RBI ಇಂಗ್ಲೆಂಡ್ನಿಂದ 100 ಟನ್ ಚಿನ್ನ ವಾಪಸ್
ಸುರಕ್ಷೆಯ ಕಾರಣಕ್ಕಾಗಿ ಇಂಗ್ಲೆಂಡ್ ಬ್ಯಾಂಕ್ನಲ್ಲಿ ಬಂಗಾರ ಇರಿಸಿದ್ದ ಆರ್ಬಿಐ
Team Udayavani, Jun 1, 2024, 7:15 AM IST
ಹೊಸದಿಲ್ಲಿ: ಭಾರತೀಯ ರಿಸರ್ವ್ ಬ್ಯಾಂಕ್ ಸದ್ದಿಲ್ಲದೆ 100 ಟನ್ ಚಿನ್ನವನ್ನು ಬ್ಯಾಂಕ್ ಆಫ್ ಇಂಗ್ಲೆಂಡ್ನಿಂದ ಸ್ವದೇಶಕ್ಕೆ ಸ್ಥಳಾಂತರಿಸಿದೆ! ಸುರಕ್ಷೆಯ ಕಾರಣಕ್ಕೆ ಇಂಗ್ಲೆಂಡ್ ಬ್ಯಾಂಕ್ನಲ್ಲಿ ಇರಿಸಿದ್ದ ಚಿನ್ನದಲ್ಲಿ ಸ್ವಲ್ಪ ಪ್ರಮಾಣವನ್ನು ವಾಪಸ್ ತಂದಿದೆ. ಮುಂದಿನ ದಿನ ಗಳಲ್ಲಿ ಇನ್ನೂ ಇಷ್ಟು ಪ್ರಮಾಣದ ಚಿನ್ನವನ್ನು ಮರಳಿ ತರುವ ನಿರೀಕ್ಷೆಯಿದೆ ಎಂದು ಮೂಲಗಳು ವರದಿ ಮಾಡಿವೆ. ವಿಶೇಷವೆಂದರೆ 1991ರ ಅನಂತರ ಇಷ್ಟು ದೊಡ್ಡ ಪ್ರಮಾಣದಲ್ಲಿ ಭಾರತವು ತನ್ನ ಚಿನ್ನವನ್ನು ಮರಳಿ ತಂದಿರುವುದು ಇದೇ ಮೊದಲು.
ವಿದೇಶದಲ್ಲಿಟ್ಟಿದ್ದ ಚಿನ್ನವನ್ನು ಮರಳಿ ದೇಶಕ್ಕೆ ತಂದಿರುವುದು ಬಹಳ ಮಹತ್ವ ಪಡೆದಿದೆ. ಪ್ರಸ್ತುತ ಭಾರತೀಯ ರಿಸರ್ವ್ ಬ್ಯಾಂಕ್ ಬಳಿ ಒಟ್ಟು 822.10 ಟನ್ ಚಿನ್ನ ಸಂಗ್ರಹವಿದೆ. ಇದರಲ್ಲಿ 408.31 ಟನ್ ಚಿನ್ನವನ್ನು ದೇಶದಲ್ಲಿಯೇ ಇರಿಸಿಕೊಂಡಿದ್ದರೆ ಅರ್ಧಕ್ಕೂ ಹೆಚ್ಚು ಚಿನ್ನದ ದಾಸ್ತಾನು ಇಂಗ್ಲೆಂಡ್ ಮತ್ತು ಸ್ವಿಜರ್ಲೆಂಡ್ನ ಬ್ಯಾಂಕ್ಗಳಲ್ಲಿ ಸುರಕ್ಷಿತವಾಗಿ ಇರಿಸಲಾಗಿದೆ.
ಮತ್ತಷ್ಟು
ಚಿನ್ನ ವಾಪಸ್?
ಮುಂದಿನ ತಿಂಗಳುಗಳಲ್ಲಿ ಆರ್ಬಿಐ ಇನ್ನಷ್ಟು ಚಿನ್ನವನ್ನು ದೇಶಕ್ಕೆ ಸ್ಥಳಾಂತರಿಸಲಿದೆ ಎನ್ನಲಾಗಿದೆ. ಚಿನ್ನವನ್ನು ವಿದೇಶದಲ್ಲಿ ಇರಿಸಲು ನೀಡಬೇಕಾದ ಬೃಹತ್ ಮೊತ್ತದ ಹಣವನ್ನು ಇದರಿಂದ ಉಳಿಸಬಹುದು ಎಂಬ ಕಾರಣದಿಂದ ಆರ್ಬಿಐ ಈ ಹೆಜ್ಜೆಯಿರಿಸಿದೆ ಎಂದು ವಿಶ್ಲೇಷಿಸಲಾಗಿದೆ. ವಿದೇಶಾಂಗ ವಿನಿಮಯದ ಭಾಗವಾಗಿ ದೊಡ್ಡ ಪ್ರಮಾಣದಲ್ಲಿ ಚಿನ್ನದ ಸಂಗ್ರಹವನ್ನು ಆರ್ಬಿಐ ಹೊಂದಿದೆ.
ಎಲ್ಲಿತ್ತು? ಎಷ್ಟಿತ್ತು?
-ಆರ್ಬಿಐ ಬಳಿ 822.10ಟನ್ ಚಿನ್ನ ಸಂಗ್ರಹವಿದೆ.
-408.31 ಟನ್ ಚಿನ್ನವನ್ನು ದೇಶದಲ್ಲೇ ಇರಿಸಿಕೊಳ್ಳಲಾಗಿದೆ.
-ಒಟ್ಟು ಸಂಗ್ರಹದ ಅರ್ಧಕ್ಕೂ ಹೆಚ್ಚು ಚಿನ್ನ ಇಂಗ್ಲೆಂಡ್ ಮತ್ತು ಸ್ವಿಸ್ ಬ್ಯಾಂಕ್ಗಳಲ್ಲಿವೆ.
-ಪ್ರಸ್ತುತ ಇಂಗ್ಲೆಂಡ್ನಿಂದ 100 ಟನ್ ಚಿನ್ನ ವಾಪಸ್ ಬಂದಿದೆ.
-ಮುಂದಿನ ತಿಂಗಳುಗಳಲ್ಲಿ ಇನ್ನಷ್ಟು ಟನ್ ಚಿನ್ನ ದೇಶಕ್ಕೆ ಮರಳುವ ನಿರೀಕ್ಷೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tamil Nadu; ಪುತ್ರ ಉದಯನಿಧಿಗೆ ಬಡ್ತಿ ನೀಡಿದ ಸ್ಟಾಲಿನ್: ನಾಳೆ ಪ್ರಮಾಣವಚನ
Shiruru ದುರಂತ; ಹುಟ್ಟೂರಲ್ಲಿ ಅರ್ಜುನ್ ಅಂತಿಮ ವಿಧಿ: ಹರಿದು ಬಂದ ಜನಸಾಗರ
Maharashtra ವಿಧಾನಸಭಾ ಚುನಾವಣೆ: ಸಿದ್ಧತೆ ಪರಿಶೀಲಿಸಿದ ಚುನಾವಣ ಆಯೋಗ
Heartstopping Moment: ಉಕ್ಕಿ ಹರಿಯುವ ಹೊಳೆಯಲ್ಲೇ ಬಾಣಂತಿಯನ್ನು ಹೊತ್ತು ಸಾಗಿದ ವ್ಯಕ್ತಿ
Bengaluru; ಚುನಾವಣಾ ಬಾಂಡ್ ಸೋಗಿನಲ್ಲಿ ಸುಲಿಗೆ; ನಿರ್ಮಲಾ ಸೀತಾರಾಮನ್ ವಿರುದ್ದ ಎಫ್ಐಆರ್
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.