Kasaragod 13 ಲಕ್ಷ ಜನರಿರುವ ಜಿಲ್ಲೆಗೆ ಕೇವಲ 5 ಅಗ್ನಿಶಾಮಕ ದಳ!
Team Udayavani, Jun 5, 2024, 11:43 PM IST
ಕಾಸರಗೋಡು: ಹತ್ತು ಅಗ್ನಿಶಾಮಕ ದಳ ಕೇಂದ್ರಗಳು ಬೇಕಿರುವ ಕಾಸರಗೋಡು ಜಿಲ್ಲೆಯಲ್ಲಿ ಕೇವಲ ಐದು ಕೇಂದ್ರಗಳಿವೆ. ದೊಡ್ಡ ದುರಂತ ಸಂಭವಿ ಸಿದಾಗ ಸಕಾಲದಲ್ಲಿಗೆ ತಲುಪಲು ಅಗ್ನಿಶಾಮಕ ದಳಕ್ಕೆ ಸಮಸ್ಯೆಯಾಗುತ್ತಿದೆ.
ಒಂದು ನಿಮಿಷಕ್ಕೆ ಒಂದು ಕಿಲೋ ಮೀಟರ್ ಎಂಬ ರೀತಿಯಲ್ಲಿ ಸಂಚರಿಸುವುದು ಅಗ್ನಿಶಾಮಕ ದಳದ ರಕ್ಷಣ ಕಾರ್ಯದಲ್ಲಿನ ಗೋಲ್ಡನ್ ಅವರ್ ಆಗಿದೆ. ಆದರೆ ದೂರ ಹೆಚ್ಚು ಇರುವ ಕಡೆಗೆ ಈ ಮಾನದಂಡದಲ್ಲಿ ತಲುಪಲು ಸಾಧ್ಯವಾಗುತ್ತಿಲ್ಲ.
13 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇರುವ ಜಿಲ್ಲೆಯ ಉಪ್ಪಳ, ಕಾಸರಗೋಡು, ಕುತ್ತಿಕ್ಕೋಲು, ಕಾಂಞಂಗಾಡ್, ತೃಕ್ಕರಿಪುರಗಳಲ್ಲಿ ಒಟ್ಟು ಐದು ಘಟಕಗಳಿವೆ. ಕುತ್ತಿಕ್ಕೋಲ್ ಮತ್ತು ಉಪ್ಪಳ ಘಟಕಗಳಲ್ಲಿ ಮಂಜೂರಾದ ಹುದ್ದೆಯ ಅರ್ಧದಷ್ಟು ನೌಕರರು ಮಾತ್ರ ಇದ್ದಾರೆ. 38 ಪಂಚಾಯತ್ಗಳಿಗೂ 3 ನಗರಸಭೆಗಳಿಗೂ ಸೇರಿ ಅಗ್ನಿಶಾಮಕ ದಳಕ್ಕೆ ಒಟ್ಟು 150 ಸಿಬಂದಿ ಇದ್ದಾರೆ.
ಕಾಸರಗೋಡು ಕೇಂದ್ರದಲ್ಲಿ ಟ್ರೈನಿಗಳನ್ನು ಹೊರತುಪಡಿಸಿದರೆ ಖಾಯಂ ಸಿಬಂದಿಯ ಸಂಖ್ಯೆ 20ಕ್ಕೂ ಕಡಿಮೆ. ಕಳೆದ ನಾಲ್ಕು ತಿಂಗಳಲ್ಲಿ 400ರಷ್ಟು ಫೋನ್ ಕರೆಗಳು ಇಲ್ಲಿಗೆ ಬಂದಿವೆ. ಇದರಲ್ಲಿ 250ಕ್ಕೂ ಹೆಚ್ಚು ಬೆಂಕಿ ಆಕಸ್ಮಿಕ ಘಟನೆಗೆ ಸಂಬಂಧಿಸಿದ್ದು. ಮಾನದಂಡ ಪ್ರಕಾರ 24 ಫಯರ್ ಆ್ಯಂಡ್ ರೆಸ್ಕೂ Â ಆಫೀರ್, 4 ಸೀನಿಯರ್ ಫಯರ್ ಆ್ಯಂಡ್ ರೆಸ್ಕೂ Â ಆಫೀಸರ್, ಸ್ಟೇಶನ್ ಆಫೀಸರ್, ಅಸಿಸ್ಟೆಂಟ್ ಸ್ಟೇಶನ್ ಆಫೀಸರ್ ಸಹಿತ ಒಟ್ಟು 36 ನೌಕರರು ಬೇಕಾಗಿದ್ದಾರೆ.
45 ಕಿ.ಮೀ. ವ್ಯಾಪ್ತಿ: ಜಿಲ್ಲಾ ಕೇಂದ್ರವಾದ ಕಾಸರಗೋಡಿನಲ್ಲಿರುವ ಘಟಕದ ಸಿಬಂದಿ 45 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಏನೇ ಅವಘಡ ಸಂಭವಿಸಿದರೂ ಕಾರ್ಯಾಚರಣೆಗೆ ಧಾವಿಸಬೇಕಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Heartstopping Moment: ಉಕ್ಕಿ ಹರಿಯುವ ಹೊಳೆಯಲ್ಲೇ ಬಾಣಂತಿಯನ್ನು ಹೊತ್ತು ಸಾಗಿದ ವ್ಯಕ್ತಿ
Bengaluru; ಚುನಾವಣಾ ಬಾಂಡ್ ಸೋಗಿನಲ್ಲಿ ಸುಲಿಗೆ; ನಿರ್ಮಲಾ ಸೀತಾರಾಮನ್ ವಿರುದ್ದ ಎಫ್ಐಆರ್
Gurudath Kamath: ಖ್ಯಾತ ಫೋಟೋಗ್ರಾಫರ್ ಗುರುದತ್ ಕಾಮತ್ ನಿಧನ
Moksha Kushal: ಹಾಟ್ ಫೋಟೋಶೂಟ್ನಲ್ಲಿ ಮೋಕ್ಷಾ ಮಿಂಚು
MUDA; ಅವರು-ಇವರು ಕಳ್ಳರು ಎನ್ನೋದು ಬೇಡ, ರಾಜೀನಾಮೆ ಕೊಟ್ಟು ನೀವು ಸ್ವಚ್ಛವಾಗಿರಿ: ಯತ್ನಾಳ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.