![Hardik Pandya; ಚಪ್ರಿ ಎಂದಿದ್ದ ಜನರೇ ಇದೀಗ ಕೊಂಡಾಡುತ್ತಿದ್ದಾರೆ…: ಹಾರ್ದಿಕ್ ಯಶಸ್ಸಿನ ಕಥೆ](https://www.udayavani.com/wp-content/uploads/2024/06/hrdik-415x229.jpg)
Sandalwood: ಸುದೀಪ್ – ಸಂದೇಶ್ ನಾಗರಾಜ್ ಚಿತ್ರಕ್ಕೆ ಹೇಮಂತ್ ರಾವ್ ಆ್ಯಕ್ಷನ್ ಕಟ್?
Team Udayavani, Jun 1, 2024, 1:55 PM IST
![11](https://www.udayavani.com/wp-content/uploads/2024/06/11-620x372.jpg)
ಬೆಂಗಳೂರು: ಕಿಚ್ಚ ಸುದೀಪ್ ಸದ್ಯ ʼಮ್ಯಾಕ್ಸ್ʼ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ಬಳಿಕ ಕೂಡ ಕಿಚ್ಚ ಈಗಾಗಲೇ ಒಪ್ಪಿಕೊಂಡಿರುವ ಸಿನಿಮಾಗಳ ಕೆಲಸದಲ್ಲಿ ನಿರತರಾಗಲಿದ್ದಾರೆ. ಈ ನಡುವೆ ಖ್ಯಾತ ನಿರ್ಮಾಪಕರೊಬ್ಬರು ಕಿಚ್ಚನನ್ನು ಭೇಟಿ ಆಗಿದ್ದಾರೆ.
ಇತ್ತೀಚೆಗಷ್ಟೇ ನಿರ್ಮಾಪಕ ಎನ್ ಸಂದೇಶ್ ಹಾಗೂ ಅವರ ತಂದೆ ಮತ್ತು ಖ್ಯಾತ ನಿರ್ಮಾಪಕ ಸಂದೇಶ್ ನಾಗರಾಜ್ ಕಿಚ್ಚ ಸುದೀಪ್ ಅವರ ಮನೆಗೆ ತೆರಳಿ ಅವರನ್ನು ಭೇಟಿ ಆಗಿದ್ದಾರೆ. ಈ ಹಿಂದೆ ಸಂದೇಶ್ ನಾಗರಾಜ್ ಸುದೀಪ್ ಅವರನ್ನು ಚೆನ್ನೈನಲ್ಲಿ ಭೇಟಿ ಆಗಿದ್ದರು. ಆ ಮೂಲಕ ಕಿಚ್ಚ ಅವರೊಂದಿಗೆ ಸಿನಿಮಾ ಮಾಡಲಿದ್ದೇವೆ ಎನ್ನುವ ಬಗ್ಗೆ ಸುಳಿವು ನೀಡಿದ್ದರು.
ಇದೀಗ ಈ ಸುದ್ದಿ ಅಧಕೃತವಾಗಿದ್ದು, ಶೀಘ್ರದಲ್ಲಿ ಒಳ್ಳೆಯ ಸುದ್ದಿಯೊಂದು ಬರಲಿದೆ ಜಸ್ಟ್ ವೇಟ್ & ವಾಚ್ ಎಂದು ಸಂದೇಶ್ ಇನ್ಸ್ಟಾದಲ್ಲಿ ಭೇಟಿಯ ಫೋಟೋವನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಪ್ಯಾನ್ ಇಂಡಿಯಾ ʼಪುಷ್ಪ-2ʼ ಎದುರು ಹೊಂಬಾಳೆಯ ʼರಘು ತಾತಾʼ ರಿಲೀಸ್: ಏನಿದು ಲೆಕ್ಕಚಾರ?
ಕಿಚ್ಚ ಅವರೊಂದಿಗೆ ಮಾಡುತ್ತಿರುವುದು ಅಧಿಕೃತವಾಗಿದ್ದು, ನಿರ್ದೇಶನ ಯಾರು ಮಾಡಲಿದ್ದಾರೆ ಎನ್ನುವ ಬಗ್ಗೆ ಕುತೂಹಲ ಹೆಚ್ಚಾಗಿದೆ.
“ಸುದೀಪ್ ಅವರನ್ನು ನಿರ್ದೇಶನ ಮಾಡುವ ಬಗ್ಗೆ ಹೇಮಂತ್ ರಾವ್ ಅವರೊಂದಿಗೆ ಚರ್ಚೆ ಮಾಡಿದ್ದೇವೆ. ಆದರೆ ಈ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡುವ ಮೊದಲು ನಾವು ವಿವರಗಳನ್ನು ಅಂತಿಮಗೊಳಿಸಬೇಕಾಗಿದೆ. ಸುದೀಪ್ – ಹೇಮಂತ್ ಕಾಂಬಿನೇಷನ್ ಬಗ್ಗೆ ಇನ್ನಷ್ಟೇ ಆರಂಭಿಕವಾಗಿ ಮಾತುಕತೆ ನಡೆದಿದೆ” ಎಂದು ಸಂದೇಶ್ ನಾಗರಾಜ್ ಹೇಳಿರುವುದಾಗಿ ʼಸಿನಿಮಾ ಎಕ್ಸ್ ಪ್ರೆಸ್ʼ ವರದಿ ತಿಳಿಸಿದೆ.
ಸದ್ಯ ಹೇಮಂತ್ ಶೀವರಾಜ್ ಕುಮಾರ್ ಅವರಿಗಾಗಿ ಸ್ಕ್ರಿಪ್ಟ್ ಬರೆಯುತ್ತಿದ್ದಾರೆ. ಇತ್ತ ಸುದೀಪ್ ʼಮ್ಯಾಕ್ಸ್ʼ ಬಳಿಕ ʼಚೇರನ್ʼ ಸಿನಿಮಾದಲ್ಲಿ ಚಿತ್ರೀಕರಣವನ್ನು ಆರಂಭಿಸಲಿದ್ದಾರೆ. ಇದಾದ ನಂತ ಅನೂಪ್ ಭಂಡಾರಿ ಅವರ ʼಬಿಲ್ಲಾ ರಂಗ ಬಾಷಾʼ ದಲ್ಲಿ ಕಾಣಿಸಿಕೊಳ್ಳಲಿದ್ದು, ನಂತರ ಕೆಆರ್ ಜಿ ಅವರ ಪ್ರಾಜೆಕ್ಟ್ ನಲ್ಲೂ ಕಾಣಿಸಿಕೊಳ್ಳಲಿದ್ದಾರೆ.
ಟಾಪ್ ನ್ಯೂಸ್
![Hardik Pandya; ಚಪ್ರಿ ಎಂದಿದ್ದ ಜನರೇ ಇದೀಗ ಕೊಂಡಾಡುತ್ತಿದ್ದಾರೆ…: ಹಾರ್ದಿಕ್ ಯಶಸ್ಸಿನ ಕಥೆ](https://www.udayavani.com/wp-content/uploads/2024/06/hrdik-415x229.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![ajagrata producer gave fortuner car gift to the director](https://www.udayavani.com/wp-content/uploads/2024/06/ajagrat-150x83.jpg)
Sandalwood; ನಿರ್ದೇಶಕರಿಗೆ ಫಾರ್ಚೂನರ್ ಗಿಫ್ಟ್ ನೀಡಿದ ಅಜಾಗ್ರತ ನಿರ್ಮಾಪಕ
![Kannada movie Taj releasing soon](https://www.udayavani.com/wp-content/uploads/2024/06/taj-1-150x83.jpg)
Sandalwood; ಟ್ರೇಲರ್ನಲ್ಲಿ ‘ತಾಜ್’ ಪ್ರೀತಿ; ಹೊಸಬರ ಚಿತ್ರ ತೆರೆಗೆ ಸಿದ್ಧ
![No problem anyone comes in front of Martin…: Producer Uday Mehta](https://www.udayavani.com/wp-content/uploads/2024/06/martin-150x83.jpg)
Martin ಮುಂದೆ ಯಾರೇ ಬರಲಿ ನೋ ಪ್ರಾಬ್ಲಂ…: ನಿರ್ಮಾಪಕ ಉದಯ್ ಮೆಹ್ತಾ
![6](https://www.udayavani.com/wp-content/uploads/2024/06/6-18-150x90.jpg)
Actor Darshan: ಜೈಲಿನ ಬಳಿ ಯಾರೂ ಬರಬೇಡಿ; ಫ್ಯಾನ್ಸ್ಗೆ ದರ್ಶನ್ ಮನವಿ
![nange allava song](https://www.udayavani.com/wp-content/uploads/2024/06/sanjith-150x83.jpg)
Nange Allava Song; ಸಂಜನಾ ದಾಸ್ ಜತೆಗೆ ಹೆಜ್ಜೆ ಹಾಕಿದ ಸಂಜಿತ್ ಹೆಗ್ಡೆ
MUST WATCH
ಹೊಸ ಸೇರ್ಪಡೆ
![Hardik Pandya; ಚಪ್ರಿ ಎಂದಿದ್ದ ಜನರೇ ಇದೀಗ ಕೊಂಡಾಡುತ್ತಿದ್ದಾರೆ…: ಹಾರ್ದಿಕ್ ಯಶಸ್ಸಿನ ಕಥೆ](https://www.udayavani.com/wp-content/uploads/2024/06/hrdik-150x83.jpg)
Hardik Pandya; ಚಪ್ರಿ ಎಂದಿದ್ದ ಜನರೇ ಇದೀಗ ಕೊಂಡಾಡುತ್ತಿದ್ದಾರೆ…: ಹಾರ್ದಿಕ್ ಯಶಸ್ಸಿನ ಕಥೆ
![ಈ ವಿಚಾರದಲ್ಲಿ ಶಾರುಖ್ ಖಾನ್ ʼಜವಾನ್ʼ ಚಿತ್ರವನ್ನೇ ಮೀರಿಸಿದ ʼKalki 2898 ADʼ](https://www.udayavani.com/wp-content/uploads/2024/06/5-19-150x90.jpg)
ಈ ವಿಚಾರದಲ್ಲಿ ಶಾರುಖ್ ಖಾನ್ ʼಜವಾನ್ʼ ಚಿತ್ರವನ್ನೇ ಮೀರಿಸಿದ ʼKalki 2898 ADʼ
![9-sirsi](https://www.udayavani.com/wp-content/uploads/2024/06/9-sirsi-150x90.jpg)
ಶಿರಸಿಯ ಅದ್ವೈತನಿಗೆ ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ
![Hamsa Moily](https://www.udayavani.com/wp-content/uploads/2024/06/hamsa-150x83.jpg)
Bengaluru; ವೀರಪ್ಪ ಮೊಯ್ಲಿ ಅವರಿಗೆ ಪುತ್ರಿ ವಿಯೋಗ; ಹಂಸ ಮೊಯ್ಲಿ ವಿಧಿವಶ
![8-health](https://www.udayavani.com/wp-content/uploads/2024/06/8-health-150x90.jpg)
PCOD (ಪಾಲಿಸಿಸ್ಟಿಕ್ ಅಂಡಾಶಯದ ಕಾಯಿಲೆ) ಸಮಸ್ಯೆ ಮತ್ತು ನಿರ್ವಹಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.