Heavy Rain ಹೊಳೆ ಮಧ್ಯೆ ಸಿಲುಕಿಕೊಂಡ ಪಿಕಪ್‌; ಕಾರ್ಯಾಚರಣೆ

ಹೊಳೆಯಲ್ಲಿ ಹರಿದು ಬಂದ ದಿಢೀರ್‌ ನೆರೆ ನೀರು

Team Udayavani, Jun 1, 2024, 1:01 AM IST

Heavy Rain ಹೊಳೆ ಮಧ್ಯೆ ಸಿಲುಕಿಕೊಂಡ ಪಿಕಪ್‌; ಕಾರ್ಯಾಚರಣೆ

ಸುಳ್ಯ: ಗುರುವಾರ ಅಪರಾಹ್ನ ಸುಬ್ರಹ್ಮಣ್ಯ, ಕೊಲ್ಲಮೊಗ್ರು ಪರಿಸರದಲ್ಲಿ ಧಾರಾಕಾರ ಮಳೆಯಾಗಿ ದ್ದು, ಈ ವೇಳೆ ಹೊಳೆಯಲ್ಲಿ ದಿಢೀರ್‌ ನೆರೆ ನೀರು ಹರಿದು ಬಂದು ಪಿಕಪ್‌ ವಾಹನ ವೊಂದು ನೆರೆ ನೀರಿನಲ್ಲಿ ಅಪಾಯಕ್ಕೆ ಸಿಲುಕಿದ ಘಟನೆ ಸಂಭವಿಸಿದೆ.

ಕೊಲ್ಲಮೊಗ್ರು ಗ್ರಾಮದ ಪನ್ನೆ ಎಂಬಲ್ಲಿ ಈ ಘಟನೆ ಸಂಭವಿಸಿದೆ. ಕೋತ್ನಡ್ಕದ ರಾಮಕೃಷ್ಣ ಅವರ ಮನೆಯಿಂದ ಮಹೇಶ್‌ ಪಿಕಪ್‌ನಲ್ಲಿ ತೆಂಗಿನಕಾಯಿ ಹೇರಿಕೊಂಡು ಹಿಂದಿರುಗುವ ವೇಳೆ ಹೊಳೆ ದಾಟುವ ಸಂದರ್ಭ ದಿಢೀರ್‌ ನೆರೆ ನೀರು ಹರಿದು ಬಂದು ಹೊಳೆ ಮಧ್ಯದಲ್ಲಿ ಪಿಕಪ್‌ ವಾಹನ ಸಿಲುಕಿಕೊಂಡಿತು. ಈ ಘಟನೆಯಿಂದ ಪಿಕಪ್‌ನಲ್ಲಿದ್ದ ನೂರಾರು ತೆಂಗಿನಕಾಯಿಗಳು ನೀರು ಪಾಲಾಗಿವೆ ಎಂದು ತಿಳಿದುಬಂದಿದೆ.

ಹೊಳೆ ನಡುವೆ ಸಿಲುಕಿಕೊಂಡು, ಕೊಚ್ಚಿಕೊಂಡು ಹೋಗುವ ಭೀತಿಯಲ್ಲಿದ್ದ ಪಿಕಪ್‌ ವಾಹನಕ್ಕೆ ಹಗ್ಗ ಕಟ್ಟಿ, ನದಿ ದಡದಲ್ಲಿದ್ದವರು ಸೇರಿ ಎಳೆಯುವ ಕಾರ್ಯಾಚರಣೆ ನಡೆಸಿ ಪಿಕಪ್‌ ವಾಹನವನ್ನು ಹೊಳೆಯಿಂದ ಹೊರ ತಂದಿದ್ದಾರೆ.

ಧಾರಾಕಾರ ಮಳೆ: ಅಪಾಯಕ್ಕೆ ಸಿಲುಕಿದ ಕಟ್ಟಡಗಳು
ಸುಬ್ರಹ್ಮಣ್ಯ: ಗುರುವಾರ ಸಂಜೆ ಸುರಿದ ಮಳೆಗೆ ಯೇನೆ ಕಲ್ಲು ಪೇಟೆಯ ಬಳಿಯ ಹೊಳೆಯಲ್ಲಿ ಮಳೆ ನೀರಿನ ಹರಿವಿಗೆ ಮಣ್ಣು ಕೊಚ್ಚಿ ಹೋಗಿದ್ದು, ಕೆಲವು ಕಟ್ಟಡಗಳು ಅಪಾಯದಲ್ಲಿವೆ.

ಯೇನೆಕಲ್ಲು ಬಸ್‌ ನಿಲ್ದಾಣದ ಬಳಿಯಿಂದ ಇಸ್ಮಾಯಿಲ್‌ ಅವರ ಮನೆಯ ತನಕ, ಮಹಮ್ಮದ್‌ ಅವರ ಕಟ್ಟಡ, ನಾಳ ಕುಶಾಲಪ್ಪ ಗೌಡರ ಕಟ್ಟಡ, ಗಂಗಾಧರ ಪೈಲಾಜೆಯವರ ಕಟ್ಟಡ, ಇಸ್ಮಾಯಿಲ್‌ ಅವರ ಮನೆಯ ಹಿಂಭಾಗದ ತನಕ ಮಣ್ಣು ನೀರಿನಲ್ಲಿ ಕೊಚ್ಚಿಹೋಗಿ ಕಟ್ಟಡಗಳು ಅಪಾಯದ ಸ್ಥಿತಿಯ ಲ್ಲಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಸರಕಾರಿ ಪ್ರೌಢಶಾಲೆಯ ಗೇಟ್‌ ಬಳಿ ಹರಿಯುವ ಸಣ್ಣ ತೋಡಿನಲ್ಲಿ ನೀರಿನ ಮಟ್ಟ ಏರಿಕೆಯಾಗಿ ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಕೋಟಿಗೌಡನ ಮನೆ, ಮಾದನಮನೆ, ಕಡಿಂಬಿಲ ಬೈಲಿನ ಭಾಗಗಳಲ್ಲಿ ನೀರು ತೊಟಕ್ಕೆ ನುಗ್ಗಿ ಜಲಾವೃತಗೊಂಡಿತ್ತು. ಲಿಂಗಪ್ಪ ಗೌಡ ಮಲ್ಲಾರ ಅವರ ಮನೆಯ ಬಳಿಯ ಮೋರಿ ನೀರುಪಾಲಾಗಿದೆ.

ಟಾಪ್ ನ್ಯೂಸ್

2

T20 World Cup: ಭಾರತದ ವಿಶ್ವಕಪ್‌ ಗೆಲುವಿಗೆ 10 ಕಾರಣಗಳು

Modi,-Dravid

T-20 World Cup: ದೂರವಾಣಿ ಕರೆ ಮಾಡಿ ಭಾರತ ತಂಡಕ್ಕೆ ಶುಭ ಹಾರೈಸಿದ ಮೋದಿ

6-health

AUB: ಗರ್ಭಕೋಶದ ಅಸಹಜ ರಕ್ತಸ್ರಾವ; ಅಬ್ನಾರ್ಮಲ್‌ ಯುಟರೈನ್‌ ಬ್ಲೀಡಿಂಗ್‌ (ಎಯುಬಿ)

1

T20 world cup: ವಿಶ್ವಕಪ್‌ ದಿಗ್ವಿಜಯ… ಅಂದು – ಇಂದು 

TeamIndia; ಮುಂದಿನ ಕೋಚ್ ಬಹುತೇಕ ಅಂತಿಮ…: ದೊಡ್ಡ ಸುಳಿವು ನೀಡಿದ ಬಿಸಿಸಿಐ ಅಧ್ಯಕ್ಷ ಬಿನ್ನಿ

TeamIndia; ಮುಂದಿನ ಕೋಚ್ ಬಹುತೇಕ ಅಂತಿಮ…: ದೊಡ್ಡ ಸುಳಿವು ನೀಡಿದ ಬಿಸಿಸಿಐ ಅಧ್ಯಕ್ಷ ಬಿನ್ನಿ

9

700 ಕೋಟಿ ವೆಚ್ಚದ ʼಕಲ್ಕಿ 2898 ಎಡಿʼ.. ಇಲ್ಲಿದೆ ಅತ್ಯಂತ ದುಬಾರಿ ಭಾರತೀಯ ಚಿತ್ರಗಳ ಪಟ್ಟಿ

prahlad joshi

Hubli; ಹೆಚ್ಚುವರಿ ಡಿಸಿಎಂ ಸ್ಥಾನ ವಿಚಾರದಲ್ಲಿ ಸಿದ್ದರಾಮಯ್ಯ ಕೈವಾಡವಿದೆ: ಪ್ರಹ್ಲಾದ ಜೋಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-btwl

Bantwala: ಮರ ಬಿದ್ದು ಕೋಳಿ ಫಾರಂ ಜಖಂ

3-vitla

Campco ಮಾಜಿ ಅಧ್ಯಕ್ಷ ಎಲ್.ಎನ್. ಕೂಡೂರು ಇನ್ನಿಲ್ಲ

Sullia ವಿದೇಶದಿಂದ ಬರಲು ಯುವಕನಿಗೆ ನೆರವಾದ ಸಂಸದ ಬ್ರಿಜೇಶ್‌ ಚೌಟ

Sullia ವಿದೇಶದಿಂದ ಬರಲು ಯುವಕನಿಗೆ ನೆರವಾದ ಸಂಸದ ಬ್ರಿಜೇಶ್‌ ಚೌಟ

ತೀವ್ರವಾಗಿ ಉದುರುತ್ತಿದೆ ಎಳೆ ಅಡಿಕೆ

ತೀವ್ರವಾಗಿ ಉದುರುತ್ತಿದೆ ಎಳೆ ಅಡಿಕೆ; ಕೃಷಿಕರಲ್ಲಿ ಆತಂಕ

Patla Betta; ಅರಣ್ಯದ ರಸ್ತೆ ಬಗ್ಗೆ ವರದಿ ಕೇಳಿದ ಸಚಿವ ಈಶ್ವರ ಖಂಡ್ರೆ

Patla Betta; ಅರಣ್ಯದ ರಸ್ತೆ ಬಗ್ಗೆ ವರದಿ ಕೇಳಿದ ಸಚಿವ ಈಶ್ವರ ಖಂಡ್ರೆ

MUST WATCH

udayavani youtube

ವಿಧಿಯಾಟಕ್ಕೆ ಬಲಿಯಾದ ಅಂಧರ ಪುಟ್ ಬಾಲ್ ತಂಡದ ಕ್ಯಾಪ್ಟನ್

udayavani youtube

ಮಾತು ಬರದ ಮಗುವಿಗೆ ಮಾತು ಬರಿಸಿದ ಕಾಪು ಮಾರಿಯಮ್ಮ | ಕಾಪುವಿನ ಅಮ್ಮನ ಪವಾಡ

udayavani youtube

ಡಿಸಿಎಂ ವಿಚಾರ ಇನ್ನೊಮ್ಮೆ ಮಾತನಾಡೋಣ; ಕುಕ್ಕೆಯಲ್ಲಿ ಡಿ.ಕೆ.ಶಿವಕುಮಾರ್

udayavani youtube

ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಅಂಗಾರ ಸಂಕಷ್ಟಹರ ಚತುರ್ಥಿ|

udayavani youtube

ಬಸ್ಸೇರಿ ಸಮಸ್ಯೆ ಆಲಿಸಿದ ಶಾಸಕ ರೈ

ಹೊಸ ಸೇರ್ಪಡೆ

2

T20 World Cup: ಭಾರತದ ವಿಶ್ವಕಪ್‌ ಗೆಲುವಿಗೆ 10 ಕಾರಣಗಳು

Modi,-Dravid

T-20 World Cup: ದೂರವಾಣಿ ಕರೆ ಮಾಡಿ ಭಾರತ ತಂಡಕ್ಕೆ ಶುಭ ಹಾರೈಸಿದ ಮೋದಿ

6-health

AUB: ಗರ್ಭಕೋಶದ ಅಸಹಜ ರಕ್ತಸ್ರಾವ; ಅಬ್ನಾರ್ಮಲ್‌ ಯುಟರೈನ್‌ ಬ್ಲೀಡಿಂಗ್‌ (ಎಯುಬಿ)

1

T20 world cup: ವಿಶ್ವಕಪ್‌ ದಿಗ್ವಿಜಯ… ಅಂದು – ಇಂದು 

shivamogga

Shimoga; ಭದ್ರಾವತಿ ವಿಐಎಸ್ಎಲ್ ಕಾರ್ಖಾನೆಗೆ ಸಚಿವ ಕುಮಾರಸ್ವಾಮಿ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.