Conversation: ವೃದ್ಧಾಪ್ಯರ ಸಂವಾದ ಕೇಳಿದಾಗ


Team Udayavani, Jun 1, 2024, 1:45 PM IST

5-uv-fusion

ಹೀಗೆ ಒಂದು ದಿನ ಗೆಳೆಯರಿಗೆ ಕಾಯುತ್ತಾ ದೇವಸ್ಥಾನದಲ್ಲಿ ಕುಳಿತಿರುವಾಗ, ಪಕ್ಕದಲ್ಲಿಯೇ ಒಂದು ವೃದ್ಧಾಪ್ಯರ ಗುಂಪೊಂದು ಕುಳಿತಿತ್ತು. ಅವರನ್ನು ನೋಡಿದಾಗ ಅದೆಷ್ಟೋ ಅನುಭವಗಳನ್ನು ತುಂಬಿಕೊಂಡು ಕುಳಿತಿರಬಹುದು ಎಂದು ಆಸಕ್ತಿಯಿಂದ ಸುಮ್ಮನೆ ಅವರ ಸಂವಾದ ಆಲಿಸುತ್ತಾ ಕುಳಿತೆ.

ಜೀವನದಲ್ಲಿನ ಅನುಭವಗಳು ಹಾಗೂ ಅವರ ಕುಟುಂಬದ ಮೇಲಿನ ಕಾಳಜಿಯೇ ನನ್ನ ಗಮನ ಸೆಳೆಯಿತು. ವೃದ್ಧಾಪ್ಯರು ಇನ್ನೇನೂ ಕೊನೆ ಉಸಿರೆಳೆಯುವ ಸಂದರ್ಭದಲ್ಲಿಯೂ ಸಹ ಜೀವನದ ಮೇಲಿನ ಅವರ ಆಸಕ್ತಿ ಮತ್ತು ಹುಮ್ಮಸ್ಸು ನೋಡಿ ನನಗೆ ನಾಚಿಕೆಯಾಯಿತು. ಜೀವನವಿಡೀ ದುಡಿದು ದಣಿದ ದೇಹಗಳವು ಆದರೂ ಸಹ ಮತ್ತಷ್ಟು ತಮ್ಮ ಕುಟುಂಬದವರಿಗೆ ಏನಾದರೂ ಕೊಡುಗೆ ನೀಡಬೇಕೆಂಬ ಆ ಕಾಳಜಿಗೆ ಸರಿಸಾಟಿಯಾದ ಬೇರೊಂದು ಕಾಳಜಿ ಇಲ್ಲ ಅಂದೆನಿಸಿತು.

ಅವರ ಸಂವಾದದಲ್ಲಿ ಜೀವನದುದ್ದಕ್ಕೂ ಮಾಡಿದ ಸಾಧನೆ ಕುರಿತಾದ ಅಹಂಕಾರವಾಗಲಿ ಉತ್ಪ್ರೇಕ್ಷೆಯಾಗಲಿ ಕಾಣಲಿಲ್ಲ. ಕೇವಲ ನಿಷ್ಕಲ್ಮಶವಾದ ಕುಟುಂಬದ ಮೇಲಿನ ಕಾಳಜಿ ಮತ್ತು ಮತ್ತಷ್ಟು ಕೊಡುಗೆ ನೀಡಬೇಕೆಂಬ ಹಂಬಲ ಕಾಣುತಿತ್ತು. ಹಾಗೂ ಅವರ ಮಕ್ಕಳು ಮಾಡಿದ ಸಾಧನೆಯ ವರ್ಣನೆ ಕೇಳಿ ಬರುತ್ತಿತ್ತು.

ಈ ಸಂವಾದ ಕೇಳಿದಾಗ ನಮ್ಮ ಪೋಷಕರು ನಮಗಾಗಿ ಜೀವನವಿಡೀ ದುಡಿದು, ತಮ್ಮ ಸುಖ ಸಂತೋಷವನ್ನು ನಮ್ಮ ಖುಷಿಯಲ್ಲಿ ಕಾಣುವ ಪ್ರೇಮ ಕಾಳಜಿ ನನ್ನ ಗಮನ ಸೆಳೆಯಿತು. ಇದಕ್ಕೆ ಪ್ರತಿಯಾಗಿ ಅವರಿಗೆ ನಾವು ಕೊಡಲು ಸಾಧ್ಯ ಎಂದು ಚಿಂತೆಯೂ ಕಾಡತೊಡಗಿತು.

ನಮ್ಮ ಚಿಕ್ಕ ವಯಸ್ಸಿನಲ್ಲಿ ಹಿರಿಯರೇ ನಮಗೆ ಪ್ರಪಂಚ ಆದರೆ ಬೆಳೆಯುತ್ತಾ ದೊಡ್ಡವರಾದಂತೆ, ಅವರ ಮುಗ್ಧ ಮನಸನ್ನು ಕಡೆಗಣಿಸಿ ಬಿಡುತ್ತೇವೆ ಎಂಬುದು ಬೇಸರದ ಸಂಗತಿ. ಹಿರಿಯರ ಮನಸ್ಸಿನ ಭಾವನೆಯನ್ನು ಸಹ ಅರಿತುಕೊಳ್ಳದೇ ವರ್ತಿಸತೊಡಗುತ್ತೇವೆ.

ಆಧುನಿಕ ಪ್ರಪಂಚದಲ್ಲಿ ಈ ಸನ್ನಿವೇಶವನ್ನು ಅನೇಕ ರೀತಿಯ ಜನರಲ್ಲಿ ಕಾಣುತ್ತೇವೆ. ಕೆಲವು ಜನರು ವಯಸ್ಸಾದವರನ್ನು ಆಶ್ರಮಗಳಲ್ಲಿ ಬಿಟ್ಟು ಹೋಗುವುದು ಮತ್ತು ಮನೆಯಿಂದ ಹೊರಹಾಕುವುದನ್ನು ಕಾಣುತ್ತೇವೆ. ಇದು ಅದೆಷ್ಟರ ಮಟ್ಟಿಗೆ ಯೋಗ್ಯ ಎಂದು ಮನಗಾನುವ ಸನ್ನಿವೇಶ ಸೃಷ್ಟಿಯಾಗಿದೆ.

ನಮ್ಮ ಹಿರಿಯರು ತಮ್ಮ ಜೀವನವಿಡೀ ಕುಟುಂಬದವರ ಶಾಂತಿ ಮತ್ತು ಸುಖಕರ ಜೀವನ ನಡೆಸಲು ದುಡಿದರೇ ಹೊರತು ತಮ್ಮ ಸ್ವಾರ್ಥಕ್ಕಾಗಿ ಅಲ್ಲ ಎಂದು ಆ ವೃದ್ಧಾಪ್ಯರ ಸಂವಾದ ಕೇಳಿದಾಗ, ನಾವು ಕೂಡ ಮುಂದಿನ ದಿನಗಳಲ್ಲಿ ವೃದ್ಧಾಪ್ಯ ಹಂತವನ್ನು ನಾವು ತಲುಪಿದಾಗ ಅವರ ಮಹತ್ವ ಅರಿಯಬಹುದು ಎಂದು ನನ್ನ ಮನಕೆ ಕನವರಿಕೆಯಾಯಿತು. ಇದರಿಂದ ಜೀವನವಿಡೀ ನಮಗಾಗಿ ನಮ್ಮ ಏಳಿಗೆಗಾಗಿ ಶ್ರಮಿಸಿದ ನಮ್ಮ ಹಿರಿಯರಿಗೆ ಒಂದಿಷ್ಟು ಕಾಳಜಿ ವಹಿಸುವುದು ಅಗತ್ಯ ಎಂದೆನಿಸಿತು.

ಮಡು ಮೂಲಿಮನಿ,

ಧಾರವಾಡ ಕೆಯುಡಿ

ಟಾಪ್ ನ್ಯೂಸ್

MOdi (3)

Jammu and Kashmir ಜನತೆ ಭ್ರಷ್ಟ ಮುಕ್ತ ಸರಕಾರ ಬಯಸಿದ್ದಾರೆ: ಮೋದಿ

UNITED NATIONS

UN ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಸ್ಥಾನ: ಪೋರ್ಚುಗಲ್‌ ಬೆಂಬಲ

1-wewewq

PM ರೇಸ್‌ನಲ್ಲಿ ನಾನು ಇಲ್ಲ; ಬೇಕಿದ್ದರೇ ಮೋದಿ ಕೇಳಿ: ಗಡ್ಕರಿ

Manglrui

Mangaluru: ಸಂಸ್ಥೆಯ ಬೆಳವಣಿಗೆಯಲ್ಲಿ ಮಾನವ ಸಂಪನ್ಮೂಲ ಪಾತ್ರ ಪ್ರಮುಖ: ಮಂಜುನಾಥ ಭಂಡಾರಿ

1-asasa

Test; ನ್ಯೂಜಿಲ್ಯಾಂಡ್‌ ಆಲೌಟ್‌ 88 : ಲಂಕೆಗೆ 514 ರನ್‌ ದಾಖಲೆ ಮುನ್ನಡೆ

dinesh-gu

Dinesh Gundurao; ತಿಂಗಳೊಳಗೆ ಗೃಹ ಆರೋಗ್ಯ ಯೋಜನೆ ಜಾರಿ

leopard

leopard: ಮೂಲ್ಕಿ ಕೊಯ್ಯಾರಿನಲ್ಲಿ ಸಣ್ಣ ಮರಿಯೊಂದಿಗೆ ಚಿರತೆ ಪ್ರತ್ಯಕ್ಷ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sky-dia

Tourism Spot: ರಾಜ್ಯದ ಎರಡನೇ “ಸ್ಕೈ ಡೈನಿಂಗ್‌’ ತಾಣವಾಗಲಿದೆ ಕುಂದಾಪುರದ ತ್ರಾಸಿ

Koderi

World Tourism Day: ಪ್ರವಾಸೋದ್ಯಮಕ್ಕೆ ಸಿಗಲಿ ಉತ್ತೇಜನ

16-cinema

UV Fusion: Cinema- ದಿ ರೆಡ್ ಬಲೂನ್, ಅಮೋರ್

15-uv-fusion

UV Fusion: ಬ್ಯಾಗ್‌ ಹಿಡಿದವರಿಗೊಂದು ಥ್ಯಾಂಕ್ಸ್‌

14-tourism

Netravati Trek: ದಿ ನೆಕ್ಸ್ಟ್ ಸ್ಟಾಪ್‌ ಈಸ್‌ ನೇತ್ರಾವತಿ ಪೀಕ್‌!

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

congress

Haryana ಅನ್ನದಾತರ ಕಲ್ಯಾಣಕ್ಕೆ ಆಯೋಗ ರಚನೆ: ಕಾಂಗ್ರೆಸ್‌ ವಾಗ್ಧಾನ

MOdi (3)

Jammu and Kashmir ಜನತೆ ಭ್ರಷ್ಟ ಮುಕ್ತ ಸರಕಾರ ಬಯಸಿದ್ದಾರೆ: ಮೋದಿ

court

Jama Masjid:ಮಾಜಿ ಪಿಎಂ ಸಹಿ ಕಡತ ಸಲ್ಲಿಸದ್ದಕ್ಕೆ ಕೋರ್ಟ್‌ ಟೀಕೆ

UNITED NATIONS

UN ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಸ್ಥಾನ: ಪೋರ್ಚುಗಲ್‌ ಬೆಂಬಲ

1-wewewq

PM ರೇಸ್‌ನಲ್ಲಿ ನಾನು ಇಲ್ಲ; ಬೇಕಿದ್ದರೇ ಮೋದಿ ಕೇಳಿ: ಗಡ್ಕರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.