Japan Movie: ಚಿತ್ರ ಸಂತೆ: ಕುರಸೋವಾರ ಡ್ರೀಮ್ಸ್‌ ನೋಡಿದ್ದೀರಾ?


Team Udayavani, Jun 1, 2024, 4:45 PM IST

9-uv-fusion

ಒಂದು ಚಲನಚಿತ್ರವನ್ನು ನೂರು ಭಾಗಗಳಾಗಿ ಮಾಡಿದರೆ ಹೇಗಿರಬಹುದು? ಎಲ್ಲವೂ ಚೂರು ಚೂರು ಎನ್ನಿಸಬಹುದು. ಹಾಗಾದರೆ ಒಂದು ಕಲ್ಲಂಗಡಿ ಹಣ್ಣನ್ನು ನೂರು ಹೋಳುಗಳನ್ನಾಗಿ ಮಾಡಿದಾಗ ಏನನ್ನಿಸಬಹುದು?

ಅವೂ ಚೂರುಗಳೇ. ಆದರೆ ಪ್ರತಿ ಹೋಳೂ ಹಣ್ಣಿನದ್ದೇ. ಅದರಲ್ಲಿ ರಸವಿದೆ, ಸಿಹಿಯಿದೆ, ಸ್ವಾದವಿದೆ..ಎಲ್ಲವೂ..

ಈಗ ನಾವು ಚಲನಚಿತ್ರವನ್ನೂ ಹಾಗೆಯೇ ನೋಡಬಹುದಲ್ಲವೇ? ಭಾವಿಸಬಹುದಲ್ಲವೇ? ಸಾಧ್ಯವಿದೆಯೇ?

ಸಾಧ್ಯವಿದೆ. ಹಾಗೆ ಖಂಡಿತಾ ಭಾವಿಸಬಹುದು, ಭಾವಿಸಲೂ ಬೇಕು. ಹೇಗೆ ನಾವು ಪ್ರತಿ ಹೋಳನ್ನು ಕಲ್ಲಂಗಡಿ ಎಂಬ ಭಾವದೊಂದಿಗೆ ಸ್ವೀಕರಿಸುತ್ತೇವೆಯೋ ಅದೇ ಭಾವದಲ್ಲಿ ಚಲನಚಿತ್ರವನ್ನೂ ಸ್ವೀಕರಿಸಬೇಕು. ಆದರೆ ನಾವು ಕಥೆಯ ದಾರ ಹಿಡಿದುಕೊಂಡು ಪೋಣಿಸಲು ಹೊರಡುತ್ತೇವೆ. ಆಗ ಪ್ರತಿ ಭಾಗಗಳಲ್ಲಿನ ಚಿತ್ರ ಕಾಣಿಸುವುದಿಲ್ಲ.

ಅಕಿರಾ ಕುರಸೋವಾ ಜಪಾನಿನ ಅತ್ಯಂತ ಖ್ಯಾತ ಚಲನಚಿತ್ರ ನಿರ್ದೇಶಕ. ವಾಸ್ತವವಾಗಿ ಕುರಸೋವಾ ಬರೀ ಜಪಾನಿಗೆ ಸೀಮಿತವಲ್ಲ, ವಿಶ್ವ ಚಿತ್ರ ಜಗತ್ತಿಗೆ ಸೇರಿದವರು.

ಅವರು 1990 ರಲ್ಲಿ ಒಂದು ಹೂಗುಚ್ಛದಂತೆ ಸಿನಿಮಾ ಗುಚ್ಛವನ್ನು ನಿರ್ಮಿಸಿದರು. ಅದರ ಹೆಸರು ಡ್ರೀಮ್ಸ್‌. ಹೇಗೆ ನವರಸಗಳಿವೆಯೋ ಅದರಂತೆ ಎಂಟು ಹೂವುಗಳ ಒಂದು ಗುಚ್ಛವಿದು. ಒಂದೊಂದಕ್ಕೆ ಒಂದೊಂದು ಬಣ್ಣ, ಒಂದೊಂದು ಭಾವ, ಒಂದೊಂದು ರಸ.

ನೀವು ಒಮ್ಮೆಲೆ ಎಂಟೂ ಹೂಗಳನ್ನು ಒಟ್ಟಿಗೆ ಹಿಡಿದುಕೊಂಡರೆ ಒಂದು ಹೂಗುಚ್ಛ. ಅದು ಬೇಡವೆಂದೆನಿಸಿ ಒಂದೊಂದಾಗಿ ಬಿಡಿ ಬಿಡಿಯಾಗಿಟ್ಟು ನೋಡಿದಾಗಲೂ ಹೂವಿನ ಸೌಂದರ್ಯಕ್ಕಾಗಲೀ, ಬಣ್ಣಕ್ಕಾಗಲೀ ಯಾವುದೇ ಧಕ್ಕೆ ಬಾರದು.

ಒಂದೊಂದು ಹೂವೂ ಸಹ ತನ್ನದೇ ಆದ ಕಥೆಯನ್ನು ಹೇಳಬಲ್ಲದು.

ಸಿನಿಮಾ ಎಂದರೆ ಹಾಗೆಯೇ. ಪ್ರತಿ ದೃಶ್ಯಕ್ಕೂ ಸ್ವತಂತ್ರ ಅಸ್ತಿತ್ವವೂ ಇರುತ್ತದೆ. ಒಟ್ಟೂ ಅಸ್ತಿತ್ವ-ರೂಪವೂ ಇರುತ್ತದೆ. ಆಗಲೇ ಅದರ ಸೊಗಸು ಹೆಚ್ಚು, ಹೂ ಗುಚ್ಛದಲ್ಲಿನ ಪ್ರತಿ ಹೂವಿನ ಹಾಗೆಯೇ.

ನೀವು ಡ್ರೀಮ್ಸ್‌ ನೋಡಿಲ್ಲವಾದರೆ ತಪ್ಪದೇ ನೋಡಿ. ಯೂ ಟ್ಯೂಬ್‌ ನಲ್ಲೂ ಲಭ್ಯವಿದೆ.

„ ಋತುಮಿತ್ರ,

ಕುಂದಾಪುರ

ಟಾಪ್ ನ್ಯೂಸ್

MOdi (3)

Jammu and Kashmir ಜನತೆ ಭ್ರಷ್ಟ ಮುಕ್ತ ಸರಕಾರ ಬಯಸಿದ್ದಾರೆ: ಮೋದಿ

UNITED NATIONS

UN ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಸ್ಥಾನ: ಪೋರ್ಚುಗಲ್‌ ಬೆಂಬಲ

1-wewewq

PM ರೇಸ್‌ನಲ್ಲಿ ನಾನು ಇಲ್ಲ; ಬೇಕಿದ್ದರೇ ಮೋದಿ ಕೇಳಿ: ಗಡ್ಕರಿ

Manglrui

Mangaluru: ಸಂಸ್ಥೆಯ ಬೆಳವಣಿಗೆಯಲ್ಲಿ ಮಾನವ ಸಂಪನ್ಮೂಲ ಪಾತ್ರ ಪ್ರಮುಖ: ಮಂಜುನಾಥ ಭಂಡಾರಿ

1-asasa

Test; ನ್ಯೂಜಿಲ್ಯಾಂಡ್‌ ಆಲೌಟ್‌ 88 : ಲಂಕೆಗೆ 514 ರನ್‌ ದಾಖಲೆ ಮುನ್ನಡೆ

dinesh-gu

Dinesh Gundurao; ತಿಂಗಳೊಳಗೆ ಗೃಹ ಆರೋಗ್ಯ ಯೋಜನೆ ಜಾರಿ

leopard

leopard: ಮೂಲ್ಕಿ ಕೊಯ್ಯಾರಿನಲ್ಲಿ ಸಣ್ಣ ಮರಿಯೊಂದಿಗೆ ಚಿರತೆ ಪ್ರತ್ಯಕ್ಷ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sky-dia

Tourism Spot: ರಾಜ್ಯದ ಎರಡನೇ “ಸ್ಕೈ ಡೈನಿಂಗ್‌’ ತಾಣವಾಗಲಿದೆ ಕುಂದಾಪುರದ ತ್ರಾಸಿ

Koderi

World Tourism Day: ಪ್ರವಾಸೋದ್ಯಮಕ್ಕೆ ಸಿಗಲಿ ಉತ್ತೇಜನ

16-cinema

UV Fusion: Cinema- ದಿ ರೆಡ್ ಬಲೂನ್, ಅಮೋರ್

15-uv-fusion

UV Fusion: ಬ್ಯಾಗ್‌ ಹಿಡಿದವರಿಗೊಂದು ಥ್ಯಾಂಕ್ಸ್‌

14-tourism

Netravati Trek: ದಿ ನೆಕ್ಸ್ಟ್ ಸ್ಟಾಪ್‌ ಈಸ್‌ ನೇತ್ರಾವತಿ ಪೀಕ್‌!

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

congress

Haryana ಅನ್ನದಾತರ ಕಲ್ಯಾಣಕ್ಕೆ ಆಯೋಗ ರಚನೆ: ಕಾಂಗ್ರೆಸ್‌ ವಾಗ್ಧಾನ

MOdi (3)

Jammu and Kashmir ಜನತೆ ಭ್ರಷ್ಟ ಮುಕ್ತ ಸರಕಾರ ಬಯಸಿದ್ದಾರೆ: ಮೋದಿ

court

Jama Masjid:ಮಾಜಿ ಪಿಎಂ ಸಹಿ ಕಡತ ಸಲ್ಲಿಸದ್ದಕ್ಕೆ ಕೋರ್ಟ್‌ ಟೀಕೆ

UNITED NATIONS

UN ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಸ್ಥಾನ: ಪೋರ್ಚುಗಲ್‌ ಬೆಂಬಲ

1-wewewq

PM ರೇಸ್‌ನಲ್ಲಿ ನಾನು ಇಲ್ಲ; ಬೇಕಿದ್ದರೇ ಮೋದಿ ಕೇಳಿ: ಗಡ್ಕರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.