Election Result: ಜನತಾ ಜನಾರ್ದನನ ಪ್ರೀತಿಗೆ ನಾನು ತಲೆ ಬಾಗುವೆ: ಮೋದಿ
Team Udayavani, Jun 5, 2024, 12:27 AM IST
ಹೊಸದಿಲ್ಲಿ: ಸತತ ಮೂರನೇ ಬಾರಿಗೆ ದೇಶದ ಜನತೆ ಎನ್ಡಿಎ ಮೇಲೆ ನಂಬಿಕೆ ಇರಿಸಿದ್ದಾರೆ. 1962ರ ಬಳಿಕ ಇದೇ ಮೊದಲ ಬಾರಿಗೆ ಒಂದೇ ಸರಕಾರ ಮೂರನೇ ಬಾರಿಯೂ ಅಧಿಕಾರಕ್ಕೆ ಏರುತ್ತಿದೆ. “ಜನತಾ ಜನಾರ್ದನನ’ ಈ ಪ್ರೀತಿಗೆ ನಾನು ತಲೆಬಾಗುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಲೋಕಸಭೆ ಚುನಾವಣೆಯ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಬಿಜೆಪಿ ಕೇಂದ್ರ ಕಚೇರಿಯಲ್ಲಿ ದೇಶವನ್ನುದ್ದೇಶಿಸಿ ಮೋದಿ ಮಾತನಾಡಿದರು. ಈ ವೇಳೆ “ಪ್ರಜಾಪ್ರಭುತ್ವದ ಈ ಗೆಲುವು ಸಂವಿಧಾನದ ಮೇಲಿನ ನಂಬಿಕೆಯನ್ನು ಸಾಬೀತು ಪಡಿಸಿದೆ. ಸಂವಿಧಾನವು ನಮ್ಮ ಪಾಲಿಗೆ ಮಾರ್ಗ ದರ್ಶನ ತೋರುವ ಬೆಳಕಾಗಿದೆ’ ಎಂದಿದ್ದಾರೆ. ಜತೆಗೆ ಮೂರನೇ ಅವಧಿಯಲ್ಲಿ ನಮ್ಮ ಸರಕಾರದ ಮಹತ್ತರ ನಿರ್ಧಾರಗಳ ಮೂಲಕ ಹೊಸ ಅಧ್ಯಾಯವನ್ನು ದೇಶ ಕಾಣಲಿದೆ. ಇದು ಮೋದಿಯ ಗ್ಯಾರಂಟಿ ಎಂದಿದ್ದಾರೆ.
ಕಳೆದ 10 ವರ್ಷಗಳಲ್ಲಿ ಜನರ ಆಶೋತ್ತರಗಳನ್ನು ಈಡೇರಿಸಲು ನಮ್ಮ ಸರಕಾರ ಮಾಡಿದ ಉತ್ತಮ ಕಾರ್ಯಗಳು ಮುಂದುವರಿಯಲಿದ್ದು, ಭ್ರಷ್ಟಾಚಾರದ ವಿರುದ್ಧದ ಹೋರಾಟ ಇನ್ನೂ ಕಠಿನಗೊಳಿಸುತ್ತೇವೆ. ಈ ಬಾರಿಯ ಅಧಿಕಾರಾವಧಿ ಸಂಪೂರ್ಣವಾಗಿ ಭ್ರಷ್ಟಾ ಚಾರವನ್ನು ಕಿತ್ತೂಗೆಯಲು ಬಳಕೆಯಾಗುತ್ತದೆ ಎಂದು ಭರವಸೆ ನೀಡಿದ್ದಾರೆ.
ಮೈತ್ರಿ ಪಕ್ಷಗಳಿಗೆ ಪಿಎಂ ಧನ್ಯವಾದ: ಎನ್ಡಿಎ ಗೆಲುವಿಗೆ ಶ್ರಮಿಸಿದ ಎಲ್ಲ ಮೈತ್ರಿ ಪಕ್ಷಗಳಿಗೂ ಪಿಎಂ ಧನ್ಯವಾದ ಹೇಳಿದ್ದಾರೆ. ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು, ಬಿಹಾರ ಸಿಎಂ ನಿತೀಶ್ ಕುಮಾರ್ ಅವರಿಗೂ ಧನ್ಯವಾದ ತಿಳಿಸಿದ್ದಾರೆ. ಇದೇ ವೇಳೆ ಒಡಿಶಾದ ಗೆಲುವಿನ ಬಗ್ಗೆ ಮಾತನಾಡಿ, ಅಲ್ಲಿನ ಜನತೆ ಉತ್ತಮ ಆಡಳಿತದ ಮೇಲೆ ನಂಬಿಕೆ ಇರಿಸಿ ಈ ಗೆಲುವನ್ನು ನೀಡಿದ್ದಾರೆ ಎಂದು ಪ್ರಶಂಸಿಸಿದ್ದಾರೆ. ಇದೇ ವೇಳೆ ಬಿಜೆಪಿ ಕಾರ್ಯಕರ್ತರ ಶ್ರಮವನ್ನೂ ಶ್ಲಾ ಸಿ ಧನ್ಯವಾದ ತಿಳಿಸಿದ್ದಾರೆ.
ಎಲ್ಲ ಒಟ್ಟಾದರೂ ಬಿಜೆಪಿಗೆ ಸಮವಾಗಲಿಲ್ಲ
ಬಿಜೆಪಿಯನ್ನು ಮಣಿಸಲು ವಿರೋಧಿಗಳೆಲ್ಲ ಒಟ್ಟುಗೂಡಿದರು. ಆದರೂ ಬಿಜೆಪಿ ಗೆದ್ದಷ್ಟು ಸ್ಥಾನಗಳನ್ನು ಅವರೆಲ್ಲರೂ ಒಟ್ಟಾಗಿಯೂ ಗೆಲ್ಲಲು ಸಾಧ್ಯವಾಗಲಿಲ್ಲ. ಇನ್ನು ಜಮ್ಮು-ಕಾಶ್ಮೀರದ ಲ್ಲಂತೂ ವಿಶ್ವದ ಮುಂದೆ ದೇಶದ ಮಾನಹಾನಿ ಮಾಡಲು ಯತ್ನಿಸುತ್ತಿದ್ದ ದೇಶ ವಿರೋಧಿಗಳಿಗೆ ಪ್ರಜೆಗಳು ಅವರ ಕೃತ್ಯಗಳ ಪ್ರತಿಬಿಂಬದ ಕನ್ನಡಿ ಯನ್ನು ತೋರಿದ್ದಾರೆ ಎಂದು ಮೋದಿ ಹೇಳಿದ್ದಾರೆ.
ಮೋದಿ ಹೇಳಿದ್ದು
ಮೂರನೇ ಅವಧಿ ಭ್ರಷ್ಟಾಚಾರ ಕಿತ್ತೂಗೆಯಲು ಮೀಸಲು
ಸಂವಿಧಾನವೇ ಅಭಿವೃದ್ಧಿಯ ಮಾರ್ಗತೋರುವ ಬೆಳಕು
ದೇಶವಿರೋಧಿಗಳಿಗೆ ಕನ್ನಡಿ ತೋರಿದ ಕಣಿವೆ ಜನರು
ವಿರೋಧಿಗಳು ಒಟ್ಟಾದರೂ ಬಿಜೆಪಿಗೆ ಸಮವಾಗಲಿಲ್ಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra ವಿಧಾನಸಭಾ ಚುನಾವಣೆ: ಸಿದ್ಧತೆ ಪರಿಶೀಲಿಸಿದ ಚುನಾವಣ ಆಯೋಗ
Heartstopping Moment: ಉಕ್ಕಿ ಹರಿಯುವ ಹೊಳೆಯಲ್ಲೇ ಬಾಣಂತಿಯನ್ನು ಹೊತ್ತು ಸಾಗಿದ ವ್ಯಕ್ತಿ
Bengaluru; ಚುನಾವಣಾ ಬಾಂಡ್ ಸೋಗಿನಲ್ಲಿ ಸುಲಿಗೆ; ನಿರ್ಮಲಾ ಸೀತಾರಾಮನ್ ವಿರುದ್ದ ಎಫ್ಐಆರ್
Haryana: ಅಕ್ರಮ ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಫೋಟ: 3 ಮೃತ್ಯು, 7 ಮಂದಿಗೆ ಗಾಯ
Bus Overturns… ಪುರಿ ಜಗನ್ನಾಥನ ದರ್ಶನಕ್ಕೆ ಹೊರಟಿದ್ದ ನಾಲ್ವರು ಯಾತ್ರಿಕರು ಮೃತ್ಯು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Food Adulteration: ನೀವೇ ಮನೆಯಲ್ಲಿ ಆಹಾರ ಕಲಬೆರಕೆಯನ್ನು ಪತ್ತೆ ಹಚ್ಚಿ!
BBK11: ಬಿಗ್ ಬಾಸ್ ಕನ್ನಡ-11ರ ಮೊದಲ ಅಧಿಕೃತ ಸ್ಪರ್ಧಿ ಇವರೇ ನೋಡಿ..
Dharwad; ಸಿದ್ದರಾಮಯ್ಯ ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸಬೇಕು: ಪ್ರಹ್ಲಾದ ಜೋಶಿ
Theater, Stage Artist: ನಗುವಿನ ಸವಿ ಹಂಚಿದ ಅಮ್ಮ ಮನೋರಮಾ
Maharashtra ವಿಧಾನಸಭಾ ಚುನಾವಣೆ: ಸಿದ್ಧತೆ ಪರಿಶೀಲಿಸಿದ ಚುನಾವಣ ಆಯೋಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.