Modi 3.0; ಜೂನ್ 8 ರಂದು ಮೋದಿ ಪ್ರಮಾಣವಚನ ಸಾಧ್ಯತೆ
ಜೂನ್ 9 ರ ವರೆಗೆ ರಾಷ್ಟ್ರಪತಿ ಭವನ ವೀಕ್ಷಣೆಗಿಲ್ಲ ಅವಕಾಶ: ಪ್ರಮಾಣವಚನ ಸಿದ್ಧತೆ
Team Udayavani, Jun 5, 2024, 1:17 PM IST
ಹೊಸದಿಲ್ಲಿ:ಜೂನ್ 8 ರಂದು ಸಂಜೆ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.
ದೆಹಲಿಯಲ್ಲಿ ಬುಧವಾರ ಅಮಿತ್ ಶಾ ಅವರ ನೇತೃತ್ವದಲ್ಲಿ ಮಹತ್ವದ ಎನ್ ಡಿಎ ಮೈತ್ರಿಕೂಟದ ನಾಯಕರ ಸಭೆ ನಡೆಯಲಿದ್ದು ಅಲ್ಲಿ ತೀರ್ಮಾನ ಅಂತಿಮವಾಗಲಿದೆ ಎಂದು ತಿಳಿದು ಬಂದಿದೆ.
ಲೋಕಸಭಾ ಚುನಾವಣ ಫಲಿತಾಂಶದಲ್ಲಿ ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿದ್ದು ಮ್ಯಾಜಿಕ್ ನಂಬರ್ 272 ಕ್ಕಿಂತ ಕಡಿಮೆ ಸ್ಥಾನ ಹೊಂದಿದೆ. ಆದರೆ ಎನ್ ಡಿಎ ಮೈತ್ರಿಕೂಟ ಸ್ಪಷ್ಟ ಬಹುಮತ ಹೊಂದಿದೆ. ಮಿತ್ರ ಪಕ್ಷ ಜೆಡಿಯು ಮತ್ತು ಟಿಡಿಪಿ, ಎಲ್ ಜೆಪಿ ಬೆಂಬಲ ಅಗತ್ಯವಾಗಿದೆ.
ರಾಷ್ಟ್ರಪತಿ ಭವನ ವೀಕ್ಷಣೆಗಿಲ್ಲ ಅವಕಾಶ
ಮುಂಬರುವ ಪ್ರಧಾನಿ ಮತ್ತು ಸಚಿವ ಸಂಪುಟದ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಸಿದ್ಧತೆಯಿಂದಾಗಿ ರಾಷ್ಟ್ರಪತಿ ಭವನ ಬುಧವಾರದಿಂದ ಭಾನುವಾರದವರೆಗೆ ಸಾರ್ವಜನಿಕರಿಗೆ ಮುಚ್ಚಿರುತ್ತದೆ ಎಂದು ಮಂಗಳವಾರ ಅಧಿಕೃತ ಹೇಳಿಕೆ ತಿಳಿಸಿದೆ.
“ರಾಷ್ಟ್ರಪತಿ ಭವನದಲ್ಲಿ ಮಂತ್ರಿ ಪರಿಷತ್ತಿನ ಪ್ರಮಾಣ ವಚನ ಸಮಾರಂಭದ ಮುಂಬರುವ ಕಾರ್ಯಕ್ರಮದ ಸಿದ್ಧತೆಗಾಗಿ ಭವನದ (ಸರ್ಕ್ಯೂಟ್ -1) ಭೇಟಿಯನ್ನು ಜೂನ್ 5 ರಿಂದ 9, 2024 ರವರೆಗೆ ಸಾರ್ವಜನಿಕರಿಗೆ ಮುಚ್ಚಲಾಗುತ್ತಿದೆ ” ಎಂದು ರಾಷ್ಟ್ರಪತಿಗಳ ಕಚೇರಿ ಹೇಳಿಕೆ ಹೊರಡಿಸಿದೆ.
ಸರ್ಕ್ಯೂಟ್-1 ಮುಖ್ಯ ಕಟ್ಟಡ, ಮುಂಭಾಗ, ಸ್ವಾಗತ, ನವಚಾರ, ಔತಣಕೂಟ ಹಾಲ್, ಮೇಲಿನ ‘ಲೋಗ್ಗಿಯಾ’, ಲುಟ್ಯೆನ್ಸ್ ಗ್ರ್ಯಾಂಡ್ ಮೆಟ್ಟಿಲುಗಳು, ಗೆಸ್ಟ್ ವಿಂಗ್, ಅಶೋಕ ಹಾಲ್, ನಾರ್ತ್ ಡ್ರಾಯಿಂಗ್ ರೂಮ್, ಲಾಂಗ್ ಡ್ರಾಯಿಂಗ್ ರೂಮ್, ಲೈಬ್ರರಿ, ದರ್ಬಾರ್ ಹಾಲ್ ಮತ್ತು ಭಗವಾನ್ ಬುದ್ಧನ ಪ್ರತಿಮೆ ಸ್ಥಳಕ್ಕೆ ಪ್ರವಾಸಿಗರ ಭೇಟಿಗೆ ಅವಕಾಶವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Modi 3.0: ಮೊದಲ ದಿನದ ಕಾರ್ಯಾರಂಭದಲ್ಲಿ PM ಕಿಸಾನ್ ಕಡತಕ್ಕೆ ಸಹಿ ಹಾಕಿದ ಪ್ರಧಾನಿ ಮೋದಿ
Modi 3.0: ದಯವಿಟ್ಟು ನನಗೆ ಕೇಂದ್ರ ಸಚಿವ ಸ್ಥಾನ ಬೇಡ…ರಾಜೀನಾಮೆ ಕೊಡ್ತೇನೆ: ಸುರೇಶ್ ಗೋಪಿ!
Richest ; ಮೋದಿ ಸಂಪುಟಕ್ಕೆ ಸೇರ್ಪಡೆಯಾದ ಟಿಡಿಪಿಯ ಅತ್ಯಂತ ಶ್ರೀಮಂತ ಸಂಸದ
LokSabha; ಕೆಲವೊಮ್ಮೆ ಸರ್ಕಾರಗಳು ಒಂದೇ ದಿನಕ್ಕೆ ಉರುಳುತ್ತದೆ…: ದೊಡ್ಡ ಸುಳಿವು ನೀಡಿದ ಮಮತಾ
Modi 3.0; ಪ್ರಮಾಣ ವಚನಕ್ಕೂ ಮುನ್ನ ಮಹಾತ್ಮ ಗಾಂಧಿ, ವಾಜಪೇಯಿ ಸ್ಮಾರಕಕ್ಕೆ ಮೋದಿ ನಮನ
MUST WATCH
ಹೊಸ ಸೇರ್ಪಡೆ
T20 WC; ಇದು ನನ್ನ ಅದೃಷ್ಟ…..: ಟ್ರೋಫಿಯೊಂದಿಗೆ ಟೀಂ ಇಂಡಿಯಾ ತೊರೆದ ಕೋಚ್ ದ್ರಾವಿಡ್ ಮಾತು
T20 World Cup; ವಿರಾಟ್ ದಾರಿಯಲ್ಲೇ ಸಾಗಿದ ರೋಹಿತ್; ಕಪ್ ಗೆದ್ದ ಬಳಿಕ ನಿವೃತ್ತಿ ಘೋಷಣೆ
Kushtagi: ಮನೆ ಮುಂದೆ ನಿಲ್ಲಿಸಿದ್ದ ದ್ವಿ ಚಕ್ರ ವಾಹನಕ್ಕೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು
Daily Horoscope: ಶನಿ ಪ್ರಭಾವದಿಂದ ಕಾರ್ಯ ವಿಳಂಬವಾದರೂ ಕ್ರಿಯೆಗೆ ವಿರಾಮ ಇರದು
Madikeri ಸೆ.15ರ ವರೆಗೆ “ಗಾಜಿನ ಸೇತುವೆ’ ವೀಕ್ಷಣೆ ಸ್ಥಗಿತ : ಜಿಲ್ಲಾಧಿಕಾರಿ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.