![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, May 23, 2024, 7:31 PM IST
ಸಿದ್ದಾಪುರ: ಬ್ರಹ್ಮಾವರ ಸಂತೆಯಲ್ಲಿ ಒಣ ಮೆಣಿಸಿನ ವ್ಯಾಪಾರ ಮಾಡಿ, ಊರಿಗೆ ವಾಪಾಸು ಆಗುವ ವೇಳೆ ಊಟಕ್ಕೆಂದು ಸಿದ್ದಾಪುರ ಪೇಟೆಯಲ್ಲಿ ವಾಹನವನ್ನು ನಿಲ್ಲಿಸಿದ್ದ ವ್ಯಾಪಾರಿಯೊಬ್ಬರ 4.50 ಲಕ್ಷ ರೂ. ಹಣವನ್ನು ಯಾರೋ ಕಳ್ಳರು ಕದ್ದು, ಬೈಕಿನಲ್ಲಿ ಪರಾರಿಯಾದ ಘಟನೆ ಸಂಭವಿಸಿದೆ.
ಹಾವೇರಿ ಮೂಲದ ಮಹಮ್ಮದ್ ರಫಿ (43) ಅವರು ಬ್ರಹ್ಮಾವರ ಸಂತೆಯಲ್ಲಿ ಮೆಣಿಸಿನ ವ್ಯಾಪಾರ ಮಾಡಿ, ತನ್ನ ಕೆಲಸದವರೊಂದಿಗೆ ವಾಹನದಲ್ಲಿ ಊರಿಗೆ ತೆರಳುತ್ತಿದ್ದರು. ರಾತ್ರಿ 9.45ರ ಸುಮಾರಿಗೆ ಸಿದ್ದಾಪುರ ಪೇಟೆಯಲ್ಲಿರುವ ಹೋಟೆಲ್ವೊಂದರ ಬಳಿ ವಾಹನ ನಿಲ್ಲಿಸಿ, ಊಟಕ್ಕೆಂದು ಹೋಗಿದ್ದರು. ವ್ಯಾಪಾರ ಮಾಡಿ, ವಾಹನದ ಹಿಂದೆ ಇರಿಸಿದ್ದ 4.50 ಲಕ್ಷ ರೂ. ಹಣವನ್ನು ಕಳವುಗೈದಿದ್ದಾರೆ.
ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
You seem to have an Ad Blocker on.
To continue reading, please turn it off or whitelist Udayavani.