Train; ಜೂನ್ ತಿಂಗಳ ಮೊದಲ ವಾರದಲ್ಲಿ ರೈಲು ವ್ಯತ್ಯಯ
ನೇತ್ರಾವತಿ ಕ್ಯಾಬಿನ್ - ಮಂಗಳೂರು ಜಂಕ್ಷನ್ ನಡುವೆ ಹಳಿ ನಿರ್ವಹಣೆ ಕಾಮಗಾರಿ
Team Udayavani, May 28, 2024, 8:00 AM IST
ಮಂಗಳೂರು: ನೇತ್ರಾವತಿ ಕ್ಯಾಬಿನ್ ಮತ್ತು ಮಂಗಳೂರು ಜಂಕ್ಷನ್ ನಡುವೆ ಜೂನ್ ಮೊದಲ ವಾರ ಹಳಿ ನಿರ್ವಹಣೆ ನಡೆಯಲಿರುವ ಹಿನ್ನೆಲೆಯಲ್ಲಿ ಕೆಲವು ರೈಲುಗಳ ಸೇವೆಯಲ್ಲಿ ವ್ಯತ್ಯಯವಾಗಲಿದೆ.
ಜೂ. 1ರಂದು ಕೊಚ್ಚುವೇಲಿಯಿಂದ ಹೊರಡುವ ನಂ. 16312 ಕೊಚ್ಚುವೇಲಿ -ಶ್ರೀ ಗಂಗಾನಗರ ವೀಕ್ಲಿ ಎಕ್ಸ್ಪ್ರೆಸ್ ರೈಲನ್ನು 3 ಗಂಟೆ 50 ನಿಮಿಷ ತಡೆಹಿಡಿಯಲಾಗುತ್ತದೆ. ಜೂ. 1ರಂದು ಕೊಚ್ಚುವೇಲಿಯಿಂದ ಹೊರಡುವ ನಂ. 01464 ಕೊಚ್ಚುವೇಲಿ-ಲೋಕಮಾನ್ಯ ತಿಲಕ್(ಟಿ) ವೀಕ್ಲಿ ಎಕ್ಸ್ಪ್ರೆಸ್ಸನ್ನು 3 ಗಂ. 40 ನಿ. ತಡೆಹಿಡಿಯಲಾಗುತ್ತದೆ.
ಜೂ. 1ರಂದು ಡಾ| ಎಂಜಿಆರ್ ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣದಿಂದ ಹೊರಡುವ ನಂ. 22637 ಡಾ| ಎಂಜಿಆರ್ ಚೆನ್ನೈ ಸೆಂಟ್ರಲ್- ಮಂಗಳೂರು ಸೆಂಟ್ರಲ್ ವೆಸ್ಟ್ಕೋಸ್ಟ್ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ಸನ್ನು ಮಾರ್ಗಮಧ್ಯದಲ್ಲಿ 2 ಗಂಟೆ 10 ನಿಮಿಷ ತಡೆಹಿಡಿಯಲಾಗುತ್ತದೆ. ಜೂ. 1ರಂದು ಡಾ| ಎಂಜಿಆರ್ ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣದಿಂದ ಹೊರಡಲಿರುವ ನಂ. 12685 ಡಾ| ಎಂಜಿಆರ್ ಚೆನ್ನೈ ಸೆಂಟ್ರಲ್- ಮಂಗಳೂರು ಸೆಂಟ್ರಲ್ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ಸನ್ನು ಮಾರ್ಗಮಧ್ಯದಲ್ಲಿ 50 ನಿಮಿಷಗಳ ಕಾಲ ತಡೆಹಿಡಿಯಲಾಗುತ್ತದೆ. ಜೂ. 1ರಂದು ತಿರುವನಂತಪುರ ಸೆಂಟ್ರಲ್ನಿಂದ ಹೊರಡುವ ನಂ. 16604 ತಿರುವನಂತಪುರ ಸೆಂಟ್ರಲ್- ಮಂಗಳೂರು ಸೆಂಟ್ರಲ್ ಮಾವೇಲಿ ಎಕ್ಸ್ಪ್ರೆಸ್ ರೈಲನ್ನು ಮಾರ್ಗಮಧ್ಯದಲ್ಲಿ 30 ನಿಮಿಷಗಳ ಕಾಲ ತಡೆಹಿಡಿಯಲಾಗುತ್ತದೆ.
ಜೂ. 4ರಂದು ನಾಗರಕೋವಿಲ್ ಜಂಕ್ಷನ್ನಿಂದ ಹೊರಡಲಿರುವ ನಂ. 16336 ನಾಗರಕೋವಿಲ್ ಜಂಕ್ಷನ್-ಗಾಂಧಿಧಾಮ ಬಿಜಿ ವೀಕ್ಲಿ ಎಕ್ಸ್ಪ್ರೆಸ್ಸನ್ನು 2 ಗಂಟೆ 20 ನಿಮಿಷ ತಡೆಹಿಡಿಯಲಾಗುತ್ತದೆ. ಜೂ. 4 ಮತ್ತು 7ರಂದು ಡಾ| ಎಂಜಿಆರ್ ಚೆನ್ನೈ ಸೆಂಟ್ರಲ್ನಿಂದ ಹೊರಡಲಿರುವ ನಂ. 22637 ಡಾ| ಎಂಜಿಆರ್ ಚೆನ್ನೈ ಸೆಂಟ್ರಲ್- ಮಂಗಳೂರು ಸೆಂಟ್ರಲ್ ವೆಸ್ಟ್ಕೋಸ್ಟ್ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ಸನ್ನು 1 ಗಂಟೆ 10 ನಿಮಿಷ ತಡೆಹಿಡಿಯಲಾಗುತ್ತದೆ.
ಜೂ. 4 ಮತ್ತು 7ರಂದು ತಿರುವನಂತಪುರ ಸೆಂಟ್ರಲ್ನಿಂದ ಹೊರಡಲಿರುವ ನಂ. 12431 ತಿರುವನಂತಪುರ ಸೆಂಟ್ರಲ್-ನಿಝಾಮುದ್ದೀನ್ ಜಂಕ್ಷನ್ ರಾಜಧಾನಿ ಎಕ್ಸ್ಪ್ರೆಸ್ಸನ್ನು 1 ಗಂಟೆ 10 ನಿಮಿಷ, ಜೂ. 4ರಂದು ಎರ್ನಾಕುಲಂ ಜಂಕ್ಷನ್ನಿಂದ ಹೊರಡುವ ನಂ. 12283 ಎರ್ನಾಕುಲಂ ಜಂಕ್ಷನ್- ಹಝರತ್ ನಿಝಾಮುದ್ದೀನ್ ಜಂಕ್ಷನ್ ದುರೊಂತೋ ಸೂಪರ್ಫಾಸ್ಟ್ ವೀಕ್ಲಿ ಎಕ್ಸ್ಪ್ರೆಸ್ ರೈಲನ್ನು ಮಾರ್ಗಮಧ್ಯದಲ್ಲಿ 1 ಗಂಟೆ 10 ನಿಮಿಷ ತಡೆಹಿಡಿಯಲಾಗುತ್ತದೆ.
ಜೂ. 6ರಂದು ಪೋರಬಂದರ್ನಿಂದ ಹೊರಡುವ ನಂ. 20910 ಪೋರಬಂದರ್-ಕೊಚ್ಚುವೇಲಿ ವೀಕ್ಲಿ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ಸನ್ನು ಮಾರ್ಗಮಧ್ಯೆ 2 ಗಂಟೆ 40 ನಿಮಿಷ ತಡೆಹಿಡಿಯಲಾಗುತ್ತದೆ. ಜೂ.7ರಂದು ಲೋಕಮಾನ್ಯ ತಿಲಕ್ (ಟಿ)ನಿಂದ ಹೊರಡಲಿರುವ ನಂ.16345 ಲೋಕಮಾನ್ಯ ತಿಲಕ್ (ಟಿ) – ತಿರುವನಂತಪುರ ಸೆಂಟ್ರಲ್ ನೇತ್ರಾವತಿ ಎಕ್ಸ್ಪ್ರೆಸ್ಸನ್ನು ಮಾರ್ಗಮಧ್ಯೆ 1 ಗಂಟೆ 30 ನಿಮಿಷ ತಡೆಹಿಡಿಯಲಾಗುತ್ತದೆ ಎಂದು ದಕ್ಷಿಣ ರೈಲ್ವೇ ಪಾಲಕ್ಕಾಡ್ ವಿಭಾಗದ ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Leopard: ಮೂಲ್ಕಿ ಕೊಯ್ಯಾರಿನಲ್ಲಿ ಚಿರತೆ?
Ullal;ಜನಪ್ರತಿನಿಧಿಗಳು ಸೇರಿ ಹಲವರಿಂದ ಅರ್ಜುನ್ ಅಂತಿಮ ದರ್ಶನ
Mangaluru: ರಾಷ್ಟ್ರೀಯ ಹೆದ್ದಾರಿಯಲ್ಲೇ ಹೊತ್ತಿ ಉರಿದ BMW ಕಾರು… ಪ್ರಯಾಣಿಕರು ಪಾರು
Mangaluru: ಮುಕ್ತಿ ಕಾಣದ “ಬ್ಲ್ಯಾಕ್ಸ್ಪಾಟ್’ಗಳು: ಮತ್ತಷ್ಟು ಹೆಚ್ಚುತ್ತಿರುವ ಅಪಘಾತಗಳು
Airport: ಭದ್ರತೆಯಿಂದ ಜೂಲಿ ನಿವೃತ್ತಿ: 8 ವರ್ಷಗಳಿಂದ ಸೇವೆಯಲ್ಲಿದ್ದ ಶ್ವಾನ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.