ಲೋಕಸಭಾ ಚುನಾವಣೆ ಫ‌ಲಿತಾಂಶ; ಮೋದಿ ಜಸ್ಟ್‌ಪಾಸ್‌!

ಆದರೂ ಐಎನ್‌ಡಿಐಎ ಒಕ್ಕೂಟದಿಂದ ಔಟ್‌ ಆಫ್ಸಿಲಬಸ್‌ ಪ್ಲಾನ್‌?

Team Udayavani, Jun 5, 2024, 7:00 AM IST

ಬಹುನಿರೀಕ್ಷಿತ ಲೋಕಸಭಾ ಚುನಾವಣೆ ಫ‌ಲಿತಾಂಶ ಪ್ರಕಟ; ಮೋದಿ ಜಸ್ಟ್‌ಪಾಸ್‌!

ಹೊಸದಿಲ್ಲಿ: 18ನೇ ಲೋಕಸಭಾ ಚುನಾ­ವಣೆಯನ್ನು ಗೆಲ್ಲಲು ಇನ್ನಿಲ್ಲದಂತೆ ಕಸರತ್ತು ನಡೆಸಿದ ಐಎನ್‌ಡಿಐಎ ಮೈತ್ರಿಕೂಟ, ಬಹುಮತದ ಹತ್ತಿರ ಬಂದಿದೆ. ಆದರೆ ಸರಕಾರ ರಚನೆ ಮಾಡುವುದಕ್ಕೆ ಅಗತ್ಯವಿರುವ 272 ಸ್ಥಾನಗಳು ಮಾತ್ರ ಲಭಿಸಿಲ್ಲ. ಹಾಗಂತ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನಾಯಕ ರಾಹುಲ್‌ ಗಾಂಧಿ ಮುಂತಾದವರು ಸುಮ್ಮನೆ ಕುಳಿತಿಲ್ಲ. ಬಹುಮತವಿಲ್ಲ­ದಿದ್ದರೂ ಸರಕಾರ ರಚನೆ ಮಾಡಲು “ಔಟ್‌ ಆಫ್ ಸಿಲಬಸ್‌’ ಮಾರ್ಗದಲ್ಲಿ ಪ್ಲಾನ್‌ ಮಾಡುವ ಸಾಧ್ಯತೆಯಿದೆ.

ನೀವು ಸರಕಾರ ರಚನೆ ಮಾಡುತ್ತೀರಾ? ಎಂಬ ಪ್ರಶ್ನೆಗೆ ರಾಹುಲ್‌ ಗಾಂಧಿ ಹಾಗೂ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟವಾಗಿ ಯಾವುದೇ ಉತ್ತರ ನೀಡಿಲ್ಲ. ಈ ಪ್ರಶ್ನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ರಾಹುಲ್‌, ನಾವಿನ್ನೂ ಈ ವಿಷಯವನ್ನು ಮಿತ್ರಪಕ್ಷಗಳ ಜತೆಗೆ ಚರ್ಚೆ ನಡೆಸಿಲ್ಲ. ಹಾಗಾಗಿ ಇವತ್ತು ನನ್ನಲ್ಲಿ ಇದಕ್ಕೆ ಉತ್ತರವಿಲ್ಲ. ಆದರೆ ನಾಳೆ (ಬುಧವಾರ) ನನ್ನಲ್ಲಿ ಉತ್ತರವಿರುತ್ತದೆ ಎಂದು ಹೇಳಿದ್ದಾರೆ.

ಖರ್ಗೆ ಮಾತನಾಡಿ, ನಾವು ಈ ಬಗ್ಗೆ ಇನ್ನೂ ಮಿತ್ರಪಕ್ಷಗಳ ಜತೆಗೆ ಮಾತಾಡಿಲ್ಲ. ನಮ್ಮೊಂದಿಗೆ ಸೇರಲಿರುವ ಹೊಸ ಮಿತ್ರಪಕ್ಷಗಳ ಜತೆಗೂ ಚರ್ಚಿಸಿಲ್ಲ. ನಾವು ಅವರೊಂದಿಗೆ ಮಾತನಾಡಿ ಹೇಗೆ ಬಹುಮತ ಪಡೆಯ­ಬಹುದೆಂದು ಚರ್ಚಿಸುತ್ತೇವೆ ಎಂದು ನಿಗೂಢವಾಗಿ ಉತ್ತರಿಸಿದ್ದಾರೆ. ಖರ್ಗೆ ಈ ಉತ್ತರ ನೀಡುವ ಮೂಲಕ ಎನ್‌ಡಿಎ ಮಿತ್ರ ಪಕ್ಷಗಳನ್ನು ಐಎನ್‌ಡಿಐಎ ಕೂಟಕ್ಕೆ ಸೆಳೆಯುವ ಪರೋಕ್ಷ ಸುಳಿವು ನೀಡಿದ್ದಾರೆಂದು ವಿಶ್ಲೇಷಿಸಲಾಗಿದೆ. ಒಂದು ವೇಳೆ ಅದು ಗಂಭೀರವಾಗಿ ಈ ಯತ್ನ ನಡೆಸಿದಲ್ಲಿ ಸರಕಾರ ರಚನೆಗೆ ಎನ್‌ಡಿಎ-ಐಎನ್‌ಡಿಐಎ ನಡುವೆ ಹಗ್ಗ ಜಗ್ಗಾಟ ನಡೆಯುವ ಸಾಧ್ಯತೆಯಿದೆ.

ಏನೇನು ದಾರಿಗಳಿವೆ?
ಎನ್‌ಡಿಎ ಮಿತ್ರಪಕ್ಷಗಳನ್ನು ಸೆಳೆಯಲು ಐಎನ್‌ಡಿಐಎ ಕೂಟ ಬಲವಾದ ಪ್ರಯತ್ನ ನಡೆಸಬಹುದು
ಇತರ ರೂಪದಲ್ಲಿ ಗೆದ್ದಿರುವ ಸಂಸದರನ್ನು ಸಂಪರ್ಕಿಸಿ ಒಳಕ್ಕೆಳೆದುಕೊಳ್ಳಬಹುದು. ಆದರೆ ಇದು ಕಷ್ಟದ ದಾರಿ
ಬಿಜೆಪಿ-ಮೋದಿಯ ಮೇಲೆ ವಿಪಕ್ಷಗಳಿಗೆ ಇರುವ ಸಿಟ್ಟನ್ನೇ ಅವಕಾಶವನ್ನಾಗಿ ಮಾಡಿಕೊಂಡು ನಿತೀಶ್‌, ಚಂದ್ರಬಾಬು ಅವರನ್ನು ಸೆಳೆಯಲು ಯತ್ನಿಸಬಹುದು

ನಿತೀಶ್‌, ಚಂದ್ರಬಾಬು “ಕೃಪಾಂಕ’ ಸಿಗುತ್ತಾ ಐಎನ್‌ಡಿಐಎ ಮೈತ್ರಿಗೆ?
ಮೂಲಗಳ ಪ್ರಕಾರ ನಿತೀಶ್‌ ಕುಮಾರ್‌ ನಾಯಕತ್ವದ ಜೆಡಿಯು ಮತ್ತು ಚಂದ್ರಬಾಬು ನಾಯ್ಡು ಅವರ ಟಿಡಿಪಿ ಕೃಪಾಂಕ­ಕ್ಕಾಗಿ ಐಎನ್‌ಡಿಐಎ ಮೈತ್ರಿಕೂಟ ಬಲವಾದ ಯತ್ನ ನಡೆಸಿದೆ. ಯಾವುದೇ ಒಂದು ಪಕ್ಷಕ್ಕೆ ಸ್ಪಷ್ಟ ಬಹುಮತ ಇಲ್ಲದ ಕಾರಣ ಎರಡೂ ಪಕ್ಷಗಳು ಎನ್‌ಡಿಎ ಬಹುಮತದಲ್ಲಿ ಮಹ­ತ್ವದ ಪಾತ್ರ ವಹಿಸಿವೆ. ಹೀಗಾಗಿ ಈ ಇಬ್ಬರು ನಾಯಕರನ್ನು ಸೆಳೆಯಲು ನಿತೀಶ್‌ಕುಮಾರ್‌ಗೆ ಉಪ್ರಪ್ರಧಾನಿ ಸ್ಥಾನ ವನ್ನು, ಚಂದ್ರಬಾಬು ಅಧಿಕಾರದಲ್ಲಿರುವ ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವ ಭರವಸೆ ನೀಡಿದ್ದಾರೆನ್ನಲಾಗಿದೆ.

ಪ್ರಿಪರೇಟರಿ ಹಂತದಲ್ಲೇ ಮೈತ್ರಿ ಮಾಡಿ ಗೆದ್ದ ಬಿಜೆಪಿ
ಎನ್‌ಡಿಎ ಮತ್ತೆ ಅಧಿಕಾರಕ್ಕೆ ಬರಲು ಮುಖ್ಯ ಕಾರಣವಾಗಿರುವುದು 12 ಸ್ಥಾನ ಹೊಂದಿರುವ ನಿತೀಶ್‌ ಕುಮಾರ್‌ ಜೆಡಿಯು ಮತ್ತು 16 ಸ್ಥಾನ ಹೊಂದಿರುವ ಚಂದ್ರಬಾಬು ನಾಯ್ಡು ಟಿಡಿಪಿ. ವಾಸ್ತವವಾಗಿ ಈ ಎರಡೂ ಪಕ್ಷಗಳು ಎನ್‌ಡಿಎ ಮೈತ್ರಿಕೂಟದಿಂದ ಹೊರ ಹೋಗಿದ್ದವು. ಜನವರಿ ಮಧ್ಯಾವಧಿ ಹೊತ್ತಿಗೆ ಐಎನ್‌ಡಿಐಎ ಕೂಟದ ಮೇಲೆ ಸಿಟ್ಟಾದ ನಿತೀಶ್‌ ದಿಢೀರ್‌ ಎನ್‌ಡಿಎ ಸೇರಿದರು. ಮಾರ್ಚ್‌ ಹೊತ್ತಿಗೆ ಚಂದ್ರಬಾಬು ಕೂಡ ಸೇರಿಕೊಂಡರು. ಚಾಣಕ್ಯ ಅಮಿತ್‌ ಶಾ ತಂತ್ರವೋ, ಆಗಲೇ ಬಿಜೆಪಿಗೆ ಸೋಲಿನ ಸುಳಿವು ಸಿಕ್ಕಿತ್ತೋ ಎನ್ನುವುದು ಖಾತ್ರಿಯಿಲ್ಲ. ಆದರೆ ಈ ಮೈತ್ರಿಯೇ ಬಿಜೆಪಿಯನ್ನು ಅಧಿಕಾರದಲ್ಲಿ ಉಳಿಸಿದೆ.

ಇದು ಐತಿಹಾಸಿಕ ವಿಜಯ
ಜನ ಎನ್‌ಡಿಎ ಮೇಲೆ ಸತತ 3ನೇ ಬಾರಿಗೆ ನಂಬಿಕೆ ಯಿ­ಟ್ಟಿದ್ದಾರೆ. ಇದು ಭಾರತೀಯ ಇತಿಹಾಸ­ದಲ್ಲಿ ಐತಿಹಾಸಿಕ ಸಾಧನೆ. ಆಂಧ್ರದಲ್ಲಿ ಚಂದ್ರಬಾಬು, ಬಿಹಾರದಲ್ಲಿ ನಿತೀಶ್‌ ಕುಮಾರ್‌ ನಾಯಕತ್ವದಲ್ಲಿ ಎನ್‌ಡಿಎ ಅತ್ಯುತ್ತಮ ಸಾಧನೆ ಮಾಡಿದೆ. ಅವರಿಗೆ ಧನ್ಯವಾದ. ಕಳೆದ 10 ವರ್ಷದಲ್ಲಿ ಮಾಡಿದ್ದ ಒಳ್ಳೆಯ ಕೆಲಸಗಳನ್ನು ಮುಂದುವರಿಸು­ತ್ತೇವೆ. ಜನರ ಆಶೋತ್ತರಗಳನ್ನು ಪೂರೈಸುವ ದಿಕ್ಕಿನಲ್ಲಿ ನಡೆಯು­ತ್ತೇವೆ.
-ನರೇಂದ್ರ ಮೋದಿ, ಪ್ರಧಾನಿ

ಟಾಪ್ ನ್ಯೂಸ್

MOdi (3)

Jammu and Kashmir ಜನತೆ ಭ್ರಷ್ಟ ಮುಕ್ತ ಸರಕಾರ ಬಯಸಿದ್ದಾರೆ: ಮೋದಿ

UNITED NATIONS

UN ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಸ್ಥಾನ: ಪೋರ್ಚುಗಲ್‌ ಬೆಂಬಲ

1-wewewq

PM ರೇಸ್‌ನಲ್ಲಿ ನಾನು ಇಲ್ಲ; ಬೇಕಿದ್ದರೇ ಮೋದಿ ಕೇಳಿ: ಗಡ್ಕರಿ

Manglrui

Mangaluru: ಸಂಸ್ಥೆಯ ಬೆಳವಣಿಗೆಯಲ್ಲಿ ಮಾನವ ಸಂಪನ್ಮೂಲ ಪಾತ್ರ ಪ್ರಮುಖ: ಮಂಜುನಾಥ ಭಂಡಾರಿ

1-asasa

Test; ನ್ಯೂಜಿಲ್ಯಾಂಡ್‌ ಆಲೌಟ್‌ 88 : ಲಂಕೆಗೆ 514 ರನ್‌ ದಾಖಲೆ ಮುನ್ನಡೆ

dinesh-gu

Dinesh Gundurao; ತಿಂಗಳೊಳಗೆ ಗೃಹ ಆರೋಗ್ಯ ಯೋಜನೆ ಜಾರಿ

leopard

leopard: ಮೂಲ್ಕಿ ಕೊಯ್ಯಾರಿನಲ್ಲಿ ಸಣ್ಣ ಮರಿಯೊಂದಿಗೆ ಚಿರತೆ ಪ್ರತ್ಯಕ್ಷ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

congress

Haryana ಅನ್ನದಾತರ ಕಲ್ಯಾಣಕ್ಕೆ ಆಯೋಗ ರಚನೆ: ಕಾಂಗ್ರೆಸ್‌ ವಾಗ್ಧಾನ

MOdi (3)

Jammu and Kashmir ಜನತೆ ಭ್ರಷ್ಟ ಮುಕ್ತ ಸರಕಾರ ಬಯಸಿದ್ದಾರೆ: ಮೋದಿ

court

Jama Masjid:ಮಾಜಿ ಪಿಎಂ ಸಹಿ ಕಡತ ಸಲ್ಲಿಸದ್ದಕ್ಕೆ ಕೋರ್ಟ್‌ ಟೀಕೆ

1-wewewq

PM ರೇಸ್‌ನಲ್ಲಿ ನಾನು ಇಲ್ಲ; ಬೇಕಿದ್ದರೇ ಮೋದಿ ಕೇಳಿ: ಗಡ್ಕರಿ

army

Kashmir;ಕುಲ್ಗಾಮ್‌ನಲ್ಲಿ ಎನ್ಕೌಂಟರ್: ಉಗ್ರರಿಬ್ಬರ ಹ*ತ್ಯೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

congress

Haryana ಅನ್ನದಾತರ ಕಲ್ಯಾಣಕ್ಕೆ ಆಯೋಗ ರಚನೆ: ಕಾಂಗ್ರೆಸ್‌ ವಾಗ್ಧಾನ

MOdi (3)

Jammu and Kashmir ಜನತೆ ಭ್ರಷ್ಟ ಮುಕ್ತ ಸರಕಾರ ಬಯಸಿದ್ದಾರೆ: ಮೋದಿ

court

Jama Masjid:ಮಾಜಿ ಪಿಎಂ ಸಹಿ ಕಡತ ಸಲ್ಲಿಸದ್ದಕ್ಕೆ ಕೋರ್ಟ್‌ ಟೀಕೆ

UNITED NATIONS

UN ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಸ್ಥಾನ: ಪೋರ್ಚುಗಲ್‌ ಬೆಂಬಲ

1-wewewq

PM ರೇಸ್‌ನಲ್ಲಿ ನಾನು ಇಲ್ಲ; ಬೇಕಿದ್ದರೇ ಮೋದಿ ಕೇಳಿ: ಗಡ್ಕರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.