Kalaburagi: ಹಣ ಡಬಲ್ ಮಾಡಿ ಬಹುಕೋಟಿ ವಂಚನೆ: ಇಬ್ಬರು ಆರೋಪಿಗಳು ನ್ಯಾಯಾಲಯಕ್ಕೆ ಶರಣು
Team Udayavani, May 28, 2024, 7:01 PM IST
ಕಲಬುರಗಿ: ಹಣ ಡಬಲ್ ಮಾಡಿ ಕೊಡುವುದಾಗಿ ಬಹುಕೋಟಿ ಹಣ ದೋಚಿ ಪರಾರಿಯಾಗಿದ್ದ ಪ್ರಕರಣದ ಇಬ್ಬರು ಆರೋಪಿಗಳು ನ್ಯಾಯಾಲಯಕ್ಕೆ ಶರಣಾಗಿದ್ದಾರೆ.
ಉತ್ಕರ್ಷ ವರ್ದಮಾನೆ ಹಾಗೂ ಸಾವಿತ್ರಿ ವರ್ದಮಾನೆ ಶರಣಾದ ಆರೋಪಿಗಳು. ಆರೋಪಿಗಳೇ ನೇರವಾಗಿ ಕಲಬುರಗಿಯ ಜೆ.ಎಂ.ಎಫ್.ಸಿ. 2 ನ್ಯಾಯಾಲಯಕ್ಕೆ ಬಂದು ಶರಣಾಗಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಆರೋಪಿಗಳು 30 ಕೋಟಿ ರೂ. ತೆಗೆದುಕೊಂಡು ಪರಾರಿಯಾಗಿರುವ ವಿರುದ್ದ ರೋಜಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಹಣ ಡಬ್ಲಿಂಗ್ ಮಾಡುವುದಾಗಿ ಉತ್ಕರ್ಷ ವರ್ದಮಾನೆ ಹಾಗೂ ಸಾವಿತ್ರಿ ವರ್ದಮಾನೆ ಬರೊಬ್ಬರಿ 30 ಕೋಟಿ ವಂಚಿಸಿದ್ದರು. ದೂರು ದಾಖಲಾಗುತ್ತಿದ್ದಂತೆ ದಂಪತಿಗಳು ಪರಾರಿಯಾಗಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.