Kasaragod ಸಹಿತ 3 ಜಿಲ್ಲೆಗಳ ವಿದ್ಯುತ್ ಸಮಸ್ಯೆ; 1,023 ಕೋಟಿ ರೂ. ವಿಶೇಷ ಪ್ಯಾಕೇಜ್
Team Udayavani, May 28, 2024, 11:28 PM IST
ಕಾಸರಗೋಡು: ಪದೇಪದೆ ವಿದ್ಯುತ್ ಪೂರೈಕೆ ಮೊಟಕುಗೊಳ್ಳುತ್ತಿರುವುದು ಹಾಗೂ ವಿದ್ಯುತ್ ಸಾಮಗ್ರಿಗಳ ಸಮಸ್ಯೆಗಳನ್ನು ಎದುರಿಸುತ್ತಿರುವ ಕಾಸರಗೋಡು, ಮಲಪ್ಪುರಂ ಮತ್ತು ಇಡುಕ್ಕಿ ಜಿಲ್ಲೆಗಳಿಗೆ ಒಟ್ಟು 1,023.04 ಕೋಟಿ ರೂ. ವಿಶೇಷ ಪ್ಯಾಕೇಜ್ ಜಾರಿಗೊಳಿಸಲು ರಾಜ್ಯ ವಿದ್ಯುನ್ಮಂಡಳಿ ತೀರ್ಮಾನಿಸಿದೆ.
ಇದರಂತೆ ಕಾಸರಗೋಡು ಜಿಲ್ಲೆಗೆ 394.15 ಕೋಟಿ ರೂ., ಮಲಪ್ಪುರಂಗೆ 410.93 ಕೋಟಿ ರೂ. ಮತ್ತು ಇಡುಕ್ಕಿ ಜಿಲ್ಲೆಗೆ 217.96 ಕೋಟಿ ರೂ. ಬಿಡುಗಡೆ ಮಾಡಿದೆ. ಇದರಡಿ 11 ಕೆ.ವಿ. ವಿದ್ಯುತ್ ಲೈನ್ ಅಳವಡಿಕೆ, ಸಬ್ ಸ್ಟೇಷನ್ಗಳ ನಿರ್ಮಾಣ, ಹೆಚ್ಚು ಸಾಮರ್ಥ್ಯದ ಟ್ರಾನ್ಸ್ಫಾರ್ಮರ್ಗಳನ್ನು ಸ್ಥಾಪಿಸುವುದು ಮೊದಲಾದ ಹಲವು ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಲಾಗುವುದು.
ವಿದ್ಯುತ್ ಲೈನ್, ಟ್ರಾನ್ಸ್ಫಾರ್ಮರ್ಗಳಲ್ಲಿ ಅಧಿಕ ವಿದ್ಯುತ್ ಲೋಡ್ ಮತ್ತು ಭೌಗೋಳಿಕ ಸಮಸ್ಯೆ ಇತ್ಯಾದಿಗಳನ್ನು ಪರಿಶೀಲಿಸಿ ಈ ಪ್ಯಾಕೇಜ್ಗೆ ರೂಪಿಸಲಾಗಿದೆ. ಇದು ವಿದ್ಯುತ್ ಇಲಾಖೆ ರೂಪು ನೀಡಿರುವ ವಿಶೇಷ ಯೋಜನೆಯಾಗಿರುವುದರಿಂದಾಗಿ ಅದಕ್ಕಾಗಿ ವಿದ್ಯುನ್ಮಂಡಳಿಯ ನಿಧಿಯಿಂದ ಅಥವಾ ಸಾಲದ ಮೂಲಕ ಅಗತ್ಯದ ಮೊತ್ತ ಕಂಡುಕೊಳ್ಳಲಾಗುವುದು.
ಆದರೆ ಪ್ರಸ್ತುತ ಯೋಜನೆ ಕೇಂದ್ರ ಇಂಧನ ಸಚಿವಾಲಯದ ಆಶ್ರಯದಲ್ಲಿರುವ ಆರ್ಡಿಎಸ್ಎಸ್ ಯೋಜನೆಗೆ ಒಳಪಟ್ಟಿಲ್ಲ. ಆದ್ದರಿಂದ ರೂರಲ್ ಎಲೆಕ್ಟ್ರಿಫಿಕೇಶನ್ ಕಾರ್ಪೊರೇಶನ್ ಲಿಮಿಟೆಡ್ (ಗ್ರಾಮೀಣ ವಿದ್ಯುದೀಕರಣ ನಿಗಮ ನಿಯಮಿತ) ಸೇರಿದಂತೆ ಇಂಧನ ವಲಯದಲ್ಲಿ ಕಾರ್ಯವೆಸಗುತ್ತಿರುವ ಕೇಂದ್ರ ಸಂಸ್ಥೆಗಳಿಂದ ಈ ಯೋಜನೆಗಾಗಿ ಸಾಲ ಪಡೆಯಬೇಕಾಗಿ ಬರಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
BBK11: ಮೂರನೇ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ʼಫೈಯರ್ ಬ್ರ್ಯಾಂಡ್ʼ ಎಂಟ್ರಿ
Hunsur: ಹಂದಿಫಾರ್ಮ್ ನಲ್ಲಿ ಕಾರ್ಮಿಕನಿಂದ ಮ್ಯಾನೇಜರ್ ಬರ್ಬರ ಹ*ತ್ಯೆ
MUDA Case: ಸಿದ್ದರಾಮಯ್ಯ 2011ರ ಹೇಳಿಕೆ ವಿಡಿಯೋ ಹಾಕಿ ಟಾಂಗ್ ಕೊಟ್ಟ ಸ್ನೇಹಮಯಿ ಕೃಷ್ಣ!
Shiruru ದುರಂತ; ಹುಟ್ಟೂರಲ್ಲಿ ಅರ್ಜುನ್ ಅಂತಿಮ ವಿಧಿ: ಹರಿದು ಬಂದ ಜನಸಾಗರ
Food street ನಲ್ಲಿ ಅರೆಬಟ್ಟೆಯಲ್ಲಿ ಸುತ್ತಾಡಿದ ಯುವತಿ ವಿರುದ್ಧ ಪ್ರಕರಣ ದಾಖಲು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.