Kadaba ಕೊಲೆ ಬೆದರಿಕೆ; ಪೊಲೀಸರಿಗೆ ದೂರು
Team Udayavani, May 29, 2024, 8:43 PM IST
ಕಡಬ: ಜಮೀನಿಗೆ ಅಕ್ರಮ ಪ್ರವೇಶ ಮಾಡಿ ಕಲ್ಲಿನ ಕಂಬಗಳನ್ನು ಜೆಸಿಬಿ ಬಳಸಿ ಹಾನಿಗೊಳಿಸಿದ್ದಲ್ಲದೆ ನನ್ನ ಮಗನ ಮೇಲೆ ಜೆಸಿಬಿ ಹತ್ತಿಸುವ ಬೆದರಿಕೆ ಹಾಕಿರುವುದಾಗಿ ಕೋಡಿಂಬಾಳ ಗ್ರಾಮದ ಕಲ್ಲಂತಡ್ಕ ನಿವಾಸಿ ಸೈಮನ್ ಲೂಯಿಸ್ ರೋಡ್ರಿಗಸ್ ಅವರು ಸ್ಥಳೀಯ ನಿವಾಸಿಗಳಾದ ಪ್ರಕಾಶ್, ಸತ್ಯನಾರಾಯಣ ಹಾಗೂ ಇನ್ನಿತರರ ವಿರುದ್ಧ ಕಡಬ ಪೊಲೀಸರಿಗೆ ದೂರು ನೀಡಿದ್ದಾರೆ.
ಮಂಗಳೂರಿನಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಹೋಗಿದ್ದಾಗ, ಕುಂಡೋಳಿ ಮಾಲೇಶ್ವರದಲ್ಲಿರುವ ನಮ್ಮ ಜಮೀನಿಗೆ ಆರೋಪಿಗಳು ಅಕ್ರಮ ಪ್ರವೇಶ ಮಾಡಿ, ಜಾಗಕ್ಕೆ ಹಾಕಿದ್ದ ಕಲ್ಲು ಕಂಬಗಳನ್ನು ಜೆಸಿಬಿ ವಾಹನಗಳಿಂದ ಕಿತ್ತು ಹಾಕಿದ್ದಾರಲ್ಲದೆ ಕೆಲವು ಕಂಬಗಳನ್ನು ಕಳವು ಮಾಡಿದ್ದಾರೆ. ಆಬಳಿಕ ಪುತ್ರ ವಿಲ್ಫೆಡ್ ರೋಡ್ರಿಗಸ್ ಈ ಬಗ್ಗೆ ವಿಚಾರಿಸಲು ಹೋದಾಗ ಆರೋಪಿಗಳು ಅವಾಚ್ಯ ಶಬ್ದಗಳಿಂದ ಬೈದು ಕೊಲೆಗೈಯುವುದಾಗಿ ಹೇಳಿದ್ದಲ್ಲದೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಬಗ್ಗೆ ಕಡಬ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.