Old Memories: ಬರಿದಾಯಿತೆ ನೆನಪಿನ ಕೊಂಡಿ


Team Udayavani, Jun 5, 2024, 7:00 PM IST

18

ಭಾರತವು ಈಗಿನ ತಂತ್ರಜ್ಞಾನ ಯುಗದಲ್ಲಿ ಹಲವು ರೀತಿಯ ಅನ್ವೇಷಣೆಗಳನ್ನು ಮಾಡುತ್ತಾ ಬರುತ್ತಿದೆ. ಈಗ ದೇಶ – ವಿದೇಶದಲ್ಲಿ ಹಲವು ಪ್ರಜಾತಿಯನ್ನು ಮಾನವನು ಕೂಡ ನಿರ್ಮಿಸುತ್ತಿರುವ ವಿಷಯ ನಮಗೆಲ್ಲರಿಗೂ ತಿಳಿದಿದೆ. ಕೆಲವೊಂದು ವೈಜ್ಞಾನಿಕ ತಳಹದಿಯ ಕುರಿತಾಗಿ ಮತ್ತು ಇನ್ನೂ ಕೆಲವು ಆಹಾರದ ದೃಷ್ಟಿಕೋನದಿಂದ ಅನ್ವೇಷಿಸಲಾಗಿದೆ.

ಅದರೊಂದಿಗೆ ರೈತರು ಕಡಿಮೆ ಖರ್ಚು ಹಾಗೂ ಕಡಿಮೆ ಸಮಯದಲ್ಲಿ  ಹೆಚ್ಚು ಲಾಭ ಪಡೆಯಬಹುದಾದ ಸಸ್ಯವರ್ಗವನ್ನು ಬೆಳೆಸಿಕೊಂಡು ತನ್ನ  ಜೀವನ ನಡೆಸುವವರನ್ನು ಕಾಣಬಹುದು. ಒಂದು ಗಿಡದ ಮೂಲಕ  ಹಲವು ಹಣ್ಣುಗಳನ್ನು ತನ್ನದಾಗಿಸಿಕೊಳ್ಳಬಹುದು.

ಒಂದು ಗಿಡಕ್ಕೆ ನಾನಾ ಬಗೆಯ ಗಿಡಗಳ ಕಸಿಯನ್ನು ಕಟ್ಟಿ ಬೆಳೆಸಬಹುದು.ಕಾಲ ಕಳೆದಂತೆ ಈ ಗಿಡಗಳ ಬೇಡಿಕೆ ಹೆಚ್ಚಾಗಬಹುದು. ಯಾಕೆಂದರೆ ಆದಾಯ ಗಳಿಸುವ ಮಾರ್ಗದಲ್ಲಿ ಇದೊಂದು ಸುಲಭದ ಮಾರ್ಗವೂ ಹೌದು.

ಅದರಲ್ಲಿಯೂ ಸಹ ಯಾವುದೇ ಅನ್ವೇಷಣೆಗೆ ಒಳಗಾಗದೆ ಇಡೀ ದೇಶದಲ್ಲಿ ಕೆಲವೇ ಕೆಲವು ಜನರಿಗೆ ತಿಳಿದಿರುವ ವಿಷಯ ನಮ್ಮ ನಾಡಿನಲ್ಲಿದೆ. ನಮ್ಮ  ನಾಡು ತುಳುನಾಡು  ಎಂದು ಗುರುತಿಸಬಹುದಾಗಿದೆ.

ಕೆಲವು ವರ್ಷಗಳ ಹಿಂದೆ ಹಾಗೂ ಈಗಲೂ ಕೆಲವೊಂದು ಕಡೆಗಳ ಕಾಡಿನಲ್ಲಿ ಮಾರ್ಚ್‌ ನಿಂದ ಜುಲೈ ವರೆಗೆ ಎತ್ತರದ ಮರದಲ್ಲಿ ಸಿಹಿಯನ್ನು ತುಂಬಿಕೊಂಡ ಹಣ್ಣೆಂದರೆ ಅದು ಕಾಡಿನ ಮಾವು. ಅದನ್ನು ತುಳು ಭಾಷೆಯಲ್ಲಿ ಕಾಟುಕುಕ್ಕು ಎಂದೇ ಕರೆಯುತ್ತಾರೆ.

ಇದು ಹೆಚ್ಚಾಗಿ ಕಾಡಿನ ಪ್ರದೇಶದಲ್ಲಿ ಸಿಗುವ ಕಾರಣದಿಂದ ಇದನ್ನು ಕಾಟುಕುಕ್ಕು ಕರೆಯುತ್ತಾರೆ ಎಂಬುದು ನನ್ನ ಊಹೆಯಾಗಿದೆ. ಇದು ಕೆಲವೊಂದು ಕಡೆಗಳಲ್ಲಿ ರಸ್ತೆ ಬದಿಯಲ್ಲಿ ಕಾಣಬಹುದಾಗಿದೆ.  ಈ ಹಣ್ಣು ಎಲ್ಲ ರೀತಿಯ ಮಾವಿನ ಹಣ್ಣಿಗಿಂತ ಬೇರೆಯದೆ ಸಿಹಿಯಾದ ರುಚಿಯನ್ನು ಹೊಂದಿದೆ.

ಇದು ನಮ್ಮ ಶಾಲಾ ವಾರ್ಷಿಕ ರಜಾ ದಿನದ ಸವಿ ನೆನಪುಗಳಲ್ಲಿ ಒಂದು ಕೂಡ. ಇದು ಮಳೆ ಅಥವಾ ಜೋರು ಗಾಳಿಯು ಬಂದು ಹೋದ ಅನಂತರ ಕಾಡಿನಿಂದ  ಅವುಗಳನ್ನು ಗೆಳೆಯರೊಂದಿಗೆ ಅಥವಾ ಅಣ್ಣ ಅಕ್ಕಂದಿರೊಂದಿಗೆ ಜತೆಗೂಡಿ ಇದನ್ನು ಹೆಕ್ಕುವ ಖುಷಿಯೇ ಬೇರೆ. ಅದೆಷ್ಟೋ ದಿವಸ ಬುಟ್ಟಿ, ಚೀಲವನ್ನು ಹಿಡಿದುಕೊಂಡು ಗಾಳಿ ಮಳೆ ಬಂದಾಗ ಮರದಡಿಯಲ್ಲಿಯೇ ಕುಳಿತು ಎಷ್ಟು ಮಾವಿನಕಾಯಿ ಸಿಕ್ಕಿದೆ ಎನ್ನುವ ವಿಷಯ ಈ ಕಾಲದ ಸಮಯದಲ್ಲಿ ಕಾಣುತ್ತಿಲ್ಲ.

ಅದರ ಬದಲಿಗೆ ತಮ್ಮ ತಮ್ಮ ಮೊಬೈಲ್‌ನಲ್ಲಿ ಎಷ್ಟು ಡೇಟಾ ಮುಗಿದಿದೆ ಎನ್ನುವುದು ಲೆಕ್ಕ ಹಾಕುವುದರಲ್ಲಿ ಮುಳುಗಿರುವುದು  ಬೇಸರದ ಸಂಗತಿಯಾಗಿದೆ. ನಮ್ಮ ಹಿರಿಯರು ಈ ಕಾಟು ಮಾವಿನಕಾಯಿ ಎಂದರೆ ಅದರಲ್ಲಿ ಮಾಡಬಹುದಾದಂತಹ ಖಾದ್ಯಗಳನ್ನು ಮಾಡಿ ಬಿಡುತ್ತಿದ್ದರು.

ಅವುಗಳೆಂದರೆ ಇದರ ಮಿಡಿಯಿಂದ ಉಪ್ಪಿನಕಾಯಿ ಮತ್ತು ಹಣ್ಣಿನಿಂದ ಚಂಡ್ರುಪುಳಿಯನ್ನು ಮಾಡುತ್ತಿದ್ದರು. ಕೆಲವೊಂದು ಸಂದರ್ಭದಲ್ಲಿ ಇದುವೇ ರಾತ್ರಿಯ ಪದಾರ್ಥವು ಆಗಿರುತ್ತಿತ್ತು.ಒಂದಷ್ಟು ಹಿಂದಿನ ದಿನದತ್ತ ಕಣ್ಣಾಯಿಸಿದರೆ ನಾವು ಎಷ್ಟೋ ವಿಷಯಗಳಿಂದ ಹೊರ ಉಳಿದಿದ್ದೇವೆ ಎನ್ನುವುದು ಭಾಸವಾಗುತ್ತದೆ.

ಆದರೆ ಈಗಿನ ಯುವಜನತೆ ಅದರ ರುಚಿಯನ್ನು ಸವಿಯಲು ಸಾಧ್ಯವಾಗುತ್ತಿಲ್ಲ. ಜತೆಗೆ ಹಿರಿಯರಿಗೆ ಗೊತ್ತಿರುವ ಮರಗಳ ಹೆಸರಿನಲ್ಲಿ ನಮಗೆ ಅರ್ಧದಷ್ಟು ತಿಳಿದಿರಲು ಸಾಧ್ಯವಿಲ್ಲ. ಯಾಕೆಂದರೆ ಆಧುನಿಕ ಯುಗವೆನ್ನುತ್ತ ನಮ್ಮದೇ ಪ್ರಪಂಚವೆಂದು ಜಂಗಮವಾಣಿಯಲ್ಲಿ ಮುಳುಗಿ ಬಿಟ್ಟಿದ್ದೇವೆ ಮತ್ತು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಚಿತ್ರಣ ವಿಡಿಯೋಗಳೇ ಆಕರ್ಷಣೆಗಳು ಹೊರತು ನಮ್ಮ ಸುತ್ತ ಮುತ್ತಲಿನ ಹಸಿರಿನತ್ತ ಗಮನ ಹರಿಸುವಷ್ಟು ಆಸಕ್ತಿಯನ್ನು ನಮ್ಮ ಯುವಜನತೆಯಲ್ಲಿ ಕಾಣುತ್ತಿಲ್ಲ ಹಾಗಾಗಿ ಯಾವ ಮರ ಯಾವ ಹಣ್ಣು ನೀಡುತ್ತದೆ ಎನ್ನುವುದು ನಮಗೆ ತಿಳಿದಿಲ್ಲ.

ಅನೇಕ ರೀತಿಯ ಅಭಿವೃದ್ಧಿಯ ಹೆಸರಿನಲ್ಲೇ ಮತ್ತು ರಸ್ತೆ ಕಾಮಗಾರಿಯ ಸಂದರ್ಭದಲ್ಲಿ ಈ ಮರಗಳನ್ನು ಬುಡ ಸಮೇತ ನೆಲಕ್ಕುರುಳಿಸುತ್ತಿದ್ದಾರೆ.ಮತ್ತು ಇನ್ನೂ ಕೆಲವು ವ್ಯಾಪಾರದ ನೆಲೆಯಲ್ಲಿ ಮರಗಳ ಕೊಂಬೆಯನ್ನು ಕಡಿದು ಹಣ್ಣುಗಳನ್ನು  ಮಾರುತ್ತಿದ್ದಾರೆ.

ಇದರಿಂದ ದಾರಿಹೋಕರಿಗೆ ಮತ್ತು ಪ್ರಾಣಿ ಪಕ್ಷಿಗಳಿಗೆ ಆಶ್ರಯ ತಾಣ  ಹಾಗೂ ಆಹಾರವು ಕಡಿಮೆಯಾಗುತ್ತಿದೆ.ಕಾಲ ಕಳೆದಂತೆ ನಮ್ಮ ನಾಡ ಪ್ರಕೃತಿಯು ಬರಿದಾಗುತ್ತಿದೆ ಎಂಬುದೇ ನಿಜವಾದ ಸಂಗತಿ ಎನ್ನಬಹುದು.ಪ್ರಕೃತಿಯ ವಸ್ತು ಯಾವಾಗಲೂ ಪ್ರಕೃತಿಗೆ ಸೇರಬೇಕು.ನಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುವುದು ತಪ್ಪು ಎಂಬುದು ನನ್ನ ಸಂದೇಶ.

- ಅಜಿತ್‌ ನೆಲ್ಯಾಡಿ

ವಿವೇಕಾನಂದ ಮಹಾವಿದ್ಯಾಲಯ ಪುತ್ತೂರು

ಟಾಪ್ ನ್ಯೂಸ್

047

Gulveer Singh: ನೂತನ ರಾಷ್ಟ್ರೀಯ ದಾಖಲೆ ಸ್ಥಾಪಿಸಿದ ಗುಲ್ವೀರ್

04257

T20I series: ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿ: ಸೂರ್ಯಕುಮಾರ್‌ ಯಾದವ್‌ ನಾಯಕ

1-stalin

Tamil Nadu; ಪುತ್ರ ಉದಯನಿಧಿಗೆ ಬಡ್ತಿ ನೀಡಿದ ಸ್ಟಾಲಿನ್: ನಾಳೆ ಪ್ರಮಾಣವಚನ

Car-Auto

Kaup: ರಿಕ್ಷಾ, ಕಾರು ಮುಖಾಮುಖಿ ಢಿಕ್ಕಿ: ಇಬ್ಬರಿಗೆ ಗಾಯ

BBK-11: ಬಿಗ್‌ ಬಾಸ್‌ ಮನೆಗೆ 4ನೇ ಸ್ಪರ್ಧಿ ಎಂಟ್ರಿ.. ಯಾರು ಈ ʼಗೋಲ್ಡ್‌ ಮ್ಯಾನ್‌ʼ?

BBK-11: ಬಿಗ್‌ ಬಾಸ್‌ ಮನೆಗೆ 4ನೇ ಸ್ಪರ್ಧಿ ಎಂಟ್ರಿ.. ಯಾರು ಈ ʼಗೋಲ್ಡ್‌ ಮ್ಯಾನ್‌ʼ?

1-PT

IOC ಗೆ ಪತ್ರ; ಪಿ.ಟಿ.ಉಷಾ ವಿರುದ್ಧ ಡಜನ್ ಗೂ ಹೆಚ್ಚು ಎಕ್ಸಿಕ್ಯೂಟಿವ್ ಕೌನ್ಸಿಲ್ ಸದಸ್ಯರು!

Ramalinga-Raeddy

Transport: ವಾಯವ್ಯ ಸಾರಿಗೆ ನಿಗಮಕ್ಕೆ 400 ಬಸ್‌ ಖರೀದಿಗೆ ಕ್ರಮ: ಸಚಿವ ರಾಮಲಿಂಗಾರೆಡ್ಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sky-dia

Tourism Spot: ರಾಜ್ಯದ ಎರಡನೇ “ಸ್ಕೈ ಡೈನಿಂಗ್‌’ ತಾಣವಾಗಲಿದೆ ಕುಂದಾಪುರದ ತ್ರಾಸಿ

Koderi

World Tourism Day: ಪ್ರವಾಸೋದ್ಯಮಕ್ಕೆ ಸಿಗಲಿ ಉತ್ತೇಜನ

16-cinema

UV Fusion: Cinema- ದಿ ರೆಡ್ ಬಲೂನ್, ಅಮೋರ್

15-uv-fusion

UV Fusion: ಬ್ಯಾಗ್‌ ಹಿಡಿದವರಿಗೊಂದು ಥ್ಯಾಂಕ್ಸ್‌

14-tourism

Netravati Trek: ದಿ ನೆಕ್ಸ್ಟ್ ಸ್ಟಾಪ್‌ ಈಸ್‌ ನೇತ್ರಾವತಿ ಪೀಕ್‌!

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

1242

SAFF U-17 Championship: ಭಾರತ-ಬಾಂಗ್ಲಾ ಫೈನಲ್‌

047

Gulveer Singh: ನೂತನ ರಾಷ್ಟ್ರೀಯ ದಾಖಲೆ ಸ್ಥಾಪಿಸಿದ ಗುಲ್ವೀರ್

025587

ICC Women’s T20 World Cup: ವನಿತಾ ಟಿ20 ವಿಶ್ವಕಪ್‌; ಅಂಪಾಯರ್ಸ್ ಆಯ್ಕೆ

04257

T20I series: ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿ: ಸೂರ್ಯಕುಮಾರ್‌ ಯಾದವ್‌ ನಾಯಕ

0888

Leopard: ಮೂಲ್ಕಿ ಕೊಯ್ಯಾರಿನಲ್ಲಿ ಚಿರತೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.