UV Fusion: ತುಂಬಿದ ಕೊಡ ತುಳುಕುವುದಿಲ್ಲ


Team Udayavani, Jun 5, 2024, 5:15 PM IST

16

ತನಗೆಲ್ಲ ತಿಳಿದಿದೆ ಎಂದು ಬೀಗುವವನೆ ಅಜ್ಞಾನಿ. ತನಗೇನು ಗೊತ್ತಿಲ್ಲ ಎಂದು ನುಡಿಯುವವನೆ ಜ್ಞಾನಿ!

ಅಜ್ಞಾನಿ ತನಗೇನು ಗೊತ್ತಿಲ್ಲದಿದ್ದರೂ ಎಲ್ಲವೂ ತಿಳಿದಿದೆ ಎಂದು ಬೀಗಿದರೆ ಜ್ಞಾನಿ ತನಗೆಲ್ಲ ತಿಳಿದಿದ್ದರೂ ಏನೂ ತಿಳಿಯದವನಂತೆ ಸುಮ್ಮನಿರುತ್ತಾನೆ. ಇದೇ ಜ್ಞಾನಿಗೂ ಅಜ್ಞಾನಿಗೂ ಇರುವ ವ್ಯತ್ಯಾಸ.

ಇದಕ್ಕೆ ಪೂರಕವಾಗುವಂತೆ  ತುಂಬಿದ ಕೊಡ ಎಂದಿಗೂ ತುಳುಕುವುದಿಲ್ಲ.ಎಂಬ ಒಂದು ಅದ್ಭುತವಾದ ಗಾದೆ ಮಾತಿದೆ.ಅಂದರೆ ಪೂರ್ತಿಯಾಗಿ ತುಂಬಿದ ಕೊಡ ಎಂದಿಗೂ ಬರಿದಾಗುವುದಿಲ್ಲ. ಸ್ಥಿರವಾಗೇ ಇರುತ್ತದೆ.ಆದರೆ ಅರ್ಧ ತುಂಬಿದ ಕೊಡ ತುಳುಕುತ್ತ ಬಳುಕುತ್ತ ಬರಿದಾಗುತ್ತದೆ.ಇದರರ್ಥ ಇಷ್ಟೇ.

ಎಲ್ಲವನ್ನು ಅರಿತ ಮನುಷ್ಯ ಸ್ಥಿರವಾಗಿರುತ್ತಾನೆ.ಚಂಚಲ ಮನಸ್ಥಿತಿ ಅವನಿಗಿರುವುದಿಲ್ಲ. ತನಗೆಲ್ಲವೂ ತಿಳಿದಿದೆ ನಾನೊಬ್ಬ ಮಹಾಜ್ಞಾನಿ ಎಂಬ ದುರಹಂಕಾರವು ಅವನಿಗಿರುವುದಿಲ್ಲ.ಕಲಿತಷ್ಟು ಕಲಿಯುವ ಅವನ ತುಡಿತ ಹೆಚ್ಚಾಗುತ್ತದೆ.ತಾನಿನ್ನು ಕಲಿಯಬೇಕು ಹೊಸ ಹೊಸ ವಿಷಯಗಳನ್ನ ತಿಳಿದುಕೊಳ್ಳಬೇಕು ಎಂಬ ಮಹದಾಸೆ ಜಾಸ್ತಿಯಾಗುತ್ತದೆ ಹೊರತು ಅಹಂಕಾರ ಅವನ ಹತ್ತಿರವು ಸುಳಿಯುವುದಿಲ್ಲ.ಆದರೆ ತನಗೆಲ್ಲವೂ ತಿಳಿದಿದೆ ತಾನೊಬ್ಬ ಮಹಾಜ್ಞಾನಿ ಎಂದು ಬೀಗುವವನ ಮಸ್ತಕದ ತುಂಬೆಲ್ಲ ಅಹಂಕಾರವೇ ತುಂಬಿರುತ್ತದೆ.

ಈ ಒಂದು ಗಾದೆ ಮಾತು ಪ್ರಾಯಶಃ  ನಮ್ಮ ಇಂದಿನ ಜನಾಂಗಕ್ಕೆ ಬಹಳ ಚೆನ್ನಾಗಿ ಒಪ್ಪುತ್ತದೆ.ಅದರಲ್ಲೂ ಯುವಜನಾಂಗ ಹಾಗೂ ವಿದ್ಯಾರ್ಥಿಗಳಿಗೆ ಹೇಳಿ ಮಾಡಿದ ಗಾದೆ.

ಉದಾಹರಣೆಗೆ ಪರೀಕ್ಷೆಯ ಸಂದರ್ಭವನ್ನೇ ತೆಗೆದುಕೊಳ್ಳೋಣ….. ಪುಸ್ತಕದ ಎಲ್ಲ ವಿಷಯಗಳನ್ನು ಮಸ್ತಕಕ್ಕೆ ತುಂಬಿಸಿಕೊಂಡ ವಿದ್ಯಾರ್ಥಿ ಮೌನವಾಗಿದ್ದು ಹಸನ್ಮುಖೀಯಾಗಿದ್ದರೆ ಅರ್ಧಂಬರ್ಧ ಕಲಿತವನು ತನ್ನ ಮಸ್ತಕದಲ್ಲಿ ಏನೂ ತುಂಬಿಲ್ಲದಿದ್ದರೂ ಅತಿಯಾದ ಆತ್ಮವಿಶ್ವಾಸದಿಂದ ಬೀಗುತ್ತಿರುತ್ತಾನೆ. ಅಂದರೆ.. ಏನೂ ಗೊತ್ತಿಲ್ಲದಿದ್ದರೂ ಎಲ್ಲ ಗೊತ್ತಿರುವವರಂತೆ. ಇದಕ್ಕೆಯೇ ನಮ್ಮ ಹಿರಿಯರು ಹೇಳಿರುವುದು ಅರ್ಧ ಕಲಿತವನ ಅಬ್ಬರ ಹೆಚ್ಚು ಎಂದು.

ಎಲ್ಲವನ್ನು ತಿಳಿದುಕೊಂಡವನು ಯಾರ ತಂಟೆಗೂ ಹೋಗುವುದಿಲ್ಲ. ವಾಗ್ವಾದವನ್ನು ನಡೆಸುವುದಿಲ್ಲ. ಜಾಣ್ಮೆಯಿಂದ ಸಮಸ್ಯೆಯನ್ನ ಬಗೆಹರಿಸಿಕೊಂಡರೆ ಅರ್ಧಂಬರ್ಧ ತಿಳಿದ ಮೂಢ ವಾದ ಪ್ರತಿವಾದಗಳನ್ನ ಮಾಡಿ ಕೊನೆಗೆ ತಾನೇ ಸಮಸ್ಯೆಯ ಸುಳಿಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಾನೆ.

ಇದೇ ಕಾರಣಕ್ಕೆ ಅಂತ ಅಲ್ಪ ಜ್ಞಾನಿಗಳಿಗೆ, ಮೂಢರಿಗೆ, ಅಹಂಕಾರಿಗಳಿಗೆ ಯಾರೂ ಬುದ್ಧಿವಾದ ಹೇಳುವ ಗೋಜಿಗೆ ಕೈ ಹಾಕುವುದಿಲ್ಲ. ಕೊಚ್ಚೆ ಎಂದು ಗೊತ್ತಿದ್ದ ಮೇಲು ಆ ಕೊಚ್ಚೆಯ ಮೇಲೆ ಕಲ್ಲು ಎಸೆದರೆ ಆ ನೀರು ರಾಚುವುದು ನಮ್ಮ ಮೈಗೆ ಅಲ್ಲವೇ?…….

ಸುಸ್ಮಿತಾ ಕೆ. ಎನ್‌. ಅನಂತಾಡಿ, ಬಂಟ್ವಾಳ

ಟಾಪ್ ನ್ಯೂಸ್

UNITED NATIONS

UN ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಸ್ಥಾನ: ಪೋರ್ಚುಗಲ್‌ ಬೆಂಬಲ

1-wewewq

PM ರೇಸ್‌ನಲ್ಲಿ ನಾನು ಇಲ್ಲ; ಬೇಕಿದ್ದರೇ ಮೋದಿ ಕೇಳಿ: ಗಡ್ಕರಿ

Manglrui

Mangaluru: ಸಂಸ್ಥೆಯ ಬೆಳವಣಿಗೆಯಲ್ಲಿ ಮಾನವ ಸಂಪನ್ಮೂಲ ಪಾತ್ರ ಪ್ರಮುಖ: ಮಂಜುನಾಥ ಭಂಡಾರಿ

1-asasa

Test; ನ್ಯೂಜಿಲ್ಯಾಂಡ್‌ ಆಲೌಟ್‌ 88 : ಲಂಕೆಗೆ 514 ರನ್‌ ದಾಖಲೆ ಮುನ್ನಡೆ

dinesh-gu

Dinesh Gundurao; ತಿಂಗಳೊಳಗೆ ಗೃಹ ಆರೋಗ್ಯ ಯೋಜನೆ ಜಾರಿ

leopard

leopard: ಮೂಲ್ಕಿ ಕೊಯ್ಯಾರಿನಲ್ಲಿ ಸಣ್ಣ ಮರಿಯೊಂದಿಗೆ ಚಿರತೆ ಪ್ರತ್ಯಕ್ಷ?

yathanal-jarakiholi

BJP Meeting: ದಾವಣಗೆರೆಯಲ್ಲಿ ಯತ್ನಾಳ್‌, ರಮೇಶ್‌ ಜಾರಕಿಹೊಳಿ ಇಂದು ಮಹತ್ವದ ಸಭೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sky-dia

Tourism Spot: ರಾಜ್ಯದ ಎರಡನೇ “ಸ್ಕೈ ಡೈನಿಂಗ್‌’ ತಾಣವಾಗಲಿದೆ ಕುಂದಾಪುರದ ತ್ರಾಸಿ

Koderi

World Tourism Day: ಪ್ರವಾಸೋದ್ಯಮಕ್ಕೆ ಸಿಗಲಿ ಉತ್ತೇಜನ

16-cinema

UV Fusion: Cinema- ದಿ ರೆಡ್ ಬಲೂನ್, ಅಮೋರ್

15-uv-fusion

UV Fusion: ಬ್ಯಾಗ್‌ ಹಿಡಿದವರಿಗೊಂದು ಥ್ಯಾಂಕ್ಸ್‌

14-tourism

Netravati Trek: ದಿ ನೆಕ್ಸ್ಟ್ ಸ್ಟಾಪ್‌ ಈಸ್‌ ನೇತ್ರಾವತಿ ಪೀಕ್‌!

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

UNITED NATIONS

UN ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಸ್ಥಾನ: ಪೋರ್ಚುಗಲ್‌ ಬೆಂಬಲ

1-wewewq

PM ರೇಸ್‌ನಲ್ಲಿ ನಾನು ಇಲ್ಲ; ಬೇಕಿದ್ದರೇ ಮೋದಿ ಕೇಳಿ: ಗಡ್ಕರಿ

army

Kashmir;ಕುಲ್ಗಾಮ್‌ನಲ್ಲಿ ಎನ್ಕೌಂಟರ್: ಉಗ್ರರಿಬ್ಬರ ಹ*ತ್ಯೆ

puttige

Udupi; ಗೀತಾರ್ಥ ಚಿಂತನೆ-49: ಕೊನೆಯಲ್ಲೂ ಧೃತರಾಷ್ಟ್ರನ ಲಾಭದ ದೃಷ್ಟಿ

Manglrui

Mangaluru: ಸಂಸ್ಥೆಯ ಬೆಳವಣಿಗೆಯಲ್ಲಿ ಮಾನವ ಸಂಪನ್ಮೂಲ ಪಾತ್ರ ಪ್ರಮುಖ: ಮಂಜುನಾಥ ಭಂಡಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.