ಪ್ರೇರಣೆ ನೀಡಿದ ಪ್ರವಚನ-ಆನ್‌ಲೈನ್‌ನಿಂದ ಗಡಿ ದಾಟಿದ ರಾಯಚೂರು ಮಾವು!

ರಾಜ್ಯದ 180 ರೈತರು ಈ ವೆಬ್‌ಸೈಟ್‌ ನಲ್ಲಿದ್ದಾರೆ

Team Udayavani, May 29, 2024, 5:52 PM IST

ಪ್ರೇರಣೆ ನೀಡಿದ ಪ್ರವಚನ-ಆನ್‌ಲೈನ್‌ನಿಂದ ಗಡಿ ದಾಟಿದ ರಾಯಚೂರು ಮಾವು!

■ ಉದಯವಾಣಿ ಸಮಾಚಾರ
ರಾಯಚೂರು: ಒಂದು ಕಾಲದಲ್ಲಿ ಬೀದಿ ಬದಿ ದಿನವಿಡೀ ವ್ಯಾಪಾರ ಮಾಡಿದರೂ 800-1000 ರೂ. ದುಡಿಯಲು ಕಷ್ಟಪಡುತ್ತಿದ್ದ ವ್ಯಕ್ತಿ ಆನ್‌ಲೈನ್‌ ವ್ಯವಸ್ಥೆಯಿಂದ ಕೇವಲ ಎರಡು ತಿಂಗಳಲ್ಲಿ ಬರೋಬ್ಬರಿ 2,400 ಕೆ.ಜಿ ಹಣ್ಣು ಮಾರಾಟ ಮಾಡಿದ್ದಾನೆ!

ತಾಲೂಕಿನ ಮಂಡಲಗೇರಾ ಗ್ರಾಮದ ರೈತ ಗುಡಿಪಾಡು ಆಂಜನೇಯ ತನ್ನ ನಾಲ್ಕೂವರೆ ಎಕರೆ ಜಮೀನಿನಲ್ಲಿ ಉತ್ತಮ ಇಳುವರಿ ಜತೆಗೆ ಲಾಭದ ಮುಖ ನೋಡಿದ್ದಾನೆ. ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಅಭಿವೃದ್ಧಿಪಡಿಸಿದ “ಕರ್‌ ಸಿರಿ’ ಆನ್‌ಲೈನ್‌ ತಂತ್ರಾಂಶವೇ ಇದಕ್ಕೆ ಮುಖ್ಯ ಕಾರಣ. ರಾಜ್ಯದ 180 ರೈತರು ಈ ವೆಬ್‌ಸೈಟ್‌ ನಲ್ಲಿದ್ದಾರೆ. ಬೇರೆ ರೈತರು 400 ಕೆಜಿವರೆಗೆ ಮಾರಿದರೆ ಆಂಜನೇಯ 2,400 ಕೆಜಿ ಮಾರಾಟ ಮಾಡಿದ್ದಾರೆ.

ಪ್ರೇರಣೆ ನೀಡಿದ ಪ್ರವಚನ: ಐವರು ಸಹೋದರಿಯರನ್ನು ನೋಡಿಕೊಳ್ಳಬೇಕಾದ ಹೊಣೆ ಆಂಜನೇಯನ ಮೇಲಿತ್ತು. ಡಿಪ್ಲೊಮಾ ಮುಗಿಸಿ ಖಾಸಗಿ ಕಂಪನಿಯಲ್ಲಿ 25 ಸಾವಿರ ವೇತನಕ್ಕೆ ಏಳು ವರ್ಷ ಕೆಲಸ ಮಾಡಿದ್ದ. ಇಷ್ಟೆಲ್ಲ ಕಷ್ಟಪಡುವುದಕ್ಕಿಂತ ಏನಾದರೂ ಮಾಡಬೇಕೆಂಬ ಚಿಂತನೆಯಿತ್ತು. ಆಗ ಪ್ರೇರಣೆಯಾಗಿದ್ದೇ ಮಹಾರಾಷ್ಟ್ರದ ಕಾಡಸಿದ್ಧೇಶ್ವರ ಮಠದ ಶ್ರೀಗಳ ಪ್ರವಚನ. ಅವರನ್ನು ಭೇಟಿಯಾದಾಗ ನಿನ್ನಷ್ಟು ಸಿರಿವಂತ ಯಾರಿಲ್ಲ. ಅಲ್ಪ ಭೂಮಿಯಲ್ಲೇ ಸಮಗ್ರ ಕೃಷಿ ಮಾಡು ಎಂದು ಉತ್ಸಾಹ ತುಂಬಿದರು. ಅವರ ಮಾತಿನಿಂದ ಪ್ರೇರಣೆ ಪಡೆದು ಈ ಮಟ್ಟಕ್ಕೆ ಬೆಳೆದಿರುವುದು ವಿಶೇಷ.

ಸಿಂಗಾಪುರದಲ್ಲೂ ಬೇಡಿಕೆ: ಇರುವ ನಾಲ್ಕೂವರೆ ಎಕರೆ ಜಮೀನಿನಲ್ಲಿ ಬೋರ್‌ವೆಲ್‌ ಹಾಕಿಸಿದ್ದು, ಸುಮಾರು 600 ಮಾವಿನ ಮರ ನೆಡಲಾಗಿದೆ. ಬಂಗನ್‌ಪಲ್ಲಿ, ಮಲ್ಲಿಕಾ ಹಾಗೂ ಕೇಸರಿ ತಳಿಯ ಮಾವು ಬೆಳೆಯಲಾಗುತ್ತಿದೆ. ಮಾವು ಮೇಳ ನಡೆದಲ್ಲೆಲ್ಲ ಆಂಜನೇಯ ಹೋಗುತ್ತಿದ್ದರು. ಇವರ ಮಾವಿಗೆ ಉತ್ತಮ ಬೇಡಿಕೆ ಇರುವುದನ್ನು ಗಮನಿಸಿದ ಮಾವು ಮಂಡಳಿ ಅಧಿಕಾರಿಗಳು “ಕರ್‌ ಸಿರಿ’ ವೆಬ್‌ ಸೈಟ್‌ಗೆ ಸೇರಿಕೊಳ್ಳುವಂತೆ ಸಲಹೆ ನೀಡಿದರು.

ಆದರೆ, ಅದರ ಬಗ್ಗೆ ಕಿಂಚಿತ್ತೂ ಮಾಹಿತಿ ಇಲ್ಲದ ಆಂಜನೇಯ ಏನು ಮಾಡಬೇಕು ಎಂದು ತೋಚದಾದಾಗ ಅಧಿ ಕಾರಿಗಳೇ ಮಾರ್ಗದರ್ಶನ ನೀಡಿ “ಹರಿದ್ವಾರ್‌ ಆರ್ಗನಿಕ್‌ ಎಂಟರ್‌ಪ್ರೈಸೆಸ್‌’ ಮೂಲಕ “ಕರ್‌ ಸಿರಿ’ ತಂತ್ರಾಂಶದಲ್ಲಿ ಹೆಸರು
ನೋಂದಾಯಿಸಿಕೊಟ್ಟರು.

ಅದರಲ್ಲಿ ಮಾವಿನ ತಳಿಗಳ ಸಹಿತ ಎಲ್ಲ ಮಾಹಿತಿ, ವಿಳಾಸ ಪ್ರಕಟಿಸಿದ್ದಾರೆ. ಹಣ್ಣುಗಳ ರುಚಿಗೆ ಜನ ಮಾರು ಹೋಗಿದ್ದು, ಸಾಕಷ್ಟು ಬೇಡಿಕೆ ಬಂದಿವೆ. ರಾಜ್ಯದ ಬಹುತೇಕ ಜಿಲ್ಲೆಗಳಿಗೆ ಕಳುಹಿಸಲಾಗಿದೆ. ಮಂಗಳೂರಿಗೆ ಕಳುಹಿಸಿದ ಹಣ್ಣನ್ನು ಅಲ್ಲಿನ ವ್ಯಾಪಾರಿ ಸಿಂಗಾಪುರಗೆ ಕಳುಹಿಸಿದ್ದು ಸಾಕಷ್ಟು ಬೇಡಿಕೆ ಬಂದಿದೆ. ಬೆಂಗಳೂರಿನಿಂದ ಕೊಲ್ಕತ್ತಾ ಸೇರಿದಂತೆ ಬೇರೆ ಭಾಗಗಳಿಗೂ ರಫ್ತಾಗುತ್ತಿದೆ.

ಪ್ಯಾಕಿಂಗ್‌ ಕೋರಿಯರ್‌ ವೆಚ್ಚ ಸೇರಿಸಿ ಒಂದು ಕೆ.ಜಿ 150 ರೂ. ಶುಲ್ಕ ವಿಧಿಸುತ್ತಿದ್ದಾರೆ ಆಂಜನೇಯ. ಮೂರು ಕೆ.ಜಿಯಿಂದ 40 ಕೆ.ಜಿವರೆಗೆ ಮಾರಾಟ ಮಾಡಿದ್ದಾರೆ. ಅಂಚೆ ಇಲಾಖೆ ಮೂಲಕ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸಿದ್ದಾರೆ.

ಜಿಲ್ಲಾಧಿಕಾರಿ ಪ್ರೋತ್ಸಾಹ
ನೀನು ಬೆಳೆದ ಹಣ್ಣುಗಳನ್ನು ಗಣ್ಯರಿಗೆ ತಲುಪಿಸಿ ಮಾರುಕಟ್ಟೆ ಸೃಷ್ಟಿಸಿಕೊಳ್ಳುವಂತೆ ಮಹಾರಾಷ್ಟ್ರದ ಕಾಡಸಿದ್ಧೇಶ್ವರರು ಸಲಹೆ ನೀಡಿದ್ದರು. ಅದರಂತೆ ಮಾಡಿದ್ದರಿಂದ ಸ್ಥಳೀಯವಾಗಿ ಬೇಡಿಕೆ ಸೃಷ್ಟಿಯಾಯಿತು. ಜತೆಗೆ ಸಾವಯವ ಪದ್ಧತಿಯಡಿ ಬೆಳೆದ ಹಣ್ಣು ಎಂದು ಬ್ಯಾನರ್‌ ಮಾಡಿಸಿ ಡಿಸಿ ಮನೆ ಪಕ್ಕದಲ್ಲೇ ಮಾರಾಟ ಮಾಡುತ್ತಿದ್ದರು. ಇದನ್ನು ಗಮನಿಸಿದ ಆಗಿನ ಜಿಲ್ಲಾಧಿಕಾರಿ ವೆಂಕಟೇಶ ಕುಮಾರ ಖುದ್ದಾಗಿ ಬಂದು ವಿಚಾರಣೆ ಮಾಡಿದ್ದರು. ಮಾವು ಮೇಳಗಳಲ್ಲಿ ಪಾಲ್ಗೊಳ್ಳಲು ಅನುಕೂಲ ವಾಗಲು ಪ್ರಮಾಣಪತ್ರ ನೀಡಿದರು. ಅಲ್ಲಿಂದ ಆಂಜನೇಯ ಬೆಳೆದ ಮಾವುಗಳಿಗೆ ಬೇಡಿಕೆ ಹೆಚ್ಚಿತು.

ನಾನು ಬೆಳೆದ ಹಣ್ಣಿಗೆ ರಾಜ್ಯ ಮಾತ್ರವಲ್ಲದೇ ವಿದೇಶದಿಂದಲೂ ಬೇಡಿಕೆ ಇದೆ. ಈ ಬಾರಿ ಎರಡೂವರೆ ಟನ್‌ ಮಾವು ಮಾರಾಟವಾಗಿದೆ. ಇದು ನನ್ನೊಬ್ಬನಿಂದ ಸಾಧ್ಯವಾಗಿಲ್ಲ. ಕುಟುಂಬ ಸದಸ್ಯರ ಸಹಕಾರದಿಂದ ಮಾಡುತ್ತಿದ್ದೇವೆ.
ಗುಡಿಪಾಡು ಆಂಜನೇಯ, ಮಾವು ಬೆಳೆಗಾರ

ಟಾಪ್ ನ್ಯೂಸ್

Google 25th Birthday! ಗ್ಯಾರೇಜ್‌ನಿಂದ ಮೌಂಟ್‌ವಿವ್‌ವರೆಗೆ….ಗೂಗಲ್‌ ರಜತ ಸಂಭ್ರಮ

Google 25th Birthday! ಗ್ಯಾರೇಜ್‌ನಿಂದ ಮೌಂಟ್‌ವಿವ್‌ವರೆಗೆ….ಗೂಗಲ್‌ ರಜತ ಸಂಭ್ರಮ

Musheer Khan

Musheer Khan: ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡ ಯುವ ಬ್ಯಾಟರ್ ಮುಶೀರ್‌ ಖಾನ್‌

Israel: ಬೈರೂತ್‌ ಮೇಲಿನ ದಾಳಿಯಲ್ಲಿ ಹೆಜ್ಬುಲ್ಲಾ ಮುಖ್ಯಸ್ಥ ಹಸನ್‌ ಸಾವು: ಇಸ್ರೇಲ್‌ ಸೇನೆ

Israel: ಬೈರೂತ್‌ ಮೇಲಿನ ದಾಳಿಯಲ್ಲಿ ಹೆಜ್ಬುಲ್ಲಾ ಮುಖ್ಯಸ್ಥ ಹಸನ್‌ ಸಾವು: ಇಸ್ರೇಲ್‌ ಸೇನೆ

1

ʼದೇವರʼ ಸಿನಿಮಾ ನೋಡುತ್ತಿರುವಾಗ ಥಿಯೇಟರ್‌ನಲ್ಲೇ ಕುಸಿದು ಬಿದ್ದು ಮೃತಪಟ್ಟ Jr NTR ಅಭಿಮಾನಿ

ಭೀಕರ ರಸ್ತೆ ಅಪಘಾತ… ಪುರಿ ಜಗನ್ನಾಥನ ದರ್ಶನಕ್ಕೆ ಹೊರಟಿದ್ದ ನಾಲ್ವರು ಯಾತ್ರಿಕರು ಮೃತ್ಯು

Bus Overturns… ಪುರಿ ಜಗನ್ನಾಥನ ದರ್ಶನಕ್ಕೆ ಹೊರಟಿದ್ದ ನಾಲ್ವರು ಯಾತ್ರಿಕರು ಮೃತ್ಯು

India: ಮೊದಲು ಗಡಿ ಭಯೋತ್ಪಾದನೆ ನಿಲ್ಲಿಸಿ-ವಿಶ್ವಸಂಸ್ಥೆಯಲ್ಲಿ ಪಾಕ್‌ ಗೆ ಭಾರತದ ಚಾಟಿ

India: ಮೊದಲು ಗಡಿ ಭಯೋತ್ಪಾದನೆ ನಿಲ್ಲಿಸಿ-ವಿಶ್ವಸಂಸ್ಥೆಯಲ್ಲಿ ಪಾಕ್‌ ಗೆ ಭಾರತದ ಚಾಟಿ

Laapataa Ladies

Laapataa Ladies: ಕಾಣೆಯಾದ ಮಹಿಳೆಯರ ಆಸ್ಕರ್‌ ಪ್ರಯಾಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Maski: ಮೂತ್ರ ವಿಸರ್ಜನೆಗೆ ಶಾಲಾ‌ ಹಳೇ ಕೊಠಡಿಯೇ ಗತಿ-ಕ್ಯಾರೆ ಎನ್ನದ ಅಧಿಕಾರಿಗಳು

Maski: ಮೂತ್ರ ವಿಸರ್ಜನೆಗೆ ಶಾಲಾ‌ ಹಳೇ ಕೊಠಡಿಯೇ ಗತಿ-ಕ್ಯಾರೆ ಎನ್ನದ ಅಧಿಕಾರಿಗಳು

3-raichur

Raichur: ಚಿತ್ರಾನ್ನ ಸೇವಿಸಿ ವಿದ್ಯಾರ್ಥಿಗಳು ಅಸ್ವಸ್ಥ

Mantralya-Shree

Thirupathi Laddu: ದೇಗುಲಗಳು ಸರಕಾರದ ಹಿಡಿತದಿಂದ ಮುಕ್ತವಾಗಲಿ: ಶ್ರೀಸುಬುಧೇಂದ್ರ ಸ್ವಾಮೀಜಿ

Manvi: ಬುದ್ಧಿಮಾಂದ್ಯ ಮಹಿಳೆ ಮೇಲೆ ಅತ್ಯಾ*ಚಾರ

Manvi: ಬುದ್ಧಿಮಾಂದ್ಯ ಮಹಿಳೆ ಮೇಲೆ ಅತ್ಯಾ*ಚಾರ

Yermarus: Private bus caused end of 150 sheeps

Yermarus: ಖಾಸಗಿ ಬಸ್ ಹರಿದು 150 ಕುರಿಗಳ ಮಾರಣಹೋಮ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Google 25th Birthday! ಗ್ಯಾರೇಜ್‌ನಿಂದ ಮೌಂಟ್‌ವಿವ್‌ವರೆಗೆ….ಗೂಗಲ್‌ ರಜತ ಸಂಭ್ರಮ

Google 25th Birthday! ಗ್ಯಾರೇಜ್‌ನಿಂದ ಮೌಂಟ್‌ವಿವ್‌ವರೆಗೆ….ಗೂಗಲ್‌ ರಜತ ಸಂಭ್ರಮ

Musheer Khan

Musheer Khan: ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡ ಯುವ ಬ್ಯಾಟರ್ ಮುಶೀರ್‌ ಖಾನ್‌

12-bng

Bengaluru: ಮಕ್ಕಳಲ್ಲಿ ವಿಜ್ಞಾನ ಆಸಕ್ತಿ ಮೂಡಿಸಲು “ಸೈನ್ಸ್‌ ಬಸ್‌’

Israel: ಬೈರೂತ್‌ ಮೇಲಿನ ದಾಳಿಯಲ್ಲಿ ಹೆಜ್ಬುಲ್ಲಾ ಮುಖ್ಯಸ್ಥ ಹಸನ್‌ ಸಾವು: ಇಸ್ರೇಲ್‌ ಸೇನೆ

Israel: ಬೈರೂತ್‌ ಮೇಲಿನ ದಾಳಿಯಲ್ಲಿ ಹೆಜ್ಬುಲ್ಲಾ ಮುಖ್ಯಸ್ಥ ಹಸನ್‌ ಸಾವು: ಇಸ್ರೇಲ್‌ ಸೇನೆ

Kedarnath Kuri Farm Movie Review

Kedarnath Kuri Farm Review: ಫಾರಂನಲ್ಲಿ ಪ್ರೇಮ ಸಂಭಾಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.