Kulgeri Cross: ಈ ಸರ್ಕಾರಿ ಶಾಲೆಯಲ್ಲಿ ಪಾಠಕ್ಕಿಂತ ಶೌಚಾಲಯದ್ದೇ ದೊಡ್ಡ ಸಮಸ್ಯೆ


Team Udayavani, Jun 1, 2024, 5:06 PM IST

12-kulageri-cross

ಕುಳಗೇರಿ ಕ್ರಾಸ್: ಬಾಗಲಕೋಟೆ ಜಿಲ್ಲೆ ಗಡಿ ಭಾಗದ ಮಲಪ್ರಭಾ ನದಿಯ ಅಂಚಿನಲ್ಲಿರುವ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಗೋವನಕೊಪ್ಪ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಹೆಣ್ಣುಮಕ್ಕಳಿಗೆ ಶೌಚಾಲಯದ್ದೇ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.

ನಮಗೆ ಕೊಠಡಿಗಳನ್ನು ಕಟ್ಟಿ ಕೊಡದಿದ್ದರೂ ಪರವಾಗಿಲ್ಲ. ಬೇಕಾದರೆ ಬಯಲಲ್ಲೇ ಓದುತ್ತೇವೆ. ಮಾತ್ರ ಶೌಚಾಲಯ ನಿರ್ಮಿಸಿ ಕೊಡಿ ಎಂದು ಅಂಗಲಾಚಿ ಬೇಡಿಕೊಳ್ಳುತ್ತಿದ್ದಾರೆ.

ಹೌದು ಈ ಪ್ರೌಢಶಾಲೆಯಲ್ಲಿ ಸುಮಾರು ವರ್ಷಗಳಿಂದ ಶೌಚಾಲಯ ಸಮಸ್ಯೆ ಇದೆ ಎಂಬುದು ಎಲ್ಲ ಅಧಿಕಾರಿಗಳಿಗೂ ತಿಳಿದಿರುವ ವಿಷಯ. ಹಾಗಂತ ವಿದ್ಯಾರ್ಥಿನಿಯರು ಸಹ ಸುಮ್ಮನಿಲ್ಲ. ಶಾಲೆಗೆ ಭೆಟಿ ನೀಡುವ ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ಪ್ರತಿಭಾರಿ ಸಾಕಷ್ಟು ಮನವಿ ಮಾಡಿಕೊಂಡು ಅಂಗಲಾಚಿ ಬೇಡಿದರೂ ಪ್ರಯೋಜನ ಇಲ್ಲದಂತಾಗಿದೆ. ಕಂಡು-ಕಾಣದಂತೆ ಕೇಳಿಯೂ-ಕೇಳದಂತೆ ಸಂಬಂದಿಸಿದವರು ಮಾತ್ರ ಮೌನವಾಗಿದ್ದಾರೆ.

ಈ ಪ್ರೌಢಶಾಲೆಯಲ್ಲಿ ಇನ್ನೂರಕ್ಕೂ ಹೆಚ್ಚು ಹೆಣ್ಣುಮಕ್ಕಳು ಓದುತ್ತಾರೆ. ಶೌಚಾಲಯ ಇಲ್ಲದ ಕಾರಣ ಶಾಲಾ ಹಿಂಬಾಗದಲ್ಲಿರುವ ಮೈದಾನವೇ ಬಾಲಕಿಯರಿಗೆ ಶೌಚಾಲಯ ಸ್ಥಳವಾಗಿದೆ. ಪ್ರಾಣವನ್ನೂ ಲೆಕ್ಕಿಸದೆ ಹೆಣ್ಣುಮಕ್ಕಳು ಗಿಡ-ಗಂಟಿಗಳ ಪೊದೆಯಲ್ಲಿ ಮುಳ್ಳು-ಕಂಟಿಗಳ ಮಧ್ಯೆ ನೈಸರ್ಗಿಕ ಕ್ರಿಯೆ ಮುಗಿಸಿಕೊಳ್ಳುತ್ತಾರೆ. ಶಾಲಾ ಮೈದಾನ ಶೌಚಾಲಯವಾಗಿದ್ದರಿಂದ ಪಾಠ ಕೇಳುವ ಕೊಠಡಿಗಳು ದುರ್ವಾಸನೆ ಬೀರುತ್ತಿವೆ.

ಇನ್ನು ಇಲ್ಲಿ ಓದುತ್ತಿರುವ ಗಂಡು ಮಕ್ಕಳಿಗೂ ಬಯಲು ಶೌಚಾಲಯ ಕಾಯಂ. ಹಾಗಂಥ ಸರಳವಾಗಿ ತಿಳಿಯಬೇಡಿ. ಇವರೂ ಕೂಡಾ ಓಡಾಡುವ ಗ್ರಾಮಸ್ಥರನ್ನು ಅತ್ತ-ಇತ್ತ ನೋಡಿಕೊಂಡು ಶೌಚ ಮುಗಿಸುವ ಪರಿಸ್ಥಿತಿ ಇದೆ.

ಒಂದಲ್ಲ ಎರಡಲ್ಲ ಇಲ್ಲಿ ಓದುತ್ತಿರುವ ಮಕ್ಕಳಿಗೆ ಮೂಲ ಸೌಕರ್ಯಗಳ ಸಮಸ್ಯೆ ಜೊತೆಗೆ ಶಿಥಿಲಗೊಂಡ ಕಟ್ಟಡಗಳು, ಕೊಠಡಿಗಳ ಕೊರತೆ, ಕುಳಿತುಕೊಳ್ಳುವ ಆಸನಗಳು ಸೇರಿದಂತೆ ಸಾಕಷ್ಟು ಸಮಸ್ಯೆ ಎದುರಿಸುತ್ತಿರುವ ಮಕ್ಕಳು ಓದುವುದೇ ದೊಡ್ಡ ಸವಾಲಾಗಿದೆ.

ಪ್ರತಿ ವರ್ಷ ಹೆಣ್ಣುಮಕ್ಕಳು ಈ ಶಾಲೆಯಲ್ಲಿನ ಸಮಸ್ಯೆ ಹೇಳಿಕೊಳ್ಳುತ್ತಾರೆ…ಆದರೇ ಕೇಳುವವರೇ ಇಲ್ಲ. ಈ ಬಾರಿಯಾದರೂ ನಮ್ಮ ಸಮಸ್ಯೆ ಕೇಳಿಸಿಕೊಳ್ಳಿ, ಒಂದು ಸಲ ಯೋಚಿಸಿ ಹೆಣ್ಣು ಮಕ್ಕಳ ಸಮಸ್ಯೆ ಹೇಗಿರುತ್ತೆ ಎಂದು. ನಾವು ಸಹ ನಿಮ್ಮ ಮನೆಯ ಹೆಣ್ಣುಮಕ್ಕಳೇ ಎಂದು ಭಾವಿಸಿ ಎಂದು ಬಾಲಕಿಯರು ಪತ್ರಿಕೆಗೆ ತಿಳಿಸುವ ಮೂಲಕ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.

ಸಂಬಂಧಿಸಿದ ಅದಿಕಾರಿಗಳು ಈ ಕಡೆ ಗಮನ ಕೊಡುತ್ತಾರಾ ಈ ಪ್ರೌಢಶಾಲೆ ಸಮಸ್ಯೆ ಬಗೆ ಹರಿಸುತ್ತಾರಾ ಕಾದುನೋಡಬೇಕಿದೆ.

ಗಂಡು ಮಕ್ಕಳು ಶೌಚಕ್ಕೆ ಎಲ್ಯಾರ ಹೋಗಬಹುದು. ಹೈಸ್ಕೂಲ್ ಅಂದ್ರ ಹೆಣ್ಮಕ್ಕಳ ದೊಡ್ಡಾರ ಇರ್ತಾರ ಬಯಲಾಗ ಹೆಂಗ ಒಂದಕ್ಕ ಹೋಗಬೇಕ ಹೇಳ್ರಿ. ಶಾಲೆಯ ಸುತ್ತ ಅಕ್ಕ-ಪಕ್ಕ ರಸ್ತೆ ಐತಿ. ಮಂದಿ ಓಡಾಡ್ತಾರ. ಮುಳ್ಳು ಕಂಠಿ ಮದ್ಯೆ ಹೆಣ್ಣಮಕ್ಕಳು ಮುಜುಗರದಿಂದ ಶೌಚಕ್ಕ ಹೋಗಬೇಕು. ಆದಷ್ಟು ಬೇಗ ಶೌಚಾಲಯ ನಿರ್ಮಿಸಿಕೊಡ್ರಿ. -ಪ್ರವೀಣ ಮೇಟಿ, ಸ್ಥಳಿಯ ಪಿಕೆಪಿಎಸ್ ಸದಸ್ಯರು ಗೋವನಕೊಪ್ಪ.

ಈಗಾಗಲೇ ಮಾಹಿತಿ ಪಡೆದಿದ್ದೇನೆ ಶೌಚಾಲಯ ನಿರ್ಮಿಸುವಂತೆ ತಿಳಿಸಿದ್ದೇನೆ. ಸದ್ಯದಲ್ಲಿ ಶಾಲೆಗೆ ಭೇಟಿ ನೀಡಿ ಕಟ್ಟಡ ಸೇರಿದಂತೆ ಮೂಲಸೌಲಭ್ಯಗಳ ಕುರಿತು ಮಾಹಿತಿ ಪಡೆಯುತ್ತೇನೆ. -ಬಾದಾಮಿ ಬಿಇಒ ಎನ್ ವೈ ಕುಂದರಗಿ.

ಸರ್ಕಾರಿ ಶಾಲೆಗಳ ಮೂಲ ಸೌಲಭ್ಯ ಕುರಿತು ಮಾಹಿತಿ ಪಡೆಯುತ್ತಿದ್ದೇನೆ. ಈಗಾಗಲೇ ತಾಲೂಕಿನಲ್ಲಿ ಶಿಥಿಲಗೊಂಡ ಅಂಗನವಾಡಿ ಸರ್ಕಾರಿ ಶಾಲೆ ಕಟ್ಟಡ ರಿಪೇರಿ ಮಾಡಿಸಲಾಗುತ್ತಿದೆ. ಸಾಕಷ್ಟು ಸಮಸ್ಯೆಗಳು ಇವೆ ಕಾರಣ ಹಂತ-ಹಂತವಾಗಿ ಸಮಸ್ಯೆಗಳನ್ನ ಬಗೆಹರಿಸುತ್ತೆನೆ. -ಬಾದಾಮಿ ಶಾಸಕರು ಭೀಮಸೇನ ಚಿಮ್ಮನಕಟ್ಟಿ.

-ಮಹಾಂತಯ್ಯ.ಹಿರೇಮಠ

ಟಾಪ್ ನ್ಯೂಸ್

047

Gulveer Singh: ನೂತನ ರಾಷ್ಟ್ರೀಯ ದಾಖಲೆ ಸ್ಥಾಪಿಸಿದ ಗುಲ್ವೀರ್

04257

T20I series: ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿ: ಸೂರ್ಯಕುಮಾರ್‌ ಯಾದವ್‌ ನಾಯಕ

1-stalin

Tamil Nadu; ಪುತ್ರ ಉದಯನಿಧಿಗೆ ಬಡ್ತಿ ನೀಡಿದ ಸ್ಟಾಲಿನ್: ನಾಳೆ ಪ್ರಮಾಣವಚನ

Car-Auto

Kaup: ರಿಕ್ಷಾ, ಕಾರು ಮುಖಾಮುಖಿ ಢಿಕ್ಕಿ: ಇಬ್ಬರಿಗೆ ಗಾಯ

BBK-11: ಬಿಗ್‌ ಬಾಸ್‌ ಮನೆಗೆ 4ನೇ ಸ್ಪರ್ಧಿ ಎಂಟ್ರಿ.. ಯಾರು ಈ ʼಗೋಲ್ಡ್‌ ಮ್ಯಾನ್‌ʼ?

BBK-11: ಬಿಗ್‌ ಬಾಸ್‌ ಮನೆಗೆ 4ನೇ ಸ್ಪರ್ಧಿ ಎಂಟ್ರಿ.. ಯಾರು ಈ ʼಗೋಲ್ಡ್‌ ಮ್ಯಾನ್‌ʼ?

1-PT

IOC ಗೆ ಪತ್ರ; ಪಿ.ಟಿ.ಉಷಾ ವಿರುದ್ಧ ಡಜನ್ ಗೂ ಹೆಚ್ಚು ಎಕ್ಸಿಕ್ಯೂಟಿವ್ ಕೌನ್ಸಿಲ್ ಸದಸ್ಯರು!

Ramalinga-Raeddy

Transport: ವಾಯವ್ಯ ಸಾರಿಗೆ ನಿಗಮಕ್ಕೆ 400 ಬಸ್‌ ಖರೀದಿಗೆ ಕ್ರಮ: ಸಚಿವ ರಾಮಲಿಂಗಾರೆಡ್ಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ramalinga-Raeddy

Transport: ವಾಯವ್ಯ ಸಾರಿಗೆ ನಿಗಮಕ್ಕೆ 400 ಬಸ್‌ ಖರೀದಿಗೆ ಕ್ರಮ: ಸಚಿವ ರಾಮಲಿಂಗಾರೆಡ್ಡಿ

10-mudhol

Mudhol: ಉದಯವಾಣಿ ಫಲಶೃತಿ; ಭವನ ಸ್ವಚ್ಛತೆಗೆ ಮುಂದಾದ ಅಧಿಕಾರಿಗಳು

Uttara Karnataka: ಮಹಾಲಿಂಗಪುರ ಪುರಸಭೆ ಅಧ್ಯಕ್ಷರ ಜಾನುವಾರು ಪ್ರೀತಿ

Uttara Karnataka: ಮಹಾಲಿಂಗಪುರ ಪುರಸಭೆ ಅಧ್ಯಕ್ಷರ ಜಾನುವಾರು ಪ್ರೀತಿ

PC-Gaddigowder

MUDA Scam: ಪಾರದರ್ಶಕ ತನಿಖೆಗಾಗಿ ಸಿದ್ದರಾಮಯ್ಯ ರಾಜೀನಾಮೆ ನೀಡಲಿ: ಸಂಸದ ಗದ್ದಿಗೌಡರ್‌

baRabkavi Banhatti: ಸಂಭ್ರಮ ಸಡಗರದ ಶ್ರೀ ಕಾಡಸಿದ್ಧೇಶ್ವರರ ರಥೋತ್ಸವ

Rabkavi Banhatti: ಸಂಭ್ರಮ ಸಡಗರದ ಶ್ರೀ ಕಾಡಸಿದ್ಧೇಶ್ವರರ ರಥೋತ್ಸವ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

1242

SAFF U-17 Championship: ಭಾರತ-ಬಾಂಗ್ಲಾ ಫೈನಲ್‌

047

Gulveer Singh: ನೂತನ ರಾಷ್ಟ್ರೀಯ ದಾಖಲೆ ಸ್ಥಾಪಿಸಿದ ಗುಲ್ವೀರ್

025587

ICC Women’s T20 World Cup: ವನಿತಾ ಟಿ20 ವಿಶ್ವಕಪ್‌; ಅಂಪಾಯರ್ಸ್ ಆಯ್ಕೆ

04257

T20I series: ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿ: ಸೂರ್ಯಕುಮಾರ್‌ ಯಾದವ್‌ ನಾಯಕ

0888

Leopard: ಮೂಲ್ಕಿ ಕೊಯ್ಯಾರಿನಲ್ಲಿ ಚಿರತೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.