Unity in diversity: ಭಾರತೀಯತೆಯ ಅಂತಃಸತ್ವ …


Team Udayavani, Jun 1, 2024, 2:45 PM IST

6-uv-fusion

“ಭಾರತ” ವಿವಿಧತೆಯಲ್ಲಿ ಏಕತೆಯುಳ್ಳ ಅಗಣಿತ ಸುಂದರತೆಯನ್ನು ತನ್ನೊಳಗೆ ಅಡಗಿಸಿಕೊಂಡಿರುವ ಅದ್ಭುತವಾದ ದೇಶ. ‘ಭ’ ಎಂದರೆ ಬೆಳಕು. ಬೆಳಕನ್ನು ಅರಸುತ್ತಾ, ಬೆಳಕಲ್ಲೇ ತಾ ಸೇರಿ ತಾನೇ ಬೆಳಕಾಗುವವ ಭಾರತೀಯ. ಬೆಳಕು ಜ್ಞಾನದ ಸಂಕೇತ. ಇಲ್ಲಿನ ಮಣ್ಣಿನ ಪ್ರತೀ ಕಣ ಕಣದಲ್ಲೂ ಶ್ರೇಷ್ಠ ಭಾವಗಳ ಸಮ್ಮಿಳಿತವಿದೆ.

ಒಂದೆಡೆ, ಇಡೀ ವಿಶ್ವಕ್ಕೆ ನಮ್ಮ ದೇಶದ ಸಂಸ್ಕೃತಿಯನ್ನು ಸಾರಿ ತಿಳಿಸಿದ ಸ್ವಾಮಿ ವಿವೇಕಾನಂದರು ಹೇಳುತ್ತಾರೆ ಜಗತ್ತಿನ ಯಾವುದೇ ಮೂಲೆಯಲ್ಲಿ ಒಳಿತು ಎನ್ನುವಂತಹ ವಿಚಾರಧಾರೆ ಸಿಕ್ಕರೆ, ನಿಸ್ಸಂದೇಹವಾಗಿ ಅದು ಭಾರತದಿಂದ ಹೋಗಿದೆ ಎಂದು. ಮನುಕುಲದ ಒಳಿತಿಗಾಗಿ ಮತ್ತು ಉದ್ಧಾರಕ್ಕಾಗಿ ಅವಶ್ಯವಿರುವ ಎಲ್ಲ ಸಂಗತಿಗಳನ್ನು ತಿಳಿಸುವ ಸಲುವಾಗಿ ಅನೇಕ ರೀತಿಯ ಆಚರಣೆಗಳ ಮೂಲಕ ಮಾಹಿತಿ/ ಪರಿಹಾರೋಪಾಯಗಳನ್ನು ನಮ್ಮ ಸಂಸ್ಕೃತಿಯ ಭಾಗವನ್ನಾಗಿಸಿದ್ದಾರೆ.

ನಾವು ಯೋಚಿಸುವ ಅಥವಾ ನಡೆಯುವ, ನುಡಿಯುವ ಪ್ರತೀ ಕಾರ್ಯಕ್ಕೂ ಹೇಗೆ ಕರ್ಮಗಳ ಲೆಕ್ಕಾಚಾರವಿದೆ ಎನ್ನುವುದನ್ನು ಕರ್ಮ ಯೋಗ ಅಥವಾ ಕಾಯಕವೇ ಕೈಲಾಸ ಎನ್ನುವ ಸೂತ್ರಗಳ ಮೂಲಕ ನಡೆಯುವ ದಾರಿಯಲ್ಲಿ ಅನುಸರಿಸಬೇಕಾದ ಎಚ್ಚರಿಕೆ, ಮತ್ತು ಹೇಗೆ ನಡೆಯಬೇಕೆಂಬ ನೀತಿ ನಿಯತಿಗಳನ್ನು ನೀಡಿದ್ದಾರೆ.

ಆಧುನಿಕ ಜಗತ್ತಿನಲ್ಲಿ ಮನುಜ ತನ್ನ ಅನುಕೂಲಗಳಿಗಾಗಿ ಅನೇಕ ಆವಿಷ್ಕಾರಗಳನ್ನು ಮಾಡಿಕೊಂಡು ಜೀವನ ಮಟ್ಟವನ್ನು ಸುಧಾರಿಸಿಕೊಳ್ಳುತ್ತಿದ್ದಾನೆ. ಮತ್ತು ಪ್ರತೀ ಕ್ಷಣ ಹೊಸ ಹೊಸ ಸಂಶೋಧನೆಗಳು ಸೃಷ್ಟಿಯ ರಹಸ್ಯ ಭೇಧಿಸಲು ನಡೆಯುತ್ತಲೇ ಇವೆ. ಆದರೆ ಈ ಎಲ್ಲ ವಿದ್ಯಾಮಾನಗಳನ್ನು ಮೀರಿದ, ಇಡೀ ಬ್ರಹ್ಮಾಂಡವನ್ನು ನಡೆಸುತ್ತಿರುವ ಅನೂಹ್ಯ ಶಕ್ತಿಯೊಂದಿದೆ, ಎಂಬುದರ ಅರಿವಿನ ಹರಿವಿನೊಳು ಹರಿದು ಹೋದಾಗ ಹುಟ್ಟುವ ಭಕ್ತಿಯೋಗ ಮತ್ತು ಜ್ಞಾನಯೋಗದ ಅದ್ಭುತ ಕೊಡುಗೆಯಿದೆ ಇಲ್ಲಿ.

“ಲೋಕಾಃ ಸಮಸ್ತಃ ಸುಖೀನೋ ಭವಂತು’ ಎನ್ನುವುದು ಈ ದೇಶದ, ಈ ಮಣ್ಣಿನ, ಇಲ್ಲಿನ ಸಂಸ್ಕೃತಿಯ ಮೂಲ ಮಂತ್ರ. ಸಮಸ್ತ ಸೃಷ್ಟಿಯ ಹಿತವ ಬಯಸುವ ವಿಶ್ವ ದೃಷ್ಟಿ ನಮ್ಮ ಸಂಸ್ಕೃತಿಯ ವಿಶಾಲ ಮತ್ತು ವಿಸ್ತಾರದ ಆಳವನ್ನು ತೋರಿಸುತ್ತದೆ. ವಸುಧೈವ ಕುಟುಂಬಕಂ ಎಂಬುದು ನಮ್ಮ ಒಂದು ಉಪನಿಷತ್‌ನಲ್ಲಿ ಕಂಡುಬರುವ ವಾಕ್ಯ. “ಜಗತ್ತು ಒಂದು ಕುಟುಂಬ” ಎಂಬುದು ಇದರರ್ಥ. ಯಾವುದೊ ಒಂದು ವಿಷಯ, ವ್ಯಕ್ತಿ, ಸ್ಥಳ, ವಸ್ತು ಮತ್ತು ವಿಚಾರಗಳಿಗೆ ಸೀಮಿತವಾಗದೆ, ಸಂಕುಚಿತ ಭಾವಗಳಿಗೆ ಒಳಗಾಗದೆ ವಿಶಾಲ ಮನೋಭಾವ ಬೆಳೆಸುವ ಸಮೃದ್ಧ ಮೌಲ್ಯಧಾರೆಗಳ ಸಾಗರ ನಮ್ಮ ಸಂಸ್ಕೃತಿ. ಇಲ್ಲಿ ನಾವು ಆಚರಿಸುವ ಪ್ರತೀ ಆಚರಣೆಗಳ ಹಿಂದಿನ ಸತ್ಯ ಪ್ರಶ್ನಿಸುವ ಹಕ್ಕಿದೆ. ಉತ್ತರ ಹುಡುಕಿ ಹೊರಡುವ ಸ್ವಾತಂತ್ರ್ಯವಿದೆ. ಕೆಲವು ಮತಗಳ ಸಾರ ತಿಳಿಸುವಂತೆ, ನೀನಿದನ್ನು ಪಾಲಿಸಲೇ ಬೇಕು ಎಂಬ ಯಾವ ಅಂಧ ಒತ್ತಡದ ಹೇರಿಕೆಗಳಿಲ್ಲ..!

ಹಿರಿಯರು ಅಥವಾ ನಮ್ಮ ಪೂರ್ವಜರು ಆಚರಿಸಿ ಕಂಡುಕೊಂಡ ಬದುಕಿನ ಅನುಭವದ ಸಾರಗಳು ಗಾದೆಗಳಾಗಿ, ನುಡಿಗಟ್ಟುಗಳಾಗಿ ಸುಲಭದಲ್ಲಿ ಮುಂದಿನ ತಲೆಮಾರುಗಳಿಗೆ ಜೀವನದ ಗತಿಮತಿ ತಿಳಿಸುವ ದಾರಿದೀಪಗಳಾಗಿವೆ. ನಮ್ಮ ಹಿಂದಿನವರು ಹಾಕಿಕೊಟ್ಟು ಹೋದ ಎಲ್ಲೆ ಮೀರದ ಪ್ರತೀ ಆಚರಣೆಗಳಲ್ಲೂ ಘನ ಆದರ್ಷದ ಸೌಂದರ್ಯವಿದೆ. ಇದು ನಾವೆಲ್ಲರೂ ನಮ್ಮ ಸಂಸ್ಕೃತಿ ಎಂಬ ವೃಕ್ಷದ ಬಗ್ಗೆ ತಿಳಿದುಕೊಳ್ಳುತ್ತಾ ಬೇರಿನ ಆಳಕ್ಕೆ ಧುಮುಕುವ ಸಮಯ. ಇಲ್ಲಿನ ಸತ್ವದ ಸತ್ಯ ಅರಿತು, ಅದರೊಳಗೆ ಬೆರೆತು, ಅದೇ ಹಳೆ ಬೇರಿಗೆ ಹೊಸ ಚಿಗುರಾಗಿ ನಳನಳಿಸುವ ಸಮಯವಾಗಿದೆ.

-ಪಲ್ಲವಿ ಚೆನ್ನಬಸಪ್ಪ

ಗಡಿಹಳ್ಳಿ ಚಿಕ್ಕಮಗಳೂರು

ಟಾಪ್ ನ್ಯೂಸ್

Google 25th Birthday! ಗ್ಯಾರೇಜ್‌ನಿಂದ ಮೌಂಟ್‌ವಿವ್‌ವರೆಗೆ….ಗೂಗಲ್‌ ರಜತ ಸಂಭ್ರಮ

Google 25th Birthday! ಗ್ಯಾರೇಜ್‌ನಿಂದ ಮೌಂಟ್‌ವಿವ್‌ವರೆಗೆ….ಗೂಗಲ್‌ ರಜತ ಸಂಭ್ರಮ

Musheer Khan

Musheer Khan: ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡ ಯುವ ಬ್ಯಾಟರ್ ಮುಶೀರ್‌ ಖಾನ್‌

Israel: ಬೈರೂತ್‌ ಮೇಲಿನ ದಾಳಿಯಲ್ಲಿ ಹೆಜ್ಬುಲ್ಲಾ ಮುಖ್ಯಸ್ಥ ಹಸನ್‌ ಸಾವು: ಇಸ್ರೇಲ್‌ ಸೇನೆ

Israel: ಬೈರೂತ್‌ ಮೇಲಿನ ದಾಳಿಯಲ್ಲಿ ಹೆಜ್ಬುಲ್ಲಾ ಮುಖ್ಯಸ್ಥ ಹಸನ್‌ ಸಾವು: ಇಸ್ರೇಲ್‌ ಸೇನೆ

1

ʼದೇವರʼ ಸಿನಿಮಾ ನೋಡುತ್ತಿರುವಾಗ ಥಿಯೇಟರ್‌ನಲ್ಲೇ ಕುಸಿದು ಬಿದ್ದು ಮೃತಪಟ್ಟ Jr NTR ಅಭಿಮಾನಿ

ಭೀಕರ ರಸ್ತೆ ಅಪಘಾತ… ಪುರಿ ಜಗನ್ನಾಥನ ದರ್ಶನಕ್ಕೆ ಹೊರಟಿದ್ದ ನಾಲ್ವರು ಯಾತ್ರಿಕರು ಮೃತ್ಯು

Bus Overturns… ಪುರಿ ಜಗನ್ನಾಥನ ದರ್ಶನಕ್ಕೆ ಹೊರಟಿದ್ದ ನಾಲ್ವರು ಯಾತ್ರಿಕರು ಮೃತ್ಯು

India: ಮೊದಲು ಗಡಿ ಭಯೋತ್ಪಾದನೆ ನಿಲ್ಲಿಸಿ-ವಿಶ್ವಸಂಸ್ಥೆಯಲ್ಲಿ ಪಾಕ್‌ ಗೆ ಭಾರತದ ಚಾಟಿ

India: ಮೊದಲು ಗಡಿ ಭಯೋತ್ಪಾದನೆ ನಿಲ್ಲಿಸಿ-ವಿಶ್ವಸಂಸ್ಥೆಯಲ್ಲಿ ಪಾಕ್‌ ಗೆ ಭಾರತದ ಚಾಟಿ

Laapataa Ladies

Laapataa Ladies: ಕಾಣೆಯಾದ ಮಹಿಳೆಯರ ಆಸ್ಕರ್‌ ಪ್ರಯಾಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sky-dia

Tourism Spot: ರಾಜ್ಯದ ಎರಡನೇ “ಸ್ಕೈ ಡೈನಿಂಗ್‌’ ತಾಣವಾಗಲಿದೆ ಕುಂದಾಪುರದ ತ್ರಾಸಿ

Koderi

World Tourism Day: ಪ್ರವಾಸೋದ್ಯಮಕ್ಕೆ ಸಿಗಲಿ ಉತ್ತೇಜನ

16-cinema

UV Fusion: Cinema- ದಿ ರೆಡ್ ಬಲೂನ್, ಅಮೋರ್

15-uv-fusion

UV Fusion: ಬ್ಯಾಗ್‌ ಹಿಡಿದವರಿಗೊಂದು ಥ್ಯಾಂಕ್ಸ್‌

14-tourism

Netravati Trek: ದಿ ನೆಕ್ಸ್ಟ್ ಸ್ಟಾಪ್‌ ಈಸ್‌ ನೇತ್ರಾವತಿ ಪೀಕ್‌!

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Google 25th Birthday! ಗ್ಯಾರೇಜ್‌ನಿಂದ ಮೌಂಟ್‌ವಿವ್‌ವರೆಗೆ….ಗೂಗಲ್‌ ರಜತ ಸಂಭ್ರಮ

Google 25th Birthday! ಗ್ಯಾರೇಜ್‌ನಿಂದ ಮೌಂಟ್‌ವಿವ್‌ವರೆಗೆ….ಗೂಗಲ್‌ ರಜತ ಸಂಭ್ರಮ

Musheer Khan

Musheer Khan: ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡ ಯುವ ಬ್ಯಾಟರ್ ಮುಶೀರ್‌ ಖಾನ್‌

12-bng

Bengaluru: ಮಕ್ಕಳಲ್ಲಿ ವಿಜ್ಞಾನ ಆಸಕ್ತಿ ಮೂಡಿಸಲು “ಸೈನ್ಸ್‌ ಬಸ್‌’

Israel: ಬೈರೂತ್‌ ಮೇಲಿನ ದಾಳಿಯಲ್ಲಿ ಹೆಜ್ಬುಲ್ಲಾ ಮುಖ್ಯಸ್ಥ ಹಸನ್‌ ಸಾವು: ಇಸ್ರೇಲ್‌ ಸೇನೆ

Israel: ಬೈರೂತ್‌ ಮೇಲಿನ ದಾಳಿಯಲ್ಲಿ ಹೆಜ್ಬುಲ್ಲಾ ಮುಖ್ಯಸ್ಥ ಹಸನ್‌ ಸಾವು: ಇಸ್ರೇಲ್‌ ಸೇನೆ

Kedarnath Kuri Farm Movie Review

Kedarnath Kuri Farm Review: ಫಾರಂನಲ್ಲಿ ಪ್ರೇಮ ಸಂಭಾಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.