Lok Sabha Election Results; ನೋಟಾದಲ್ಲೂ ದಕ್ಷಿಣ ಕನ್ನಡ ದಾಖಲೆ


Team Udayavani, Jun 5, 2024, 11:49 PM IST

Lok Sabha Election Results; ನೋಟಾದಲ್ಲೂ ದಕ್ಷಿಣ ಕನ್ನಡ ದಾಖಲೆ

ಕುಂದಾಪುರ: ರಾಜ್ಯದಲ್ಲಿ ಒಟ್ಟು ಚಲಾವಣೆಯಾದ ಮತಗಳ ಪೈಕಿ 0.56ರಷ್ಟು ಮತಗಳು ಈ ಬಾರಿ ನೋಟಾ (ಮೇಲಿನ ಯಾರೂ ಅಲ್ಲ) ಮತಗಳಾಗಿವೆ. ಚುನಾವಣೆಯಿಂದ ಚುನಾ ವಣೆಗೆ ನೋಟಾ ಮತದಲ್ಲಿ ವ್ಯತ್ಯಾಸ ಆಗುತ್ತಿರುವುದು ಗಮನಾರ್ಹ. ರಾಜ್ಯದಒಟ್ಟು ಮತದಾನದಲ್ಲಿ ಕಳೆದ ಬಾರಿಗಿಂತ ಈ ಬಾರಿ ನೋಟಾ ಸಂಖ್ಯೆ ಇಳಿದಿದೆ.

ದೇಶದಲ್ಲಿ ದಾಖಲೆ
ಮಧ್ಯಪ್ರದೇಶದ ಇಂದೋರ್‌ ಕ್ಷೇತ್ರ2ನೇ ಅತಿ ಹೆಚ್ಚು ನೋಟಾ ಮತ ಗಳಿಸಿದೆ. 2,18,674 ನೋಟಾ ಬಿದ್ದಿದ್ದು 2019ರ ಚುನಾವಣೆ ಯಲ್ಲಿ ಬಿಹಾರದ ಗೋಪಾಲ್‌ಗ‌ಂಜ್‌ ಕ್ಷೇತ್ರದ ನೋಟಾ ದಾಖಲೆಯನ್ನು ಇಂದೋರ್‌ ಮುರಿದಿದೆ.

ಕಳೆದ ಚುನಾವಣೆಯಲ್ಲಿ ಗೋಪಾಲ್‌ಗಂಜ್ ನಲ್ಲಿ 51,660 ನೋಟಾಗೆ ಮತ ಚಲಾವಣೆಯಾಗಿತ್ತು. ಇಂದೋರ್‌ನಲ್ಲಿ ಬಿಜೆಪಿಯ ಶಂಕರ್‌ ಲಾಲ್‌ವಾನಿ 12,26,751 ಮತಗಳನ್ನು ಪಡೆದು ಅಗ್ರ ಸ್ಥಾನದಲ್ಲಿದ್ದರೆ, ಉಳಿದ 13 ಅಭ್ಯರ್ಥಿಗಳು ನೋಟಾಕ್ಕಿಂತ ಕಡಿಮೆ ಮತ ಪಡೆದಿದ್ದಾರೆ.

ರಾಜ್ಯದಲ್ಲಿ ದಾಖಲೆ
ರಾಜ್ಯದಲ್ಲಿ ಬಿಜೆಪಿ ಶೇ. 46.06, ಕಾಂಗ್ರೆಸ್‌ ಶೇ. 45.43, ಜೆಡಿಎಸ್‌ ಶೇ. 5.6 ಮತಗಳನ್ನು ಪಡೆದರೆ ಪಕ್ಷಗಳಾದ ಬಿಎಸ್‌ಪಿ (0.33), ಸಿಪಿಐ (0.01) ಗಳಿಸಿದ್ದಕ್ಕಿಂತ ಅಧಿಕ ಮತ ಶೇ. 0.56 ಮತ ನೋಟಾಗೆ ಬಿದ್ದಿದೆ. ಅತಿಹೆಚ್ಚು ನೋಟಾ ಮತ ಚಲಾವಣೆಯಾದುದು ದ.ಕ. ಜಿಲ್ಲೆಯಲ್ಲಿ. ಅನಂತರದ ಸ್ಥಾನ ಬೆಂಗಳೂರು ಉತ್ತರಕ್ಕೆ. ಉಳಿದಂತೆ 10 ಸಾವಿರಕ್ಕಿಂತ ಹೆಚ್ಚು ನೋಟಾ ಮತ ಬಿದ್ದ ಕ್ಷೇತ್ರಗಳೆಂದರೆ ಬೆಂಗಳೂರು ಸೆಂಟ್ರಲ್‌, ಬೆಂಗಳೂರು ಗ್ರಾಮಾಂತರ, ಹಾವೇರಿ, ಉಡುಪಿ ಚಿಕ್ಕಮಗಳೂರು, ಉತ್ತರಕನ್ನಡ. ಅತಿ ಕಡಿಮೆ ನೋಟಾ ಮತ ಚಲಾವಣೆಯಾದುದು ಚಿಕ್ಕೋಡಿಯಲ್ಲಿ.

ಕ್ಷೇತ್ರವಾರು ನೋಟಾಗೆ
ಬಿದ್ದ ಮತಗಳ ವಿವರ
ಬಾಗಲಕೋಟೆ 3,420, ಬೆಂಗಳೂರು ಸೆಂಟ್ರಲ್‌ 12,126, ಬೆಂಗಳೂರು ಉತ್ತರ 13,554, ಬೆಂ. ಗ್ರಾ. 10,649, ಬೆಂ. ದಕ್ಷಿಣ 7,857, ಬೆಳಗಾವಿ 5,726, ಬಳ್ಳಾರಿ 7,889, ಬೀದರ್‌ 4,686, ವಿಜಯಪುರ 7,502, ಚಾಮರಾಜನಗರ 8,143, ಚಿಕ್ಕಬಳ್ಳಾಪುರ 6,596, ಚಿಕ್ಕೋಡಿ 2,608, ಚಿತ್ರದುರ್ಗ 3,190, ದಕ್ಷಿಣ ಕನ್ನಡ 23,576, ದಾವಣಗೆರೆ 3,176, ಧಾರವಾಡ 6,147, ಗುಲ್ಬರ್ಗ 8,429, ಹಾಸನ 8,541, ಹಾವೇರಿ 10,865, ಕೋಲಾರ 5,831, ಕೊಪ್ಪಳ 3,519, ಮಂಡ್ಯ 7,736, ಮೈಸೂರು 4,490, ರಾಯಚೂರು 9,850, ಶಿವಮೊಗ್ಗ 4,332, ತುಮಕೂರು 6,460, ಉಡುಪಿ ಚಿಕ್ಕಮಗಳೂರು 11,269, ಉತ್ತರಕನ್ನಡ 10,176.

ಕಳೆದ ಬಾರಿ
2019ರಲ್ಲಿ ರಾಜ್ಯದಲ್ಲಿ ಬಿಜೆಪಿಗೆ ಶೇ. 51.38, ಕಾಂಗ್ರೆಸ್‌ಗೆ ಶೇ. 31.88, ಜೆಡಿಎಸ್‌ಗೆ ಶೇ. 9.67, ಬಿಎಸ್‌ಪಿಗೆ ಶೇ. 1.17 ಮತ ಚಲಾವಣೆಯಾಗಿದ್ದರೆ ನೋಟಾ ಪ್ರಭಾವ ಶೇ. 71ರಷ್ಟಿತ್ತು. ಈ ಬಾರಿ ಪ್ರಮಾಣ ಇಳಿಕೆಯಾಗಿದೆ. ಕಳೆದ ಬಾರಿ ಸಿಪಿಐ ಹಾಗೂ ಸಿಪಿಎಂ ತಲಾ ಶೇ. 0.05ರಷ್ಟು ಮತಗಳಿಸಿದ್ದವು. ಕಳೆದ ಬಾರಿ ದ.ಕ.ದಲ್ಲಿ 7,380, ಉಡುಪಿಯಲ್ಲಿ 7,518 ನೋಟಾ ಮತ ಚಲಾವಣೆಯಾಗಿತ್ತು.

 

ಟಾಪ್ ನ್ಯೂಸ್

Google 25th Birthday! ಗ್ಯಾರೇಜ್‌ನಿಂದ ಮೌಂಟ್‌ವಿವ್‌ವರೆಗೆ….ಗೂಗಲ್‌ ರಜತ ಸಂಭ್ರಮ

Google 25th Birthday! ಗ್ಯಾರೇಜ್‌ನಿಂದ ಮೌಂಟ್‌ವಿವ್‌ವರೆಗೆ….ಗೂಗಲ್‌ ರಜತ ಸಂಭ್ರಮ

Musheer Khan

Musheer Khan: ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡ ಯುವ ಬ್ಯಾಟರ್ ಮುಶೀರ್‌ ಖಾನ್‌

Israel: ಬೈರೂತ್‌ ಮೇಲಿನ ದಾಳಿಯಲ್ಲಿ ಹೆಜ್ಬುಲ್ಲಾ ಮುಖ್ಯಸ್ಥ ಹಸನ್‌ ಸಾವು: ಇಸ್ರೇಲ್‌ ಸೇನೆ

Israel: ಬೈರೂತ್‌ ಮೇಲಿನ ದಾಳಿಯಲ್ಲಿ ಹೆಜ್ಬುಲ್ಲಾ ಮುಖ್ಯಸ್ಥ ಹಸನ್‌ ಸಾವು: ಇಸ್ರೇಲ್‌ ಸೇನೆ

1

ʼದೇವರʼ ಸಿನಿಮಾ ನೋಡುತ್ತಿರುವಾಗ ಥಿಯೇಟರ್‌ನಲ್ಲೇ ಕುಸಿದು ಬಿದ್ದು ಮೃತಪಟ್ಟ Jr NTR ಅಭಿಮಾನಿ

ಭೀಕರ ರಸ್ತೆ ಅಪಘಾತ… ಪುರಿ ಜಗನ್ನಾಥನ ದರ್ಶನಕ್ಕೆ ಹೊರಟಿದ್ದ ನಾಲ್ವರು ಯಾತ್ರಿಕರು ಮೃತ್ಯು

Bus Overturns… ಪುರಿ ಜಗನ್ನಾಥನ ದರ್ಶನಕ್ಕೆ ಹೊರಟಿದ್ದ ನಾಲ್ವರು ಯಾತ್ರಿಕರು ಮೃತ್ಯು

India: ಮೊದಲು ಗಡಿ ಭಯೋತ್ಪಾದನೆ ನಿಲ್ಲಿಸಿ-ವಿಶ್ವಸಂಸ್ಥೆಯಲ್ಲಿ ಪಾಕ್‌ ಗೆ ಭಾರತದ ಚಾಟಿ

India: ಮೊದಲು ಗಡಿ ಭಯೋತ್ಪಾದನೆ ನಿಲ್ಲಿಸಿ-ವಿಶ್ವಸಂಸ್ಥೆಯಲ್ಲಿ ಪಾಕ್‌ ಗೆ ಭಾರತದ ಚಾಟಿ

Laapataa Ladies

Laapataa Ladies: ಕಾಣೆಯಾದ ಮಹಿಳೆಯರ ಆಸ್ಕರ್‌ ಪ್ರಯಾಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ… ಅಪಾಯದಿಂದ ಪಾರಾದ ಪ್ರಯಾಣಿಕರು

Mangaluru: ರಾಷ್ಟ್ರೀಯ ಹೆದ್ದಾರಿಯಲ್ಲೇ ಹೊತ್ತಿ ಉರಿದ BMW ಕಾರು… ಪ್ರಯಾಣಿಕರು ಪಾರು

ಮುಕ್ತಿ ಕಾಣದ “ಬ್ಲ್ಯಾಕ್‌ಸ್ಪಾಟ್‌’ಗಳು: ಮತ್ತಷ್ಟು ಹೆಚ್ಚುತ್ತಿರುವ ಅಪಘಾತಗಳು

Mangaluru: ಮುಕ್ತಿ ಕಾಣದ “ಬ್ಲ್ಯಾಕ್‌ಸ್ಪಾಟ್‌’ಗಳು: ಮತ್ತಷ್ಟು ಹೆಚ್ಚುತ್ತಿರುವ ಅಪಘಾತಗಳು

Airport: ಭದ್ರತೆಯಿಂದ ಜೂಲಿ ನಿವೃತ್ತಿ: 8 ವರ್ಷಗಳಿಂದ ಸೇವೆಯಲ್ಲಿದ್ದ ಶ್ವಾನ

Airport: ಭದ್ರತೆಯಿಂದ ಜೂಲಿ ನಿವೃತ್ತಿ: 8 ವರ್ಷಗಳಿಂದ ಸೇವೆಯಲ್ಲಿದ್ದ ಶ್ವಾನ

Mangaluru: “ಜನಸಂಖ್ಯಾ ಲಾಭಾಂಶ’ ಸದ್ಬಳಕೆಯಾಗಲಿ: ನ್ಯಾ| ಅಬ್ದುಲ್‌ ನಜೀರ್‌

Mangaluru: “ಜನಸಂಖ್ಯಾ ಲಾಭಾಂಶ’ ಸದ್ಬಳಕೆಯಾಗಲಿ: ನ್ಯಾ| ಅಬ್ದುಲ್‌ ನಜೀರ್‌

Gulf Medical University: ವಿದ್ಯಾರ್ಥಿಗಳ ಪ್ರತಿಜ್ಞಾ ವಿಧಿ ಸ್ವೀಕಾರ

Gulf Medical University: ವಿದ್ಯಾರ್ಥಿಗಳ ಪ್ರತಿಜ್ಞಾ ವಿಧಿ ಸ್ವೀಕಾರ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Google 25th Birthday! ಗ್ಯಾರೇಜ್‌ನಿಂದ ಮೌಂಟ್‌ವಿವ್‌ವರೆಗೆ….ಗೂಗಲ್‌ ರಜತ ಸಂಭ್ರಮ

Google 25th Birthday! ಗ್ಯಾರೇಜ್‌ನಿಂದ ಮೌಂಟ್‌ವಿವ್‌ವರೆಗೆ….ಗೂಗಲ್‌ ರಜತ ಸಂಭ್ರಮ

Musheer Khan

Musheer Khan: ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡ ಯುವ ಬ್ಯಾಟರ್ ಮುಶೀರ್‌ ಖಾನ್‌

12-bng

Bengaluru: ಮಕ್ಕಳಲ್ಲಿ ವಿಜ್ಞಾನ ಆಸಕ್ತಿ ಮೂಡಿಸಲು “ಸೈನ್ಸ್‌ ಬಸ್‌’

Israel: ಬೈರೂತ್‌ ಮೇಲಿನ ದಾಳಿಯಲ್ಲಿ ಹೆಜ್ಬುಲ್ಲಾ ಮುಖ್ಯಸ್ಥ ಹಸನ್‌ ಸಾವು: ಇಸ್ರೇಲ್‌ ಸೇನೆ

Israel: ಬೈರೂತ್‌ ಮೇಲಿನ ದಾಳಿಯಲ್ಲಿ ಹೆಜ್ಬುಲ್ಲಾ ಮುಖ್ಯಸ್ಥ ಹಸನ್‌ ಸಾವು: ಇಸ್ರೇಲ್‌ ಸೇನೆ

Kedarnath Kuri Farm Movie Review

Kedarnath Kuri Farm Review: ಫಾರಂನಲ್ಲಿ ಪ್ರೇಮ ಸಂಭಾಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.