ಪ್ಯಾನ್ ಇಂಡಿಯಾ ʼಪುಷ್ಪ-2ʼ ಎದುರು ಹೊಂಬಾಳೆಯ ʼರಘು ತಾತಾʼ ರಿಲೀಸ್: ಏನಿದು ಲೆಕ್ಕಚಾರ?
Team Udayavani, Jun 1, 2024, 12:38 PM IST
ಚೆನ್ನೈ/ಹೈದರಾಬಾದ್: ವರ್ಷದ ದ್ವಿತೀಯಾರ್ಧ ಆರಂಭಗೊಂಡಿದೆ. ದೊಡ್ಡ ದೊಡ್ಡ ಪ್ಯಾನ್ ಇಂಡಿಯಾ ಸಿನಿಮಾಗಳು ರಿಲೀಸ್ ಆಗಲು ಕಾಯುತ್ತಿದೆ. ಕೆಲವೊಂದಿಷ್ಟು ಸಿನಿಮಾಗಳು ವರ್ಷದ ಕೊನೆಯಲ್ಲಿ ರಿಲೀಸ್ ಗೆ ಪ್ಲ್ಯಾನ್ ಮಾಡಿಕೊಂಡಿದ್ದು, ಇನ್ನು ಕೆಲ ಸಿನಿಮಾಗಳ ಸೂಕ್ತ ರಿಲೀಸ್ ಡೇಟ್ ಗಾಗಿ ಕಾಯುತ್ತಿದೆ. ಇನ್ನೊಂದ್ದಿಷ್ಟು ಚಿತ್ರಗಳು ಈಗಾಗಲೇ ರಿಲೀಸ್ ಡೇಟ್ ಲಾಕ್ ಮಾಡಿಕೊಂಡಿದೆ.
ಟಾಲಿವುಡ್ ನಲ್ಲಿ ಈ ವರ್ಷದ ಬಹು ನಿರೀಕ್ಷಿತ ʼಪುಷ್ಪ-2ʼ ಸಿನಿಮಾ ರಿಲೀಸ್ ಆಗಲಿದೆ. ಅಲ್ಲು ಅರ್ಜುನ್ ಅವರ ಈ ಪ್ಯಾನ್ ಇಂಡಿಯಾ ಪ್ರಾಜೆಕ್ಟ್ ಗಾಗಿ ಪ್ರೇಕ್ಷಕರು ಕುತೂಹಲದಿಂದ ಕಾಯುತ್ತಿದ್ದಾರೆ. ಇದೇ ಆಗಸ್ಟ್ 15 ರಂದು ಚಿತ್ರ ರಿಲೀಸ್ ಆಗಲಿದೆ.
ಆದರೆ ʼಪುಷ್ಪ-2ʼ ಗೆ ಟಾಲಿವುಡ್ ನಲ್ಲಿ ಬಿಟ್ಟರೆ ಇತರೆ ಭಾಷಾ ರಾಜ್ಯಗಳಲ್ಲಿ ಈ ಬಾರಿ ಟಫ್ ಕಾಂಪಿಟೇಷನ್ ಸಿಗುವ ಸಾಧ್ಯತೆ ಹೆಚ್ಚಾಗಿದೆ. ಏಕೆಂದರೆ ಬಹುದೊಡ್ಡ ಪ್ಯಾನ್ ಇಂಡಿಯಾ ಸಿನಿಮಾದ ಮುಂದೆ, ಬಹುದೊಡ್ಡ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಸಿನಿಮಾವೊಂದನ್ನು ರಿಲೀಸ್ ಮಾಡಲಿದೆ. ಆ ಮೂಲಕ ʼಪುಷ್ಪ-2ʼ ಗೆ ಟಕ್ಕರ್ ಕೊಡಲು ರೆಡಿಯಾಗಿದೆ.
ಇದನ್ನೂ ಓದಿ: Video: ಮತ್ತೆ ವಿವಾದದಲ್ಲಿ ಬಾಲಯ್ಯ: ನಟಿ ಅಂಜಲಿ ಹಿಂಭಾಗ ಮುಟ್ಟಿದ ವಿಡಿಯೋ ವೈರಲ್
ಕೀರ್ತಿ ಸುರೇಶ್ ಅಭಿನಯಿಸಿರುವ ʼರಘು ತಾತಾʼ ಸಿನಿಮಾವನ್ನು ಆಗಸ್ಟ್ 15 ರಂದು ರಿಲೀಸ್ ಮಾಡಲು ಹೊಂಬಾಳೆ ನಿರ್ಧರಿಸಿದ್ದು, ಅಧಿಕೃತವಾಗಿ ರಿಲೀಸ್ ಡೇಟ್ ಅನೌನ್ಸ್ ಮಾಡಲಾಗಿದೆ.
ʼಕೆಜಿಎಫ್ʼ, ʼಸಲಾರ್ʼ, ʼಕಾಂತಾರʼ ದಂತ ಹಿಟ್ ಸಿನಿಮಾಗಳನ್ನು ನೀಡಿರುವ ಹೊಂಬಾಳೆ ʼರಘು ತಾತಾʼವನ್ನು ʼಪುಷ್ಪ-2ʼ ದಂಥ ಪ್ಯಾನ್ ಇಂಡಿಯಾ ಸಿನಿಮಾದ ಎದುರು ರಿಲೀಸ್ ಮಾಡುತ್ತಿರುವುದು ರಿಸ್ಕಿ ಸಾಹಸ ಎಂದು ಚಿತ್ರರಂಗದಲ್ಲಿ ಗುಸು ಗುಸು ಶುರುವಾಗಿದೆ.
ಆದರೆ ಈ ಹಿಂದೆ ಕೂಡ ಹೊಂಬಾಳೆ ಇದೇ ರೀತಿ ದೊಡ್ಡ ಸಿನಿಮಾಗಳ ಮುಂದೆ ತಮ್ಮ ಸಿನಿಮಾವನ್ನು ರಿಲೀಸ್ ಮಾಡಿ ಮುನ್ನುಗ್ಗಿ ಬಂದಿದೆ. ʼಕೆಜಿಎಫ್ʼ ಸಿನಿಮಾ ಶಾರುಖ್ ಅವರ ʼಝೀರೋʼ ಎದುರು ರಿಲೀಸ್ ಆಗಿತ್ತು. ಅದೇ ರೀತಿ ʼಸಲಾರ್ʼ ಶಾರುಖ್ ಅವರ ʼಡಂಕಿʼ ಎದುರು ರಿಲೀಸ್ ಆಗಿತ್ತು.
ಈ ಹಿಂದೆ ʼಪುಷ್ಪʼ ರಿಲೀಸ್ ವೇಳೆ ಚಿತ್ರತಂಡ ʼಕೆಜಿಎಫ್ʼ ಸಿನಿಮಾದ ಬಗ್ಗೆ ಪರೋಕ್ಷವಾಗಿ ಒಂದಷ್ಟು ಟೀಕೆಗಳನ್ನು ಮಾಡಿತ್ತು. ಇದು ಚಿತ್ರರಂಗದಲ್ಲಿ ಸದ್ದು ಮಾಡಿತ್ತು. ಆದರೆ ಅದರ ಬಗ್ಗೆ ʼಹೊಂಬಾಳೆʼ ಯಾವ ಪ್ರತಿಕ್ರಿಯೆಯನ್ನು ನೀಡಿರಲಿಲ್ಲ. ಹೀಗಾಗಿ ʼಪುಷ್ಪ-2ʼ ಎದುರು ʼರಘು ತಾತಾʼವನ್ನು ಬೇಕಂತಲೇ ರಿಲೀಸ್ ಮಾಡಲಾಗುತ್ತಿದೆ ಎನ್ನುವ ಮಾತುಗಳೂ ಕೂಡ ಚಿತ್ರರಂಗದಲ್ಲಿ ಹರಿದಾಡುತ್ತಿದೆ.
ಇತ್ತ ಕನ್ನಡದಲ್ಲಿ ಶಿವರಾಜ್ ಕುಮಾರ್ ಅವರ ʼಭೈರತಿ ರಣಗಲ್ʼ ಚಿತ್ರ ಕೂಡ ಆಗಸ್ಟ್ 15 ರಂದೇ ರಿಲೀಸ್ ಆಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ʼದೇವರʼ ಸಿನಿಮಾ ನೋಡುತ್ತಿರುವಾಗ ಥಿಯೇಟರ್ನಲ್ಲೇ ಕುಸಿದು ಬಿದ್ದು ಮೃತಪಟ್ಟ Jr NTR ಅಭಿಮಾನಿ
Devara: ಹೇಗಿದೆ ಜೂ.ಎನ್ಟಿಆರ್ ʼದೇವರʼ?: ನಿರೀಕ್ಷೆ-ನಿರಾಶೆ..ಪ್ರೇಕ್ಷಕರ ಅಭಿಪ್ರಾಯವೇನು?
Spirit Movie: ಪ್ರಭಾಸ್ ʼಸ್ಪಿರಿಟ್ʼನಲ್ಲಿ ಖಡಕ್ ವಿಲನ್ ಆಗಲಿದ್ದಾರೆ ಈ ಬಿಟೌನ್ ದಂಪತಿ
Actor Siddique: ಬಂಧನದ ಭೀತಿಯಿಂದ ತಲೆಮರೆಸಿಕೊಂಡ ನಟ ಸಿದ್ದೀಕ್: ಲುಕೌಟ್ ನೋಟಿಸ್ ಜಾರಿ
ಶಂಕರ್ ನಿರ್ದೇಶನದಲ್ಲಿ ಐತಿಹಾಸಿಕ ಸಿನಿಮಾ; 2 ದಶಕದ ಬಳಿಕ ಜತೆಯಾಗಲಿದ್ದಾರೆ ಸೂರ್ಯ- ವಿಕ್ರಮ್
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
BBK11: ಮೂರನೇ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ʼಫೈಯರ್ ಬ್ರ್ಯಾಂಡ್ʼ ಎಂಟ್ರಿ
Hunsur: ಹಂದಿಫಾರ್ಮ್ ನಲ್ಲಿ ಕಾರ್ಮಿಕನಿಂದ ಮ್ಯಾನೇಜರ್ ಬರ್ಬರ ಹ*ತ್ಯೆ
MUDA Case: ಸಿದ್ದರಾಮಯ್ಯ 2011ರ ಹೇಳಿಕೆ ವಿಡಿಯೋ ಹಾಕಿ ಟಾಂಗ್ ಕೊಟ್ಟ ಸ್ನೇಹಮಯಿ ಕೃಷ್ಣ!
Shiruru ದುರಂತ; ಹುಟ್ಟೂರಲ್ಲಿ ಅರ್ಜುನ್ ಅಂತಿಮ ವಿಧಿ: ಹರಿದು ಬಂದ ಜನಸಾಗರ
Food street ನಲ್ಲಿ ಅರೆಬಟ್ಟೆಯಲ್ಲಿ ಸುತ್ತಾಡಿದ ಯುವತಿ ವಿರುದ್ಧ ಪ್ರಕರಣ ದಾಖಲು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.