Madikeri: ಗಾಳಿಯಲ್ಲಿ ಗುಂಡು ಹಾರಿಸಿ ವ್ಯಕ್ತಿಯನ್ನು ಕಾಡಾನೆಯಿಂದ ರಕ್ಷಿಸಿದ ಬೆಳೆಗಾರ
Team Udayavani, May 31, 2024, 6:05 AM IST
ಮಡಿಕೇರಿ: ವ್ಯಕ್ತಿಯೊಬ್ಬರ ಮೇಲೆ ಕಾಡಾನೆ ದಾಳಿ ಮಾಡಿದ ಸಂದರ್ಭ ಬೆಳೆಗಾರರೊಬ್ಬರು ಗಾಳಿಯಲ್ಲಿ ಗುಂಡು ಹಾರಿಸಿ ಆನೆಯನ್ನು ಓಡಿಸಿ ಆ ವ್ಯಕ್ತಿಯನ್ನು ಪಾರು ಮಾಡಿದ ಘಟನೆ ಪಾಲಿಬೆಟ್ಟದಲ್ಲಿ ನಡೆದಿದೆ.
ವಾಹನ ಚಾಲಕ ಚಂದ್ರ ಅವರು ಬುಧವಾರ ರಾತ್ರಿ ಪಾಲಿಬೆಟ್ಟದಿಂದ ಲೂರ್ಡ್ಸ್ ಶಾಲೆ ಬಳಿ ಇರುವ ತನ್ನ ಮನೆಗೆ ತೆರಳುತ್ತಿದ್ದಾಗ ಕಾಫಿ ತೋಟದಿಂದ ಹಠಾತ್ತನೆ ಬಂದ ಕಾಡಾನೆ ದಾಳಿ ಮಾಡಿತು. ತಪ್ಪಿಸಿಕೊಳ್ಳಲು ತೋಟದ ಗೇಟ್ನೊಳಗೆ ನುಸುಳಿದಾಗ ಕಾಡಾನೆ ಗೇಟನ್ನು ಮುರಿದು ದಾಳಿ ಮಾಡಿತು. ಚಂದ್ರ ಅವರ ಕಿರುಚಾಟದ ಶಬ್ದ ಕೇಳಿ ಸಮೀಪದಲ್ಲೇ ಇದ್ದ ಬೆಳೆಗಾರ ಕುಟ್ಟಂಡ ಶ್ಯಾಂ ಸೋಮಣ್ಣ ಅವರು ತತ್ಕ್ಷಣ ಕೋವಿಯೊಂದಿಗೆ ಸ್ಥಳಕ್ಕೆ ಆಗಮಿಸಿದರು.
ಕಾಡಾನೆಯತ್ತ ಕಲ್ಲು ಒಗೆದರೂ ಅದು ದಾಳಿ ನಿಲ್ಲಿಸದೆ ಇದ್ದಾಗ ಗಾಳಿಯಲ್ಲಿ ಬೆದರು ಗುಂಡು ಹಾರಿಸಿದರು. ಬೆದರಿದ ಕಾಡಾನೆ ಚಂದ್ರ ಅವರನ್ನು ಬಿಟ್ಟು ಕಾಫಿ ತೋಟದೊಳಗೆ ಓಡಿಹೋಯಿತು. ಗಂಭೀರವಾಗಿ ಗಾಯಗೊಂಡಿರುವ ಚಂದ್ರ ಅವರನ್ನು ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾಡಾನೆ ಉಪಟಳದ ವಿರುದ್ಧ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Road mishap: ವಿಶ್ವಕಪ್ ಜೋಶ್ನಲ್ಲಿ ಬೈಕ್ ಓಡಿಸಿ ಡಿವೈಡರ್ಗೆ ಢಿಕ್ಕಿ; ಸವಾರನ ಸಾವು
Commercial LPG ಸಿಲಿಂಡರ್ ದರದಲ್ಲಿ ಇಳಿಕೆ…; ನೂತನ ದರ ಎಷ್ಟು? ಇಲ್ಲಿದೆ ಮಾಹಿತಿ
Bengaluru: ರಸ್ತೆ ಬದಿ ನಿಂತಿದ್ದ ಲಾರಿಗೆಬೈಕ್ ಡಿಕ್ಕಿ: ದುರ್ಮರಣ
ಸಾಲ ಪಡೆದು ವಂಚನೆ ಮಾಡಿದ್ದ ಯುವಕನ ಅಪಹರಣ: ಫಾರ್ಮ್ ಹೌಸ್ ನಲ್ಲಿರಿಸಿ ಹಲ್ಲೆ
Kidnap: ಮಹಿಳೆಯರಿಂದಲೇ ಯುವಕನ ಕಿಡ್ನ್ಯಾಪ್; 6 ಮಂದಿ ವಿರುದ್ಧ ಕೇಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.