World Environment day: ಪ್ರಾಕೃತಿಕ ಸಂಪನ್ಮೂಲದ ಉಳಿವು ನಮ್ಮ ಹೊಣೆ


Team Udayavani, Jun 5, 2024, 3:48 PM IST

5-

ಮಾನವ ಜನಾಂಗಕ್ಕೆ ಅನೇಕ ಹಬ್ಬಗಳು ಪ್ರತೀ ವರ್ಷ ಬಂದು ಹೋಗುವುದು. ಆದರೆ ಹಬ್ಬ ಬಂದಾಗ ಇದ್ದ ಸಂಭ್ರಮ ಮುಗಿಯುತ್ತಲೇ ಬೇಸರ ತರಿಸಲಿದೆ. ಅದೇ ರೀತಿ ಪ್ರಾಕೃತಿಕ ಸಂಪನ್ಮೂಲಗಳ ಸದ್ಬಳಕೆ ಮಾಡುವ ಜತೆಗೆ ಮುಂದಿನ ಜನಾಂಗಕ್ಕೂ ಪ್ರಕೃತಿಯನ್ನು ಕೊಡುಗೆಯಾಗಿ ನೀಡುವುದು ನಮ್ಮೆಲ್ಲರ ಹೊಣೆ. ಈ ನಿಟ್ಟಿನಲ್ಲಿ ಜೂನ್‌ 5 ರಂದು ಪರಿಸರ ದಿನಾಚರಣೆ ಪ್ರತಿ ವರ್ಷದಂತೆ ಈ ಬಾರಿ ಕೂಡ ಮಹತ್ವದ ಸಂದೇಶ ಸಾರುತ್ತಿದ್ದು ಅಂದಿನ ದಿನ ಗಿಡ ನೆಟ್ಟು ಸೆಲ್ಫಿ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ. ಉಳಿದ ದಿನ ಪರಿಸರದ ಬಗ್ಗೆ ಕಾಳಜಿ ಇರೋದನ್ನು ಕಾಣುವುದು ಬಹಳ ಅಪರೂಪ ಎನ್ನಬಹುದು.

ಅದೆಲ್ಲಾ ವರ್ಷಕ್ಕೆ ಒಂದು ಸಲ ಅಷ್ಟೇ ಮತ್ತೆ ಪ್ರಕೃತಿ ನೆನಪೇ ಆಗಲ್ಲ. ನಿಜ ಹೇಳಬೇಕು ಅಂದರೆ ಮನುಷ್ಯರು ಪರಾವಲಂಬಿಗಳು. ಪ್ರಕೃತಿಯಿಂದ ಎಲ್ಲವನ್ನು ಪಡೆದುಕೊಳ್ಳುತ್ತಾ ಬದುಕುತ್ತಿರುತ್ತಾರೆ. ಪ್ರಕೃತಿ ಸ್ವಾತಂತ್ರ್ಯವಾಗಿ ಇರುತ್ತೆ ಯಾರನ್ನು ಅದು ಅವಲಂಬಿಸಿಲ್ಲ ಅದನ್ನು ಅದರ ಪಾಡಿಗೆ ಬಿಟ್ಟರೆ ಅದು ತನ್ನನ್ನು ತಾನು ಸರಿಮಾಡಿಕೊಳ್ಳುತ್ತೆ ಮನುಷ್ಯರಿಗೆ ತನ್ನನ್ನು ತಾನು ಸರಿಮಾಡಿಕೊಳ್ಳೋಕೆ ಆಗಲ್ಲ.

ಇನ್ನೊಬ್ಬರ ಸಹಾಯದ ಅವಶ್ಯಕತೆ ಇರುತ್ತೆ ಹುಟ್ಟಿದಾಗಿನಿಂದ ಸಾಯುವವರೆಗೆ ಮನುಷ್ಯ ಬೇರೆಯವರನ್ನು ಅವಲಂಬಿಸಿ ಇರ್ತಾನೆ. ಅದು ಮನುಷ್ಯರಿಗೆ ಅರ್ಥ ಆಗುತ್ತಿಲ್ಲ.  ಅರ್ಥಮಾಡಿಕೊಳ್ಳುವ ಗೋಜಿಗೂ ಹೋಗಲ್ಲ. ಸಂಬಳ ತೆಗೆದುಕೊಳ್ಳುವವನು ಸ್ವಾವಲಂಬಿ ತೆಗೆದುಕೊಳ್ಳುತ್ತಿಲ್ಲ ಅಂದರೆ ಪರಾವಲಂಬಿ ಇಷ್ಟೇ ಇವತ್ತಿನ ಪ್ರಪಂಚ ಅರ್ಥ ಮಾಡಿಕೊಂಡಿರುವುದು ಅನಾದಿಕಾಲದಿಂದಲೂ ಈ ಪ್ರಕೃತಿ ನಮ್ಮನ್ನೆಲ್ಲಾ ಸಲಹುತ್ತಾ ಬಂದಿದೆ.

ಯಾವುದೇ ನಿರೀಕ್ಷೆ ಇಲ್ಲದೆ ಹಿಂದೆ ಯಾರೋ ಮಾಡಿದ ಶಾಸನಗಳನ್ನು ಇವತ್ತು ಇತಿಹಾಸ, ಪುರಾತತ್ವ ಅಂತ ಓದುತ್ತಾ ಸಂಶೋಧನೆ ಮಾಡುವವರು ಇದ್ದಾರೆ ಅಪ್ಪನ ವ್ಯಾಪಾರ ವ್ಯವಹಾರ ಮುಂದುವರಿಸಿಕೊಂಡು ಹೋಗುವವರು ಇದ್ದಾರೆ. ತಲಾತಲಾಂತರದಿಂದ ಬಂದಿರೋ ವ್ಯವಸಾಯ, ಹೈನುಗಾರಿಕೆ ನಂಬಿ ಬದುಕುವವರು ಈಗಲೂ ಇದ್ದಾರೆ. ಹೀಗಿರಬೇಕಾದರೆ ಸ್ವಾವಲಂಬನೆ ಎಲ್ಲಿಂದ ಬಂತು ?, ಯಾವುದು? ಅನ್ನೋದು ವೈಯಕ್ತಿಕವಾಗಿ ನನಗೆ ಅರ್ಥ ಆಗಿಲ್ಲ. ಇದರ ನಡುವೆ ಕುಟುಂಬದ ಹಿನ್ನೆಲೆ ಬಿಟ್ಟು ಸ್ವಾತಂತ್ರ್ಯವಾಗಿ ಸಾಧಿಸುವವರು ಇದ್ದಾರೆ.

ಅದು ಸಾಹಿತ್ಯದಿಂದ ಹಿಡಿದು, ಸಿನೆಮಾದವರೆಗೂ ಕಾರ್ಪೊರೇಟ್‌ನಿಂದ ಹಿಡಿದು ವ್ಯಾಪಾರ -ವ್ಯವಹಾರದ‌ವರೆಗೂ ಸಾಧಿಸುವವರು ಸಾಧಿಸುತ್ತಾ ಇರುವವರು ಇದ್ದಾರೆ. ಇವರೆಲ್ಲರೂ ಒಬ್ಬರೇ ನಿಂತು ಮಾಡಿರುವುದಿಲ್ಲ ಒಂದು ಟೀಮ್‌ ಅಂತ ಇರುತ್ತೆ ಅನ್ನೋದು ನನ್ನ ಅನಿಸಿಕೆ. ಒಬ್ಬರೇ ಸಾಧಿಸಿರಬಹುದು. ಅದು ದೇವರ ಆಶೀರ್ವಾದ ಆಗಿರುತ್ತೆ. ಒಟ್ಟಿನಲ್ಲಿ ಪ್ರಕೃತಿ ಇಲ್ಲದೆ ಅದರ ಸವಲತ್ತುಗಳು ಇಲ್ಲದೆ ಮನುಷ್ಯ ಒಂದು ಹೆಜ್ಜೆ ಮುಂದೆ ಇಡಲಾರ.

ಅದನ್ನು ಅರ್ಥಮಾಡಿಕೊಳ್ಳಬೇಕಾದ್ದು ಮಾನವ ಕೋಟಿಯ ಕರ್ತವ್ಯ ಜತೆಗೆ ಅನುಭಾವವೂ ಹೌದು. ಹಾಗಾಗಿ ಈಗ  ಇದ್ದ ಪ್ರಕೃತಿಯ ಅಳಿವು ಉಳಿವು ಎಲ್ಲಕ್ಕೂ ನಾವೇ ಜವಾಬ್ದಾರರಾಗಿದ್ದು ಈ ಬಗ್ಗೆ ನಿರ್ಲಕ್ಷ್ಯ ತೋರದೆ ಪ್ರಾಕೃತಿಕ ಸಂಪನ್ಮೂಲದ ಉಳಿವಿಗಾಗಿ ಸತತವಾಗಿ ಪರಿಶ್ರಮಿಸೋಣ.

- ಭೂಮಿಕಾ

ಮೈಸೂರು

ಟಾಪ್ ನ್ಯೂಸ್

9

700 ಕೋಟಿ ವೆಚ್ಚದ ʼಕಲ್ಕಿ 2898 ಎಡಿʼ.. ಇಲ್ಲಿದೆ ಅತ್ಯಂತ ದುಬಾರಿ ಭಾರತೀಯ ಚಿತ್ರಗಳ ಪಟ್ಟಿ

prahlad joshi

Hubli; ಹೆಚ್ಚುವರಿ ಡಿಸಿಎಂ ಸ್ಥಾನ ವಿಚಾರದಲ್ಲಿ ಸಿದ್ದರಾಮಯ್ಯ ಕೈವಾಡವಿದೆ: ಪ್ರಹ್ಲಾದ ಜೋಶಿ

Nigeria; ಮದುವೆ ಹಾಲ್, ಆಸ್ಪತ್ರೆಯಲ್ಲಿ ಆತ್ಮಾಹುತಿ ಬಾಂಬ್ ದಾಳಿ; 18 ಮಂದಿ ಸಾವು

Nigeria; ಮದುವೆ ಹಾಲ್, ಆಸ್ಪತ್ರೆಯಲ್ಲಿ ಆತ್ಮಾಹುತಿ ಬಾಂಬ್ ದಾಳಿ; 18 ಮಂದಿ ಸಾವು

3-vitla

Campco ಮಾಜಿ ಅಧ್ಯಕ್ಷ ಎಲ್.ಎನ್. ಕೂಡೂರು ಇನ್ನಿಲ್ಲ

INDWvsSAW; ಸ್ನೇಹ್ ರಾಣಾ ಸ್ಪಿನ್ ಜಾಲಕ್ಕೆ ಸಿಲುಕಿ ದಿಢೀರ್ ಕುಸಿತ ಕಂಡ ದ.ಆಫ್ರಿಕಾ

INDWvsSAW; ಸ್ನೇಹ್ ರಾಣಾ ಸ್ಪಿನ್ ಜಾಲಕ್ಕೆ ಸಿಲುಕಿ ದಿಢೀರ್ ಕುಸಿತ ಕಂಡ ದ.ಆಫ್ರಿಕಾ

T20 World Cup ಗೆದ್ದ ಧನ್ಯತೆಯಲ್ಲಿ ಬಾರ್ಬಡೋಸ್ ಪಿಚ್ ಮಣ್ಣು ತಿಂದ ರೋಹಿತ್ ಶರ್ಮಾ

T20 World Cup ಗೆದ್ದ ಧನ್ಯತೆಯಲ್ಲಿ ಬಾರ್ಬಡೋಸ್ ಪಿಚ್ ಮಣ್ಣು ತಿಂದ ರೋಹಿತ್ ಶರ್ಮಾ

T20 WC; This is my luck…..: Coach Rahul Dravid

T20 WC; ಇದು ನನ್ನ ಅದೃಷ್ಟ…..: ಟ್ರೋಫಿಯೊಂದಿಗೆ ಟೀಂ ಇಂಡಿಯಾ ತೊರೆದ ಕೋಚ್ ದ್ರಾವಿಡ್ ಮಾತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-uv-fusion

Education: ಅಸಮತೋಲನೆ ನಿವಾರಣೆಗೆ ಸಹ ಶಿಕ್ಷಣ ಸರಿಯಾದ ದಾರಿ

13-tn-sitharama

T. N. Seetharam: ಧಾರಾವಾಹಿಗಳಿಗೆ ಹೊಸ ಭಾಷ್ಯ ನೀಡಿದ ನಿರ್ದೇಶಕ ಟಿ.ಎನ್‌. ಸೀತಾರಾಮ

11-uv-fusion

Rajeev Taranath: ಸರೋದ್‌ ಸ್ವರ ಮಾಂತ್ರಿಕನ ಸ್ವರ್ಗಾರೋಹಣ

10-uv-fusion

UV Fusion: ನೈಸರ್ಗಿಕ ಕಾಡು ಪುನರುತ್ಥಾನಕ್ಕೆ ಕೊಡುಗೆ ನೀಡುವ ಉಪ್ಪಳಿಗೆ

11-uv-fusion

UV Fusion: ಸಿನೆಮಾ

MUST WATCH

udayavani youtube

ವಿಧಿಯಾಟಕ್ಕೆ ಬಲಿಯಾದ ಅಂಧರ ಪುಟ್ ಬಾಲ್ ತಂಡದ ಕ್ಯಾಪ್ಟನ್

udayavani youtube

ಮಾತು ಬರದ ಮಗುವಿಗೆ ಮಾತು ಬರಿಸಿದ ಕಾಪು ಮಾರಿಯಮ್ಮ | ಕಾಪುವಿನ ಅಮ್ಮನ ಪವಾಡ

udayavani youtube

ಡಿಸಿಎಂ ವಿಚಾರ ಇನ್ನೊಮ್ಮೆ ಮಾತನಾಡೋಣ; ಕುಕ್ಕೆಯಲ್ಲಿ ಡಿ.ಕೆ.ಶಿವಕುಮಾರ್

udayavani youtube

ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಅಂಗಾರ ಸಂಕಷ್ಟಹರ ಚತುರ್ಥಿ|

udayavani youtube

ಬಸ್ಸೇರಿ ಸಮಸ್ಯೆ ಆಲಿಸಿದ ಶಾಸಕ ರೈ

ಹೊಸ ಸೇರ್ಪಡೆ

9

700 ಕೋಟಿ ವೆಚ್ಚದ ʼಕಲ್ಕಿ 2898 ಎಡಿʼ.. ಇಲ್ಲಿದೆ ಅತ್ಯಂತ ದುಬಾರಿ ಭಾರತೀಯ ಚಿತ್ರಗಳ ಪಟ್ಟಿ

prahlad joshi

Hubli; ಹೆಚ್ಚುವರಿ ಡಿಸಿಎಂ ಸ್ಥಾನ ವಿಚಾರದಲ್ಲಿ ಸಿದ್ದರಾಮಯ್ಯ ಕೈವಾಡವಿದೆ: ಪ್ರಹ್ಲಾದ ಜೋಶಿ

Crime: ಸ್ನೇಹಿತನನ್ನು ಕಟ್ಟಡದಿಂದ ಕೆಳಗೆ ದೂಡಿ ಕೊಲೆಗೈದ ಆರೋಪಿ ಸೆರೆ

Crime: ಸ್ನೇಹಿತನನ್ನು ಕಟ್ಟಡದಿಂದ ಕೆಳಗೆ ದೂಡಿ ಕೊಲೆಗೈದ ಆರೋಪಿ ಸೆರೆ

4-btwl

Bantwala: ಮರ ಬಿದ್ದು ಕೋಳಿ ಫಾರಂ ಜಖಂ

Nigeria; ಮದುವೆ ಹಾಲ್, ಆಸ್ಪತ್ರೆಯಲ್ಲಿ ಆತ್ಮಾಹುತಿ ಬಾಂಬ್ ದಾಳಿ; 18 ಮಂದಿ ಸಾವು

Nigeria; ಮದುವೆ ಹಾಲ್, ಆಸ್ಪತ್ರೆಯಲ್ಲಿ ಆತ್ಮಾಹುತಿ ಬಾಂಬ್ ದಾಳಿ; 18 ಮಂದಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.