Food Waste: ಒಂದೊಂದು ಆಹಾರಕ್ಕೂ ಇದೆ ಅರ್ಥ, ಮಾಡದಿರೋಣ ವ್ಯರ್ಥ


Team Udayavani, Jun 1, 2024, 3:50 PM IST

7-food

ಇತ್ತೀಚಿನ ದಿನಗಳಲ್ಲಿ ಎಲ್ಲಿ ನೋಡಿದರೂ ಮದುವೆ ಸಮಾರಂಭಗಳೇ ಹೆಚ್ಚಾಗಿವೆ. ಹೀಗೆ ನಾನು ಒಂದು ದಿನ ನನ್ನ ಪರಿಚಯದವರ ಮದುವೆ ಸಮಾರಂಭಕ್ಕೆ ಹೋಗಿದ್ದೆ. ಅಲ್ಲಿ ಕಂಡ ಕೆಲವು ದೃಶ್ಯಗಳು ನನ್ನ ಕಣ್ಣಿಗೆ ಕಟ್ಟಿದಂತಿತ್ತು. ಅಲ್ಲಿ ಜನಸಾಗರವೇ ತುಂಬಿತ್ತು. ಅದರ ಮಧ್ಯ ಮಿನುಗುತ್ತಿದ್ದ ಪುಟಾಣಿ ಮಕ್ಕಳು ಎಲ್ಲರ ಕಣ್ಮನ ಸೆಳೆಯುವಂತಿದ್ದರು.

ಅಪರಾಹ್ನದ ಹೊತ್ತು….ನನ್ನ ಹೊಟ್ಟೆ ಹಸಿವಿನಿಂದ ಚುರು ಗುಟ್ಟಲು ಶುರು ಮಾಡಿತು. ಅಲ್ಲಿಯೇ ನನ್ನ ಪರಿಚಯದ ಅಕ್ಕನ ಜತೆ ಊಟಕ್ಕೆ ತೆರಳಿದೆ. ಊಟಕ್ಕೆ ಹೋಗಿ ಕುಳಿತ ಮೇಲೆ ಅಲ್ಲಿ ಸಾಲುಸಲಾಗಿ ಬರುತ್ತಿದ್ದ ವಿವಿಧ ರೀತಿಯ ಭಕ್ಷ ಭೋಜನವನ್ನು ಕಂಡೇ ನನಗೆ ಹೊಟ್ಟೆ ತುಂಬಿದಂತಾಯಿತು.

ನಾನು ನನಗೆ ಬೇಕಾದಷ್ಟು ಹಾಕಿಸಿಕೊಂಡು ಒಂದು ಅಗುಳನ್ನು ಬಿಡದೆ ಊಟ ಮಾಡಿ ಮುಗಿಸಿದೆ. ಹೀಗೆ ನೋಡುತ್ತಾ ಪಕ್ಕದವರ ಎಲೆಯ ಮೇಲೆ ಕಣ್ಣಾಡಿಸಿದಾಗ ಉಳಿದಿದ್ದ ಸಾಕಷ್ಟು ಅನ್ನದ ಅಗುಳು ಮತ್ತು ಇನ್ನಿತರ ಬಗೆ ಬಗೆಯ ಖಾದ್ಯಗಳನ್ನು ಕಂಡು ನನ್ನ ಮನಸ್ಸಿಗೆ ತುಂಬಾ ಬೇಸರವಾಯಿತು. ಏಕೆಂದರೆ ಒಂದು ಹೊತ್ತಿನ ಊಟಕ್ಕೂ ಪರದಾಡುವ ಈ ಕಾಲದಲ್ಲಿ ಅನ್ನದ ಬೆಲೆಯೇ ತಿಳಿಯದೆ ಅಜ್ಞಾನಿಯಂತೆ ವರ್ತಿಸುವ ಜನರಿರುವುದು ವಿಷಾದದ ಸಂಗತಿ.

ಅಲ್ಲಿ, ಉಳಿದ ಅನ್ನವನ್ನು ಬಿಸಾಡಿದ ದೃಶ್ಯವನ್ನು ನೋಡಿ ನನಗೆ ಇದನ್ನು ಈ ರೀತಿಯಾಗಿ ಹಾಳು ಮಾಡುವ ಬದಲು ಹಸಿವಿನಿಂದ ಒದ್ದಾಡುವ ಅದೆಷ್ಟೋ ಮಂದಿಗೆ ದಾನ ಮಾಡುವುದರಿಂದ ಅವರಿಗಾದರೂ ತೃಪ್ತಿಯಾಗುತ್ತಿತ್ತು ಎಂದು ಎನಿಸಿತು. ಇಂದಿನ ಆಧುನಿಕ ಕಾಲಘಟ್ಟದಲ್ಲಿ ಜನರು ಹಸಿವಿಗಾಗಿ ತಿನ್ನದೇ ಆಸೆಗಾಗಿ ತಿನ್ನುತ್ತಿದ್ದಾರೆ.

ಇದು ಒಂದು ಫ್ಯಾಶನ್‌ ಆಗಿ ಹೋಗಿದೆ. ಎಷ್ಟೋ ಕಡೆಗಳಲ್ಲಿ ಆಹಾರಗಳನ್ನು ಟನ್‌ಗಳಷ್ಟು ಹಾಳು ಮಾಡುತ್ತಿದ್ದಾರೆ. ಹಸಿದವನಿಗೆ ತಂಗಳನ್ನವು ಅಮೃತವಿದ್ದಂತೆ ಎಂಬ ಮಾತು ಸುಳ್ಳಲ್ಲ. ಏಕೆಂದರೆ ಹಸಿದವನಿಗೆ ಮಾತ್ರ ಅನ್ನದ ಬೆಲೆ ಗೊತ್ತಿರುತ್ತದೆ.

ಮುಂದೆಯಾದರೂ ಯುವ ಜನಾಂಗ ಇದರ ಬಗ್ಗೆ ಗಮನ ಹರಿಸಬೇಕಾಗಿದೆ. ಅನ್ನವನ್ನು ಮಿತವಾ ಗಿ ಬಳಸಿ ಹಸಿದವರಿಗೆ ಅನ್ನ ನೀಡುವಂತವರಾಗಬೇಕು.

ಪ್ರಜ್ಞಾ ಆಚಾರ್ಯ

ಪ್ರಥಮ ಬಿ.ಎ.,  ಸರಕಾರಿ ಪ್ರಥಮ ದರ್ಜೆ, ಕಾಲೇಜು

ಕಾರ್ಕಳ

ಟಾಪ್ ನ್ಯೂಸ್

Exam

SSLC ಪರೀಕ್ಷೆ ಪ್ರಶ್ನೆಪತ್ರಿಕೆ ಮತ್ತೆ ಸೋರಿಕೆ: ಅವಾಂತರ ಸೃಷ್ಟಿ

1-www

JDS ನಾಯಕ ಸೆರೆ; ಕೋಟಿ ರೂ. ಪಡೆದು ಸ್ವಾಮೀಜಿಗೆ ವಂಚನೆ!

rahul gandhi

Ayodhya; ನಾಚ್‌, ಗಾನಾ ಮಂದಿರ ಉದ್ಘಾಟನೆ: ರಾಹುಲ್‌ ಗಾಂಧಿ ಟೀಕೆ

MOdi (3)

Jammu and Kashmir ಜನತೆ ಭ್ರಷ್ಟ ಮುಕ್ತ ಸರಕಾರ ಬಯಸಿದ್ದಾರೆ: ಮೋದಿ

UNITED NATIONS

UN ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಸ್ಥಾನ: ಪೋರ್ಚುಗಲ್‌ ಬೆಂಬಲ

1-wewewq

PM ರೇಸ್‌ನಲ್ಲಿ ನಾನು ಇಲ್ಲ; ಬೇಕಿದ್ದರೇ ಮೋದಿ ಕೇಳಿ: ಗಡ್ಕರಿ

Manglrui

Mangaluru: ಸಂಸ್ಥೆಯ ಬೆಳವಣಿಗೆಯಲ್ಲಿ ಮಾನವ ಸಂಪನ್ಮೂಲ ಪಾತ್ರ ಪ್ರಮುಖ: ಮಂಜುನಾಥ ಭಂಡಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sky-dia

Tourism Spot: ರಾಜ್ಯದ ಎರಡನೇ “ಸ್ಕೈ ಡೈನಿಂಗ್‌’ ತಾಣವಾಗಲಿದೆ ಕುಂದಾಪುರದ ತ್ರಾಸಿ

Koderi

World Tourism Day: ಪ್ರವಾಸೋದ್ಯಮಕ್ಕೆ ಸಿಗಲಿ ಉತ್ತೇಜನ

16-cinema

UV Fusion: Cinema- ದಿ ರೆಡ್ ಬಲೂನ್, ಅಮೋರ್

15-uv-fusion

UV Fusion: ಬ್ಯಾಗ್‌ ಹಿಡಿದವರಿಗೊಂದು ಥ್ಯಾಂಕ್ಸ್‌

14-tourism

Netravati Trek: ದಿ ನೆಕ್ಸ್ಟ್ ಸ್ಟಾಪ್‌ ಈಸ್‌ ನೇತ್ರಾವತಿ ಪೀಕ್‌!

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Exam

SSLC ಪರೀಕ್ಷೆ ಪ್ರಶ್ನೆಪತ್ರಿಕೆ ಮತ್ತೆ ಸೋರಿಕೆ: ಅವಾಂತರ ಸೃಷ್ಟಿ

1-www

JDS ನಾಯಕ ಸೆರೆ; ಕೋಟಿ ರೂ. ಪಡೆದು ಸ್ವಾಮೀಜಿಗೆ ವಂಚನೆ!

rahul gandhi

Ayodhya; ನಾಚ್‌, ಗಾನಾ ಮಂದಿರ ಉದ್ಘಾಟನೆ: ರಾಹುಲ್‌ ಗಾಂಧಿ ಟೀಕೆ

congress

Haryana ಅನ್ನದಾತರ ಕಲ್ಯಾಣಕ್ಕೆ ಆಯೋಗ ರಚನೆ: ಕಾಂಗ್ರೆಸ್‌ ವಾಗ್ಧಾನ

MOdi (3)

Jammu and Kashmir ಜನತೆ ಭ್ರಷ್ಟ ಮುಕ್ತ ಸರಕಾರ ಬಯಸಿದ್ದಾರೆ: ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.