![“ನಿರ್ಭಯಾ’ ಪ್ರತೀ ಪಟ್ಟಣಕ್ಕೆ 200 ಕೋಟಿ ರೂ.ಗೆ ಪ್ರಧಾನಿಗೆ ಮನವಿ](https://www.udayavani.com/wp-content/uploads/2024/06/Parameshwar-7-415x264.jpg)
T20; ನೋರ್ಜೆ ದಾಳಿಗೆ ತತ್ತರಿಸಿದ ಶ್ರೀಲಂಕಾ: ದಕ್ಷಿಣ ಆಫ್ರಿಕಾಕ್ಕೆ 6 ವಿಕೆಟ್ಗಳ ಜಯ
Team Udayavani, Jun 3, 2024, 11:14 PM IST
![1-wqewewq](https://www.udayavani.com/wp-content/uploads/2024/06/1-wqewewq-1-620x409.jpg)
ನ್ಯೂಯಾರ್ಕ್: ದಕ್ಷಿಣ ಆಫ್ರಿಕಾದ ವೇಗಿ ಆ್ಯನ್ರಿಚ್ ನೋರ್ಜೆ ದಾಳಿಗೆ ತತ್ತರಿಸಿದ ಶ್ರೀಲಂಕಾ ಸೋಮ ವಾರದ ಟಿ20 ವಿಶ್ವಕಪ್ ಪಂದ್ಯದಲ್ಲಿ 79 ರನ್ನಿಗೆ ಆಲೌಟ್ ಆಗಿದೆ. ಇದು ವಿಶ್ವಕಪ್ನಲ್ಲಿ ಶ್ರೀಲಂಕಾ ದಾಖಲಿಸಿದ ಕನಿಷ್ಠ ಮೊತ್ತ. 2010ರ ಬ್ರಿಜ್ಟೌನ್ ಪಂದ್ಯದಲ್ಲಿ ಆಸ್ಟ್ರೇಲಿಯ ವಿರುದ್ಧ 87 ರನ್ನಿಗೆ ಆಲೌಟ್ ಆದದ್ದು ಹಿಂದಿನ ಕನಿಷ್ಠ ಗಳಿಕೆಯಾಗಿದೆ.
ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 16.2 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 80 ರನ್ ಗಳಿಸಿ 6 ವಿಕೆಟ್ಗಳ ಜಯ ಸಾಧಿಸಿತು. ಡಿ ಕಾಕ್ 20, ನಾಯಕ ಐಡೆನ್ ಮಾರ್ಕ್ರಾಮ್ 12, ಟ್ರಿಸ್ಟಾನ್ ಸ್ಟಬ್ಸ್ 13, ಹೆನ್ರಿಕ್ ಕ್ಲಾಸೆನ್ ಔಟಾಗದೆ 19 ಮತ್ತು ಡೇವಿಡ್ ಮಿಲ್ಲರ್ ಔಟಾಗದೆ 6 ರನ್ ಗಳಿಸಿದರು.
ಹಸರಂಗ 2 ವಿಕೆಟ್ ಕಿತ್ತರೆ ಅಸಲಂಕಾ ಮತ್ತು ತುಷಾರ ತಲಾ ಒಂದು ವಿಕೆಟ್ ಪಡೆದರು.
7 ರನ್, 4 ವಿಕೆಟ್
ನೋರ್ಜೆ ಕೇವಲ 7 ರನ್ ವೆಚ್ಚದಲ್ಲಿ 4 ವಿಕೆಟ್ ಉಡಾಯಿಸಿದರು. ಇದು ಟಿ20 ವಿಶ್ವಕಪ್ನಲ್ಲಿ ದಕ್ಷಿಣ ಆಫ್ರಿಕಾ ಬೌಲರ್ನ ಅತ್ಯುತ್ತಮ ಸಾಧನೆ ಯಾಗಿದೆ. ನೋರ್ಜೆ ತಮ್ಮದೇ ದಾಖಲೆಯನ್ನು ಉತ್ತಮಪಡಿಸಿದರು. 2022ರ ಬಾಂಗ್ಲಾದೇಶ ಎದುರಿನ ಸಿಡ್ನಿ ಪಂದ್ಯದಲ್ಲಿ ಅವರು 10 ರನ್ನಿಗೆ 4 ವಿಕೆಟ್ ಉಡಾಯಿಸಿದ್ದರು.
ಕಾಗಿಸೊ ರಬಾಡ ಮತ್ತು ಕೇಶವ್ ಮಹಾರಾಜ್ 2 ವಿಕೆಟ್ ಕೆಡವಿದರು. ಲಂಕಾ ಸರದಿಯಲ್ಲಿ ಎರಡಂಕೆಯ ಸ್ಕೋರ್ ದಾಖಲಿಸಿದ್ದು ಮೂವರು ಮಾತ್ರ. ಕುಸಲ್ ಮೆಂಡಿಸ್ ಸರ್ವಾಧಿಕ 19 ರನ್ ಮಾಡಿದರು.
ಟಾಪ್ ನ್ಯೂಸ್
![“ನಿರ್ಭಯಾ’ ಪ್ರತೀ ಪಟ್ಟಣಕ್ಕೆ 200 ಕೋಟಿ ರೂ.ಗೆ ಪ್ರಧಾನಿಗೆ ಮನವಿ](https://www.udayavani.com/wp-content/uploads/2024/06/Parameshwar-7-415x264.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![“ನಿರ್ಭಯಾ’ ಪ್ರತೀ ಪಟ್ಟಣಕ್ಕೆ 200 ಕೋಟಿ ರೂ.ಗೆ ಪ್ರಧಾನಿಗೆ ಮನವಿ](https://www.udayavani.com/wp-content/uploads/2024/06/Parameshwar-7-150x96.jpg)
Minister Parameshwara; “ನಿರ್ಭಯಾ’ ಪ್ರತೀ ಪಟ್ಟಣಕ್ಕೆ 200 ಕೋಟಿ ರೂ.ಗೆ ಪ್ರಧಾನಿಗೆ ಮನವಿ
![robbers](https://www.udayavani.com/wp-content/uploads/2024/06/robbers-1-150x89.jpg)
Hunsur; ಮನೆಗೆ ಕನ್ನ ಹಾಕಿದ ಕಳ್ಳರಿಂದ ಕೋಟ್ಯಂತರ ರೂ. ನಗ, ನಗದು ದರೋಡೆ
![Actor Darshan Case; ಹಣೆಬರಹ ತಪ್ಪಿಸಲು ಸಾಧ್ಯವಿಲ್ಲ: ಶಿವಣ್ಣ](https://www.udayavani.com/wp-content/uploads/2024/06/SHIVA-150x90.jpg)
Actor Darshan Case; ಹಣೆಬರಹ ತಪ್ಪಿಸಲು ಸಾಧ್ಯವಿಲ್ಲ: ಶಿವಣ್ಣ
![1-qeqewqe](https://www.udayavani.com/wp-content/uploads/2024/06/1-qeqewqe-150x87.jpg)
Ballari: ನಾಲ್ವರು ರೈತರಿಂದ ವಿಷಸೇವಿಸಿ ಆತ್ಮಹತ್ಯೆ ಯತ್ನ
![Young Farmer; ಅಲ್ಪಾವಧಿಯಲ್ಲಿ ಲಾಭ ತಂದ ಕೊತ್ತಂಬರಿ ಸೊಪ್ಪು; ಯುವ ರೈತನ ಸಾಧನೆ](https://www.udayavani.com/wp-content/uploads/2024/06/Young-Farmer-1-150x86.jpg)
Young Farmer; ಅಲ್ಪಾವಧಿಯಲ್ಲಿ ಲಾಭ ತಂದ ಕೊತ್ತಂಬರಿ ಸೊಪ್ಪು; ಯುವ ರೈತನ ಸಾಧನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.