Desi Swara: ಮ್ಯೂನಿಕ್‌ ನಲ್ಲಿ ಭಾರತೀಯ ನೃತ್ಯಗಳ ಅನಾವರಣ

ಜರ್ಮನಿ: ನಿತ್ಯಾ ಆರ್ಟ್ಸ್ ಸೆಂಟರ್‌

Team Udayavani, May 29, 2024, 10:23 AM IST

Desi Swara: ಮ್ಯೂನಿಕ್‌ ನಲ್ಲಿ ಭಾರತೀಯ ನೃತ್ಯಗಳ ಅನಾವರಣ

ಮ್ಯೂನಿಕ್‌: ಜರ್ಮನಿಯ ಮುನಿಚ್‌ನಲ್ಲಿ ಮೇ 4ರಂದು ನಾಟ್ಯ ಫೆಸ್ಟ್‌ 2024 ವಿಶೇಷವಾಗಿ ಭಾರತೀಯ ಶಾಸ್ತ್ರೀಯ ನೃತ್ಯ ಕಲೆಗಳ ಪ್ರದರ್ಶನ ಸಂಭ್ರಮದಿಂದ, ಯಶಸ್ವಿಯಾಗಿ ನಡೆಯಿತು. ಇದನ್ನು ಮ್ಯೂನಿಕ್‌ನ ನಿತ್ಯಾ ಆರ್ಟ್ಸ್ ಸೆಂಟರ್‌ ವತಿಯಿಂದ Consulate General Of India, Munich ಇವರ ಸಹಯೋಗದೊಂದಿಗೆ ಆಯೋಜಿಸಲಾಗಿತ್ತು.

ವಿಶ್ವ ವಿಖ್ಯಾತ ಭರತನಾಟ್ಯ ಕಲಾವಿದೆ, ವಸುಂಧರಾ ಶೈಲಿಯ ಪ್ರವರ್ತಕಿ, ಡಾ| ವಸುಂಧರಾ ದೊರೆಸ್ವಾಮಿ ಅವರು ಮೂರನೇ ವರ್ಷದ ನಾಟ್ಯ ಫೆಸ್ಟ್‌ ಕಾರ್ಯಕ್ರಮದಲ್ಲಿ ಗಂಗಾ ಏಕವ್ಯಕ್ತಿ ರೂಪಕ ಪ್ರದರ್ಶಿಸಿದರು. ಅವರ ಅಪಾರವಾದ ಅನುಭವ ಹಾಗೂ ನೃತ್ಯದ ಪರಿಣಿತಿ, ಬಿಡುವಿಲ್ಲದೆ 70 ನಿಮಿಷಗಳು ವೇದಿಕೆಯ ಮೇಲೆ ಪ್ರಸ್ತುತಪಡಿಸಿದ ಕಲೆ, ಶೇ. 80ಕ್ಕಿಂತ ಹೆಚ್ಚು ಇದ್ದ ವಿದೇಶೀ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತ್ತು.ಪ್ರೇಕ್ಷಕರ ಚಪ್ಪಾಳೆಯ ಸುರಿಮಳೆ ಭಾರತದ ಶ್ರೇಷ್ಠ ನೃತ್ಯಕಲೆ ಯೂರೋಪ್‌ನಲ್ಲಿ ಜನಮನ್ನಣೆ ಗಳಿಸುತ್ತಿದೆ ಎಂಬ ಅನಿಸಿಕೆಗೆ ಅವಕಾಶ ಕಲ್ಪಿಸಿದೆ.

ಕಳೆದ ಮೂರು ವರ್ಷಗಳಿಂದ ನಿತ್ಯಾ ಆರ್ಟ್ಸ್ ಸೆಂಟರ್‌ ಮ್ಯೂನಿಕ್‌ ನಗರದಲ್ಲಿ ಅತ್ಯುತ್ತಮ ಮಟ್ಟದ ಭಾರತನಾಟ್ಯವಷ್ಟೇ ಅಲ್ಲದೇ ಅತ್ಯಂತ ವೈವಿಧ್ಯಮಯವಾದ ಇತರ ಭಾರತೀಯ ಶಾಸ್ತ್ರೀಯ ನೃತ್ಯಪ್ರಕಾರಗಳನ್ನು ಇಲ್ಲಿನ ಸಂಸ್ಕೃತಿಗೆ ಮುಖಾಮುಖೀಯಾಗಿಸುವ ವಿಶಿಷ್ಟ ಸಾಹಸವನ್ನು ಮಾಡುತ್ತಿದೆ. ಇಂದು ಜರ್ಮನಿಯಲ್ಲಿ ಭಾರತೀಯ ಶಾಸ್ತ್ರೀಯ ನೃತ್ಯ ಕಲಿತ ಅನೇಕ ಭಾರತೀಯ ಮತ್ತು ವಿದೇಶಿ ನೃತ್ಯಗಾರರಿದ್ದಾರೆ. ಹಾಗೆಯೇ ಇವುಗಳ ಬಗ್ಗೆ ತೀವ್ರ ಆಸಕ್ತಿ ಹಾಗೂ ಕುತೂಹಲ ಹೊಂದಿರುವ ಸಾಕಷ್ಟು ಜನರಿದ್ದಾರೆ. ಉತ್ತಮವಾದ ವೇದಿಕೆ ಹಾಗೂ ಗುಣಮಟ್ಟದ ಕಾರ್ಯಕ್ರಮಗಳು ಶಾಸ್ತ್ರೀಯ ಕಲೆಗಳಿಗೆ ತೀರಾ ಅಪರೂಪ. ಹೀಗಾಗಿ ನಾಟ್ಯ ಫೆಸ್ಟ್‌ ಮೂಲಕ ಭಾರತದ ಶ್ರೇಷ್ಠ ಕಲಾವಿದರ ಪ್ರದರ್ಶನದೊಂದಿಗೆ ಮ್ಯೂನಿಕ್‌ನಲ್ಲಿ ನೆಲೆಸಿರುವ ನೃತ್ಯ ಕಲಾವಿದರಿಗೂ ಒಂದು ವೇದಿಕೆ ಸೃಷ್ಟಿಸಬೇಕು.

ಒಂದು ಅತ್ಯುತ್ತಮವಾದ ಕಾರ್ಯಕ್ರಮದ ಮೂಲಕ ನಮ್ಮ ನೃತ್ಯ ಪರಂಪರೆಗಳನ್ನು ಇಲ್ಲಿನ ಜನರಿಗೆ ಪ್ರಸ್ತುತಪಡಿಸಬೇಕು ಎಂಬುದು ನನ್ನ ಉದ್ದೇಶವಾಗಿದೆ ಎಂದು ನಿತ್ಯಾ ಆಟ್ಸ್‌ ಸೆಂಟರ್‌ ಸಂಸ್ಥಾಪಕಿ ಶುಭದಾ ಸುಬ್ರಹ್ಮಣ್ಯಮ್‌ ಹೇಳಿದರು.
ನಾಟ್ಯಫೆಸ್ಟ್‌ 2024ರ ಕಾರ್ಯಕ್ರಮವನ್ನು ಕಾನ್ಸುಲೇಟ್‌ ಜನರಲ್‌ ಆಫ್ ಇಂಡಿಯಾದ ಎಚ್‌ಒಸಿ ಆಗಿರುವ ರಾಜೀವ್‌ ಚಿತ್ಕಾರಾ ಅವರು ಉದ್ಘಾಟಿಸಿ ಶುಭ ಹಾರೈಸಿದರು.

ನಿತ್ಯಾ ಆರ್ಟ್ಸ್ ಸೆಂಟರ್‌ನ ಸಂಸ್ಥಾಪಕಿ ಶುಭದಾ ಸುಬ್ರಹ್ಮಣ್ಯಮ್‌ ಅವರು ಮೇಳ ಪ್ರಾಪ್ತಿ ಹಾಗೂ ಮಹಿಷಾಸುರ ಮರ್ಧಿನಿ ಸ್ತೋತ್ರವನ್ನು ಭರತನಾಟ್ಯ ಶೈಲಿಯ ವಸುಂಧರಾ ಬಾನಿಯಲ್ಲಿ ಪ್ರಸ್ತುತ ಪಡಿಸಿದರು. ಮಹಿಷಾಸುರ ವಧೆಯ ಕಥೆ ಪ್ರಸ್ತುತಿ ಪ್ರೇಕ್ಷಕರ ಮೆಚ್ಚುಗೆ ಪಡೆಯಿತು. ಇಲ್ಲಿನ ಯೂರೋಪಿಯನ್ನರು ನಡೆಸುತ್ತಿರುವ ರೇವತಿ ಅಕಾಡೆಮಿ ಆಫ್ ಡ್ಯಾನ್ಸ್‌ ವತಿಯಿಂದ ವತಿಯಿಂದ ಮೋಹಿನಿಯಾಟ್ಟಂ, ಭವಾನಿ ಡ್ಯಾನ್ಸ್‌ ಗ್ರೂಪ್‌ ವತಿಯಿಂದ ಒಡಿಸ್ಸಿ ಹಾಗೂ ಧನ್ಯಾ ಸ್ಕೂಲ್‌ ಆಫ್ ಡ್ಯಾನ್ಸ್‌ ವತಿಯಿಂದ ಕಥಕ್‌ ಶೈಲಿಯ ನೃತ್ಯಬಂಧಗಳನ್ನು ಪ್ರದರ್ಶಿಸಲಾಯಿತು. ಇಡೀ ಸಮಾರಂಭಕ್ಕೆ ಹೊಸ ವಿಶಿಷ್ಟ ಆಯಾಮವನ್ನು ನೀಡಿದ ವಿಭಿನ್ನ ಭಾರತೀಯ ನೃತ್ಯಪ್ರಕಾರಗಳ ಪ್ರದರ್ಶನವನ್ನು ಪ್ರೇಕ್ಷಕರು ಉತ್ಸಾಹದಿಂದ ಸ್ವಾಗತಿಸಿದರು.

ಮೂರು ಗಂಟೆಗಳ ಭಾರತೀಯ ಶಾಸ್ತ್ರೀಯ ನೃತ್ಯಗಳ ಕಾರ್ಯಕ್ರಮ 300ಕ್ಕೂ ಹೆಚ್ಚು ಪ್ರೇಕ್ಷಕರನ್ನು ಪೂರ್ಣ ಕಾಲ ಹಿಡಿದಿಟ್ಟುಕೊಂಡಿದ್ದು ಬಹಳ ಹೆಮ್ಮೆಯ ವಿಚಾರ ಹಾಗೆಯೇ ಯಾವುದೇ ಅಡಚಣೆಗಳಿಲ್ಲದೆ ನಿಗದಿಪಡಿಸಿದ ಕಾರ್ಯಕ್ರಮಕ್ಕೆ ನಿಷ್ಠವಾಗಿ ಸಾಗಿದ್ದರಿಂದ ಒಳ್ಳೆಯ ಅನುಭವ ಉಂಟುಮಾಡಿತು.
ವರದಿ: ರವಿ ಶಂಕರ್‌

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕತಾರ್: ಶಿಕ್ಷಕರ ದಿನಾಚರಣೆ- ಶಿಕ್ಷಕರನ್ನು ಸನ್ಮಾನಿಸಿದ ಇಂಡಿಯನ್‌ ಕಲ್ಚರಲ್‌ ಸೆಂಟರ್

ಕತಾರ್: ಶಿಕ್ಷಕರ ದಿನಾಚರಣೆ- ಶಿಕ್ಷಕರನ್ನು ಸನ್ಮಾನಿಸಿದ ಇಂಡಿಯನ್‌ ಕಲ್ಚರಲ್‌ ಸೆಂಟರ್

Dubai Green Planet: ವಿಶ್ವದ ಗಮನ ಸೆಳೆಯುವ ದುಬೈ ಗ್ರೀನ್‌ ಪ್ಲಾನೆಟ್‌ ಬೇಸಗೆ ಶಿಬಿರಾನುಭವ

Dubai Green Planet: ವಿಶ್ವದ ಗಮನ ಸೆಳೆಯುವ ದುಬೈ ಗ್ರೀನ್‌ ಪ್ಲಾನೆಟ್‌ ಬೇಸಗೆ ಶಿಬಿರಾನುಭವ

ಮೊಗವೀರ್ಸ್‌ ಬಹ್ರೈನ್‌ ಸಂಘಟನೆ;ವಿದ್ಯುಕ್ತ ಪದಗ್ರಹಣ, ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ

ಮೊಗವೀರ್ಸ್‌ ಬಹ್ರೈನ್‌ ಸಂಘಟನೆ;ವಿದ್ಯುಕ್ತ ಪದಗ್ರಹಣ, ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ

ಹೊನ್ನುಡಿ: ಜೀವನಾನುಭವ ಮುಖ್ಯ-ಭರವಸೆಯೊಂದು ಬಾಳಿನ ಆಶಾಕಿರಣವಿದ್ದಂತೆ…

ಹೊನ್ನುಡಿ: ಜೀವನಾನುಭವ ಮುಖ್ಯ-ಭರವಸೆಯೊಂದು ಬಾಳಿನ ಆಶಾಕಿರಣವಿದ್ದಂತೆ…

NRI: “ಸತ್ಕುಲ ಪ್ರಸೂತರು’ ಶ್ರೇಣಿಕೃತ ಸಮಾಜದ ಕಥನ-ಕಾದಂಬರಿ ಲೋಕಾರ್ಪಣೆ

NRI: “ಸತ್ಕುಲ ಪ್ರಸೂತರು’ ಶ್ರೇಣಿಕೃತ ಸಮಾಜದ ಕಥನ-ಕಾದಂಬರಿ ಲೋಕಾರ್ಪಣೆ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.