![Panipuri ಅಸುರಕ್ಷಿತ ಪಾನಿಪೂರಿ ನಿಷೇಧ: ಇಂದು ಅಂತಿಮ ನಿರ್ಣಯ](https://www.udayavani.com/wp-content/uploads/2024/07/PANIPURI-415x291.jpg)
AUSvsNAM; ಆಟಗಾರರ ಕೊರತೆ: ಫೀಲ್ಡಿಂಗ್ ಮಾಡಿದ ಆಸೀಸ್ ಕೋಚ್, ಆಯ್ಕೆ ಸಮಿತಿ ಮುಖ್ಯಸ್ಥ
Team Udayavani, May 29, 2024, 8:51 AM IST
![Shortage of players: Aussies coach, head of selection committee fielded against Namibia](https://www.udayavani.com/wp-content/uploads/2024/05/aust-620x342.jpg)
ಟ್ರಿನಿಡಾಡ್: ಐಸಿಸಿ ಟಿ20 ವಿಶ್ವಕಪ್ ತಯಾರಿ ಆರಂಭವಾಗಿದೆ. ಅಭ್ಯಾಸ ಪಂದ್ಯಗಳು ಈಗಾಗಲೇ ಆರಂಭವಾಗಿದ್ದು, ಆಸ್ಟ್ರೇಲಿಯಾ ತಂಡವು ಮಂಗಳವಾರ ನಮೀಬಿಯಾ ವಿರುದ್ಧ ಜಯ ಗಳಿಸಿದೆ. ಆದರೆ ಆಸ್ಟ್ರೇಲಿಯಾ ತಂಡದಲ್ಲಿ ಆಟಗಾರರ ಕೊರತೆಯ ಕಾರಣ ಕೋಚ್ ಮತ್ತು ಆಯ್ಕೆಗಾರರ ಮಂಡಳಿ ಮುಖ್ಯಸ್ಥರು ಫೀಲ್ಡಿಂಗ್ ಮಾಡಿದ್ದು ವಿಶೇಷ.
ಆಸ್ಟ್ರೇಲಿಯ ಲೈನ್-ಅಪ್ ನ ಕೆಲ ಆಟಗಾರರು ತಂಡ ಕೂಡಿಕೊಂಡಿಲ್ಲ ಗ್ಲೆನ್ ಮ್ಯಾಕ್ಸ್ವೆಲ್, ಟ್ರಾವಿಸ್ ಹೆಡ್, ಮಿಚೆಲ್ ಸ್ಟಾರ್ಕ್ ಮತ್ತು ಪ್ಯಾಟ್ ಕಮಿನ್ಸ್ ಐಪಿಎಲ್ ಪ್ಲೇಆಫ್ಗಳ ಭಾಗವಾಗಿದ್ದ ಕಾರಣ ವಿಶ್ರಾಂತಿ ಸಮಯ ಬಯಸಿದ್ದಾರೆ. ನಾಯಕ ಮಾರ್ಶ್ ಕೂಡಾ ಗಾಯಗೊಂಡಿದ್ದಾರೆ. ಈ ವಿಷಯದ ಬಗ್ಗೆ ಮಾತನಾಡಿದ ಮಾರ್ಶ್, ಅಭ್ಯಾಸ ಪಂದ್ಯಕ್ಕಿಂತ ಆಸ್ಟ್ರೇಲಿಯಾ ಆಟಗಾರರ ವಿರಾಮಕ್ಕೆ ಆದ್ಯತೆ ನೀಡಲಿದೆ ಎಂದು ಹೇಳಿದ್ದಾರೆ.
ಆಸೀಸ್ ತಂಡದ ಆಯ್ಕೆ ಸಮಿತಿ ಮುಖ್ಯಸ್ಥ- ಮಾಜಿ ನಾಯಕ 41 ವರ್ಷದ ಜಾರ್ಜ್ ಬೈಲಿ, ಮುಖ್ಯ ಕೋಚ್ ಆ್ಯಂಡ್ರ್ಯೂ ಮೆಕ್ ಡೊನಾಲ್ಡ್ (42 ವರ್ಷ), ಫೀಲ್ಡಿಂಗ್ ಕೋಚ್ ಆಂಡ್ರೆ ಬೊರೊವೆಕ್ (46 ವರ್ಷ) ಮತ್ತು ಬ್ಯಾಟಿಂಗ್ ಕೋಚ್ ಬ್ರಾಡ್ ಹಾಡ್ಜ್ (49 ವರ್ಷ) ಸಂಪೂರ್ಣ 20 ಓವರ್ ಗಳ ಕಾಲ ಫೀಲ್ಡಿಂಗ್ ಮಾಡಿದ್ದಾರೆ.
12ನೇ ಓವರ್ನಲ್ಲಿ 50 ರನ್ ಗೆ ಆರು ವಿಕೆಟ್ ಉರುಳಿದ್ದರೂ ನಮೀಬಿಯಾವನ್ನು ಆಲೌಟ್ ಮಾಡಲು ಆಸ್ಟ್ರೇಲಿಯಾಕ್ಕೆ ಸಾಧ್ಯವಾಗಲಿಲ್ಲ. ಝೇನ್ ಗ್ರೀನ್, ಮಲನ್ ಕ್ರುಗರ್ ಮತ್ತು ಡೇವಿಡ್ ವೀಸ್ ಅವರ ಸಹಾಯದಿಂದ ನಮೀಬಿಯಾ 20 ಓವರ್ಗಳಲ್ಲಿ 119/9 ಗಳಿಸಿತು. ಜೋಶ್ ಹೇಜಲ್ ವುಡ್ ಅವರು ನಾಲ್ಕು ಓವರ್ ಗಳಲ್ಲಿ ಕೇವಲ ಐದು ರನ್ ನೀಡಿ ಎರಡು ವಿಕೆಟ್ ಕಿತ್ತರು. ನಾಲ್ಕರಲ್ಲಿ ಮೂರು ಮೇಡನ್ ಓವರ್.
9 Players + chief selector + assistant coach 🙄
Australia played their first warm-up match against Namibia with nine players, plus chief selector George Bailey and assistant coach Andre Borovec. #sportspavilionlk #AUSvsNAM #Warmupmatches #T20WorldCup #warmup #danushkaaravinda pic.twitter.com/Pd1VgaTzrO
— DANUSHKA ARAVINDA (@DanuskaAravinda) May 29, 2024
ಆಸ್ಟ್ರೇಲಿಯಾ ಕೇವಲ 10 ಓವರ್ ಗಳಲ್ಲಿ ಗುರಿ ಬೆನ್ನತ್ತಿತು. ಡೇವಿಡ್ ವಾರ್ನರ್ 21 ಎಸೆತಗಳಲ್ಲಿ ಅಜೇಯ 54 ರನ್ ಗಳಿಸಿದರು.
ಟಾಪ್ ನ್ಯೂಸ್
![Panipuri ಅಸುರಕ್ಷಿತ ಪಾನಿಪೂರಿ ನಿಷೇಧ: ಇಂದು ಅಂತಿಮ ನಿರ್ಣಯ](https://www.udayavani.com/wp-content/uploads/2024/07/PANIPURI-415x291.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![Panipuri ಅಸುರಕ್ಷಿತ ಪಾನಿಪೂರಿ ನಿಷೇಧ: ಇಂದು ಅಂತಿಮ ನಿರ್ಣಯ](https://www.udayavani.com/wp-content/uploads/2024/07/PANIPURI-150x105.jpg)
Panipuri ಅಸುರಕ್ಷಿತ ಪಾನಿಪೂರಿ ನಿಷೇಧ: ಇಂದು ಅಂತಿಮ ನಿರ್ಣಯ
![Daily Horoscope: ಉದ್ಯೋಗ ಹುಡುಕುವವರಿಗೆ ಶುಭಸೂಚನೆ ಸಿಗಲಿದೆ](https://www.udayavani.com/wp-content/uploads/2024/06/Untitled-1-42-150x90.jpg)
Daily Horoscope: ಉದ್ಯೋಗ ಹುಡುಕುವವರಿಗೆ ಶುಭಸೂಚನೆ ಸಿಗಲಿದೆ
![Warning… ಶವರ್ಮಾದಲ್ಲೂ ಬ್ಯಾಕ್ಟೀರಿಯಾ ಈಸ್ಟ್ ! ತಯಾರಕರ ವಿರುದ್ಧ ಕಾನೂನು ಕ್ರಮ](https://www.udayavani.com/wp-content/uploads/2024/07/shawarma-1-150x88.jpg)
Warning… ಶವರ್ಮಾದಲ್ಲೂ ಬ್ಯಾಕ್ಟೀರಿಯಾ ಈಸ್ಟ್ ! ತಯಾರಕರ ವಿರುದ್ಧ ಕಾನೂನು ಕ್ರಮ
![CM ಸಿದ್ದು, ಡಿಕೆಶಿ ಕರ್ನಾಟಕದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಇದ್ದಂತೆ: ವಚನಾನಂದ ಶ್ರೀ](https://www.udayavani.com/wp-content/uploads/2024/06/siddu-dk-150x84.jpg)
CM ಸಿದ್ದು, ಡಿಕೆಶಿ ಕರ್ನಾಟಕದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಇದ್ದಂತೆ: ವಚನಾನಂದ ಶ್ರೀ
![Mangaluru ವಿಮಾನ ನಿಲ್ದಾಣ: ಪರಿಹಾರ ಕಾಣದ ಕಾರ್ಗೋ ಸಮಸ್ಯೆ](https://www.udayavani.com/wp-content/uploads/2024/07/MAN-150x84.jpg)
Mangaluru ವಿಮಾನ ನಿಲ್ದಾಣ: ಪರಿಹಾರ ಕಾಣದ ಕಾರ್ಗೋ ಸಮಸ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.