French ಓಪನ್‌ ಗ್ರ್ಯಾನ್‌ ಸ್ಲಾಮ್‌ : ಮೊದಲ ಸುತ್ತಿನಲ್ಲಿ ಆ್ಯಂಡಿ ಮರ್ರೆಗೆ ಆಘಾತ


Team Udayavani, May 28, 2024, 11:09 PM IST

1-w-eewqe-aaa

ಪ್ಯಾರಿಸ್‌: ಬ್ರಿಟನ್‌ನ ಯಶಸ್ವಿ ಟೆನಿಸ್‌ ಆಟಗಾರ ಆ್ಯಂಡಿ ಮರ್ರೆ ಅವರು ಫ್ರೆಂಚ್‌ ಓಪನ್‌ ಟೆನಿಸ್‌ ಕೂಟದ ಮೊದಲ ಸುತ್ತಿನಲ್ಲಿ ನೇರ ಸೆಟ್‌ಗಳಿಂದ ಸೋತು ನಿರ್ಗಮಿಸಿದ್ದಾರೆ. ಅವರನ್ನು ಕೆಡಹಿದವರು ಮಾಜಿ ಚಾಂಪಿ ಯನ್‌ ಸ್ಟಾನ್‌ ವಾವ್ರಿಂಕ ಅವರು.

ಈ ಹಿಂದೆ ಪ್ರಮುಖ ಕೂಟಗಳಲ್ಲಿ ಇವರಿಬ್ಬರ ನಡುವೆ ನಡೆದಿದ್ದ ಮೂರು ಪಂದ್ಯಗಳಲ್ಲಿ ಎರಡು ಬಾರಿ ಜಯಭೇರಿ ಬಾರಿಸಿದ್ದ ವಾವ್ರಿಂಕ ಈ ಪಂದ್ಯವನ್ನು 6-4, 6-4, 6-2 ನೇರ ಸೆಟ್‌ಗಳಿಂದ ಗೆದ್ದು ಸಂಭ್ರಮಿಸಿದರು.

ಅಲ್ಕರಾಜ್‌ಗೆ ಗೆಲುವು
ಮೂರನೇ ಶ್ರೇಯಾಂಕದ ಕಾರ್ಲೋಸ್‌ ಅಲ್ಕರಾಜ್‌ ಅವರು ಮೊದಲ ಸುತ್ತಿನಲ್ಲಿ ಅಮೆರಿಕದ ಜೆ. ಜೆ. ವೂಲ್ಫ್ ಅವರನ್ನು 6-1, 6-2, 6-1 ಸೆಟ್‌ಗಳಿಂದ ಸೋಲಿಸಿ ಮುನ್ನಡೆದರು. ಅವರು ಚೊಚ್ಚಲ ಬಾರಿ ಫ್ರೆಂಚ್‌ ಓಪನ್‌ ಗೆಲ್ಲುವ ಗುರಿ ಇಟ್ಟುಕೊಂಡಿದ್ದಾರೆ. ಇನ್ನೊಂದು ಪಂದ್ಯದಲ್ಲಿ ಇಟಲಿಯ ಜಾನ್ನಿಕ್‌ ಸಿನ್ನರ್‌ ಅವರು ಅಮೆರಿಕದ ಕ್ರಿಸ್ಟೋಫ‌ರ್‌ ಯುಬ್ಯಾಂಕ್ಸ್‌ ಅವರನ್ನು 6-3, 6-3, 6-4 ಸೆಟ್‌ಗಳಿಂದ ಸೋಲಿಸಿ ಮುನ್ನಡೆ ದರು. ಆಸ್ಟ್ರೇಲಿಯನ್‌ ಓಪನ್‌ ಚಾಂಪಿ ಯನ್‌ ಆಗಿರುವ ಸಿನ್ನರ್‌ ಗಾಯದ ಸಮಸ್ಯೆಯಿಂದ ಕಳೆದ ಮ್ಯಾಡ್ರಿಡ್‌ ಓಪನ್‌ ಮತ್ತು ರೋಮ್‌ ಮಾಸ್ಟರ್ ಕೂಟದಿಂದ ಹಿಂದೆ ಸರಿದಿದ್ದರು.

ಜೆಂಗ್‌ ಕಿನ್ವೆನ್‌ಗೆ ಜಯ
ವನಿತೆಯರ ವಿಭಾಗದಲ್ಲಿ ಏಳನೇ ಶ್ರೇಯಾಂಕದ ಜೆಂಗ್‌ ಕಿನ್ವೆನ್‌ ಅವರು ಫ್ರಾನ್ಸ್‌ನ 34ರ ಹರೆಯದ ಅಲೀಝ್ ಕಾರ್ನೆಟ್‌ ಅವರನ್ನು 6-2, 6-1 ಸೆಟ್‌ಗಳಿಂದ ಸೋಲಿಸಿದರು. ಕಳೆದ 20 ವರ್ಷಗಳಿಂದ ತವರಿನ ಗ್ರ್ಯಾನ್‌ ಸ್ಲಾಮ್‌ನಲ್ಲಿ ಆಡುತ್ತಿರುವ ಕಾರ್ನೆಟ್‌ ಅವರು ಈ ಬಾರಿ ಮೊದಲ ಸುತ್ತಿನಲ್ಲಿಯೇ ಸೋತು ಅಭಿಮಾನಿಗಳನ್ನು ನಿರಾಶೆ ಯಲ್ಲಿ ಮುಳುಗಿಸಿದರು. ಈ ಕೂಟದ ಬಳಿಕ ಅವರು ಟೆನಿಸ್‌ಗೆ ನಿವೃತ್ತಿಯಾಗುವುದಾಗಿ ಈ ಮೊದಲೇ ತಿಳಿಸಿದ್ದರು. ಅವರಿನ್ನು ಇಲ್ಲಿ ವನಿತೆಯರ ಡಬಲ್ಸ್‌ ಮತ್ತು ಮಿಕ್ಸೆಡ್‌ ಡಬಲ್ಸ್‌ನಲ್ಲಿ ಆಡಲಿದ್ದಾರೆ.

ರಿಬಕಿನಾ ಮುನ್ನಡೆ
ದಿನದ ಇನ್ನೊಂದು ಪಂದ್ಯದಲ್ಲಿ ವಿಶ್ವದ ನಾಲ್ಕನೇ ರ್‍ಯಾಂಕಿನ ಎಲೆನಾ ರಿಬಕಿನಾ ಅವರು ಬೆಲ್ಜಿಯಂನ ಗ್ರೀಟ್‌ ಮಿನ್ನೆನ್‌ ಅವರನ್ನು 6-2, 6-3 ಸೆಟ್‌ಗಳಿಂದ ಸೋಲಿಸಿದರು. ಇನ್ನೊಂದು ಪಂದ್ಯದಲ್ಲಿ ಕೊಕೊ ಗ್ರಾಫ್ ಷವರು ಜರ್ಮನಿಯ ಜೂಲಿಯಾ ಆದೀವಾ ಅವರನ್ನು 6-1, 6-1 ಸೆಟ್‌ಗಳಿಂದ ಕೆಡಹಿದರು. 20ರ ಹರೆಯದ ಗಾಫ್ ದ್ವಿತೀಯ ಸುತ್ತಿನಲ್ಲಿ ಸ್ಲೋವಾನಿಯಾದ ತಮರ ಝಿಡನ್ಸೆಕ್‌ ಅವರನ್ನು ಎದುರಿಸಲಿದ್ದಾರೆ. ತಮರ ಮೊದಲ ಸುತ್ತಿನಲ್ಲಿ ಬೆಲ್ಜಿಯಂನ ಅಲಿಸನ್‌ ವಾನ್‌ ಯುತೆÌನ್ಸಿಕ್‌ ಅವರನ್ನು 6-2, 2-6, 6-1 ಸೆಟ್‌ಗಳಿಂದ ಸೋಲಿಸಿದ್ದರು.

 ಹೊರಬಿದ್ದ ಸುಮಿತ್‌ ನಾಗಲ್‌ 

ಪ್ಯಾರಿಸ್‌: ಭಾರತದ ಆಟಗಾರ ಸುಮಿತ್‌ ನಾಗಲ್‌ ಫ್ರೆಂಚ್‌ ಓಪನ್‌ ಟೆನಿಸ್‌ ಕೂಟದ ಮೊದಲ ಸುತ್ತಿನಲ್ಲಿಯೇ ಸೋತು ಹೊರಬಿದ್ದಿದ್ದಾರೆ. ಭಾರತದ ಉನ್ನತ ರ್‍ಯಾಂಕಿನ ಸಿಂಗಲ್ಸ್‌ ಆಟಗಾರರಾಗಿರುವ ನಾಗಲ್‌ ರಷ್ಯಾದ ಶಕ್ತಿಶಾಲಿ ಹೊಡೆತಗಳ ಕರೆನ್‌ ಕಶನೋವ್‌ ಅವರ ಕೈಯಲ್ಲಿ 2-6, 0-6, 6-7 (5) ಸೆಟ್‌ಗಳಿಂದ ಸೋತು ನಿರ್ಗಮಿಸಿದರು.

ನಾಗಲ್‌ ಈ ಮೊದಲು ಆಸ್ಟ್ರೇಲಿಯನ್‌ ಓಪನ್‌ನ ಮೊದಲ ಸುತ್ತಿನಲ್ಲಿ ವಿಶ್ವದ 31ನೇ ರ್‍ಯಾಂಕಿನ ಅಲೆಕ್ಸಾಂಡರ್‌ ಬಬ್ಲಿಕ್‌ ಅವರನ್ನು ಸೋಲಿಸಿ ಅಚ್ಚರಿಗೊಳಿಸಿದ್ದರು. ಆದೇ ನಿರ್ವಹಣೆಯನ್ನು ಇಲ್ಲಿ ತೋರ್ಪಡಿಸಲು ನಾಗಲ್‌ ಅವರಿಂದ ಸಾಧ್ಯವಾಗಲಿಲ್ಲ. ಪಂದ್ಯ ಆರಂಭವಾಗುವ ಮೊದಲು ಮಳೆ ಸುರಿದಿದ್ದ ಕಾರಣ ಅಂಗಣದಲ್ಲಿ ಚೆಂಡು ನಿಧಾನವಾಗಿ ಸಾಗುತ್ತಿತ್ತು. ಪಂದ್ಯದ ನಡುವೆಯೂ ಮಳೆ ತೊಂದರೆ ನೀಡಿದ್ದರಿಂದ 21 ನಿಮಿಷ ಆಟ ಸ್ಥಗಿತಗೊಂಡಿತ್ತು.

ಟಾಪ್ ನ್ಯೂಸ್

akhilesh

Reservation ಮೂಲ ವಿರುದ್ಧವೇ ಬಿಜೆಪಿ ಕೆಲಸ: ಅಖೀಲೇಶ್‌ ಯಾದವ್‌

Madikeri ವಿರಾಜಪೇಟೆ: ಡೆಂಗ್ಯೂ ಪ್ರಕರಣ ಹೆಚ್ಚಳ

Sullia ಜಾಲ್ಸೂರು: ಪತ್ನಿಗೆ ಚೂರಿಯಿಂದ ಹಲ್ಲೆ

Sullia ಜಾಲ್ಸೂರು: ಪತ್ನಿಗೆ ಚೂರಿಯಿಂದ ಹಲ್ಲೆ

Vandseಬೆಳ್ಳಾಲ ದುರಂತ: ಮಕ್ಕಳಿಬ್ಬರ ಅಂತ್ಯಸಂಸ್ಕಾರ: ತಾಯಿ ಚೇತರಿಕೆ,ಆಸ್ಪತ್ರೆಯಿಂದ ಬಿಡುಗಡೆ

Vandseಬೆಳ್ಳಾಲ ದುರಂತ: ಮಕ್ಕಳಿಬ್ಬರ ಅಂತ್ಯಸಂಸ್ಕಾರ: ತಾಯಿ ಚೇತರಿಕೆ,ಆಸ್ಪತ್ರೆಯಿಂದ ಬಿಡುಗಡೆ

Modi Interview

Constitution ಮೇಲೆ ನಂಬಿಕೆಗೆ ಧನ್ಯವಾದ: ಮನ್‌ ಕೀ ಬಾತ್‌ನಲ್ಲಿ ಮೋದಿ ಹೇಳಿದ್ದೇನು?

Sharad pawar (2)

Maharashtra ಚುನಾವಣೆಯಲ್ಲಿ MVA ಜತೆಗೂಡಿ ಕಣಕ್ಕೆ: ಶರದ್‌ ಘೋಷಣೆ

1-jha

Bihar, ಬಳಿಕ ಝಾರ್ಖಂಡ್‌ನ‌ಲ್ಲಿ ಸೇತುವೆಯೊಂದರ ಗರ್ಡರ್‌ ಕುಸಿತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

pragyananda

Superbet Chess; 4ನೇ ಸುತ್ತಿನಲ್ಲಿ ಪ್ರಜ್ಞಾನಂದಗೆ ಗೆಲುವು

1-dsdsadasdas

Olympics ಆ್ಯತ್ಲೀಟ್ಸ್‌  ಸಿದ್ಧ:  ಪ್ರಧಾನಿ ಮೋದಿ

1-qwewq-wq-ew

T20 World Cup ಚಾಂಪಿಯನ್ಸ್ ಗೆ ಭರ್ಜರಿ ಬಹುಮಾನ ಘೋಷಿಸಿದ ಬಿಸಿಸಿಐ

1-jadeja

T20 ಅಂತಾರಾಷ್ಟ್ರೀಯ ಕ್ರಿಕೆಟಿಗೆ ನಿವೃತ್ತಿ ಘೋಷಿಸಿದ ರವೀಂದ್ರ ಜಡೇಜಾ

T20 World Cup: ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಸಿದ್ದ 5 ಪಂದ್ಯಗಳು

T20 World Cup: ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಸಿದ್ದ 5 ಪಂದ್ಯಗಳು

MUST WATCH

udayavani youtube

ಸಂಸದೆ ಪ್ರಿಯಾಂಕಾ ಅಭಿನಂದನಾ‌ ಸಮಾವೇಶದಲ್ಲಿ ಸತೀಶ ಜಾರಕಿಹೊಳಿ ಭಾಷಣ

udayavani youtube

Congress ಪಾರ್ಟಿಯ ಯಾರೂ ನಮ್ಮನ್ನು ಸಂಪರ್ಕಿಸಿಲ್ಲ ಬಸವರಾಜ ಬೊಮ್ಮಾಯಿ

udayavani youtube

ರುಚಿ ರುಚಿ ಮನೆ ತಿಂಡಿ ಬೇಕು ಅನ್ನೋರು ವಿವಿ ಪುರಂಗೆ ಹೋಗಲೇಬೇಕು

udayavani youtube

ವಿಧಿಯಾಟಕ್ಕೆ ಬಲಿಯಾದ ಅಂಧರ ಪುಟ್ ಬಾಲ್ ತಂಡದ ಕ್ಯಾಪ್ಟನ್

udayavani youtube

ಮಾತು ಬರದ ಮಗುವಿಗೆ ಮಾತು ಬರಿಸಿದ ಕಾಪು ಮಾರಿಯಮ್ಮ | ಕಾಪುವಿನ ಅಮ್ಮನ ಪವಾಡ

ಹೊಸ ಸೇರ್ಪಡೆ

akhilesh

Reservation ಮೂಲ ವಿರುದ್ಧವೇ ಬಿಜೆಪಿ ಕೆಲಸ: ಅಖೀಲೇಶ್‌ ಯಾದವ್‌

Madikeri ವಿರಾಜಪೇಟೆ: ಡೆಂಗ್ಯೂ ಪ್ರಕರಣ ಹೆಚ್ಚಳ

Sullia ಜಾಲ್ಸೂರು: ಪತ್ನಿಗೆ ಚೂರಿಯಿಂದ ಹಲ್ಲೆ

Sullia ಜಾಲ್ಸೂರು: ಪತ್ನಿಗೆ ಚೂರಿಯಿಂದ ಹಲ್ಲೆ

Vandseಬೆಳ್ಳಾಲ ದುರಂತ: ಮಕ್ಕಳಿಬ್ಬರ ಅಂತ್ಯಸಂಸ್ಕಾರ: ತಾಯಿ ಚೇತರಿಕೆ,ಆಸ್ಪತ್ರೆಯಿಂದ ಬಿಡುಗಡೆ

Vandseಬೆಳ್ಳಾಲ ದುರಂತ: ಮಕ್ಕಳಿಬ್ಬರ ಅಂತ್ಯಸಂಸ್ಕಾರ: ತಾಯಿ ಚೇತರಿಕೆ,ಆಸ್ಪತ್ರೆಯಿಂದ ಬಿಡುಗಡೆ

Modi Interview

Constitution ಮೇಲೆ ನಂಬಿಕೆಗೆ ಧನ್ಯವಾದ: ಮನ್‌ ಕೀ ಬಾತ್‌ನಲ್ಲಿ ಮೋದಿ ಹೇಳಿದ್ದೇನು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.