಿಗಳಿಂದ ಪರಿಶೀಲನೆ: ನೀರಿನ ಸ್ಯಾಂಪಲ್‌ ಸಂಗ್ರಹ

Karkala: ಉಳುಮೆ ಮಾಡುತಿದ್ದ ಕಾರ್ಮಿಕ ಸಾವು

Karkala: ಉಳುಮೆ ಮಾಡುತಿದ್ದ ಕಾರ್ಮಿಕ ಸಾವು

MUST WATCH

udayavani youtube

ಹದಗೆಟ್ಟ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ವಾಹನ ಸವಾರರು!|

udayavani youtube

ಎಕ್ರೆಗಟ್ಟಲೆ ಹಡಿಲು ಭೂಮಿಗೆ ಜೀವ ತುಂಬಿದ ರೈತ

udayavani youtube

ಶ್ರೀ ಕ್ಷೇ.ಧ.ಗ್ರಾ.ಯೋಜನೆ | ಅರಣ್ಯ ಸಚಿವರಿಂದ ದಶಲಕ್ಷ ಗಿಡಗಳ ನಾಟಿಗೆ ಚಾಲನೆ

udayavani youtube

ಉಡುಪಿ ಪತ್ರಿಕಾ ಭವನ ಸಮಿತಿ ಸಹಯೋಗದೊಂದಿಗೆ ಪತ್ರಿಕಾ ದಿನಾಚರಣೆ

udayavani youtube

ಸಂಸದೆ ಪ್ರಿಯಾಂಕಾ ಅಭಿನಂದನಾ‌ ಸಮಾವೇಶದಲ್ಲಿ ಸತೀಶ ಜಾರಕಿಹೊಳಿ ಭಾಷಣ

ಹೊಸ ಸೇರ್ಪಡೆ

5-sulya

Crime: ಸುಳ್ಯ ಭಾಗದ ಅಪರಾಧ ಸುದ್ದಿಗಳು

Charmadi Ghat ಕಸ ಎಸೆದ ಚಾಲಕನಿಗೆ ಕೇಸ್; ಚಾಲಕನಿಂದಲೇ ಕಸ ತೆರವು

Charmadi Ghat ಕಸ ಎಸೆದ ಚಾಲಕನಿಗೆ ಕೇಸ್; ಚಾಲಕನಿಂದಲೇ ಕಸ ತೆರವು

vijayapura

Vijayapura; ಕೃಷ್ಣಾ ನದಿಯಲ್ಲಿ ತೆಪ್ಪ ಮುಳುಗಿ ಹಲವರು ನಾಪತ್ತೆ, ಓರ್ವನ ಶವ ಪತ್ತೆ

3-crime

Crime News: ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Krishna-Byregowda

DK, Udupi: ಕಾಲು ಸಂಕಗಳ ಅಭಿವೃದ್ಧಿಗೆ ಕ್ರಿಯಾ ಯೋಜನೆ: ಕೃಷ್ಣ ಭೈರೇಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.