![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, May 21, 2024, 6:45 AM IST
ಹೊಸದಿಲ್ಲಿ: ಸ್ವದೇಶಿ ಕೋವಿಡ್ ಲಸಿಕೆ ಕೋವ್ಯಾಕ್ಸಿನ್ನಿಂದಲೂ ಗಂಭೀರ ಅಡ್ಡ ಪರಿ ಣಾ ಮಗಳಾಗುತ್ತಿವೆ ಎಂಬ ಬನಾರಸ್ ಹಿಂದೂ ವಿವಿ (ಬಿಎಚ್ಯು) ಸಂಶೋಧನಾ ವರದಿಯಿಂದ ಭಾರತೀಯ ವೈದ್ಯಕೀಯ ಸಂಶೋಧನ ಸಮಿತಿ (ಐಸಿಎಂಆರ್) ಅಂತರ ಕಾಯ್ದುಕೊಂಡಿದೆ.
ಅಲ್ಲದೇ, ತಪ್ಪು ವರದಿ ನೀಡಿದ್ದಕ್ಕಾಗಿ ಕ್ಷಮೆ ಕೋರಬೇಕೆಂದೂ ಆಗ್ರಹಿಸಿದೆ. ಬನಾರಸ್ ವಿವಿಯ ಇಬ್ಬರು ಪ್ರಾ ಧ್ಯಾಪಕರು ಕೋವ್ಯಾಕ್ಸಿನ್ ಪಡೆದವರ ಪೈಕಿ 926 ಮಂದಿ ಗಂಭೀರ ಅಡ್ಡ ಪರಿಣಾಮವನ್ನು ಎದುರಿಸುತ್ತಿದ್ದಾರೆಂದು ತಮ್ಮ ವರದಿಯಲ್ಲಿ ತಿಳಿಸಿ ದ್ದರು.
ವರದಿಯಲ್ಲಿ ಲಸಿಕೆ ಪಡೆಯದವರ ಜತೆ ಲಸಿಕೆ ಪಡೆದವರ ಗಂಭೀರ ಅಡ್ಡ ಪರಿಣಾಮಗಳನ್ನು (ಎಇಎಸ್ಐ) ಹೋಲಿಕೆ ಮಾಡಲಾಗಿಲ್ಲ. ಆದ್ದರಿಂದ ಅಡ್ಡ ಪರಿಣಾಮಗಳಿಗೂ ಮತ್ತು ಕೋವ್ಯಾಕ್ಸಿನ್ ಲಸಿಕೆಗೆ ಸಂಬಂಧ ಕಲ್ಪಿಸುವುದು ತರವಲ್ಲ ಎಂದು ಐಸಿಎಂಆರ್ ಪ್ರಧಾನ ನಿರ್ದೇಶಕ ರಾಜೀವ್ ಬಹಲ್ ಹೇಳಿದ್ದಾರೆ. ಅಲ್ಲದೆ, ವರದಿಯ ತನ್ನ ಸಂಗತಿಗಳಿಗೆ ಯಾವುದೇ ಪೂರಕ ಹಿನ್ನಲೆಯನ್ನು ಒದಗಿಸಿಲ್ಲ. ಅಂದರೆ, ಲಸಿಕೆ ಪಡೆಯುವುದಕ್ಕಿಂತ ಮುಂಚಿನ ಡೇಟಾ ನೀಡಿಲ್ಲ ಎಂದೂ ಅವರು ತಿಳಿಸಿದ್ದಾರೆ. ಸಂಶೋಧಕರು ತಪ್ಪೊಪ್ಪಿಗೆ ಪ್ರಕಟಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.