Padubidri: ಮನೆಗೆ ಅಕ್ರಮ ಪ್ರವೇಶ… ಡಿವಿಆರ್ಗೆ ಹಾನಿ, 25000 ರೂ. ನಷ್ಟ
Team Udayavani, Jun 2, 2024, 9:48 PM IST
ಪಡುಬಿದ್ರಿ: ಹೆಜಮಾಡಿ ಕೋಡಿಯಲ್ಲಿ ರಜನಿ ಅವರು ತನ್ನ ತಂದೆಯವರದ್ದಾದ ಮೊಗವೀರ ಸಭಾಕ್ಕೆ ಸೇರಿದ ಜಾಗದಲ್ಲಿ ಹೆಜಮಾಡಿ ಗ್ರಾಮ ಮೊಗವೀರ ಸಭಾದಿಂದ ಮನೆ ಕಟ್ಟಲು ಒಪ್ಪಿಗೆ ಪತ್ರ, ಹೆಜಮಾಡಿ ಗ್ರಾಮ ಪಂಚಾಯತ್ನಿಂದ ಪರವಾನಿಗೆ ಪಡೆದು ಕಟ್ಟಿದ ಮನೆಗೆ ಅಕ್ರಮ ಪ್ರವೇಶ ಮಾಡಿರುವ ಆರೋಪಿ ಸಹೋದರಿಯರಾದ ರೇಖಾ, ಹೇಮಾ ಹಾಗೂ ಅವರ ಮಕ್ಕಳಾದ ಶ್ರೀಶಾ, ಧೀರಜ್ ಅವರು ಮನೆಗೆ ಅಳವಡಿಸಿದ್ದ ಸಿಸಿ ಟಿವಿ ಡಿವಿಆರ್ನ ಕೇಬಲ್ಗಳನ್ನು ಹಾನಿಗೊಳಿಸಿ 25000 ರೂ. ನಷ್ಟವುಂಟುಮಾಡಿರುವುದಾಗಿ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನೆ ಕಟ್ಟುವಾಗ ಸಹೋದರ ಸಹೋದರಿಯರು ಸಹಕರಿಸಿರಲಿಲ್ಲ. ಆದರೂ ಮನೆ ಖಾಲಿ ಇರದಂತೆ ತಂಗಿ ಹೇಮಾ ಅವರಿಗೆ ಮನೆಯಲ್ಲಿ ವಾಸವಿರುವಂತೆ ಹೇಳಿದ್ದರು. ಆದರೆ ಕಳೆದ ಎಪ್ರಿಲ್ ತಿಂಗಳಲ್ಲಿ ಮನಸ್ತಾಪ ಬಂದು ಪರಸ್ಪರ ಹಲ್ಲೆ ಯತ್ನಗಳೂ ನಡೆದಿದ್ದು, ಪಡುಬಿದ್ರಿ ಠಾಣೆಗೂ ದೂರು ನೀಡಲಾಗಿತ್ತು. ಮೇ 22ರಂದು ಮನೆಗೆ ಸಿಸಿ ಟಿವಿ ಅಳವಡಿಸಿ ಬೀಗ ಹಾಕಿ ಮುಂಬಯಿಗೆ ರಜನಿ ಅವರು ಹೋಗಿದ್ದಾಗ ಅಕ್ರಮ ಪ್ರವೇಶ ಮಾಡಿ ಡಿವಿಆರ್ ಕೇಬಲ್ಗಳನ್ನು ಹಾನಿಗೊಳಿಸಲಾಗಿದೆ ಎಂದು ಪೊಲೀಸರಿಗಿತ್ತ ದೂರಲ್ಲಿ ತಿಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.