Odisha; ನಡುಗುತ್ತಿದ್ದ ಪಟ್ನಾಯಕ್ ಅವರ ಕೈ ಎಳೆದ ಪಾಂಡ್ಯನ್: ಬಿಜೆಪಿಯಿಂದ ಲೇವಡಿ
ಸಿಎಂ ಮಾಜಿ ಆಗುತ್ತಾರೆ: ಅಮಿತ್ ಶಾ ಭವಿಷ್ಯ
Team Udayavani, May 29, 2024, 6:30 AM IST
ಭುವನೇಶ್ವರ್: ಸಿಎಂ ನವೀನ್ ಪಟ್ನಾಯಕ್ ಅವರ ಚುನಾವಣ ಭಾಷಣವೊಂದರ ವೀಡಿಯೋ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಭಾಷಣ ಮಾಡುವ ವೇಳೆ ನಡುಗುತ್ತಿದ್ದ ಪಟ್ನಾಯಕ್ ಅವರ ಕೈಯನ್ನು ಬಿಜೆಡಿ ನಾಯಕ ವಿಕೆ ಪಾಂಡ್ಯನ್ ಜನರಿಗೆ ಕಾಣಬಾರದೆಂದು ಒಳಗೆ ಎಳೆದರು.
ಪಾಂಡ್ಯನ್ ಕೇವಲ ಕೈ ಎಳೆದಿಲ್ಲ, ಅಧಿಕಾರ ಎಳೆದುಕೊಳ್ಳುವ ಹಾಗಿದೆ. ಪಟ್ನಾಯಕ್ ಅವರಿಗೆ ಈ ವಯಸ್ಸಿನಲ್ಲೂ ಬಿಜೆಡಿ ಶ್ರಮ ನೀಡುತ್ತಿರುವುದು ವಿಪರ್ಯಾಸ. ಅವರಿಗೆ ಬೀಳ್ಕೊಡುಗೆ ನೀಡಬೇಕು ಎಂದು ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಟೀಕಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಒಡಿಶಾ ಸಿಎಂ ಪಟ್ನಾಯಕ್, ನನ್ನ ಕೈ ಕುರಿತು ಮಾತನಾಡಿ ಬಿಜೆಪಿ ಅನವಶ್ಯಕ ವಿವಾದ ಸೃಷ್ಟಿಸುತ್ತಿದೆ. ಈ ಆಟ ನಡೆಯುವುದಿಲ್ಲ ಎಂದು ಹೇಳಿದ್ದಾರೆ.
Just note how Pandiyan is using Naveen Patnaik for power grab pic.twitter.com/izJ1gPJdw3
— Alok Bhatt (Modi Ka Parivar) (@alok_bhatt) May 28, 2024
ಸಿಎಂ ಮಾಜಿ ಆಗುತ್ತಾರೆ: ಅಮಿತ್ ಶಾ ಭವಿಷ್ಯ
ಭದ್ರಕ್/ಜಾಜಪುರ್: ಜೂನ್ 4ರ ಚುನಾವಣೆ ಫಲಿ ತಾಂಶದಲ್ಲಿ ಒಡಿಶಾ ಸಿಎಂ ನವೀನ್ ಪಟ್ನಾಯಕ್ಗೆ ಹಿನ್ನಡೆಯಾಗಲಿದೆ. ಬಿಜೆಪಿ ಒಡಿಶಾದಲ್ಲಿ 75 ವಿಧಾನಸಭಾ ಕ್ಷೇತ್ರ ಗೆಲ್ಲುವುದ ರೊಂದಿಗೆ ಸರಕಾರ ರಚಿಸಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿಶ್ವಾಸ ವ್ಯಕ್ತಪಡಿ ಸಿದ್ದಾರೆ.
ಚುನಾವಣೆ ರ್ಯಾಲಿ ಯಲ್ಲಿ ಮಾತನಾಡಿ, ಒಡಿಶಾದ 21 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ 17 ಸ್ಥಾನ ಗೆಲ್ಲಲಿದೆ. ಒಡಿಶಾದಲ್ಲಿ ನಿರುದ್ಯೋಗ ಸಮಸ್ಯೆಯಿಂದ ಯುವಕರು ಬೇರೆ ರಾಜ್ಯಗಳಿಗೆ ಹೋಗುತ್ತಿದ್ದಾರೆ. ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ, ಇಲ್ಲಿ ಉದ್ಯಮಗಳನ್ನು ಸ್ಥಾಪಿಸಿ, ಯುವಕರಿಗೆ ಉದ್ಯೋಗ ನೀಡುತ್ತೇವೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Modi 3.0: ಮೊದಲ ದಿನದ ಕಾರ್ಯಾರಂಭದಲ್ಲಿ PM ಕಿಸಾನ್ ಕಡತಕ್ಕೆ ಸಹಿ ಹಾಕಿದ ಪ್ರಧಾನಿ ಮೋದಿ
Modi 3.0: ದಯವಿಟ್ಟು ನನಗೆ ಕೇಂದ್ರ ಸಚಿವ ಸ್ಥಾನ ಬೇಡ…ರಾಜೀನಾಮೆ ಕೊಡ್ತೇನೆ: ಸುರೇಶ್ ಗೋಪಿ!
Richest ; ಮೋದಿ ಸಂಪುಟಕ್ಕೆ ಸೇರ್ಪಡೆಯಾದ ಟಿಡಿಪಿಯ ಅತ್ಯಂತ ಶ್ರೀಮಂತ ಸಂಸದ
LokSabha; ಕೆಲವೊಮ್ಮೆ ಸರ್ಕಾರಗಳು ಒಂದೇ ದಿನಕ್ಕೆ ಉರುಳುತ್ತದೆ…: ದೊಡ್ಡ ಸುಳಿವು ನೀಡಿದ ಮಮತಾ
Modi 3.0; ಪ್ರಮಾಣ ವಚನಕ್ಕೂ ಮುನ್ನ ಮಹಾತ್ಮ ಗಾಂಧಿ, ವಾಜಪೇಯಿ ಸ್ಮಾರಕಕ್ಕೆ ಮೋದಿ ನಮನ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.