![2](https://www.udayavani.com/wp-content/uploads/2024/06/2-21-415x249.jpg)
Bandipur: ಮರಿಗಳ ಜತೆ ನಿದ್ರೆಗೆ ಜಾರಿದ ತಾಯಿ ಹುಲಿಯ ದೃಶ್ಯ ವೈರಲ್
ಗಂಡು ಹುಲಿಯ ಕಾವಲು... ವಿಡಿಯೋ ವೈರಲ್
Team Udayavani, May 30, 2024, 8:03 PM IST
![1-qwewqewqewq](https://www.udayavani.com/wp-content/uploads/2024/05/1-qwewqewqewq-620x355.jpg)
ಗುಂಡ್ಲುಪೇಟೆ(ಚಾಮರಾಜನಗರ): ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ತೊರೆಯೊಂದರ ಸಮೀಪ ಹುಲಿ ತನ್ನ ಮರಿಗಳ ಜತೆಗೆ ಜಾಲಿಯಾಗಿ ನಿದ್ರೆಗೆ ಜಾರಿದ ದೃಶ್ಯ ಪ್ರವಾಸಿಗರೊಬ್ಬರ ಕೆಮರಾ ಕಣ್ಣಲ್ಲಿ ಸೆರೆಯಾಗಿದೆ.
ಬಂಡೀಪುರ ಅಭಯಾರಣ್ಯದಲ್ಲಿ ಸಫಾರಿಗೆ ಪ್ರವಾಸಿಗರು ತೆರಳಿದ್ದ ವೇಳೆ, ಸಫಾರಿ ಜೋನ್ ನ ಬಾರ್ಡರ್ ರೋಡ್ ಎಂಬಲ್ಲಿ ತೊರೆಯೊಂದರ ಬಳಿ ತಾಯಿ ಹುಲಿ ಹಾಗೂ ಎರಡು ಮರಿ ಹುಲಿಗಳು ಮಲಗಿ ನಿದ್ರಿಸುತ್ತಿದ್ದರೇ, ಗಂಡು ಹುಲಿ ಎಚ್ಚರವಾಗಿ ಅತ್ತಿತ್ತ ನೋಡುತ್ತಿರುವ ದೃಶ್ಯವನ್ನು ರೋಮಾಂಚನಗೊಂಡ ಪ್ರವಾಸಿಗರು ಸೆರೆ ಹಿಡಿಯುವ ಮೂಲಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಸಾಕಷ್ಟು ವೈರಲ್ ಆಗಿದೆ.
ಸಫಾರಿಯಲ್ಲಿ ಹೆಚ್ಚಿನ ಪ್ರಾಣಿಗಳ ದರ್ಶನ
ಬಂಡೀಪುರ ಅಭಯಾರಣ್ಯಕ್ಕೆ ಕಳೆದ 15 ದಿನಗಳಿಂದ ಉತ್ತಮ ಮಳೆಯಾಗಿರುವ ಕಾರಣ ಕಾಡೆಲ್ಲ ಅಚ್ಚ ಹರಿಸಿರಿನಿಂದ ಕಂಗೊಳಿಸುತ್ತಿದೆ. ಈ ಕಾರಣದಿಂದ ಜಿಂಕೆ, ನವಿಲು, ಕಾಡೆಮ್ಮೆ, ಆನೆಗಳು ಸಫಾರಿ ರಸ್ತೆಯಲ್ಲಿಯೇ ಮೇವು ಮೇಯುತ್ತ ನಿಂತಿರುತ್ತವೆ. ಇನ್ನು ಕೆರೆ-ಕಟ್ಟೆಗಳ ಆಸುಪಾಸಿನಲ್ಲಿ ಹುಲಿ ಹಾಗೂ ಚಿರತೆ ನೀರು ಕುಡಿಯಲು ಆಗಮಿಸುತ್ತವೆ. ಬೆಳಗಿನ ಸಫಾರಿಯಲ್ಲಿ ಹೆಚ್ಚಿನ ಕಾಡುಪ್ರಾಣಿಗಳ ದರ್ಶನ ನೀಡುತ್ತಿದ್ದು, ಪ್ರವಾಸಿಗರು ವನ್ಯಪ್ರಾಣಿಗಳನ್ನು ಕಣ್ತುಂಬಿಕೊಂಡು ಖುಷಿ ಪಡುತ್ತಿದ್ದಾರೆ ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದರು.
ಟಾಪ್ ನ್ಯೂಸ್
![2](https://www.udayavani.com/wp-content/uploads/2024/06/2-21-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![suicide (2)](https://www.udayavani.com/wp-content/uploads/2024/06/suicide-2-2-150x81.jpg)
kollegala; ಬೈಕ್ ಗೆ ಅಡ್ಡ ಬಂದ ನವಿಲು: ಸವಾರ ಸ್ಥಳದಲ್ಲೇ ಸಾವು
![1-wqeqwe](https://www.udayavani.com/wp-content/uploads/2024/06/1-wqeqwe-150x109.jpg)
Gundlupete: ಜನಸ್ಪಂದನಾ ಕಾರ್ಯಕ್ರಮ ಮುಗಿಸಿ ಬರುವಾಗ ಅಪಘಾತ: ಆಹಾರ ನಿರೀಕ್ಷಕ ಸಾವು
![Bandipur: ರಿಲ್ಯಾಕ್ಸ್ ಮೂಡ್ನಲ್ಲಿದ್ದ ವ್ಯಾಘ್ರನನ್ನೇ ಅಟ್ಟಾಡಿಸಿದ ಗಜರಾಜ…](https://www.udayavani.com/wp-content/uploads/2024/06/tiger-1-150x92.jpg)
Bandipur: ರಿಲ್ಯಾಕ್ಸ್ ಮೂಡ್ನಲ್ಲಿದ್ದ ವ್ಯಾಘ್ರನನ್ನೇ ಅಟ್ಟಾಡಿಸಿದ ಗಜರಾಜ…
![Road mishap: ಖಾಸಗಿ ಬಸ್ – ಗೂಡ್ಸ್ ವಾಹನದ ನಡುವೆ ಅಪಘಾತ: ಇಬ್ಬರಿಗೆ ಸಣ್ಣಪುಟ್ಟ ಗಾಯ](https://www.udayavani.com/wp-content/uploads/2024/06/bus-goods-150x89.jpg)
Road mishap: ಖಾಸಗಿ ಬಸ್ – ಗೂಡ್ಸ್ ವಾಹನದ ನಡುವೆ ಅಪಘಾತ: ಇಬ್ಬರಿಗೆ ಸಣ್ಣಪುಟ್ಟ ಗಾಯ
![Gundlupete: ಕಚೇರಿಯ ಕೊಠಡಿಯಲ್ಲೇ ನೇಣಿಗೆ ಶರಣಾದ ಪೈನಾನ್ಸ್ ಸಿಬ್ಬಂದಿ… ಕಾರಣ ನಿಗೂಢ](https://www.udayavani.com/wp-content/uploads/2024/06/GUNDLUPET-150x100.jpg)
Gundlupete: ಕಚೇರಿಯ ಕೊಠಡಿಯಲ್ಲೇ ನೇಣಿಗೆ ಶರಣಾದ ಫೈನಾನ್ಸ್ ಸಿಬ್ಬಂದಿ… ಕಾರಣ ನಿಗೂಢ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.