New Life: ಹೊಸ ಹುರುಪಿನಲ್ಲಿ ನವಜೀವನ ಆರಂಭಿಸಿ


Team Udayavani, Jun 1, 2024, 12:50 PM IST

4-uv-fusion

ಪ್ರತಿ ಜೀವಿಗಳಲ್ಲೂ ಒಂದಲ್ಲ ಒಂದು ವಿಶೇಷ ಗುಣವಿದ್ದೆ ಇರುತ್ತದೆ. ಆ ವಿಶೇಷ ಗುಣವನ್ನು ಗುರುತಿಸುವ ಮನಸ್ಥಿತಿ, ಶಕ್ತಿ, ಸಾಮರ್ಥ್ಯ ನಮ್ಮಲ್ಲಿರಬೇಕು. ಅಂತಹ ಉದಾಹರಣೆಗಳಲ್ಲಿ ಈ ನಾಗಲಿಂಗ ಪುಷ್ಪ ಮತ್ತು ಜೇನುನೊಣದ ಚಿತ್ರಪಟ ವಿಶೇಷ ಅಂಶವೊಂದನ್ನು ತಿಳಿಸುತ್ತದೆ.

ಈ ಪುಷ್ಪ ತನ್ನದೇ ಆದ ವಿಶೇಷ ಸೌಂದರ್ಯ, ಸುವಾಸನೆಯೊಂದಿಗೆ ಮಕರಂಧವನ್ನು ಹೊಂದಿದೆ. ಆ ಸೌಂದರ್ಯ, ಸುವಾಸನೆ ಹಾಗೂ ಮಕರಂಧಕ್ಕೆ  ಆಕರ್ಷಣೆಗೊಂಡ ಸಾವಿರಾರು ಜೇನುನೊಣಗಳು ಹೂವಿನತ್ತ ಲಗ್ಗೆ  ಇಡುತ್ತವೆ. ಮಕರಂಧವನ್ನು ಹೀರಿದ ಆ ಜೇನುನೊಣಗಳು ಜೇನುಗೂಡನ್ನು ಕಟ್ಟಿ ಜೇನುತುಪ್ಪ ತಯಾರಿಸುತ್ತವೆ.

ಆ ಜೇನುನೊಣಗಳು ಏಕಭಾವದಿಂದ ಜೇನುಗೂಡಿನ ರೂಪದಲ್ಲಿ ತಮ್ಮ ಕುಟುಂಬವನ್ನು ರೂಪಿಸಿಕೊಂಡಿರುತ್ತವೆ. ಜೇನುತುಪ್ಪದ ಆಸೆಗಾಗಿ ಮನುಷ್ಯರು ತಮ್ಮ ಕುಟುಂಬವನ್ನೇ ಅಲ್ಲೋಲ ಕಲ್ಲೋಲ ಮಾಡುವರೆಂಬ ಸಣ್ಣ ಅನುಮಾನವು ಅವುಗಳಿಗೆ ಇರುವುದಿಲ್ಲ. ಕಾರಣ ನಂಬಿಕೆಯೇ ಜೀವನ ಅಂತಾರಲ್ಲ ಹಾಗೆ. ಅದೇ ನಂಬಿಕೆ ಮೇಲೆಯೇ ಅಲ್ಲವೇ ಜೇನುನೊಣಗಳು ಮನುಷ್ಯರು ಅದೆಷ್ಟೇ ಸಾರಿ ಗೂಡು ಹಾಳು ಮಾಡಿದರೂ ಪುನಃ ಗೂಡು ನಿರ್ಮಿಸಿ, ಜೇನುತುಪ್ಪ ತಯಾರಿಸುವುದು ಅವುಗಳ ಕಾಯಕವನ್ನಾಗಿಸಿಕೊಂಡಿರುವುದು.

ಇನ್ನೂ ಹೂವಿನ ವಿಚಾರಕ್ಕೆ ಬರುವುದಾದರೆ ಮಕರಂದವನ್ನು ಕಳೆದುಕೊಂಡು ಹೂವು ಬಾಡಿದರೂ ಕೂಡ ತನ್ನ ಬಳ್ಳಿ, ಗಿಡ, ಮರಗಳಲ್ಲಿ ನಾಳೆಯೆಂಬ ಭವಿಷ್ಯದಲ್ಲಿ ಅರಳಲಿರುವ ತನ್ನ ಕುಟುಂಬದ ಸದಸ್ಯನಾದ ಮತ್ತೂಂದು ಹೂವಿನ ಸಂತೋಷ ಕಂಡು ತನ್ನ ಗೈರುಹಾಜರಿಯನ್ನು ಇತರ ಹೂವುಗಳು ತುಂಬುವರೆಂಬ ಸಾರ್ಥಕತೆಯನ್ನು ಹೊಂದುತ್ತದೆ.

ಇದೇ ಸಂದರ್ಭದಲ್ಲಿ ಮನುಷ್ಯರ ಸ್ಥಿತಿ ಊಹಿಸಿಕೊಂಡರೆ  ಆಕಾಶವೇ ಕಳಚಿ ಬಿತ್ತೇನೋ ಎಂಬ  ಮನೋಭಾವದಿಂದ ಆತ್ಮಹತ್ಯೆಗೆ ಮುಂದಾಗುತ್ತಿದ್ದರು. ಇಂತಹ ಸಾವಿರಾರು ಉದಾಹರಣೆಗಳನ್ನು ನಾವು ದಿನನಿತ್ಯ ಮಾಧ್ಯಮಗಳಲ್ಲಿ ಬಿತ್ತರವಾಗುವುದು ಕಾಣುತ್ತಿದ್ದೇವೆ.  ಪ್ರತಿ ಮನುಷ್ಯನಲ್ಲೂ ಕೂಡ ಒಳ್ಳೆಯ ಗುಣಗಳು, ಧೈರ್ಯವು ಇದ್ದೇ ಇರುತ್ತದೆ.

ಆದರೆ ಕೆಲವರು ತಮ್ಮ ಸ್ವಾರ್ಥ ಸಾಧನೆಯಲ್ಲಿ ಪರೋಪಕಾರವನ್ನು ಮರೆತು ಯಾಂತ್ರಿಕವಾಗಿ ಜೀವನ ಸವೆಸುತ್ತಾರೆ. ಅಂತಹವರಿಗೆ ಅಂತಸ್ತು, ಆಸ್ತಿ ಎಂಬ ತಮ್ಮದೇ ಆದ ಚೌಕಟ್ಟಿನಲ್ಲಿ ಬದುಕು ನಡೆಸುತ್ತಿರುತ್ತಾರೆ ಹಾಗಾಗಿ ಅವರ ಮನಸ್ಥಿತಿ ಕೂಡ ಸೀಮಿತ ಹಾಗೂ ಸಂಕುಚಿತವಾಗಿರುತ್ತದೆ. ಇದರಿಂದಲೇ ಚಿಕ್ಕ-ಪುಟ್ಟ ವಿಷಯಗಳಿಗೂ ಮನುಷ್ಯರು ಆತ್ಮಹತ್ಯೆಯಂತಹ ನಿರ್ಧಾರಕ್ಕೆ ಮುಂದಾಗುತ್ತಾರೆ.

ಈ ಹೂವು ಮತ್ತು ಜೇನುನೊಣದ ಒಂದು ದೃಷ್ಟಾಂತದ ಮೂಲಕವಾದರೂ ಮನುಷ್ಯರು ಜೀವನದಲ್ಲಾಗುವ ಸಣ್ಣ ಸಣ್ಣ ಏರುಪೇರುಗಳಿಗೆ ಆತ್ಮಹತ್ಯೆಯಂತಹ ನಿರ್ಧಾರ ತೆಗೆದುಕೊಳ್ಳದೇ ಹೊಸ ಹುರುಪಿನಲ್ಲಿ ನವಜೀವನ ಆರಂಭಿಸುವಂತಾಬೇಕು ಹಾಗೂ ಮನುಷ್ಯರು ಪರೋಪಕಾರವನ್ನು ಮೈಗೂಡಿಸಿಕೊಳ್ಳುವ ಮೂಲಕ ಇನ್ನಾದರೂ ಬದುಕಿರುವಷ್ಟು ದಿನಗಳಲ್ಲಿ ಯಾವುದೇ  ಫಲಾಪೇಕ್ಷೆ ಬಯಸದೇ ಪರರಿಗೂ, ಪರಿಸರಕ್ಕೂ ಒಳಿತನ್ನು ಮಾಡುವಂತಾಗಬೇಕು…..

- ವಿದ್ಯಾ

ಹೊಸಮನಿ, ಶಿರಹಟ್ಟಿ ಗದಗ ಜಿಲ್ಲೆ

ಟಾಪ್ ನ್ಯೂಸ್

Google 25th Birthday! ಗ್ಯಾರೇಜ್‌ನಿಂದ ಮೌಂಟ್‌ವಿವ್‌ವರೆಗೆ….ಗೂಗಲ್‌ ರಜತ ಸಂಭ್ರಮ

Google 25th Birthday! ಗ್ಯಾರೇಜ್‌ನಿಂದ ಮೌಂಟ್‌ವಿವ್‌ವರೆಗೆ….ಗೂಗಲ್‌ ರಜತ ಸಂಭ್ರಮ

Musheer Khan

Musheer Khan: ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡ ಯುವ ಬ್ಯಾಟರ್ ಮುಶೀರ್‌ ಖಾನ್‌

Israel: ಬೈರೂತ್‌ ಮೇಲಿನ ದಾಳಿಯಲ್ಲಿ ಹೆಜ್ಬುಲ್ಲಾ ಮುಖ್ಯಸ್ಥ ಹಸನ್‌ ಸಾವು: ಇಸ್ರೇಲ್‌ ಸೇನೆ

Israel: ಬೈರೂತ್‌ ಮೇಲಿನ ದಾಳಿಯಲ್ಲಿ ಹೆಜ್ಬುಲ್ಲಾ ಮುಖ್ಯಸ್ಥ ಹಸನ್‌ ಸಾವು: ಇಸ್ರೇಲ್‌ ಸೇನೆ

1

ʼದೇವರʼ ಸಿನಿಮಾ ನೋಡುತ್ತಿರುವಾಗ ಥಿಯೇಟರ್‌ನಲ್ಲೇ ಕುಸಿದು ಬಿದ್ದು ಮೃತಪಟ್ಟ Jr NTR ಅಭಿಮಾನಿ

ಭೀಕರ ರಸ್ತೆ ಅಪಘಾತ… ಪುರಿ ಜಗನ್ನಾಥನ ದರ್ಶನಕ್ಕೆ ಹೊರಟಿದ್ದ ನಾಲ್ವರು ಯಾತ್ರಿಕರು ಮೃತ್ಯು

Bus Overturns… ಪುರಿ ಜಗನ್ನಾಥನ ದರ್ಶನಕ್ಕೆ ಹೊರಟಿದ್ದ ನಾಲ್ವರು ಯಾತ್ರಿಕರು ಮೃತ್ಯು

India: ಮೊದಲು ಗಡಿ ಭಯೋತ್ಪಾದನೆ ನಿಲ್ಲಿಸಿ-ವಿಶ್ವಸಂಸ್ಥೆಯಲ್ಲಿ ಪಾಕ್‌ ಗೆ ಭಾರತದ ಚಾಟಿ

India: ಮೊದಲು ಗಡಿ ಭಯೋತ್ಪಾದನೆ ನಿಲ್ಲಿಸಿ-ವಿಶ್ವಸಂಸ್ಥೆಯಲ್ಲಿ ಪಾಕ್‌ ಗೆ ಭಾರತದ ಚಾಟಿ

Laapataa Ladies

Laapataa Ladies: ಕಾಣೆಯಾದ ಮಹಿಳೆಯರ ಆಸ್ಕರ್‌ ಪ್ರಯಾಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sky-dia

Tourism Spot: ರಾಜ್ಯದ ಎರಡನೇ “ಸ್ಕೈ ಡೈನಿಂಗ್‌’ ತಾಣವಾಗಲಿದೆ ಕುಂದಾಪುರದ ತ್ರಾಸಿ

Koderi

World Tourism Day: ಪ್ರವಾಸೋದ್ಯಮಕ್ಕೆ ಸಿಗಲಿ ಉತ್ತೇಜನ

16-cinema

UV Fusion: Cinema- ದಿ ರೆಡ್ ಬಲೂನ್, ಅಮೋರ್

15-uv-fusion

UV Fusion: ಬ್ಯಾಗ್‌ ಹಿಡಿದವರಿಗೊಂದು ಥ್ಯಾಂಕ್ಸ್‌

14-tourism

Netravati Trek: ದಿ ನೆಕ್ಸ್ಟ್ ಸ್ಟಾಪ್‌ ಈಸ್‌ ನೇತ್ರಾವತಿ ಪೀಕ್‌!

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Google 25th Birthday! ಗ್ಯಾರೇಜ್‌ನಿಂದ ಮೌಂಟ್‌ವಿವ್‌ವರೆಗೆ….ಗೂಗಲ್‌ ರಜತ ಸಂಭ್ರಮ

Google 25th Birthday! ಗ್ಯಾರೇಜ್‌ನಿಂದ ಮೌಂಟ್‌ವಿವ್‌ವರೆಗೆ….ಗೂಗಲ್‌ ರಜತ ಸಂಭ್ರಮ

Musheer Khan

Musheer Khan: ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡ ಯುವ ಬ್ಯಾಟರ್ ಮುಶೀರ್‌ ಖಾನ್‌

12-bng

Bengaluru: ಮಕ್ಕಳಲ್ಲಿ ವಿಜ್ಞಾನ ಆಸಕ್ತಿ ಮೂಡಿಸಲು “ಸೈನ್ಸ್‌ ಬಸ್‌’

Israel: ಬೈರೂತ್‌ ಮೇಲಿನ ದಾಳಿಯಲ್ಲಿ ಹೆಜ್ಬುಲ್ಲಾ ಮುಖ್ಯಸ್ಥ ಹಸನ್‌ ಸಾವು: ಇಸ್ರೇಲ್‌ ಸೇನೆ

Israel: ಬೈರೂತ್‌ ಮೇಲಿನ ದಾಳಿಯಲ್ಲಿ ಹೆಜ್ಬುಲ್ಲಾ ಮುಖ್ಯಸ್ಥ ಹಸನ್‌ ಸಾವು: ಇಸ್ರೇಲ್‌ ಸೇನೆ

Kedarnath Kuri Farm Movie Review

Kedarnath Kuri Farm Review: ಫಾರಂನಲ್ಲಿ ಪ್ರೇಮ ಸಂಭಾಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.