T20 World Cup 3ನೇ ಸೂಪರ್‌ ಓವರ್‌;  ಧೋನಿಗೆ ಮೊದಲ ಗೆಲುವು


Team Udayavani, Jun 3, 2024, 11:37 PM IST

1-weqqewqewq

ಬ್ರಿಜ್‌ಟೌನ್‌ (ಬಾರ್ಬಡಾಸ್‌): ದೊಡ್ಡ ಕೌತುಕ ಮೂಡಿಸಿದ ಸಣ್ಣ ತಂಡಗಳ ರೋಚಕ ಹಣಾಹಣಿಯೊಂದಕ್ಕೆ ಟಿ20 ವಿಶ್ವಕಪ್‌ ಸಾಕ್ಷಿಯಾಗಿದೆ. “ಕೆನ್ಸಿಂಗ್ಟನ್‌ ಓವಲ್‌’ನಲ್ಲಿ ನಡೆದ “ಬಿ’ ವಿಭಾಗದ ನಮೀಬಿಯಾ-ಒಮಾನ್‌ ನಡುವಿನ ಪಂದ್ಯ ಟೈಯಲ್ಲಿ ಅಂತ್ಯ ಕಂಡಿತು. ಬಳಿಕ ಸೂಪರ್‌ ಓವರ್‌ನಲ್ಲಿ ನಮೀಬಿಯಾ ಗೆಲುವು ಸಾಧಿಸಿತು.

ಇದು ಟಿ20 ವಿಶ್ವಕಪ್‌ ಇತಿಹಾಸದ 3ನೇ ಸೂಪರ್‌ ಓವರ್‌ ನಿದರ್ಶನ. 2007ರ ಪ್ರಥಮ ವಿಶ್ವಕಪ್‌ನಲ್ಲಿ ಭಾರತ-ಪಾಕಿಸ್ಥಾನ ನಡುವಿನ ಗ್ರೂಪ್‌ ಪಂದ್ಯ ಟೈ ಆದಾಗ “ಬೌಲ್‌ ಔಟ್‌’ ನಿಯಮವನ್ನು ಅಳವಡಿಸಲಾಗಿತ್ತು.

ಸೂಪರ್‌ ಓವರ್‌-1
ಕ್ಯಾಂಡಿಯಲ್ಲಿ ನಡೆದ 2012ರ ಶ್ರೀಲಂಕಾ-ನ್ಯೂಜಿಲ್ಯಾಂಡ್‌ ನಡುವಿನ ಮುಖಾಮುಖೀ ಟಿ20 ವಿಶ್ವಕಪ್‌ನ ಮೊದಲ ಟೈ ಪಂದ್ಯಕ್ಕೆ ಸಾಕ್ಷಿಯಾಗಿದೆ. ನ್ಯೂಜಿಲ್ಯಾಂಡ್‌ 7ಕ್ಕೆ 174 ರನ್‌ ಗಳಿಸಿದರೆ, ಶ್ರೀಲಂಕಾ 6ಕ್ಕೆ 174 ರನ್‌ ಬಾರಿಸಿತು. ಸೂಪರ್‌ ಓವರ್‌ನಲ್ಲಿ ಲಂಕಾ ಗೆದ್ದು ಬಂದಿತು. ಸ್ಕೋರ್‌: ಶ್ರೀಲಂಕಾ-ಒಂದಕ್ಕೆ 13, ನ್ಯೂಜಿಲ್ಯಾಂಡ್‌-ಒಂದಕ್ಕೆ 7.

 ಸೂಪರ್‌ ಓವರ್‌-2
ದ್ವಿತೀಯ ಟೈ ಪಂದ್ಯಕ್ಕೂ 2012ರ ವಿಶ್ವಕಪ್‌, ಕ್ಯಾಂಡಿ ಪಂದ್ಯ ಹಾಗೂ ನ್ಯೂಜಿಲ್ಯಾಂಡ್‌ ಸಾಕ್ಷಿಯಾದದ್ದು ಕಾಕತಾಳೀಯ. ಎದುರಾಳಿ ವೆಸ್ಟ್‌ ಇಂಡೀಸ್‌. ವಿಂಡೀಸ್‌ ಪಡೆ 19.3 ಓವರ್‌ಗಳಲ್ಲಿ 139 ರನ್‌ ಗಳಿಸಿದರೆ, ನ್ಯೂಜಿಲ್ಯಾಂಡ್‌ 7ಕ್ಕೆ 139 ರನ್‌ ಮಾಡಿತು. ಸೂಪರ್‌ ಓವರ್‌ನಲ್ಲಿ ಮತ್ತೆ ನ್ಯೂಜಿಲ್ಯಾಂಡ್‌ ಸೋತಿತು. ಸ್ಕೋರ್‌: ನ್ಯೂಜಿಲ್ಯಾಂಡ್‌-17/0, ವೆಸ್ಟ್‌ ಇಂಡೀಸ್‌-19/0.

 ಭಾರತ-ಪಾಕ್‌ ಬೌಲ್‌ ಔಟ್‌!
2007ರ ಮೊದಲ ಟಿ20 ವಿಶ್ವಕಪ್‌ ವೇಳೆ ಪಂದ್ಯ ಟೈ ಆದಾಗ ಸೂಪರ್‌ ಓವರ್‌ ನಿಯಮ ಇರಲಿಲ್ಲ. ಅದೇನೂ ಕಾಕತಾಳೀಯವೋ, ಭಾರತ-ಪಾಕಿಸ್ಥಾನ ನಡುವೆ ಡರ್ಬನ್‌ನಲ್ಲಿ ನಡೆದ ಲೀಗ್‌ ಪಂದ್ಯವೇ ಟೈ ಆಯಿತು! ಭಾರತ 9ಕ್ಕೆ 141, ಪಾಕಿಸ್ಥಾನ 7ಕ್ಕೆ 141 ರನ್‌ ಮಾಡಿತ್ತು.

ಆಗ ಟೈ ಬ್ರೇಕರ್‌ಗಾಗಿ ಅಳವಡಿಸಿದ್ದು “ಬಾಲ್‌ ಔಟ್‌’ ನಿಯಮ. ಅಂದರೆ, ಬ್ಯಾಟಿಂಗ್‌ ಎಂಡ್‌ನ‌ಲ್ಲಿರುವ ಸ್ಟಂಪ್‌ಗೆ ಬೌಲರ್‌ ಚೆಂಡೆಸೆಯುವುದು. ಅಲ್ಲಿ ಬ್ಯಾಟರ್‌ ನಿಂತಿರುವುದಿಲ್ಲ, ಕೇವಲ ಕೀಪರ್‌ ಮಾತ್ರ. ಚೆಂಡು ಸ್ಟಂಪ್‌ಗೆ ತಗಲಬೇಕಿತ್ತು. ಭಾರತ ಇಲ್ಲಿ 3-0 ಅಂತರದ ಮೇಲುಗೈ ಸಾಧಿಸಿತು. ಭಾರತದ ಮೂವರೂ ಎಸೆದ ಚೆಂಡು ಸ್ಟಂಪ್‌ಗೆ ಹೋಗಿ ಬಡಿದಿತ್ತು. ಪಾಕಿಸ್ಥಾನದ ಮೂರೂ ಎಸೆತಗಳು ಗುರಿ ತಪ್ಪಿದವು.

ಅಂದಹಾಗೆ ಭಾರತದ ಪರ ಚೆಂಡೆಸೆದವರು ಯಾರು ಗೊತ್ತೇ? ವೀರೇಂದ್ರ ಸೆಹವಾಗ್‌, ಹರ್ಭಜನ್‌ ಸಿಂಗ್‌ ಮತ್ತು ರಾಬಿನ್‌ ಉತ್ತಪ್ಪ! ಪಾಕಿಸ್ಥಾನ ಪರ ಯಾಸಿರ್‌ ಅರಾಫ‌ತ್‌, ಉಮರ್‌ ಗುಲ್‌ ಮತ್ತು ಶಾಹಿದ್‌ ಅಫ್ರಿದಿ ಬೌಲಿಂಗ್‌ ಮಾಡಿದ್ದರು.

 ಧೋನಿಗೆ ಮೊದಲ ಗೆಲುವು
ಇಲ್ಲಿ ಇನ್ನೊಂದು ವಿಶೇಷವಿದೆ. ಇದು ಮಹೇಂದ್ರ ಸಿಂಗ್‌ ಧೋನಿ ನಾಯಕತ್ವದಲ್ಲಿ ಭಾರತಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಲಿದ ಮೊದಲ ಜಯವಾಗಿತ್ತು! ಇದು ಕೂಟದಲ್ಲಿ ಭಾರತ ಆಡಿದ ದ್ವಿತೀಯ ಪಂದ್ಯ. ಸ್ಕಾಟ್ಲೆಂಡ್‌ ಎದುರಿನ ಮೊದಲ ಮುಖಾಮುಖೀ ರದ್ದುಗೊಂಡಿತ್ತು.

ಟಾಪ್ ನ್ಯೂಸ್

BBK11: ಮೂರನೇ ಸ್ಪರ್ಧಿಯಾಗಿ ಬಿಗ್‌ ಬಾಸ್‌ ಮನೆಗೆ ʼಫೈಯರ್‌ ಬ್ರ್ಯಾಂಡ್‌ʼ ಎಂಟ್ರಿ

BBK11: ಮೂರನೇ ಸ್ಪರ್ಧಿಯಾಗಿ ಬಿಗ್‌ ಬಾಸ್‌ ಮನೆಗೆ ʼಫೈಯರ್‌ ಬ್ರ್ಯಾಂಡ್‌ʼ ಎಂಟ್ರಿ

snemahamayi-Krishna

MUDA Case: ಸಿದ್ದರಾಮಯ್ಯ 2011ರ ಹೇಳಿಕೆ ವಿಡಿಯೋ ಹಾಕಿ ಟಾಂಗ್‌ ಕೊಟ್ಟ ಸ್ನೇಹಮಯಿ ಕೃಷ್ಣ!

1-qweewq

Shiruru ದುರಂತ; ಹುಟ್ಟೂರಲ್ಲಿ ಅರ್ಜುನ್ ಅಂತಿಮ ವಿಧಿ: ಹರಿದು ಬಂದ ಜನಸಾಗರ

BBK11: ಬಿಗ್‌ ಬಾಸ್‌ ಮನೆಯ 2ನೇ ಸ್ಪರ್ಧಿ ರಿವೀಲ್.. ಯಾರೂ ನಿರೀಕ್ಷೆ ಮಾಡದ ಸ್ಪರ್ಧಿ ಇವರು..

BBK11: ಬಿಗ್‌ ಬಾಸ್‌ ಮನೆಯ 2ನೇ ಸ್ಪರ್ಧಿ ರಿವೀಲ್.. ಯಾರೂ ನಿರೀಕ್ಷೆ ಮಾಡದ ಸ್ಪರ್ಧಿ ಇವರು

IPL retention: IPL new rule gave good news to Chennai-Mumbai Franchise

IPL retention: ಚೆನ್ನೈ-ಮುಂಬೈಗೆ ಗುಡ್‌ ನ್ಯೂಸ್‌ ನೀಡಿದ ಐಪಿಎಲ್‌ ಹೊಸ ನಿಯಮ

1-HDK

Documents ಬಿಡುಗಡೆಯಾದರೆ 6-7 ಸಚಿವರು ರಾಜೀನಾಮೆ ನೀಡಬೇಕಾಗುತ್ತದೆ: ಎಚ್ ಡಿಕೆ

Food-1

Food Adulteration: ನೀವೇ ಮನೆಯಲ್ಲಿ ಆಹಾರ ಕಲಬೆರಕೆಯನ್ನು ಪತ್ತೆ ಹಚ್ಚಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IPL retention: IPL new rule gave good news to Chennai-Mumbai Franchise

IPL retention: ಚೆನ್ನೈ-ಮುಂಬೈಗೆ ಗುಡ್‌ ನ್ಯೂಸ್‌ ನೀಡಿದ ಐಪಿಎಲ್‌ ಹೊಸ ನಿಯಮ

Musheer Khan

Musheer Khan: ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡ ಯುವ ಬ್ಯಾಟರ್ ಮುಶೀರ್‌ ಖಾನ್‌

Kanpura Test: Indian players left the match and went to the hotel due to rain

Kanpur Test: ಪಂದ್ಯ ಬಿಟ್ಟು ಹೋಟೆಲ್‌ ಗೆ ತೆರಳಿದ ಭಾರತೀಯ ಆಟಗಾರರು

ENGvsAUS: ಇಂಗ್ಲೆಂಡ್‌ ಆಟಕ್ಕೆ ಸೋತ ಆಸೀಸ್;‌ ಸರಣಿ ಸಮಗೊಳಿಸಿದ ಬ್ರೂಕ್‌ ಪಡೆ

ENGvsAUS: ಇಂಗ್ಲೆಂಡ್‌ ಆಟಕ್ಕೆ ಸೋತ ಆಸೀಸ್;‌ ಸರಣಿ ಸಮಗೊಳಿಸಿದ ಬ್ರೂಕ್‌ ಪಡೆ

1-bevas

Test ವಿವಾದ : ಹಲ್ಲೆಯಾಗಿಲ್ಲ, ಬಾಂಗ್ಲಾ ಹುಲಿ ‘ಅಸ್ವಸ್ಥ’

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

BBK11: ಮೂರನೇ ಸ್ಪರ್ಧಿಯಾಗಿ ಬಿಗ್‌ ಬಾಸ್‌ ಮನೆಗೆ ʼಫೈಯರ್‌ ಬ್ರ್ಯಾಂಡ್‌ʼ ಎಂಟ್ರಿ

BBK11: ಮೂರನೇ ಸ್ಪರ್ಧಿಯಾಗಿ ಬಿಗ್‌ ಬಾಸ್‌ ಮನೆಗೆ ʼಫೈಯರ್‌ ಬ್ರ್ಯಾಂಡ್‌ʼ ಎಂಟ್ರಿ

crime (2)

Hunsur: ಹಂದಿಫಾರ್ಮ್ ನಲ್ಲಿ ಕಾರ್ಮಿಕನಿಂದ ಮ್ಯಾನೇಜರ್ ಬರ್ಬರ ಹ*ತ್ಯೆ

snemahamayi-Krishna

MUDA Case: ಸಿದ್ದರಾಮಯ್ಯ 2011ರ ಹೇಳಿಕೆ ವಿಡಿಯೋ ಹಾಕಿ ಟಾಂಗ್‌ ಕೊಟ್ಟ ಸ್ನೇಹಮಯಿ ಕೃಷ್ಣ!

1-qweewq

Shiruru ದುರಂತ; ಹುಟ್ಟೂರಲ್ಲಿ ಅರ್ಜುನ್ ಅಂತಿಮ ವಿಧಿ: ಹರಿದು ಬಂದ ಜನಸಾಗರ

1-frrr

Food street ನಲ್ಲಿ ಅರೆಬಟ್ಟೆಯಲ್ಲಿ ಸುತ್ತಾಡಿದ ಯುವತಿ ವಿರುದ್ಧ ಪ್ರಕರಣ ದಾಖಲು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.